ಹಾಡು ಪಾಡು

ಪೌರಕಾರ್ಮಿಕ ಶೋಭಾ ಹೇಳಿದ ಸಂಗತಿಗಳು…

ಮಧುಕರ ಮಳವಳ್ಳಿ

ಕೆಲದಿನಗಳ ಹಿಂದೆ ಪೌರಕಾರ್ಮಿಕರು ತಮ್ಮ ನೌಕರಿಯ ಖಾಯಂಗಾಗಿ ಮುಷ್ಕರ ನಡೆಸುತ್ತಿದ್ದರು.ಇದರಿಂದಾಗಿ ಇಡೀ ಯಳಂದೂರು ಪಟ್ಟಣವೂ ಕಸದಿಂದ ತುಂಬಿಹೋಗಿತ್ತು. ಆಗ ಬರೀ ನಗುವಿನಿಂದಲೇ ನಮಸ್ತೇ ಸಾ ಎಂಬ ನುಡಿಯಿಂದಲೇ ಪರಿಚಯವಿದ್ದ ಶೋಭಾಳನ್ನು ಏನು ಮೇಡಂ ನಿಮ್ಮ ಮುಷ್ಕರ ಮುಗಿತಾ ಅಂದೆ. ಆಗ ಶೋಭಾ ‘ಅದು ಬುಡಿ ಸಾ, ಈಗ ನಿಮ್ಮ ಜೊತೆಗೆ ಮಾತಾನಾಡ ಬಹುದಾ ಸಾ’ ಎಂದಳು. ಬನ್ನಿ ಏನ್ ಸಮಾಚಾರಯೆಂದೆ. ಸಾ ನಾವು ಎಡ್‌ಬಿಡಂಗಿಗಳು ಇತ್ತಾಗೆ ಓದು ಸರಿಯಾಗಿ ಇಲ್ಲ. ಅತ್ತಾಗೆ ಸರ್ಕಾರದವರು ನಮ್ಮ ಕೆಲಸಗಾರು ಅಂತ ಹೇಳಿ ಸಂಬಳಾನೂ ಸರಿಯಾಗಿ ಕೊಡುತ್ತಿಲ್ಲ. ನಮ್ಮ ಕತೆ ಹಿಂಗೇ ಎನ್ನುತಾ ಪಕ್ಕದಲ್ಲೇ ಕುಳಿತಳು.

ಯಾಕೆ ನೀವು ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ ಪಾಸು ಮಾಡಿಲ್ಲವಾ ಎಂದೆ. ಅಯ್ಯೋ ಸಾ ಅದು ಒಂದು ಕರ್ಮದ ಕತೆ. ನಿಮಗೆ ಬೇಜಾರ್ ಆಗ್‌ಬಹುದು. ನಾನು ಸ್ಕೂಲ್ಗೆ ಹೋಗುತ್ತಾಯಿದ್ದೆ. ಲಾಂಗ್ ಜಂಪ್, ರನಿಂಗ್, ನಂಗೆ ಇಷ್ಟವಾದ ಆಟ. ಡ್ಯಾನ್ಸ್ ಕೂಡ ಚನ್ನಾಗಿ ಮಾಡುವೆ. ಅದರೆ ಆ ಹೆಡ್‌ಮೇಷ್ಟರು ಒಂದು ತಪ್ಪ ಮಾಡಿದ್ದರು. ನಾವು ಕೊನೆ ಬೆಂಚು, ಹೋಮ್‌ವರ್ಕ್ ಮಾಡ್‌ಕಂಡು ಹೋದರೆ. ಸರಿಯಾಗಿ ನೋಡುತ್ತಾ ಇರ್ಲಿಲ್ಲ. ಮತ್ತೆ ನಿಮಗೆ ಯಾಕೆ ಓದು? ತೊಳೆಯುವ ಕೆಲಸ ಇದಿಯಲ್ಲ ಎನ್ನುತ್ತಾ ಇದ್ದರು. ಆಗಾ ಮನಸ್ಸಿಗೆ ತುಂಬಾ ಬೇಸರ ಆಗ್ತಿತ್ತು. ಆವತ್ತು ಒಂದು ದಿನ ನಮ್ಮ ಮೇಷ್ಟರು ಯಾರೋ ಆಫೀಸ್ಸರ್ ಬರ‍್ತಾರೆ ಅಂತ ನನ್ನ ಕರೆದು ಪೊರಕೆ ಎಸದು. ನಿಮ್ಮ ಕಡೆ ಜನ ಬಂದಿಲ್ಲ ನೀನೆ ಆ ಟಾಯ್ಲೆಟ್ ತೊಳೆದು ಬಿಡು ಅಂದರು. ನಂಗೆ ಆಳು ಬಂದ್ಹಂಗೆ ಆಯಿತು. ಆದರೂ ಭಯದಿಂದ ತೊಳೆದೆ ಆವತ್ತೇ ಕೊನೆ ಸ್ಕೂಲ್ ಎಂದಳು.

ಮತ್ತೆ ಮುಂದುವರಿದು ‘ಸಾ ಯಾಕ್ ಸಾ ಮಕ್ಕಳು ಅಂತ ತಿಳಿದೇ ಮೇಷ್ಟರುಗಳು ಆ ಕೆಲಸ ಮಾಡುಸುತ್ತಾರೆ ಸಾ’ ಎಂದು ಕೇಳಿದಳು. ಒಂದು ಘಳಿಗೆ ಇಬ್ಬರೂ ಮೌನವಾದೆವು. ಈಗ ಹೇಗಿದೆ ಜೀವನಯೆಂದೆ. ಅದ್ ಬಿಡಿ ಸಾ ಗಂಡ ಹೊಡೆದಂಗಲ್ಲ, ಹೆಂಡತಿ ಅತ್ತಂಗಲ್ಲ ಆ ಪರಿಸ್ಥಿತಿ ನಮ್ಮದು. ನೀವು ಒಂದು ಸಹಾಯ ಮಾಡ್‌ಬೇಕು ಅಂದಳು . ಏನದು? ಅಂದೆ ‘ಸಾ ನಮ್ಮ ಬೀದಿಯಲ್ಲಿ ಮಕ್ಕಳು ಯಾವಾಗಲೂ ಕೇರಿಯ ಒಳಗೆ ಕುಣಿತಾ ಇರುತ್ತವೆ. ವಾರಕ್ಕೆ ಎರಡು ದಿನ ಸ್ಕೂಲ್ಗೆ ಹೋದರೆ ಹೆಚ್ಚು. ಸುಮಾರು ೧೦ರಿಂದ ೧೫ ಮಕ್ಕಳು ಅವೆ . ಏನಾದರೂ ಮಾಡಿ ಅವು ಸ್ಕೂಲ್ ಹೋಗೋ ಅಂಗೆ ಮಾಡ್ ಬೇಕ್ ಅಲ್ಲ’ ಎನ್ನುತ್ತಾ ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದಳು.

ನಾನು ಪ್ರಯತ್ನ ಮಾಡುವೆಯೆಂದೆ. ಅವಳೇ ಮುಂದುವರಿದು ‘ಸಾ ನಿಮ್ಮ ಜೊತೆಗೆ ನಾ ಸಮನಾಗಿ ಕುಳಿತು ಮಾತಾನಾಡುದು ಬೇಜಾರು ಇಲ್ಲ ತಾನೆ’ ಎಂದು ಕೇಳಿದಳು. ಆಗ ನಂಗೆ ಈ ಸಮಾಜದ ಕೆಲವು ಮನಸ್ಸುಗಳು ತಳವರ್ಗದ ಜನರ ಮನಸ್ಸನ್ನು ಹೇಗೆ ರೂಪಿಸಿವೆ ಎಂದುಕೊಂಡೆ ಮುಂದುವರೆದು ಜೀವನ ಹೇಗಿದೆ ಎಂದು ಕೇಳಿದೆ.

‘ಅದಾ ಸಾ, ಬುದ್ಧ್ದಿ ಬರೋಕೆ ಮುಂಚೆ ಮದುವೆ ಆಯ್ತು ಕುಡುಕನೊಂದಿಗೆ, ಈಗ ವಿಧವೆ. ಎರಡು ಮಕ್ಕಳು, ಈಗ ಅವರ್ ಕತೆ ಅವರಿಗೆ ನನ್ನ ಕತೆ ನಂಗೆ. ಮಗ ನಮ್ಮ ಕೆಲಸನೇ ಮಾಡುತ್ತಾನೆ. ಮಗಳಿಗೆ ಮದುವೆ ಆಗಿದೆ’ ಎಂದು ನಗುತ್ತಾ ಹೇಳಿ, ಮತ್ತೆ ಹಿಂಗೆ ವಾರಕ್ಕೆ ಒಂದು ಸಾರಿ ಸಿಕ್ಕಿ ಸಾ ಖುಷಿಯಾಗಿ ಮಾತನಾಡುವ ಎನ್ನುತ್ತ ಲೋಟದಲ್ಲಿದ್ದ ಟೀ ಮುಗಿಸತೊಡಗಿದಳು.

ಆಕೆ ಮತ್ತೆ ಮುಂದುವರಿದು ಸಾ ಯಾಕ್ ಸಾ ಮಕ್ಕಳು ಅಂತ ತಿಳಿದೇ ಮೇಷ್ಟರುಗಳು ಆ ಕೆಲಸ ಮಾಡುಸುತ್ತಾರೆ ಸಾ ಎಂದು ಕೇಳಿದಳು

ಆಂದೋಲನ ಡೆಸ್ಕ್

Recent Posts

ಅಮೇರಿಕಾದಲ್ಲಿ ಕಾಣೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತದೇಹ ಪತ್ತೆ

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಯಾನ್…

5 hours ago

ವಿವಾಹಪೂರ್ವ ದೈಹಿಕ ಸಂಬಂಧದಲ್ಲಿ ಎಚ್ಚರಿಕೆ ಅಗತ್ಯ : ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ವಿವಾಹಪೂರ್ವ ದೈಹಿಕ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ. ಮದುವೆಯ ಸುಳ್ಳು…

6 hours ago

ಎಕ್ಸ್‌ ವೆಬ್‌ಸೈಟ್‌ ಸ್ಥಗಿತ : ಜಾಗತಿಕ ಬಳಕೆದಾರರ ಪರದಾಟ

ಮೈಸೂರು : ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (X, ಹಿಂದಿನ ಟ್ವಿಟರ್) ಇಂದು ಸಂಜೆ (ಫೆಬ್ರವರಿ 16)…

6 hours ago

ರಾಹುಲ್‌ ಗಾಂಧಿ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರ ಮೇಲೆ ಪರಿಣಾಮ ಬೀರುವ ಭಾರತ-ಅಮೆರಿಕ ವ್ಯಾಪಾರ…

7 hours ago

ಕಾಡಾನೆಗಳ ದಾಳಿ ; ಗುಡಿಸಲು, ಸೋಲಾರ್ ತಂತಿಬೇಲಿ ನಾಶ

ಮಲ್ಕುಂಡಿ : ಕಾಡಾನೆಗಳ ದಾಳಿಯಿಂದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ನಾಶವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ…

7 hours ago

ಮೈಸೂರು | ಅಪರಾಧ ನಿಯಂತ್ರಣ ಕುರಿತು ಎಡಿಜಿಪಿ ಸಭೆ

ಮೈಸೂರು : ನಗರದಲ್ಲಿ ಅಪರಾಧ ನಿಯಂತ್ರಣ ಮತ್ತು ಪತ್ತೆ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಮತ್ತು ತಾಂತ್ರಿಕ ಸೇವೆ…

8 hours ago