ಹಾಡು ಪಾಡು

ಪೆನ್ಸಿಲ್‌ ಮೋಡಿಗಾರ ಮೂರ್ತಿ ಮುಡಿಗುಂಡ

  • ಕಿರಣ್‌ ಗಿರ್ಗಿ

ಬಾಲ್ಯದಿಂದಲೂ ಅಕ್ಷರಗಳ ವಿನ್ಯಾಸಗಳಿಗೆ ಮನಸೋತು ಕೈಗೆ ಸಿಕ್ಕ ದಿನಪತ್ರಿಕೆ, ಪುಸ್ತಕಗಳ ಹಾಳೆಯಲ್ಲಿ ಕಂಡ ಲಿಪಿಗಳ ಶೈಲಿಯನ್ನು ಬರೆಯಲಾರಂಭಿಸಿದ ಹುಡುಗನೊಬ್ಬ ಇದೀಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ಕುಂಚ ಕಲಾವಿದನಾಗಿ ಗುರುತಿಸಿಕೊಂಡಿದ್ದಾನೆ. ಹೌದು, ಪೆನ್ಸಿಲ್ ಸ್ಕೆಚ್ ಮೂಲಕ ಮೋಡಿ ಮಾಡುವ ದೇಸಿ ವ್ಯಕ್ತಿತ್ವದ ನೈಜ ಪ್ರತಿಭೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಮುಡಿಗುಂಡದ ಮೂರ್ತಿರವರು. ಇವರ ತಂದೆ ಜವರಯ್ಯ ಚಿತ್ರ ಬಿಡಿಸುತ್ತಿರಲಿಲ್ಲ; ಆದರೆ, ಗಾರೆ ಕೆಲಸವನ್ನು ವೃತ್ತಿಯಾಗಿಸಿಕೊಂಡಿದ್ದರು. ಗೃಹ ನಿರ್ಮಾಣವೂ ಪ್ರಮುಖವಾದ ಕುಸುರಿ ಕಲೆಯೇ ತಾನೇ? ತಾಯಿ ನಂಜಮ್ಮ ಊರಿನ ಮದುವೆ, ಹಬ್ಬದ ಸಂಭ್ರಮಗಳಲ್ಲಿ ಸೋಬಾನೆ ಪದವನ್ನು ಈಗಲೂ ಹಾಡುತ್ತಾರೆ. ಪೋಷಕರ ಬಳುವಳಿ ಪಡೆದು ಅರಳಿದ ಗಾಯಕ, ಚಿತ್ರ ಕಲಾವಿದ ಮುಡಿಗುಂಡ ಮೂರ್ತಿಯವರು ಗೆರೆ ಮೂಡಿಸುವ ಲೋಕವನ್ನು ತಮ್ಮ ಮೂವರು ಮಕ್ಕಳಿಗೂ ಸ್ವಾಭಾವಿಕವಾಗಿ ಪರಿಚಯಿಸಿದ್ದಾರೆ.

ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ಜೆ. ಮೂರ್ತಿ ಅವರಿಂದ ಸಿ.ಬಿ.ಝಡ್. ವಿಷಯಗಳಲ್ಲಿನ ಚಿತ್ರಗಳು ಪ್ರಾಕ್ಟಿಕಲ್ ರೆಕಾರ್ಡ್ ಗಳಲ್ಲಿ ಅರಳುತ್ತ ಜೀವ ತಳೆಯುತ್ತಿದ್ದವು. ಬಿ. ಎಸ್ಸಿ. ಪದವಿ ಪಡೆದ ನಂತರವೂ ಕಲೆಯನ್ನು ಹೊರತುಪಡಿಸಿ ಜೀವನೋಪಾಯಕ್ಕೆ ಬೇರಾವ ಉದ್ಯೋಗವನ್ನೂ ಹುಡುಕಲು ಇವರ ಮನಸ್ಸು ಹಾತೊರೆಯಲಿಲ್ಲ. ಪ್ರತೀ ಕುಂಚ ಕಲಾವಿದರ ಬದುಕೂ ಬಹುಶಃ ಸೈನ್ ಬೋರ್ಡ್ ನಿಂದಲೇ ಪ್ರಾರಂಭವಾಗುವಂತೇ ಮುಡಿಗುಂಡ ಮೂರ್ತಿರವರ ಕಲಾಜಗತ್ತು ಸಹ ಗೋಡೆಗಳಲ್ಲಿ ಅಂಗಡಿಗಳ ಹೆಸರು ಬರೆಯುವುದರಿಂದಲೇ ಶುರುವಾಯಿತು ಎನ್ನಬಹುದು. ಕೊಳ್ಳೇಗಾಲದ ಜೈರಾಜ್ ಅವರನ್ನು ಆದಿಗುರುವಾಗಿ ಸ್ವೀಕರಿಸಿ, ನಾಮಫಲಕಗಳನ್ನು ರಚಿಸತೊಡಗಿದರು. ಚಾಮರಾಜನಗರವಲ್ಲದೇ ನಾಡಿನ ವಿವಿಧೆಡೆ ಸರ್ಕಾರದ ಯೋಜನೆಯಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪೇಂಟಿಂಗ್‌ಗಳನ್ನು ರಚಿಸುತ್ತಾ ಜನಮನ್ನಣೆಗಳಿಸಿದರು. ಜೆ. ಮೂರ್ತಿ ಮುಡಿಗುಂಡ ಅವರು ತಮ್ಮ ಕನಸುಗಳನ್ನು ಹುಟ್ಟೂರಿನಲ್ಲಿ ಸಾಕಾರಗೊಳಿಸಿಕೊಳ್ಳಲು ‘ಜೋಗಿ ರಂಗಜೋಳಿಗೆ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು 2008ರಲ್ಲಿ ಆರಂಭಿಸಿ ಈ ಸಂಸ್ಥೆಯ ಮೂಲಕ ಇದುವರೆಗೆ ನಿರಂತರವಾಗಿ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಾ ಚಿತ್ರಕಲೆ, ನಾಟಕ, ಸಂಗೀತ, ಜನಪದ ನೃತ್ಯ, ಹಳ್ಳಿ ಆಟಗಳನ್ನು ಕಲಿಸುತ್ತಾ ಬಂದಿದ್ದಾರೆ. ‘ಕುಂಚ ಕಾವ್ಯ ಗಾಯನ’ ಕಾರ್ಯಕ್ರಮಗಳನ್ನು ವಿಶ್ವವಿಖ್ಯಾತ ಮೈಸೂರು ದಸರಾ, ಚಾಮರಾಜನಗರ ಜಿಲ್ಲಾ ದಸರಾ ವೇದಿಕೆಗಳಲ್ಲಿ ಪ್ರತೀ ವರ್ಷವೂ ಪ್ರಸ್ತುತಪಡಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದಾರೆ; ಸಮರ್ಥವಾಗಿ ನಿರೂಪಿಸಿದ್ದಾರೆ. ಎದೆಯೊಳಗೆ ಅದಮ್ಯ ಚೇತನವನ್ನಿರಿಸಿಕೊಂಡು ಮೌನಿಯಾಗಿ ಚಿತ್ರಕಲೆ, ನಿರೂಪಣೆ, ಸಂಘಟನೆ, ಗಾಯನ, ಪರಿಸರ ಸಂರಕ್ಷಣೆ, ಕ್ರೀಡಾ ಚಟುವಟಿಕೆಗಳು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಜ್ಜೆಗಳನ್ನಿಡುತ್ತಿರುವ ಜೆ. ಮೂರ್ತಿ ಮುಡಿಗುಂಡ ಅವರು ‘ಜೋಗಿ ರಂಗಜೋಳಿಗೆ ಚಿತ್ರಕಲೆ ಮತ್ತು ಸಂಗೀತ ಶಾಲೆ’ ಯನ್ನು ಸದ್ಯದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ. ಬದುಕಿನ ಪರಮ ಗುರಿಯಾಗಿ ಕೊಳ್ಳೇಗಾಲದಲ್ಲಿ ‘ಜೋಗಿ ರಂಗಜೋಳಿಗೆ ಮಾನವ ಚಟುವಟಿಕೆ ಕೇಂದ್ರ’ ಎಂಬ ಸಾಂಸ್ಕೃತಿಕ ಮತ್ತು ಸಾಮರಸ್ಯ ಸಂಸ್ಥೆಯ ಸ್ಥಾಪನೆಯೂ ಇವರ ಬಹುದೊಡ್ಡ ಕನಸಾಗಿದೆ.

kirangirgi@gmail.com

lokesh

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

32 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

38 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

47 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago