ಮಹಿಳೆ ಸಬಲೆ

ದೀಪಗಳೇ ಕಥೆ ಹೇಳುವ ‘ದೀಪಧಾರಿಣಿ’

ಅ.26 ಮತ್ತು 27ರ ಸಂಜೆ ಮಹಿಳಾ ಏಕವ್ಯಕ್ತಿ ರಂಗೋತ್ಸವ ಕಾರ್ಯಕ್ರಮ

ಹನಿ ಉತ್ತಪ್ಪ

ರಂಗಭೂಮಿ ಎಂಬುದು ಕಲೆ ಮತ್ತು ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಇದು ಕಲಾವಿದರ ಮತ್ತು ಪ್ರೇಕ್ಷಕರ ನಡುವೆ ಜಾಲವನ್ನು ಹೆಣೆಯುವ ಮೂಲಕ, ಸಮಾಜವನ್ನು ಆಳವಾಗಿ ಪ್ರತಿಬಿಂಬಿಸುತ್ತದೆ. ವರ್ಷಗಳು ಉರುಳಿದಂತೆ ರಂಗಭೂಮಿ ನಶಿಸಿ ಹೋಗುತ್ತದೆ, ನಾಟಕ ನೋಡಲು ಜನ ಬರುವುದಿಲ್ಲ ಎಂಬ ಗೊಣಗಾಟದ ಮಧ್ಯೆಯೇ ರಂಗಭೂಮಿ ಹೊಸಹೊಸ ರೂಪಾಂತರದೊಂದಿಗೆ ಸಶಕ್ತವಾಗಿ ಮತ್ತಷ್ಟು ವಿನೂತನವಾಗಿ ಬೆಳೆಯುತ್ತಿದೆ.

ರಂಗಭೂಮಿ ಎಂದೂ ನಿಂತ ನೀರಾಗಲೇ ಇಲ್ಲ. ಸಮೃದ್ಧವಾಗಿ ಹಬ್ಬುತ್ತಾ, ಸಮಾಜ ಕಟ್ಟುತ್ತಲೇ ಹೋಯಿತು. ಇವತ್ತಿಗೂ ಬೆಂಗಳೂರಿನಿಂದ ಹಿಡಿದು ಸಾಂಸ್ಕೃತಿಕ ನಗರಿ ಮೈಸೂರು, ಧಾರವಾಡ, ಶಿವಮೊಗ್ಗ, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಹವ್ಯಾಸಿ ರಂಗತಂಡಗಳು ತಲೆ ಎತ್ತುತ್ತಲೇ ಇವೆ. ವೃತ್ತಿ ರಂಗಭೂಮಿಯಿಂದ ಹಿಡಿದು ರಂಗಾಯಣದಂತಹ ಸ್ವಾಯತ್ತ ಸರ್ಕಾರಿ ಸಂಸ್ಥೆಗಳು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿವೆ. ವಯೋಮಿತಿಯ ಸವಾಲುಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳು ನಡೆಯುತ್ತಿವೆ.

ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.00 ಗಂಟೆಗೆ, ಮೈಸೂರಿನ 18 ವರ್ಷದ ಹಳೆಯ ರಂಗ ತಂಡ ‘ರಂಗವಲ್ಲಿ’ಯವರು ಅಕ್ಟೋಬರ್ 26 ಮತ್ತು 27ರಂದು ಮಹಿಳಾ ಏಕವ್ಯಕ್ತಿ ರಂಗೋತ್ಸವವನ್ನು ಆಯೋಜಿಸಿದ್ದಾರೆ. ಮೊದಲ ದಿನ (ಅ.26)ದ ಪ್ರದರ್ಶನ, ಮೈಸೂರಿನ ಮಹಿಳಾ ಉದ್ಯಮಿ ಶ್ರೀವಿದ್ಯಾ ಕಾಮತ್‌ರವರ ‘ದೀಪಧಾರಿಣಿ’ ನಾಟಕ.

ದೀಪಗಳೆಂದರೆ ಹಾಗೆ, ಅದು, ಕತ್ತಲೆಯ ಅಸ್ತಿತ್ವವನ್ನು ನಿರಾಕರಿಸದೆ, ಜೀವ ಪರಿಸರವನ್ನು ಬೆಚ್ಚಗಿಡುವ ಇನ್ನೊಂದು ಜೀವ ವಿಸ್ಮಯ. ಎಷ್ಟೊಂದು ಕಣ್ಣುಗಳನ್ನ, ಎಷ್ಟೊಂದು ಉಸಿರುಗಳನ್ನ ಕಂಡಿರಬಹುದು ಅದು..!

ಕಂಡ ಕಥೆಗಳನ್ನೆಲ್ಲ, ದೀಪಗಳೇ ಹೇಳತೊಡಗಿದರೆ?!! ಈ ಬೆರಗಿನಲ್ಲಿ ಹುಟ್ಟಿಕೊಂಡಿದ್ದು, ‘ದೀಪಧಾರಿಣಿ’ ಎಂಬ ರಂಗಾಭಿವ್ಯಕ್ತಿ, ಮೇಣದ ಬತ್ತಿಯ ಉದ್ಯಮಿಯಾದ ಶ್ರೀವಿದ್ಯಾ ಅವರಿಗೆ, ಮೇಣದ ಬತ್ತಿಗಳೆಂದರೆ ಕೇವಲ ವ್ಯಾಪಾರವಲ್ಲ. ಅದೊಂದು ಕಲಾಭಿವ್ಯಕ್ತಿ ಕೂಡ. ಸಪ್ತಸಾಗರದಾಚೆಗೆ ಸುಗಂಧಿತ ಮೇಣದ ಬತ್ತಿಗಳನ್ನ ಮೈಸೂರಿನಲ್ಲೇ ತಯಾರಿಸಿ ಬೆಳಕಿನ ಕೃಷಿಯಲ್ಲಿ ತೊಡಗಿರುವ ಇವರಿಗೆ, ವ್ಯವಹಾರಿಕ ಯಶಸ್ಸಿಗೆ ಮೀರಿದ, ಮಾನವೀಯ ನಂಟುಗಳ ಸಂಪಾದನೆಯಾಗಿದೆ. ವೃತ್ತಿ, ಪ್ರವೃತ್ತಿ ಎರಡೂ ಅದೈತವಾದಾಗ ಹುಟ್ಟುವ ಅಮೃತ ಘಳಿಗೆ ಇದು.

ಇಲ್ಲಿ, ಜನಪದ ಕಥೆಗಳಿವೆ, ನಂಬಿಕೆಗಳಿವೆ. ಆಚರಣೆಗಳಿವೆ. ಹಿರಿಯರ ವಿವೇಕದ ನುಡಿಗಳಿವೆ. ಟ್ಯಾಗೂರರಂತಹವರ ಕವನಗಳಿವೆ. ಫ್ಲಾರೆನ್ಸ್ ನೈಟಿಂಗೇಲ್ ರವರ ಜೀವನ ಚರಿತ್ರೆಯ ಪುಟಗಳಿವೆ.

ಇವೆಲ್ಲವನ್ನ ಒಟ್ಟಂದದಲ್ಲಿ ಹೊಲಿದು ಚಂದದ ಉಡುಗೆ ಮಾಡಿರುವವರು ಸುಧಾ ಆಡುಕಳ ‘ದೀಪಧಾರಿಣಿ’ಯ ಮೂಲಕ, ಸುಮಾರು ಎರಡು ದಶಕಗಳ ನಂತರ ಮತ್ತೆ ವೇದಿಕೆ ಏರಬೇಕೆಂಬ ಕನಸಿನ ಮಹಲಿನ ‘ವಾಸ್ತುಶಿಲ್ಪಿ, ಡಾ.ಶ್ರೀಪಾದ ಭಟ್, ಅನುಷ್ ಶೆಟ್ಟಿಯವರು ಸಂಗೀತ ನೀಡಿದ್ದು, ಕಲೆ ಖಾಜು ಗುತ್ತಲರವರು ಮಾಡಿದ್ದಾರೆ. ನಾಟಕಕ್ಕೆ ಬೆಳಕಿನ ವಿನ್ಯಾಸವನ್ನು, ಅರುಣ್ ಮೂರ್ತಿಯವರು ನೀಡಿದ್ದಾರೆ. ಶಾಲೋಮ್ ಸನ್ನುತ ಅವರು ನಾಟಕದ ಹೆಜ್ಜೆ ಹೆಜ್ಜೆಯಲ್ಲೂ ಸಹಾಯ ನೀಡಿದ್ದಾರೆ.

‘ದೀಪಧಾರಿಣಿ’ಯ ಮತ್ತೊಂದು ವಿಶೇಷ ವೆಂದರೆ, ನಾಟಕ ಮೊದಲ ಪ್ರದರ್ಶನ ಕೊಂಕಣಿ ಭಾಷೆಯಲ್ಲಿ ಪ್ರಯೋಗಿಸಲಾಗಿದೆ. ಶ್ರೀವಿದ್ಯಾ ಕಾಮತರವರು, ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷೆಯ ಸದಸ್ಯರಾಗಿದ್ದು, ಕನ್ನಡದಿಂದ ಕೊಂಕಣಿಗೆ ತಾವೇ ತರ್ಜುಮೆಗೊಳಿಸಿದ್ದಾರೆ. ಇದು, ಕೊಂಕಣಿ ಭಾಷೆಯ ಪ್ರಥಮ ಮಹಿಳಾ ಏಕವ್ಯಕ್ತಿ ಪ್ರದರ್ಶನವಾಗಿದೆ. ಅಲ್ಲದೆ, ಇದೇ ನಾಟಕ ವನ್ನು, ಹಿಂದಿ, ಆಂಗ್ಲ ಭಾಷೆ, ಮತ್ತು ತಮಿಳಿಗೂ ಕೂಡ ತರ್ಜುಮೆಗೊಳಿಸಿ, ಈ ನಾಟಕವನ್ನು ಒಟ್ಟು ಐದು ಭಾಷೆಗಳಲ್ಲಿ ಪ್ರದರ್ಶಿಸಲಿದ್ದಾರೆ.

ಅ.27ರ, ಭಾನುವಾರ ಸಂಜೆ 7.00ಕ್ಕೆ, ಮೂಲತಃ ಮೈಸೂರಿನವರಾದ, ವೃತ್ತಿಯಲ್ಲಿ ಸಾಫ್ಟ್‌ವೇ‌ ಇಂಜಿನಿಯರ್ ಆಗಿರುವ, ನುಡಿ ಸುದರ್ಶನ ಅವರು ಅಭಿನಯಿಸುವ ‘ಸಕುಬಾಯಿ ಕಾಮವಾಲಿ’ ಏಕವ್ಯಕ್ತಿರಂಗ ಪ್ರದರ್ಶನವಿದೆ. ಈ ನಾಟಕವು, ಈಗಾಗಲೇ ರಾಜ್ಯಾದ್ಯಂತ ಪ್ರದರ್ಶನಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ. ಮನೆಗೆಲಸದವಳೊಬ್ಬಳ ಜೀವನದ ಕಥೆಯನ್ನು ಬಿಂಬಿಸುವ ಈ ನಾಟಕ, ತಿಳಿ ಹಾಸ್ಯವನ್ನೂ ಒಳಗೊಂಡಿದೆ. ನಾಟಕೋತ್ಸವದ

ಉದ್ಘಾಟನೆಯನ್ನು 26ರ ಸಂಜೆ 6.45ಕ್ಕೆ ನಟಿಯರಾದ ಸುಧಾ ನರಸಿಂಹರಾಜು, ಆಶಾ ರಾಣಿಯವರು ನಡೆಸಿಕೊಡಲಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಉಡುತೊರೆ ಹಳ್ಳ ಜಲಾಶಯದ 490 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಪುಟಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಕಟ್ಟೆಗಳಿಗೆ ಕಾವೇರಿ…

10 hours ago

ಹನೂರು| ಕುಡಿಯುವ ನೀರಿನ ಸಮಸ್ಯೆ ಉದ್ಭವ: ಅಧಿಕಾರಿಗಳ ವಿರುದ್ಧವೇ ದೂರು ನೀಡಿದ ಗ್ರಾಮಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸುತ್ತಿಲ್ಲ.…

10 hours ago

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

11 hours ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

11 hours ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

11 hours ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

11 hours ago