• ಅನಿತಾ ಹೊನ್ನಪ್ಪ

“ಅಪ್ಪ ನಾನು ಮುಂದೆ ಓದ್ದೇಕು’ʼ ಎಂದು ತಂದೆಯ ಮುಂದೆ ಬೇಡಿಕೊಂಡಳು ಶಾಲಿನಿ. ‘ಆಗಲ್ಲ, ಪಿಯುಸಿ ಓದಿದ್ದು ಸಾಕು. ನಿನ್ನ ಓದಿಸಿ ಏನಿದೆ ಪ್ರಯೋಜನ? ನಾಳೆ ಕೊಟ್ಟ ಮನೆಗೆ ಹೋಗಿ ಆ ಮನೆ ಉದ್ಧಾರ ಮಾಡುವವಳು ನೀನು. ನನ್ನ ಮಗ ಓದ್ದೇಕು, ಒಳ್ಳೆ ಕೆಲಸ ಹಿಡಿಯಬೇಕು’ ಒಂದೇ ಮಾತಿಗೆ ಮಗಳ ಓದಿನ ಆಸೆ ಕೊಂದರು ಗೋಪಾಲ.

ಕೂಲಿ ಕೆಲಸ ಮಾಡಿ ಜೀವನ ಮಾಡುವ ಗೋಪಾಲ ಹಾಗೂ ಮಾಧವಿ ದಂಪತಿಗೆ, ಹತ್ತನೇ ತರಗತಿ ಓದುತ್ತಿರುವ ಮಗನ ಮೇಲೆ ವಿಪರೀತ ವ್ಯಾಮೋಹ. ಅಪ್ಪ ಓದುವುದನ್ನು ನಿರಾಕರಿಸಿದ ನಂತರ ಶಾಲಿನಿಗೆ ದುಃಖವಾಯಿತು. ತಾಯಿಯ ಮುಂದೆ ಪರಿಪರಿಯಾಗಿ ಬೇಡಿದರೂ ಪ್ರಯೋಜನವಾಗಲಿಲ್ಲ. ‘ನಾನು ಮತ್ತೆ ನಿಮ್ಮಪ್ಪ ಕೆಲಸಕ್ಕೆ ಹೋಗ್ತಿವಿ, ಮನೆ ಕಡೆ ನೋಡ್ಕೋ ತಮ್ಮನಿಗೆ ಪಾಠ ಹೇಳಿ ಕೊಡು. ಅವನು ಒಳ್ಳೆ ಕೆಲಸಕ್ಕೆ ಸೇರಿಕೊಂಡು, ದುಡಿದು ನಿನ್ನ ಮದುವೆ ಮಾಡ್ಬೇಕು ನೆನಪಿರಲಿ’ ಎಂದು ಎಚ್ಚರಿಸಿದರು ಮಾಧವಿ.

ಶಾಲಿನಿ ಓದಿನ ಆಸೆ ಕೈಬಿಟ್ಟಳು. ಮನೆಯ ಕೆಲಸ ಹಾಗೂ ತಮ್ಮನ ಓದಿಗೆ ಸಹಾಯ ಮಾಡತೊಡಗಿದಳು. ಆ ದಿನ ಶಮಂತ್, ‘ಅಕ್ಕಾ, ನನ್ನ ನೋಟ್ಸ್ ಬರೆದು ಕೊಡು ಪ್ಲೀಸ್. ಇವತ್ತು ನನ್ನ ಫ್ರೆಂಡ್ ಬರ್ತ್ ಡೇ ಪಾರ್ಟಿ ಇದೆ. ನಾನು ಹೋಗ್ಲೆಬೇಕು’ ಎಂದು ಕೇಳಿಕೊಂಡ. ಶಾಲಿನಿ ಒಪ್ಪಲಿಲ್ಲ. ಆದರೆ ಶಮಂತ್ ತುಂಬಾ ಬೇಡಿದಾಗ ಕೊಂಚ ಭಯದಲ್ಲಿ ಒಪ್ಪಿಕೊಂಡಳು.‌

ಅವನ ಬ್ಯಾಗಿನಿಂದ ಪುಸ್ತಕ ತೆಗೆಯುವಾಗ ಅವಳ ಕಣ್ಣಿಗೆ ಬಿತ್ತು ಗುಟ್ಕಾ ಪ್ಯಾಕೆಟ್. ಬೆಚ್ಚಿದ ಶಾಲಿನಿ, ತಕ್ಷಣ ತಾಯಿಯ ಗಮನಕ್ಕೆ ತಂದಳು. ಮಗನ ಮೇಲೆ ವಿಪರೀತ ಕಾಳಜಿಯಿದ್ದ ಮಾಧವಿ ಮಗಳ ಮಾತು ನಂಬಿರಲಿಲ್ಲ. ಅವನು ಪಾರ್ಟಿ ಎಂದು ಹೇಳಿ ಹೋಗಿದ್ದು ನೆನಪಾಯಿತು. ಕೂಡಲೇ ಅವನ ಫ್ರೆಂಡ್ ಮನೆಗೆ ಹೋದರು. ಅಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಶಮಂತ್. ಆ ದೃಶ್ಯ ಕಂಡು ಮಾಧವಿ ದಿಗಿಲಾದರು. ಮಗ ಸಣ್ಣ ವಯಸ್ಸಿನಲ್ಲಿ ಗುಟ್ಕಾ ಮತ್ತು ಕುಡಿತವನ್ನು ಚಟ ಮಾಡಿಕೊಂಡಿದ್ದ. ಕೂಡಲೇ ಗೋಪಾಲನಿಗೂ ವಿಷಯ ತಿಳಿಸಿದರು. ಮನೆಯಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಕೊನೆಗೂ ಶಮಂತ್ ತನಗೆ ಓದಿನಲ್ಲಿ ಆಸಕ್ತಿಯಿಲ್ಲವೆಂದು ನೇರವಾಗಿ ಹೇಳಿಬಿಟ್ಟ.

“ಓದು ಓದು ಅಂತ ಒತ್ತಾಯ ಮಾಡೇಡಿ. ಕೂಲಿ ಮಾಡಿ ನೀವು ಜೀವನ ಮಾಡ್ತಿಲ್ವ? ಹಾಗೇ ನಾನೂ ಮಾಡ್ತೀನಿ’ ಆ ದಿನ ಶಮಂತ್ ಆಡಿದ ಮಾತು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು. ತಾವು ಬೆವರು ಸುರಿಸಿ ತಂದ ಹಣವನ್ನು ಮಗ ಈ ರೀತಿ ಹಾಳು ಮಾಡಿದ್ದು ಕಂಡು ಕುಗ್ಗಿದರು ದಂಪತಿ. ಸುಧಾರಿಸಿಕೊಳ್ಳಲು ಕೆಲ ಸಮಯ ಹಿಡಿಯಿತು. ಗಂಡನ ಮಾತು ಕೇಳಿ ಮಗಳ ಓದು ನಿಲ್ಲಿಸಿದ್ದ ಮಾಧವಿ ಬದಲಾದಳು.

‘ಶಾಲು, ನಾಳೆಯಿಂದ ನೀನು ಕಾಲೇಜಿಗೆ ಹೋಗು’ ಎಂದು ಪುನಃ ಮಗಳನ್ನು ಓದಲು ಕಳುಹಿಸಿದರು. ಶಾಲಿನಿಯ ಆಸೆ ಮತ್ತೆ ಚಿಗುರೊಡೆಯಿತು. ಹೊಸ ಉತ್ಸಾಹದಲ್ಲಿ ಓದಿನ ಕಡೆ ಗಮನ ಕೊಟ್ಟಳು. ಈಗವಳು ಓದು ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸೋತಿರುವ ತಂದೆ ತಾಯಿಗೆ ಆಸರೆಯಾಗಿದ್ದಾಳೆ. ಮನೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ತಂದಿದ್ದಾಳೆ. ಹೆಣ್ಣಾದರೇನು ಗಂಡಾದರೇನು? ವಿದ್ಯೆಗೆ ಇಬ್ಬರೂ ಸಮಾನ ಹಕ್ಕುಳ್ಳವರು. ಬೇರೆ ಮನೆಗೆ ಹೋಗುವವಳೆಂದು ಓದು ನಿಲ್ಲಿಸಿದರೆ, ಅವರ ಮನೆಗೆ ಬರುವ ಹೆಣ್ಣು ಕೂಡ ಅವಿದ್ಯಾವಂತೆಯಾಗಿ ಬರುವಳೆಂಬ ಸತ್ಯ ಮರೆಯಬಾರದು.

andolana

Recent Posts

ಆಂದೋಲನ ಸಂಪಾದಕೀಯ | ರೈಲ್ವೆ ಇಲಾಖೆಗೆ ಕನ್ನಡ, ಕನ್ನಡಿಗರ ಬಗ್ಗೆ ತಾತ್ಸಾರ ಸಲ್ಲದು

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬುದು ಇಂದು ನಿನ್ನೆಯ ಆರೋಪವಲ್ಲ. ಮೊದಲಿನಿಂದಲೂ ಈ ಆರೋಪ ಇದೆ. ರೈಲ್ವೆಯಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ…

11 mins ago

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ರಾಮನಗರ : ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ…

29 mins ago

ಗ್ಯಾಸ್‌ ಸಿಲಿಂಡರ್ ಅಭಾವ : ಗ್ರಾಹಕರ ಕಿಸೆಗೆ ಕತ್ತರಿ

ಹಲವು ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಶೇ.5 ಹೆಚ್ಚಳ ಫಾಸ್ಟ್ ಫುಡ್, ಜಂಕ್‌ಫುಡ್‌ಗಳ ದರವೂ ಗಗನಮುಖಿ   • ಚಿರಂಜೀವಿ ಸಿ…

40 mins ago

ಶತಮಾನ ಕಳೆದರೂ ಹೊಸತನ ಮೆರೆವ ಶಾಲೆ!

• ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ಹತ್ತಿರತ್ತಿರ ಒಂದೂ ಕಾಲು ಶತಮಾನದ ಚಿರನೂತನ ಶಾಲೆ... ವೃದ್ಧಾಪ್ಯದಲ್ಲೂ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡು…

53 mins ago

ಸಿದ್ದಾಪುರ | ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆ

ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…

11 hours ago

ಇರಾನ್‌ ಈವರೆಗೆ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ ; ಇಸ್ರೇಲ್‌

ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ ಇಸ್ರೇಲ್‌ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ…

11 hours ago