ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪರ-ವಿರೋಧ ಚರ್ಚೆ
ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟ ಉತ್ತರ ದೇಶಾದ್ಯಂತ ಚರ್ಚೆಯಾಗುತ್ತಿದೆ. ರೂಪಾಯಿ ಮೌಲ್ಯದ ಬಗ್ಗೆ ಎತ್ತಿದ್ದ ಪ್ರಶ್ನೆಗೆ ‘ರೂಪಾಯಿ ಕುಸಿಯುತ್ತಿಲ್ಲ; ಡಾಲರ್ ಬಲಗೊಳ್ಳುತ್ತಿದೆ’ ಎಂಬಂತಹ ಹೇಳಿಕೆ ಕೊಟ್ಟು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದರು. ಇದಕ್ಕೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಬಗೆಗಿನ ಸ್ಥಳೀಯರ ಅಭಿಪ್ರಾಯ ಇಲ್ಲಿದೆ.
ರೂಪಾಯಿ ಹೆಚ್ಚು ಕುಸಿದಿಲ್ಲ
ಯಾರೇ ಏನೇ ಹೇಳಿಕೆ ಕೊಟ್ಟರೂ ಅದರ ಪೂರ್ವಾಪರ ವಿಚಾರ ಮಾಡಬೇಕು. ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಸರಿಯಾಗಿದೆ. ಜಾಗತಿಕ ಮಟ್ಟದ ಎಲ್ಲ ಕರೆನ್ಸಿಗಳನ್ನೂ ತುಲನೆ ಮಾಡಿದಾಗ ಡಾಲರ್ ಎದುರು ಅವು ಶೇ. ೧೦ ರಿಂದ ೨೦ರಷ್ಟು ಕುಸಿತ ಕಂಡಿವೆ. ಆದರೆ ರೂಪಾಯಿ ಹೆಚ್ಚಿನ ಕುಸಿತ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ಸರಿಯಾಗಿದೆ.
ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಸತ್ಯ. ಇದರ ಹಿಂದೆ ನಾವು ಎದುರಿಸಿದ ಕೋವಿಡ್ ಸಂಕಷ್ಟ ಇದೆ ಎಂದು ನನಗೆ ಅನ್ನಿಸುತ್ತದೆ. ದುಡಿಮೆ ಹೆಚ್ಚು ಮಾಡಿಕೊಳ್ಳುವುದು, ಸಣ್ಣ ಪ್ರಮಾಣದಲ್ಲಿ ಉದ್ಯಮಗಳನ್ನು ನಡೆಸುವುದು, ಆದಾಯ ಹೆಚ್ಚಿಸಿಕೊಳ್ಳುವುದು ಈಗಿನ ಅನಿವಾರ್ಯ. -ಸುಧಾ ಪಣೀಶ್, ಗೃಹಿಣಿ, ಸಮರ್ಪಣಾ ಶಿಕ್ಷಣ ಸಂಸ್ಥೆ ತಲಕಾಡು, ಕಾರ್ಯದರ್ಶಿ
ದೇಶದ ಆರ್ಥಿಕತೆ ಚೆನ್ನಾಗಿಯೇ ಇದೆ
ಕೊರೊನಾ ಬಂದದ್ದರಿಂದ ನಮ್ಮ ಆರ್ಥಿಕತೆ ಇಷ್ಟು ಕುಸಿತ ಕಂಡಿದೆ ಎನ್ನಿಸುತ್ತದೆ ನನಗೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದು, ಖಂಡಿಸುವುದು ಸುಲಭವಲ್ಲ. ಖಾಸಗಿ ಕ್ಷೇತ್ರದ ಉದ್ಯೋಗಿಗಳು, ಸಣ್ಣ ಸಣ್ಣ ಉದ್ದಿಮೆ ನಡೆಸುತ್ತಿದ್ದವರಿಗೆ ಹೊಡೆತ ಬಿದ್ದಿದೆ. ಆದರೆ ನಿಧಾನವಾಗಿ ಎಲ್ಲವೂ ಮತ್ತೆ ಚೇತರಿಕೆ ಕಾಣುತ್ತಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು ಆರ್ಥಿಕವಾಗಿ ಸಬಲರಾಗಿಯೇ ಇದ್ದೇವೆ. ಅಮೆರಿಕಾದ ಎಕಾನಮಿ ಚೆನ್ನಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಿರುವಾಗ ಡಾಲರ್ ಬಲಗೊಳ್ಳುತ್ತಿದೆ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ನಮ್ಮ ರೂಪಾಯಿ ಮೌಲ್ಯ ಚೆನ್ನಾಗಿಯೇ ಇದೆ. ನಮ್ಮ ಶೋ ರೂಂನಲ್ಲಿ ಕಾರುಗಳ ಮಾರಾಟದ ಪ್ರಮಾಣ ಚೆನ್ನಾಗಿಯೇ ಇದೆ. – ಶ್ರೀವತ್ಸ, ಈವೆಂಟ್ ಮ್ಯಾನೆಜರ್, ಮಾಂಡೋವಿ ಮೋಟರ್ಸ್, ಮೈಸೂರು
ಅಳಿಯ ಅಲ್ಲ; ಮಗಳ ಗಂಡ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಭಿಪ್ರಾಯ ನೋಡಿದರೆ ಅವರು ತಮ್ಮ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಮಾತ್ರ ಆ ರೀತಿ ಹೇಳಿದ್ದಾರೆ ಎನ್ನಿಸುತ್ತದೆ. ನಾವು ಹಿಂದೆಂದೂ ಇಷ್ಟೊಂದು ಬೆಲೆ ಏರಿಕೆ ಕಂಡಿರಲಿಲ್ಲ. ನೋಡಿರಲಿಲ್ಲ. ಜಿಎಸ್ಟಿ ಬಂದ ಮೇಲೆ ಭಾರೀ ಬದಲಾವಣೆ ಆಗುತ್ತದೆ ಎನ್ನುವ ನಿರೀಕ್ಷೆ ಹುಸಿಯಾಯಿತು. ತೆರಿಗೆ ಹೆಚ್ಚಿತು, ಆದಾಯ ಕುಸಿಯಿತು.
ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ ಎನ್ನುವುದು ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗೆ ಇದೆ. ನಮ್ಮ ತಪ್ಪು ಆರ್ಥಿಕ ನಿರ್ಧಾರಗಳಿಂದಾಗಿ ಈ ಸ್ಥಿತಿಗೆ ಬಂದಿದ್ದೇವೆ ಎನ್ನಿಸುತ್ತದೆ. ಇದನ್ನು ಮರೆ ಮಾಚಿ ಅವರು ಈ ರೀತಿ ಹೇಳಿರುವುದು ಸರಿಯಲ್ಲ.
– ವಿದ್ಯಾಶ್ರೀ ಎನ್.ಎನ್. ಪ್ರಾಧ್ಯಾಪಕಿ, ಕಾಮರ್ಸ್ ವಿದ್ಯಾರ್ಥಿ
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ…
ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…
ಬೆಂಗಳೂರು: ಮುಡಾ ಕೇಸ್ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…
ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್ಐಟಿ…
ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…