ನಟಿ ಅಪೂರ್ವ ಭಾರದ್ವಾಜ್ ಈಗ ನಿರ್ದೇಶಕಿ

ಚಿತ್ರ ವೆಂಕಟರಾಜು

ಚಿತ್ರರಂಗದಲ್ಲಿ ನಿರ್ದೇಶಕಿಯರು ಬಹಳ ಅಪರೂಪ ಅದರಲ್ಲೂ ಕನ್ನಡ ಚಿತ್ರರಂಗದಲ್ಲಂತೂ ಬೆರಳೆಣಿಕೆಯಷ್ಟು ಮಹಿಳೆಯರು ಚಿತ್ರ ನಿರ್ದೇಶನ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಪ್ರೇಮಾ ಕಾರಂತ್, ರೂಪಾ ಅಯ್ಯರ್, ಸುಮನಾ ಕಿತ್ತೂರು, ವಿಜಯಲಕ್ಷ್ಮಿ ಸಿಂಗ್‌, ಚಂಪಾ ಶೆಟ್ಟಿ ಹೀಗೆ ಕೆಲವೊಂದಿಷ್ಟು ಮಹಿಳೆಯರು ಮಾತ್ರ ಸಿನಿಮಾ ನಿರ್ದೇಶನಕ್ಕೆ ತೊಡಗಿ ಯಶಸ್ವಿಯೂ ಆಗಿದ್ದಾರೆ. ನಟನೆ ಹಾಗೂ ನಿರ್ದೇಶನ ಎರಡರಲ್ಲೂ ತಮ್ಮದೇ ಛಾಪನ್ನು ಮೂಡಿಸುತ್ತಿದ್ದು, ಅದೇ ಹಾದಿಯಲ್ಲಿ ಸಾಗುತ್ತಿರುವ, ಕನ್ನಡದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಅಪೂರ್ವ ಭಾರದ್ವಾಜ್ ಕೂಡ ಈಗ ನಿರ್ದೇಶನವರನ್ನು ಮಾಡಿದ್ದಾರೆ.

‘ಮಿರ್ಚಿ ಮಂಡಕ್ಕಿ ಕಡಕ್‌ ಜಾಯ್’, ‘ಉಪ್ಪಿನ ಕಾಗದ’, “ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾಗಳಲ್ಲಿ ನಟಿಸಿದ್ದ ಅವೂರ್ವ ಭಾರದ್ವಾಜ್, ಇತ್ತೀಚೆಗೆ ತೆರೆ ಕಂಡ ‘ಬಿಟಿಎಸ್’ ಎಂಬ 5 ಕಿರುಚಿತ್ರಗಳ ಪೈಕಿ ಕನ್ನಡದಲ್ಲಿ ‘ಸುಮೋಹ’ ಎಂಬ ಕಿರುಚಿತ್ರವನ್ನು ಅಪೂರ್ವ ನಿದೇರ್ಶಿಸಿದ್ದಾರೆ.

ಸಿನಿಮಾಗಳಿಂದ ಪ್ರಭಾವಿತಗೊಂಡ ಪಾತ್ರಗಳ ಬದುಕನ್ನು “ಬಿಟಿಎಸ್’ನ ಐದೂ ಕಿರುಚಿತ್ರಗಳು ತೆರೆದಿಡುವ ಪ್ರಯತ್ನ ಮಾಡಿದ. ಇದರ ಶೂನೆಯ ಕಿರುಚಿತ್ರವೇ ‘ಸುಮೋಹ’ ಆಗಿದ್ದು, ಇದನ್ನು ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಎನ್ನುವುದು ಮಾಯಾಲೋಕ. ಅದರ ಸೆಳೆತಕ್ಕೆ ಒಳಗಾಗದವರೇ ಇಲ್ಲ, ತೆರೆಯ ಮೇಲೆ ಬರುವ ನಟರು ನಮ್ಮನ್ನು ಸೆಳೆಯುತ್ತಾರೆ, ಜನರು ಅವರನ್ನು ಆರಾಧಿಸುತ್ತಾರೆ, ಆದರೆ, ಚಿತ್ರವೊಂದರ ತಯಾರಿಯಲ್ಲಿ ನೂರಾರು ಜನ ದುಡಿದಿರುತ್ತಾರೆ. ಅವರೆಲ್ಲ ತೆರೆಯ ಹಿಂದೆಯೇ ಉಳಿದುಬಿಡುತ್ತಾರೆ. ಸಿನಿಮಾ ಒಂದು ಕತೆಯಾದರೆ ಅದರ ಸೆಳೆತಕ್ಕೆ ಒಳಗಾಗಿ ತಮ್ಮ ಊರುಗಳನ್ನು ಬಿಟ್ಟು ಬಂದಂತಹವರದ್ದು ಬೇರೆಯೇ ಕತೆ. ಸಿನಿಮಾ ಉದ್ಯಮವನ್ನೇ ನಂಬಿಕೊಂಡು ಬಂದಿರುವ ಸಾವಿರಾರು ಕಲಾವಿದರದ್ದು ಬೇರೆಯೇ ಕತೆ. ಅವರು ಪರದೆಯ ಮೇಲೆ ಕಾಣುವುದಿಲ್ಲ. ರೋಲಿಂಗ್ ಕ್ರೆಡಿಟ್ಸ್‌ನಲ್ಲಿ ಸಣ್ಣದಾಗಿ ಕಂಡೂ ಕಾಣದಂತೆ ಅವರ ಹೆಸರು ಬಂದಿರುತ್ತದೆ. ಅಂತಹ ಮೇಕಪ್‌ ಟಚಪ್‌ ಮಾಡುವ ವ್ಯಕ್ತಿಯ ಕತೆಯೇ ‘ಸುಮೋಹ’.

ಮದುವೆಯ ಮೊದಲ ರಾತ್ರಿ ಗಂಡ ತನ್ನ ಹೆಂಡತಿಗೆ ಶೂಟಿಂಗ್‌ನ ಫೋಟೋಗಳನ್ನು ತೋರಿಸುವ ದೃಶ್ಯದಿಂದ ಕಿರುಚಿತ್ರ ಆರಂಭವಾಗುತ್ತದೆ. ಹೆಂಡತಿ ಸುಶ್ಮಿತಾಗೆ ಸಿನಿಮಾ ಒಂದು ಭ್ರಾಮಕ ಜಗತ್ತಾದರೆ, ಅಲ್ಲಿ ಹೀರೋನ ‘ಟಚಪ್’ ಆರ್ಟಿಸ್ಟ್ ಮೋನಿಗೆ ಉಳಿದ ಕೆಲಸಗಳಂತೆ ಸಿನೆಮಾ ಕೂಡ ಒಂದು.

ಸುಶ್ಮಿತಾಗೆ ಮದುವೆಯ ಮೊದಮೊದಲು ಖುಷಿ ಕೊಡುತ್ತಿದ್ದ ಶೂಟಿಂಗ್ ಎನ್ನುವ ಪದ ಬರಬರುತ್ತಾ ಬೇಸರ ತರಿಸುತ್ತದೆ. ಒಮ್ಮೆಯಾದರೂ ಶೂಟಿಂಗ್ ನೋಡಬೇಕು ಅನ್ನುವ ಅವಳ ಆಸೆಯನ್ನು ಗಂಡ ಮುಂದೂಡುತ್ತಲೇ ಇರುತ್ತಾನೆ. ಸಿನಿಮಾ ಎಂಬ ಭ್ರಾಮಕ ಜಗತ್ತಿಗೂ ಅದು ತಯಾರಾಗುವಾಗ, ಇರುವ ವಾಸ್ತವಕ್ಕೂ ಸಂಬಂಧವೇ ಇಲ್ಲ ಎನ್ನುವುದು ಅವನಿಗೆ ಗೊತ್ತು. ಆದರೆ ಅದನ್ನು ಹೆಂಡತಿಗೆ ವಿವರಿಸಲಾರ. ಈ ಎಲ್ಲ ತೊಳಲಾಟಗಳನ್ನು ಸಿನಿಮಾದಲ್ಲಿ ಮನಸ್ಸಿಗೆ ತಾಕುವಂತೆ ಹೇಳಿದ್ದಾರೆ.

ಸಿನಿಮಾ ಸೆಟ್‌ನಿಂದ ತಂದ ಮೇಕಪ್ ಕಿಟ್ ನಿಂದ ಹೆಂಡತಿಗೆ ಮೇಕಪ್ ಮಾಡಿ ಅವರಿಬ್ಬರೂ ಸಂತಸ ಪಡುವ ದೃಶ್ಯ, ಸಿನಿಮಾ ಹೀರೋಯಿನ್‌ಗಾಗಿ ಗೋಡಂಬಿ ಹಾಕಿ ಮಾಡಿದ ತಿಂಡಿ, ಹೀಗ ಕೆಳ ಮಧ್ಯಮವರ್ಗದ ಸಣ್ಣ ಸಣ್ಣ ವಿಷಯಗಳೇ ಚಿತ್ರವನ್ನು ಜೀವಂತವಾಗಿರಿಸಿವೆ. ಕೆಳಮಧ್ಯಮ ವರ್ಗದ ಮನೆ, ಎಲೆಕ್ಟ್ರಿಕ್‌ ಸ್ಟೌವ್‌, ಕೆಟ್ಟು ಹೋಗುವ ಟಿ.ವಿ ಇಂತಹ ಸಣ್ಣ ಸಣ್ಣ ವಿಚಾರಗಳು ಸಿನಿಮಾವನ್ನು ಹೆಚ್ಚು ಆಪ್ತವಾಗಿಸುತ್ತವೆ.

ತಮ್ಮ ಮೊದಲ ಚಿತ್ರದಲ್ಲೇ ಪಾತ್ರಗಳಿಗೆ ಜೀವ ತುಂಬುವಲ್ಲಿ ನಿರ್ದೇಶಕಿ ಗೆದ್ದಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಸಿನೆಮಾಗಳು ಬಂದರೆ ಹೊಸ ರೀತಿಯ ಕತೆಗಳನ್ನು ತೆರೆಯ ಮೇಲೆ ಕಾಣಬಹುದು. ನಿರ್ದೇಶಕಿಯಾಗಬೇಕು ಎಂದು ಕನಸು ಕಾಣುವ ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯೂ ಆಗುತ್ತದೆ.

ಆಂದೋಲನ ಡೆಸ್ಕ್

Recent Posts

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

2 mins ago

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

8 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

12 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

13 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

13 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

14 hours ago