ಮಹಿಳೆ ಸಬಲೆ

ಮಹಿಳೆಯಲ್ಲಿ ಕ್ಯಾಲ್ಸಿಯಂ ಕೊರತೆ

ಡಾ.ಚೈತ್ರ ಸುಖೇಶ್

ಸಾಮಾನ್ಯವಾಗಿ ಮಹಿಳೆಯಲ್ಲಿ ಋತುಬಂಧದ ಸಮಯ ಮತ್ತು ನಂತರ ಕ್ಯಾಲ್ಸಿಯಂ ಕೊರತೆಯ ಸಮಸ್ಯೆ ಉಂಟಾಗುತ್ತದೆ. ಕ್ಯಾಲ್ಸಿಯಂನ ಕೊರತೆಯಿಂದ ಮೂಳೆ ಸವೆತ ಮತ್ತು ಮೂಳೆ ಸಾಂದ್ರತೆಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಹಿಳೆಯರು ಪ್ರತಿನಿತ್ಯ 1000ಎಂಜಿಯಿಂದ 1200 ಎಂಜಿಗಳಷ್ಟು ಕ್ಯಾಲ್ಸಿಯಂ ಅನ್ನು ಸೇವಿಸುವುದು ಅತ್ಯಗತ್ಯವಾಗಿರುತ್ತದೆ.

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾದಷ್ಟು ಮೊಳೆಗಳ ಬೆಳವಣೆಗೆಯೂ ಉತ್ತಮವಾಗಿರುತ್ತದೆ. ಇದಕ್ಕಾಗಿ ನಾವು ಕೆಲ ಆಹಾರ ಪದಾರ್ಥಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಹಸುವಿನ ಹಾಲು, ಮಜ್ಜಿಗೆ, ತುಪ್ಪಗಳ ಸೇವನೆಯ ಜತೆಗೆ ಒಣಹಣ್ಣುಗಳಾದ ಅಂಜೂರ, ಖರ್ಜೂರ, ಬಾದಾಮಿ ಜತೆಗೆ ಬೆಂಡೆಕಾಯಿ, ನೆಲ್ಲಿಕಾಯಿ, ನುಗ್ಗೆಸೊಪ್ಪ, ಬಸಳೆ ಸೊಪ್ಪುಗಳನ್ನೂ ಹೆಚ್ಚಾಗಿ ಸೇವಿಸಬೇಕು. ಇದರೊಂದಿಗೆ ಎಲೆಕೋಸು, ಗೆಡ್ಡೆಕೊಸು ಮತ್ತು ಎಲ್ಲ ಹಸಿರು ಸೊಪ್ಪುಗಳು, ಸೋಯಾ ಬೀನ್ಸ್, ಕಿಡ್ನಿ ಬೀನ್ಸ್, ಅಗಸೇ ಜೀಜಗಳ ಸೇವನೆಯಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ವೃದ್ಧಿಸಿಕೊಳ್ಳಬಹುದು.

ವಿಟಮಿನ್ ‘ಡಿ’ಯು ನಮ್ಮ ದೇಹ ಹೆಚ್ಚು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳ ಬೆಳವಣಿಗೆಗೂ ಉತ್ತಮವಾಗಿದೆ. “ವಿಟಮಿನ್ ಡಿ’ ಪ್ರಮುಖ ವಾಗಿ ಸೂರ್ಯನ ಶಾಖ, ಮೀನು ಹಾಗೂ ಮೀನಿನ ಎಣ್ಣೆಯಿಂದ ಸಿಗಲಿದೆ. ಆದ್ದರಿಂದ ದಿನದ ಸ್ವಲ್ಪ ಸಮಯವಾದರೂ ಸೂರ್ಯನ ಎಳೆ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳಬೇಕು. ಇದರೊಂದಿಗೆ ನಿಯಮಿತವಾದ ವ್ಯಾಯಾಮ, ಯೋಗ ಮೂಳೆಯ ಸಾಂದ್ರತೆಯ ನಷ್ಟವನ್ನು ತಡೆಯಲು
ಸಹಾಯ ಮಾಡುತ್ತದೆ. ಅಲ್ಲದೆ 7ರಿಂದ 8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು.

ಇವುಗಳ ಸೇವನೆ ಬಿಡಬೇಕು

ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಬೇಕು ಎಂದರೆ ನಾವು ಅತಿಯಾದ ಕೆಫೀನ್, ಸೀಡಾಗಳು ಹಾಗೂ ಪ್ಯಾಕೇಜ್ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಬಿಡಬೇಕು. ಜತೆಗೆ ಧೂಮಪಾನ, ಮದ್ಯಪಾನ, ಅತಿಯಾದ ಉಪ್ಪುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಹಾಗೂ ಮೂಳೆಗಳಿಂದ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುತ್ತದೆ. ನಿಧಾನವಾಗಿ ಇದರಿಂದ ಮೂಳೆ ಮತ್ತು ಕೀಲುಗಳ ನೋವು, ಊತ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಕೊರತೆಗೆ ಕಾರಣಗಳು

1. ಹಸಿವಾದಾಗ ಆಹಾರವನ್ನು ಸೇವಿಸದೇ ಇರುವುದು ಜತೆಗೆ ಅತೀ ಕಡಿಮೆ ಆಹಾರ ಸೇವಿಸುವುದು ಮೂಳೆಗಳ ಬೆಳವಣಿಗೆಗೆ ಬೇಕಾದ ಕ್ಯಾಲ್ಸಿಯಂ ಮತ್ತು ಇತರೆ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ.

2. ತೂಕವನ್ನು ಕಡಿಮೆ ಮಾಡಿಕೊಳ್ಳುವ ಭರದಲ್ಲಿ ಕ್ರಮಬದ್ಧವಲ್ಲದ ಆಹಾರಕ್ರಮ, ವ್ಯಾಯಾಮದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಲಿದೆ.

3. ಜಿಡ್ಡು ಅಥವಾ ಜಿಡ್ಡಿನಂಶವು ಹೃದಯಕ್ಕೆ ತೊಂದರೆ ಎಂಬ ಭ್ರಮಯಲ್ಲಿ ಸಂಪೂರ್ಣ ಜಿಡ್ಡನ್ನು ತ್ಯಜಿಸುತ್ತಾರೆ. ಇದರಿಂದ ಮೂಳೆ ಮತ್ತು ಸಂಧಿಗಳ ಚಲನೆಯಲ್ಲಿ ಕುಂಠಿಯವಾಗಿ, ಕ್ಯಾಲ್ಸಿಯಂ ಕೊರತೆ ಹೆಚ್ಚಾಗುತ್ತದೆ. ಇದರಿಂದ ಮೂಳೆ ನೋವು ಕಾಣಿಸಿಕೊಳ್ಳುತ್ತದೆ.

4. ಅತಿ ಕಡಿಮೆ ನಿದ್ದೆ, ಹಗಲಿನಲ್ಲಿ ಅತಿಯಾದ ನಿದ್ದೆ, ರಾತ್ರಿ ಕೆಲಸ ಇವೆಲ್ಲವೂ ವಾತದೋಷವನ್ನು ಪ್ರಕೋಪಿಸಿ ದೇಹದಲ್ಲಿ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳದಂತೆ ತಡೆಯುತ್ತವೆ.

ಇದಕ್ಕೆ ಪರಿಹಾರಗಳೇನು?

1. ದೇಶದಲ್ಲಿ ಕ್ಯಾಲ್ಸಿಯಂ ಅಂಶವನ್ನು ವೃದ್ಧಿಸಿಕೊಳ್ಳಲು ಶತಾವರಿಪುಡಿ, ಅಶ್ವಗಂಧದ ಪುಡಿ, ಅರಿಶಿನ, ಶುದ್ಧ ಗಗ್ಗುಲು ಅಶೋಕ ಚೂರ್ಣ, ಗಿಡ ಮೂಲಿಕೆಗಳನ್ನು ನಿತ್ಯದ ಆಹಾರದಲ್ಲಿ ಸೇವಿಸಿಕೊಳ್ಳಬೇಕು.

2. ಪ್ರತಿದಿನ ಮುಂಜಾನೆ ಒಂದು ಲೋಟ ನೀರಿಗೆ 1 ಸ್ಪೂನ್ ನಷ್ಟು ಎಳ್ಳನ್ನು ಸೇರಿಸಿ ಸೇವಿಸಬೇಕು.

3. ಹರಳೆಣ್ಣೆ, ಕೊಬ್ಬರಿಎಣ್ಣೆಗೆ ಜಮ ಅಥವಾ ಜೀರಿಗೆಯನ್ನು ಸೇರಿಸಿ ಕುದಿಸಿ, ಸಂಧಿಗಳಿಗೆ ನಿತ್ಯ ಅಭ್ಯಂಗ ಮಾಡಬೇಕು.

4. ಇದರಿಂದ ಮೂಳೆ ನೋವು ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

5. ಆಯುರ್ವೇದ ಮೆಡಿಕಲ್‌ಗಳಲ್ಲಿ ಸಿಗುವ ಬಲಾಅಶ್ವಗಂಧ ತೈಲ, ಕ್ಷೀರ ಬಲಾ ತೈಲಗಳ ನಿತ್ಯ ಅಭ್ಯಂಗದಿಂದಲೂ ಕ್ಯಾಲ್ಸಿಯಂ ಕೊರತೆ ಕಡಿಮೆಗೊಳಿಸಿ ಮೂಳೆಗಳ ಸದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು.

andolana

Recent Posts

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

7 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

7 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

8 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

13 hours ago

ಸೆಟ್ಟೇರಿತು ರಮೇಶ್ ಅರವಿಂದ್, ಗಣೇಶ್ ಹೊಸ ಸಿನಿಮಾ …

ರಮೇಶ್‍ ಅರವಿಂದ್ ಮತ್ತು ಗಣೇಶ್‍ ಒಟ್ಟಿಗೆ ನಟಿಸುತ್ತಾರೆ ಎಂಬುದು ಕಳೆದ ವರ್ಷದ ಸುದ್ದಿ. ‘ಇನ್‍ಸ್ಪೆಕ್ಟರ್‍ ವಿಕ್ರಂ’, ‘ಮಾನ್ಸೂನ್‍ ರಾಗ’, ‘ರಂಗನಾಯಕ’…

14 hours ago

ಮಡಿಕೇರಿ: ಪೊನ್ನಂಪೇಟೆಯಲ್ಲಿ ವೈಭವ ಪೂರಿತ ಗಣೇಶ ಹಬ್ಬ

ಸಂಪೂರ್ಣ ಹೂವಿನಿಂದ ಶೃಂಗಾರಗೊಂಡ ಬಸವೇಶ್ವರ ದೇವಾಲಯ..... ಮಡಿಕೇರಿ: ಪೊನ್ನಂಪೇಟೆಯಲ್ಲಿ ಇಂದು(ಸೆ.7) ಬೆಳಿಗ್ಗೆ ಗಣೇಶನನ್ನು ಪುರದ ಬಸವೇಶ್ವರ ದೇವಸ್ಥಾನಕ್ಕೆ ಗೌರಿ ಕೆರೆಯಿಂದ…

14 hours ago