ಮಹಿಳೆ ಸಬಲೆ

ಪುರುಷರ ಲಾಲಸೆಗಳಿಗೆ ಬಲಿಯಾಗದಿರಿ

ಅಂಜಲಿ ರಾಮಣ್ಣ

ವಕ್ಛ್‌ಗೆ ಸಂಬಂಧಪಟ್ಟ ಕಾನೂನು ರಾಷ್ಟ್ರಪತಿಯಿಂದ ಅನುಮೋದನೆ ಪಡೆದು ಜಾರಿಗೆ ಬಂದಿದೆ. ಈ ಕಾನೂನಿ ನೊಡನೆ ಸಹಮತ ಇಲ್ಲದ ಭಾರತ ದೇಶದ ಯಾವುದೇ ಪ್ರಜೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲು ಸಂವಿಧಾನವು ಅವಕಾಶ ನೀಡಿದೆ. ಹೀಗಿರುವಾಗ ಜನರು ಕಾನೂನಾತ್ಮಕ ಮಾರ್ಗ ವನ್ನು ಅನುಸರಿಸದೆ ದಂಗೆ ಏಳಬೇಕು, ರಕ್ತಪಾತ ಮಾಡ ಬೇಕು, ಸಾರ್ವ ಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಯುಂಟು ಮಾಡಬೇಕು, ಅರಾಜಕತೆ ಉಂಟು ಮಾಡಬೇಕು ಎಂದು ರಾಜಕಾರಣಿಯೊಬ್ಬರು ಕರೆಕೊಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಸಾಮಾನ್ಯವಾಗಿ ಸಾಮಾಜಿಕ ಗಲಭೆಗಳನ್ನು ಹುಟ್ಟುಹಾಕಲು ಹೆಂಗಸರು ಮತ್ತು ಯುವಕರನ್ನು ಉದ್ವೇಗಕ್ಕೆ ಒಳಪಡಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವುದು ಪುರುಷರ ಹಳೆಯ ದುಶ್ಚಟವೇ ಆಗಿದೆ. ಆದರೆ ಯಾರದ್ದೋ ಮಾತುಗಳನ್ನು ಕೇಳಿಕೊಂಡು ಅದರಂತೆ ಸಮಾಜಕ್ಕೆ ತೊಂದರೆಯಾಗುವಂತೆ ನಡೆದುಕೊಂಡರೆ ಅದನ್ನು ಅಪರಾಧ ಎಂದಷ್ಟೇ ನೋಡಲಾಗುತ್ತದೆ. ಹೆಂಗಸರು ಎನ್ನುವ ಮಾಫಿ ಸಿಗುವುದಿಲ್ಲ.

ಭಾರತೀಯ ನ್ಯಾಯ ಸಂಹಿತೆ ೨೦೨೩ ಈ ಕಾಯಿದೆಯ ಸೆಕ್ಷನ್ ೧೫೨ರ ಅಡಿಯಲ್ಲಿ ಈ ದೇಶದ ಸಾರ್ವಭೌಮತ್ವಕ್ಕೆ, ಸುರಕ್ಷತೆಗೆ ಧಕ್ಕೆ ತರುವಂತಹ , ಅರಾಜಕತೆ ಉಂಟು ಮಾಡ ಬಹುದಾದಂತಹ, ಸರ್ಕಾರವನ್ನು ಹಿಂಸೆಯ ಮೂಲಕ ಉರುಳಿಸುವಂತಹ ಕೆಲಸಕ್ಕೆ, ಭಾಷಣಗಳ, ಮಾತುಗಳ, ವಾಟ್ಸಾಪ್ ಸಂದೇಶಗಳ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಪ್ರಚೋದನೆ ನೀಡುವುದನ್ನು ಮತ್ತಿತರೆ ಚಟುವಟಿಕೆಗಳನ್ನು (ಸರಿಸುಮಾರು ಭಯೋತ್ಪಾ ದನೆ ಚಟುವಟಿಕೆ ಎಂದು ಪರಿಗಣಿಸಿ) ಅಪರಾಧ ಎಂದು ಗುರುತಿಸಲಾಗಿದೆ. ಜಾಮೀನು ರಹಿತ ಈ ಅಪರಾಧಕ್ಕೆ ೭ ವರ್ಷಗಳ ಜೈಲುವಾಸದಿಂದ ಜೀವಾವಧಿ ಶಿಕ್ಷೆ ಕೂಡ ಇದೆ.

ಆ ಪ್ರಚೋದನೆಯನ್ನು ಜಾರಿಗೆ ತರಲು ಧನ ಸಹಾಯ, ತಾಂತ್ರಿಕತೆಯ ಬೆಂಬಲ, ಸ್ಥಳ ನೀಡುವಿಕೆ, ಜನರನ್ನು ಗುಂಪುಗೂಡಿಸುವಿಕೆ, ಆಯುಧಗಳ ಸಂಗ್ರಹಣೆ ಮತ್ತು ಬಳಕೆ ಹಾಗೂ ಇದಕ್ಕೆ ಸಂಬಂಧಪಟ್ಟ ಮತ್ತ್ಯಾವುದೇ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಮುಂದಾದರೆ ಮತ್ತು ಧಾರ್ಮಿಕ ಕಲಹಗಳನ್ನು ಉಂಟು ಮಾಡಿದರೆ ಅದನ್ನು ಸಹ ಇದೇ ಕಾನೂನಿನ ಸೆಕ್ಷನ್ ೧೯೧, ೨೭೦ ಮತ್ತು ೨೯೨ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಗುರುತಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಹಾಗಾದರೆ ದೇಶದಲ್ಲಿ ನಡೆಯುವ ತಪ್ಪುಗಳೆಡೆಗೆ ಪ್ರಶ್ನೆ ಒಡ್ಡುವುದೇ ಅಪರಾಧ ಎಂದಲ್ಲ. ಸರ್ಕಾರ ಮತ್ತು ದೇಶ ಇವರೆಡರ ನಡುವಿನ ವ್ಯತ್ಯಾಸ ತಿಳಿದುಕೊಂಡು ನಮ್ಮ ಖಂಡನೆ ಯಾವುದರ ಕಡೆಗೆ ಇರಬೇಕು ಮತ್ತು ‘ಹೇಗೆ’ ಇರಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ. ಮಹಿಳೆಯರು ಮತ್ತು ಯುವಕರು ಯಾರದ್ದೋ ಮಾತಿನಿಂದ ಪ್ರಚೋದನೆಗೊಂಡು ಅಥವಾ ಒತ್ತಡಕ್ಕೆ ಕಟ್ಟುಬಿದ್ದು ಇಂತಹ ಅಪರಾಧ ಕೃತ್ಯಕ್ಕೆ ಕೈ ಹಾಕಿ ಕುಟುಂಬದ ವರ್ತಮಾನ ಮತ್ತು ಭವಿಷ್ಯವನ್ನು ಹಾಳುಗೆಡಹುವ ಮೊದಲು ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಲು ಯಾರಾದರೂ ಬಲವಂತ ಪಡಿಸುತ್ತಿದ್ದರೆ ಅವರ ಮೇಲೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.

 (ಲೇಖಕರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಾದಾಪುರ ಪ್ರೌಢಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿ

ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಈ ಪ್ರೌಢಶಾಲೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ.…

4 hours ago

ಓದುಗರ ಪತ್ರ: ದೇವೇಗೌಡರ ಹಿಂದಿನ ಶಕ್ತಿ ಚನ್ನಮ್ಮ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ನವರು ಅವರ ರಾಜಕೀಯ ಜೀವನದಲ್ಲಿ ದೊಡ್ಡ ಶಕ್ತಿಯಾಗಿ ನಿಂತಿದ್ದರು. ಅಂದು ತಮ್ಮ…

4 hours ago

ಓದುಗರ ಪತ್ರ: ಆನ್‌ಲೈನ್ ಕಾರ್ಯಭಾರದಿಂದ ಶಿಕ್ಷಕರಿಗೆ ಮುಕ್ತಿ ನೀಡಿ

ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ವೈಯಕ್ತಿಕ ಮೊಬೈಲ್ ಹಾಗೂ ಇಂಟರ್ನೆಟ್ ಬಳಸಿ ಇಲಾಖೆಯ ಆನ್‌ಲೈನ್ ಕೆಲಸಗಳನ್ನು ನಿರ್ವಹಿಸುತ್ತಿರುವುದು ಮತ್ತು ಕಚೇರಿ…

4 hours ago

ಮಲ್ಲಳ್ಳಿ ಗ್ರಾಮಕ್ಕಿಲ್ಲ ಮೂಲ ಸೌಕರ್ಯ!

ಲಕ್ಷ್ಮೀಕಾಂತ್ ಕೊಮಾರಪ್ಪ ಮಳೆಗಾಲದಲ್ಲಿ ಕತ್ತಲೆಯ ಬದುಕು; ಬೇಸತ್ತು ಗ್ರಾಮವನ್ನೇ ತೊರೆಯುತ್ತಿರುವ ಕೃಷಿಕರು ಸೋಮವಾರಪೇಟೆ: ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಲ್ಲೂಕಿನ…

4 hours ago

ಮಂಡ್ಯ | ಸೆಸ್ಕಾಂ ಎಇ ಲೋಕಾ ಬಲೆಗೆ

ಮಂಡ್ಯ : ಲಂಚ ಪಡೆಯುತ್ತಿದ್ದಾಗ ಸೆಸ್ಕಾಂ ಉಪ ವಿಭಾಗದ ಸಹಾಯಕ ಇಂಜಿನಿಯರ್ (ಎಇ) ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ…

16 hours ago