If we live with mutual understanding life feels like heaven
ಗಂಡ-ಹೆಂಡತಿ ಸಂಬಂಧ ಏಳೇಳು ಜನುಮದ ಅನುಬಂಧ ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚಿನದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪ, ಜಗಳ, ಹೊಡೆದಾಟ, ಕೆಲವೊಮ್ಮೆ ಜಗಳ ತೀರಾ ಅತಿರೇಕಕ್ಕೆ ತಲುಪಿ ಜೀವ ತೆಗೆಯುವ ಹಂತಕ್ಕೆ ತಲುಪುತ್ತಿರುವುದನ್ನು ಕಾಣುತ್ತಿದ್ದೇವೆ.
ಹಿಂದಿನ ಅವಿಭಕ್ತ ಕುಟುಂಬಗಳಿಗೆ ಬದಲಾಗಿ, ನಾವಿಬ್ಬರು – ನಮಗಿಬ್ಬರು ಅಥವಾ ಒಬ್ಬರು, ಇಲ್ಲವೇ ಮಕ್ಕಳಾದರೆ ಸ್ವಚ್ಛಂದವಾಗಿರಲು ಆಗುವುದಿಲ್ಲ ಎಂಬ ಕಾರಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ಹೆಸರಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದನ್ನೇ ಮುಂದೂಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ದಂಪತಿಗಳು ನಗರದ ವಿಲಾಸಿ ಜೀವನದ ಬದುಕಿಗೆ ಹಾತೊರೆಯುತ್ತಾ, ಇಬ್ಬರೂ ದುಡಿಯಲು ಹೋಗುತ್ತಾ ಒತ್ತಡಕ್ಕೆ ಸಿಲುಕಿ ವೈವಾಹಿಕ ಜೀವನ ಹಾಳು ಮಾಡಿ ಕೊಳ್ಳುತ್ತಿರುವ ಸಂಗತಿಗಳು ಅಪರೂಪವೇನಲ್ಲ.
ಗಂಡ-ಹೆಂಡತಿ ಪರಸ್ಪರ ಅರಿತು ಮುನ್ನಡೆದರೆ ಜೀವನ ಹಾಲು- ಜೇನಿನಂತಿರುತ್ತದೆ. ಆದರೆ, ನಗರ ಜೀವನದಲ್ಲಿ ಇಬ್ಬರೂ ದುಡಿಯಲು ಹೋಗುವುದರಿಂದ ಇಗೊ ಬೆಳೆಸಿಕೊಂಡು ಸಣ್ಣಪುಟ್ಟ ವಿಷಯಗಳಿಗೂ ಕಾಲು ಕೆರೆದು ಜಗಳವಾಡುವ ದಂಪತಿ ಅನೇಕ ಅವಾಂತರಗಳನ್ನು ಸೃಷ್ಟಿಸಿಕೊಂಡು,ಡಿವೋರ್ಸ್ ಹಂತಕ್ಕೆ ತಲುಪಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕೆಂದರೆ ಗಂಡ-ಹೆಂಡತಿ ನಡುವೆ ಭಾವನಾತ್ಮಕ ಬಾಂಧವ್ಯ ಖಂಡಿತವಾಗಿ ಇರಲೇಬೇಕು.
ಪರಸ್ಪರ ಅರಿತುಕೊಂಡು ಹೊಂದಾಣಿಕೆಯಿಂದ ಮುನ್ನಡೆದರೆ ಸುಖೀ ಜೀವನ ಸಾಧ್ಯ. ವಿಶೇಷವಾಗಿ ದಂಪತಿಗಳ ನಡುವೆ ಸಂವಹನ ಉತ್ತಮವಾಗಿರಬೇಕು. ಆಗ ವೈವಾಹಿಕ ಸಂಬಂಧವೂ ಗಟ್ಟಿಯಾಗಿರುತ್ತದೆ. ಹೊಗಳಿಕೆಗೆ ಬರ ಬೇಡ ಗಂಡ-ಹೆಂಡತಿ ನಡುವೆ ಪರಸ್ಪರ ಸಣ್ಣಪುಟ್ಟ ವಿಷಯಗಳಿಗೆ ಹೊಗಳಿಕೆಯ ಮಾತುಗಳನ್ನಾಡುತ್ತಿರಬೇಕು. ಹೀಗೆ ಮಾಡುವುದರಿಂದ ದಾಂಪತ್ಯದ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ. ಹೀಗಾಗಿ ದಂಪತಿಯ ನಡುವೆ ಸಣ್ಣಪುಟ್ಟ ಹೊಗಳಿಕೆಯ ಮಾತುಗಳಿಗೆ ಬರ ಬಾರದಿರಲಿ.
ಹೊಗಳಿಕೆಯ ಭರದಲ್ಲಿ ಪರಸ್ಪರ ಒಬ್ಬರಿ ಗೊಬ್ಬರು ಕಾಲೆಳೆಯುವ ಪ್ರಯತ್ನ ಬೇಡ. ಗಂಡನ ಆಸೆಗಳಿಗೆ ಹೆಂಡತಿ, ಹೆಂಡತಿಯ ಆಸೆಗಳಿಗೆ ಗಂಡ ಬೆಂಬಲ ಕೊಡುವುದನ್ನು ಮಾಡುತ್ತಿರಬೇಕು. ಈ ರೀತಿಯ ಸಕಾರಾತ್ಮಕ ಅಂಶಗಳು, ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುತ್ತವೆ. ಎಷ್ಟೇ ಅನ್ಯೋನ್ಯವಾಗಿದ್ದರೂ ಹೆಂಡತಿಯಾದವಳು ಕೆಲ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ. ದೈಹಿಕ ಅನ್ಯೋನ್ಯತೆ ಎಂದರೆ ಕೇವಲ ದೈಹಿಕ ಸಂಪರ್ಕವಲ್ಲ.
ನಿಮ್ಮ ಸಂಗಾತಿಯೊಂದಿಗಿನ ರಸಘಳಿಗೆಗಳನ್ನು ಆಸ್ವಾದಿಸಿರಿ. ಒಟ್ಟಿಗೇ ಪುಸ್ತಕ ಓದುವುದು, ಒಟ್ಟಿಗೇ ಸಿನಿಮಾ ನೋಡುವುದು ಹೀಗೆಲ್ಲಾ ಒಟ್ಟಿಗೇ ಸಮಯ ಕಳೆಯುವುದರಿಂದ ಸಂಬಂಧ ಬಲಗೊಳ್ಳುತ್ತದೆ. ಗುಣಮಟ್ಟದ ಸಮಯ ಕಳೆಯಿರಿ ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಭವಿಷ್ಯದ ಬಗ್ಗೆ ಚಿಂತೆ ಮಾಡುವುದರಿಂದ ದುಡಿಮೆ, ಸಂಪಾದನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಗಂಡ-ಹೆಂಡತಿ ಪರಸ್ಪರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದು ದಾಂಪತ್ಯ ದಲ್ಲಿ ವಿರಸಕ್ಕೆ ಕಾರಣವಾಗುತ್ತಿದೆ.
ಹೀಗಾಗಿ ಕುಟುಂಬಕ್ಕೂ ಒಂದಷ್ಟು ಸಮಯವನ್ನು ಮೀಸಲಿಡಿ. ವಾರಾಂತ್ಯಗಳಲ್ಲಿ ಪ್ರವಾಸಕ್ಕೆ ತೆರಳುವ, ಹೊರಗೆ ಡಿನ್ನರ್ಗೆ ಹೋಗುವ ಮೂಲಕ ಗಂಡ-ಹೆಂಡತಿ ಸಾಧ್ಯವಾದಷ್ಟು ಒಟ್ಟಿಗೇ ಸಮಯ ಕಳೆಯುವುದನ್ನು ರೂಢಿಸಿ ಕೊಳ್ಳಬೇಕು. ದಾಂಪತ್ಯ ಜೀವನ ಸುಖಮಯ ವಾಗಿರಲು ಇವು ಅನಿವಾರ್ಯ ಕೂಡ. ಪರಸ್ಪರ ನಂಬಿಕೆ ಇರಲಿ ಯಾವುದೇ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ.
ಗಂಡ-ಹೆಂಡತಿಯ ನಡುವೆ ನಂಬಿಕೆ-ವಿಶ್ವಾಸ ಗಟ್ಟಿಯಾಗಿರಬೇಕು. ಹೀಗಿದ್ದಾಗ ಮಾತ್ರ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ಕಷ್ಟ-ಸುಖವನ್ನು ಅರಿತು ಮುನ್ನಡೆದಾಗ ಡಿವೋರ್ಸ್ಗೆ ಅಲ್ಲಿ ಆಧ್ಯತೆ ಬರುವುದಿಲ್ಲ. ಕುಡಿಯಲು ಹಣ ನೀಡಲಿಲ್ಲ, ಅಡುಗೆ ಸರಿಯಾಗಿ ಮಾಡಲಿಲ್ಲ, ಬೇಡವೆಂದರೂ ತವರು ಮನೆಗೆ ಹೋದಳು ಎಂಬ ಕ್ಷುಲ್ಲಕ ಕಾರಣಗಳಿಗೆ ಪತ್ನಿಯನ್ನು ಹೊಡೆದು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗುವ ವಿಷಯಗಳು ಈಗೀಗ ಸಾಮಾನ್ಯವಾಗಿವೆ. ತನ್ನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯನ್ನೇ ಮಾಡದೆ ಕ್ಷಣಿಕ ಸುಖಕ್ಕಾಗಿ ಬೆಳೆಸುವ ಅಕ್ರಮ ಸಂಬಂಧಗಳು ಜೀವಕ್ಕೆ ಎರವಾಗುವುದು ಮಾತ್ರವಲ್ಲ, ಜೀವನವನ್ನೇ ಬಲಿ ಪಡೆದುಕೊಳ್ಳುತ್ತಿವೆ. ಹೀಗಾಗಿ ಗಂಡ- ಹೆಂಡತಿ ಅರಿತು ಬಾಳಿದರೆ ಸ್ವರ್ಗ ಸುಖ ಎಂಬುದರಲ್ಲಿ ಎರಡು ಮಾತಿಲ್ಲ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…