• ಕೇಶವಮೂರ್ತಿ

ತೆಂಗಿನ ತೋಟದಲ್ಲಿ ‘ಯಾದ’ ಅಂದರೆ ಇಲಿಗಳು ಹಾಗೂ ಅಳಿಲುಗಳ ಕಾಟ ವಿಪರೀತವಾದಾಗ ಬೆಳೆ ಗಾರರು ಅವುಗಳಿಂದ ಬೆಳೆಗಳನ್ನು ರಕ್ಷಿಸಲು ವಿಧವಿಧವಾದ ತಂತ್ರಗಳನ್ನು ಬಳಸ್ತಾರೆ. ಇಲಿಗಳ ಹಾವಳಿಯನ್ನು ಹತೋಟಿಗೆ ತರಲು ಕೆಲ ಬಾರಿ ವಿಷ ಪ್ರಯೋಗ ಮಾಡುತ್ತಾರೆ. ಅಲ್ಲದೆ ಬೋನು ಇರಿಸಿ ಅವುಗಳನ್ನು ಸೆರೆ ಹಿಡಿಯುವುದೂ ಉಂಟು. ಇನ್ನು ಕೆಲ ಸಾವಯವ ಕೃಷಿಕರು ತೋಟಗಳಲ್ಲಿ ಬೆಕ್ಕುಗಳನ್ನು ಸಾಕುತ್ತಾರೆ ಅಥವಾ ಹಾವುಗಳನ್ನು ಸಾಯಿಸದೇ ತೋಟದಲ್ಲಿಯೇ ಇರುವಂತೆ ಮಾಡಿ ಅವುಗಳಿಂದ ಇಲಿಗಳ ಹಾವಳಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಾರೆ. ಇಲಿಗಳು ಹಾಗೂ ಅಳಿಲುಗಳು ಮರಹತ್ತದಂತೆ ತೆಂಗಿನ ಮರದ ಮಧ್ಯದಲ್ಲಿ ಕಬ್ಬಿಣದ ತಗಡು ಶೀಟ್‌ಗಳನ್ನು ಹೊಡೆಯುವುದು ಮತ್ತೊಂದು ವಿಧಾನ. ಆದರೆ ಈ ಬುದ್ದಿವಂತ ಜೀವಿಗಳು ತಗಡಿನ ಮೇಲೆ ಹತ್ತುವುದನ್ನು ಹಾಗೂ ನೆಗೆಯುವುದನ್ನು ಕಂಡಾಗ ಬೆರಗಾದ ರೈತರು ಅದೇ ತಗಡನ್ನು ಉಲ್ಟಾ ಆಲಿಕೆಯ ರೀತಿಯಲ್ಲಿ ಕಟ್ಟಿ ‘ಯಾದ’ಗಳು ಮೇಲೆ ಹೋಗುವುದಕ್ಕೆ ಕಡಿವಾಣ ಹಾಕುತ್ತಾರೆ.

ಕೆಲ ಅನುಭವಿ ಕೃಷಿಕರ ಪ್ರಕಾರ, ‘ತೆಂಗಿನ ಮರಕ್ಕೆ ತಗಡು ಹೊಡೆಯುವ ಮೊದಲು, ಮರ ಹತ್ತಿ ಮರದಲ್ಲಿ ವಾಸವಾಗಿರುವ ಯಾದಗಳನ್ನು ಓಡಿಸಬೇಕು. ಇಲ್ಲದಿದ್ದರೆ ಅವು ಮರದ ಮೇಲೆಯೇ ಇದ್ದು ಗರಿ ಕೂಡಿರುವ ತೋಟದಲ್ಲಿ ಮರದಿಂದ ಮರಕ್ಕೆ ಸುಲಭವಾಗಿ ಓಡಾಡುತ್ತವೆ’. ಹೀಗೆಯೇ ತೆಂಗಿನ ಬೆಳೆಗಾರರನ್ನು ಕಾಡುವ ಇಲಿಗಳ ಹತೋಟಿಗೆ ತರತರಹದ ವಿಧಾನ ಅನುಸರಿಸಿದರೂ ಅವು ಮರ ಹತ್ತೋದು ಬಿಟ್ಟಿಲ್ಲ. ಏಕೆ? ಇದೇ ಪ್ರಶ್ನೆಯನ್ನು ರೈತರೊಬ್ಬರು ತುಂಬಿದ ಸಭೆಯಲ್ಲಿ ಕೇಳಿದ್ದರು. ಯಾರಿಂದಲೂ ಸಮರ್ಪಕ ವಾದ ಉತ್ತರ ಬರಲಿಲ್ಲ. ‘ನೀವು ಏನೆಲ್ಲಾ ವಿಧಾನಗಳನ್ನು ಅನುಸರಿಸಿದರೂ ಇಲಿಗಳನ್ನು ಮರ ಹತ್ತದಂತೆ ತಡೆಯುವುದಕ್ಕೆ ಆಗಲ್ಲ. ಅವು ಏಕೆ ಮರ ಹತ್ತುತ್ತವೆ? ಯಾರಾದ್ರೂ ಯೋಚನೆ ಮಾಡಿದ್ದೀರಾ? ಮುಂದುವರಿದು, ಆ ರೈತರೇ ಹೇಳಿದ್ದರು, ‘ನೋಡಿ ಇಲಿಗಳ ಆಹಾರ ಮರದಲ್ಲಿದೆ. ಆ ಆಹಾರ ಬಿಟ್ಟರೆ ಅವಕ್ಕೆ ಬೇರೆ ಆಹಾರವಿಲ್ಲ. ಹಾಗಾಗಿ ಅವು ಎಷ್ಟೇ ಕಷ್ಟಗಳು ಎದುರಾದರೂ ಮರ ಹತ್ತೇ ಹತ್ತುತ್ತವೆ. ಏಕೆ ಹೇಳಿ? ಅವಕ್ಕೆ ಆಹಾರ ಬೇಕು. ಅವೂ ಬದುಕಬೇಕು’, ತುಂಬಿದ ಸಭೆ ಶಾಂತವಾಯಿತು. ಮುಂದುವರಿದು ಹೇಳಿದರು, ‘ನೋಡಿ ಇಲಿಗಳು ಮರ ಹತ್ತುವುದು ತೆಂಗಿನ ಮರದಲ್ಲಿರೋ ಅದರ ಆಹಾರಕ್ಕಾಗಿ ಅಂದಮೇಲೆ, ಅದರ ಆಹಾರವನ್ನು ನಿಮ್ಮ ತೋಟದಲ್ಲಿ ಮರಗಳ ಬುಡದಲ್ಲೇ ಒದಗಿಸಿ. ಆಗ ಅದು ಕಷ್ಟ ಪಟ್ಟು ಮರವನ್ನಾದರೂ ಏಕೆ ಹತ್ತಬೇಕು. ಬುಡದಲ್ಲಿ ನೀವು ಒದಗಿಸಿರುವ ಆಹಾರವನ್ನೇ ತಿಂದುಕೊಂಡು ನೆಲದಲ್ಲಿಯೇ ಬಿಲವನ್ನು ತೋಡಿಕೊಂಡು ವಾಸಿಸುತ್ತವೆ. ಅವುಗಳು ನೆಲದಲ್ಲಿ ಬಿಲ ತೋಡುವುದರಿಂದ ಮಳೆ ನೀರು ಭೂಮಿಯಲ್ಲಿ ಸುಲಭವಾಗಿ ಇಂಗುತ್ತದೆ. ಅವುಗಳ ಮಲ ಮತ್ತು ಮೂತ್ರದ ಮೂಲಕ ಮಣ್ಣಿನ ಫಲವತ್ತತ್ತೆಯೂ ಹೆಚ್ಚಾಗುತ್ತದೆ. ಹಾಗೆಯೇ ಹರಿದಾಡುವ ಹಾವುಗಳಿಗೆ ಅವು ಆಹಾರವಾಗಿ, ನಿಮ್ಮ ತೋಟದಲ್ಲಿ ನಿಸರ್ಗವೇ ನಿಯಂತ್ರಣ ಮಾಡಲಿದೆ’.

ಯಾವ ಆಹಾರಗಳನ್ನು ನೀವು ತೋಟದಲ್ಲಿ ಇಲಿಗಳಿಗಾಗಿ ಬೆಳೆಯಬೇಕು ಎಂದರೆ, ಸಿಹಿ ಗೆಣಸು, ಆರಾರೋಟ್, ಕ್ಯಾರೆಟ್ ಹಾಗೂ ಇತರೆ ಗೆಡ್ಡೆ ಜಾತಿಯ ಬೆಳೆಗಳು. ಇವು ನೆಲಕ್ಕೆ ಹೊದಿಕೆಯಾಗಿ ತೇವ ಸಂರಕ್ಷಣೆಗೂ
ಸಹಕಾರಿಯಾಗಲಿದೆ. ನಿಸರ್ಗ ಪರಿಪೂರ್ಣವಾಗಿದೆ ಅನ್ನುವ ಮಾತಿದೆ. ಇಲ್ಲಿ ನಾವು ಮಾತ್ರ ಬದುಕಿ, ಇತರ ಪ್ರಾಣಿಪಕ್ಷಿಗಳು ಹಾಳಾಗಬೇಕು ಎನ್ನುವ ಭಾವನೆಯೇ ತಪ್ಪು. ನಾವೂ ಬದುಕಿ, ಇತರರಿಗೂ ಬದುಕಲು ಅವಕಾಶ ನೀಡಬೇಕು. ಆಗ ಸಾಮರಸ್ಯ ಸಾಧ್ಯ. ಕೋತಿಗಳ ಕಾಟ ತಪ್ಪಿಸಲು, ತೋಟದ ಸುತ್ತ ಅವುಗಳಿಗೆಂದೇ ನಾಟಿ ಮಾವು, ಹಲಸು, ನೇರಳೆ ಮರ ಹಾಕಿರುವ ರೈತರಿದ್ದಾರೆ. ಅಳಿಲು, ಇಲಿ, ಹಕ್ಕಿ ಪಕ್ಷಿಗಳಿಗಾಗಿ ಆಲ, ಅತ್ತಿ, ಗೋಣಿ ಮರಗಳನ್ನು ಬೆಳೆಸಿರೋ ಪುಣ್ಯಾತರಿದ್ದಾರೆ. ನಿಮ್ಮ ಆಹಾರ ನೀವು ತಿನ್ನಿ ನಮ್ಮ ಆಹಾರದ ಕಡೆ ಬರಬೇಡಿ ಅಂತಾ ಅವುಗಳಿಗೆ ಪರ್ಯಾಯ ಆಹಾರ ಒದಗಿಸಿದರೆ, ಅವುಗಳೇಕೆ ನಮ್ಮ ಆಹಾರದ ಬೆಳೆಗಳ ತಂಟೆಗೆ ಬರುತ್ತವೆ? ಅಷ್ಟಕ್ಕೂ ಅವೇನು ನಮ್ಮ ವೈರಿಗಳಾ?
ಆಲೋಚನೆ ಮಾಡಿ, (ಅಂಕಣಕಾರರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು) keshavamurthy.n@gmail.com

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

9 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago