ಮಹಿಳೆ ಸಬಲೆ

ಕಾಡಿನ ಜೀವ ವೈವಿಧ್ಯದತ್ತ ಬಣ್ಣದ ಲೋಕದ ಸೆಳೆತ

  • ಅನಿಲ್ ಅಂತರಸಂತೆ

ದಶಕದಿಂದೀಚೆಗೆ ಹುಲಿ ಪ್ರವಾಸೋದ್ಯಮ ಅತೀ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇಶದ ಬಹುತೇಕ ಅರಣ್ಯಗಳು ಇಂದು ಪ್ರಮುಖ ಪ್ರವಾಸಿ ಕೇಂದ್ರಗಳಾಗಿದ್ದು, ಹುಲಿ ಪ್ರವಾಸೋದ್ಯಮವು ಆದಾಯದಾಯಕವಾಗಿ ಮುಂದುವರಿಯಲು ಸಹಾಯಕವಾಗಿದೆ.

ಇತ್ತೀಚೆಗೆ ಕನ್ನಡ ಸಿನಿ ರಂಗವೂ ಈ ವನ್ಯಜೀವಿ ಛಾಯಾಗ್ರಹಣದತ್ತ ವಿಶೇಷ ಆಸಕ್ತಿ ತೋರಲು ಮುಂದಾಗಿದೆ. ದೇಶದ ವಿವಿಧ ಕಾಡುಗಳಲ್ಲಿ ಸಫಾರಿಗಳ ಮೂಲಕ ತಮ್ಮ ಬಿಡುವಿನ ಸಮಯವನ್ನು ಕಾಡಿನಲ್ಲಿಯೇ ಕಳೆಯಲು ಇಚ್ಛಿಸುತ್ತಿದ್ದಾರೆ. ಅದರಲ್ಲಿಯೂ ನಟ ದರ್ಶನ್ ತೂಗುದೀಪ ಅವರಿಗಂತೂ ಕಾಡೆಂದರೆ ಎಲ್ಲಿಲ್ಲದ ಪ್ರೀತಿ.

ಇದೇ ಕುತೂಹಲ ಈಗ ಕಿರುತೆರೆ ನಟ-ನಟಿಯರಲ್ಲೂ ಉಂಟಾಗಿದೆ. ಕ್ಯಾಮೆರಾಗಳನ್ನು ಹಿಡಿದು ಕನ್ನಡ ಕಿರುತೆರೆಯ ನಟನಟಿಯರು ವನ್ಯಜೀವಿ ಛಾಯಾಗ್ರಹಣದ ಕಡೆ ಆಸಕ್ತಿ ತೋರಿರುವುದು ವಿಶೇಷವಾಗಿದೆ. ಅದರಲ್ಲಿಯೂ ಕನ್ನಡದ ಕಿರುತೆರೆ ನಟಿ ಇಶಿತ ವರ್ಷ ಅವರು ಕಳೆದ ಕೆಲ ತಿಂಗಳುಗಳಿಂದ ವನ್ಯಜೀವಿ ಛಾಯಾಗ್ರಹಣದತ್ತ ಒಲವು ತೋರಿದ್ದು, ಬಿಡುವಿನ ಸಮಯವನ್ನು ಕಾಡಿನಲ್ಲಿ ಸಾಫಾರಿ ಮಾಡುವ ಮೂಲಕ ಕಳೆಯುತ್ತಿದ್ದಾರೆ.

ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ ಹಾಗೂ ಕೆಲ ರಿಯಾಲಿಟಿ ಶೋಗಳ ಮೂಲಕ ಮನೆ ಮಾತಾಗಿರುವ ಇಶಿತ ವರ್ಷ, ದೇಶದ ಕಾಡು ಗಳಲ್ಲದೆ ವಿದೇಶದ ಅನೇಕ ಕಾಡುಗಳಲ್ಲಿ ಸಫಾರಿ ಮಾಡಿದ್ದಾರೆ. ಇತ್ತೀಚೆಗೆ ಆಂದೋಲನ ದಿನಪತ್ರಿಕೆ’ ಯ ವರದಿಗಾರ ಹಾಗೂ ವನ್ಯಜೀವಿ ಛಾಯಾಗ್ರಹಕ ಅನಿಲ್ ಅಂತರಸಂತೆ ಅವರೊಂದಿಗೆ ತಮ್ಮ ವನ್ಯಜೀವಿ ಛಾಯಾಗ್ರಹಣದ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಚಿತ್ರೀಕರಣದ ನಡುವೆಯೂ ಹವ್ಯಾಸಿ ಫೋಟೋಗ್ರಾಫಿಯಲ್ಲಿ ತೊಡಗಿರುವ ಇಶಿತ ವರ್ಷ ನಾಗರಹೊಳೆಯ ಕಬಿನಿ, ಮಹಾರಾಷ್ಟ್ರದ ತಡೋಬಾ, ಮಧ್ಯಪ್ರದೇಶದ ಕಾನ್ವಾ, ಪೆಂಚ್ ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ದೇಶದ ವಿವಿಧ ಅರಣ್ಯಗಳು ಹಾಗೂ ಆಫ್ರಿಕಾದ ಕಾಡುಗಳಲ್ಲೂ ಸಫಾರಿಯನ್ನು ಮಾಡಿ ಅಲ್ಲಿನ ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ನಾನು ಈ ಹಿಂದೆ ಪ್ರಾಣಿಗಳನ್ನು ಮೃಗಾಲಯಗಳಲ್ಲಿ ನೋಡಿ ಖುಷಿಪಡುತ್ತಿದೆ. ಆದರೆ ಈಗ ವನ್ಯಜೀವಿ ಛಾಯಾಗ್ರಹಣದ ಮೆಂಟರ್ ಆಗಿರುವ ಡಾ.ಶಶಾಂಕ್‌ ಅವರೊಂದಿಗೆ ದೇಶದ ಅನೇಕ ಅರಣ್ಯಗಳಲ್ಲಿ ಸಫಾರಿ ಮಾಡಿದ್ದೇನೆ. ಮೃಗಾಲಯಗಳಿಗಿಂತ ಕಾಡಿನಲ್ಲಿ ಪ್ರಾಣಿಗಳು ಎಷ್ಟು ನೆಮ್ಮದಿಯಾಗಿ ಬದುಕುತ್ತವೆ ಎಂಬುದನ್ನು ನೋಡಿ ಸಂತಸವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅನೇಕ ಅರಣ್ಯಗಳನ್ನು ಸುತ್ತಿದ ಬಳಿಕ ಕರ್ನಾಟಕದ ದಟ್ಟಾರಣ್ಯಗಳು ನನಗೆ ಅದ್ಭುತವೆನಿಸಿವೆ. ಅದರಲ್ಲಿಯೂ ನಾಗರಹೊಳೆಯ ಕಬಿನಿ ಭಾಗ ನನಗೆ ಅತ್ಯಂತ ಹೆಚ್ಚು ಪ್ರಿಯವಾದ ಸ್ಥಳ. ಇಲ್ಲಿ ಸಾಕಷ್ಟು ಬಾರಿ ಹುಲಿಗಳನ್ನು ನೋಡಿದ್ದೇನೆ. ಅದರಲ್ಲಿಯೂ ಬ್ಯಾಕ್‌ ವಾಟರ್ ಹೆಣ್ಣು ಹುಲಿ ನನ್ನ ನೆಚ್ಚಿನದಾಗಿತ್ತು. ಹುಲಿಗಳ ಹಾವಭಾವ ಹೇಗಿರುತ್ತದೆ, ಜೀವನ ಕ್ರಮವೇನು, ಹುಲಿಯ ಪಟ್ಟೆಗಳಲ್ಲಿನ ವ್ಯತ್ಯಾಸಗಳನ್ನು ಅರಣ್ಯದಲ್ಲೇ ನೋಡಿ ಹುಲಿಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು ಅನಿಸಿದೆ. ಇದಲ್ಲದೆ ಬಿಡುವಿನ ವೇಳೆಯಲ್ಲಿ ಓದುವ ಹವ್ಯಾಸವೂ ಇದೆ ಎನ್ನುತ್ತಾರೆ.

ಈ ಬಾರಿ ಹುಲಿಗಳ ಸಂಖ್ಯೆಯೂ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆ, ದೇಶದ ಅರಣ್ಯಗಳಲ್ಲಿ ಅವುಗಳಿಗಿರುವ ಪೂರಕ ವಾತಾವರಣ ಮತ್ತು ರಕ್ಷಣೆಯ ಫಲವಾಗಿ ಇಂದು ಹುಲಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಯುವಜನತೆ ಬೇರೆ ಯಾವುದೋ ಅಭ್ಯಾಸಗಳಿಗೆ ಅಡಿಕ್ಟ್ ಆಗುವ ಬದಲು ನಿಸರ್ಗಕ್ಕೆ, ಪ್ರಕೃತಿಗೆ ಅಡಿಕ್ಟ್ ಆಗುವುದು ಉತ್ತಮ ಹವ್ಯಾಸ ಎಂಬುದು ಇಶಿತ ವರ್ಷರವರ ಮನದಾಳದ ಮಾತು.

lokesh

Recent Posts

ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ರೈತರಿಗೆ ಆತಂಕ ಸೃಷ್ಟಿಸಿ ಜಾನುವಾರುಗಳು ಹಾಗೂ ಸಾಕು…

6 hours ago

ಶಿವಶಂಕರಪ್ಪ ಸಾಹುಕಾರ್‌ಗೆ ಹೊಸ ಕಾನೂನು ಸಂಕಷ್ಟ

ಬೆಂಗಳೂರು: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಈ ಹೊಸ ಕಾನೂನು ಸಂಕಷ್ಟ ಎದುರಾಗಿದೆ.…

9 hours ago

ಗೋಪಾಲಸ್ವಾಮಿ ಬೆಟ್ಟ: ಕೊನೆಗೂ ಭಕ್ತರಿಗೆ ಸಿಕ್ಕಿತು ನೆರಳು!

ಬೆಟ್ಟದಲ್ಲಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದ ಶಾಸಕ; ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದ ‘ಆಂದೋಲನ’ ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ…

12 hours ago

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

16 hours ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

16 hours ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

16 hours ago