madhukara malavalli article about writing
ನಾನು ಸಣ್ಣವನಿದ್ದಾಗ ನಮ್ಮ ಅಪ್ಪನೂ ಹಲವಾರು ಕತೆಗಳನ್ನು ಹೇಳುತ್ತಿದ್ದ. ಅವೆಲ್ಲವೂ ಒಂದೊಂದು ಬೇರೆ ಬೇರೆ ರೀತಿಯ ಕತೆಗಳು. ನನ್ನ ಅಪ್ಪನಿಗೆ ಪ್ರಶಸ್ತಿ ಬಿಡಿ, ನನ್ನಪ್ಪ ಕತೆ ಹೇಳ್ತಾನೆ ಅಂತಾನೂ ನಮ್ಮ ಬೀದಿಯ ಅಕ್ಕಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲ. ಅವನ ವಾರಗೆಯವರಿಗೆ ಗೊತ್ತಿರಬಹುದು. ಆದರೆ ನನ್ನಪ್ಪ ಮನಸಾದಾಗೆಲ್ಲ ಕತೆ ಹೇಳುತ್ತಲೇ ಇರುತ್ತಿದ್ದ. ಅದೇನೋ ನಾನೀಗ ಕತೆಯನ್ನು ಬರೆಯುತ್ತೇನೆ. ಕತೆಯ ಅಂದ ಚೆಂದದ ಬಗೆಗೆ ಅಷ್ಟೇನೂ ಗೊತ್ತಿಲ್ಲ.
ಅನಿಸಿದ್ದೋ, ನೋಡಿದ್ದೋ, ಅನುಭವಕ್ಕೆ ದಕ್ಕಿದ್ದನ್ನೋ ಕುರಿತು ಬರಿತೀನಿ. ಒಂದೆರಡು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಆದರೆ ಪ್ರಶಸ್ತಿ ಪಡೆದ ಕತೆ ಅಂತ ಹಣೆಪಟ್ಟಿ ಹೊತ್ತಿರುವ ಕತೆಯನ್ನು ಓದುತ್ತೇನೆ. ಖಂಡಿತವಾಗಿಯೂ ನನಗೆ ಅವು ಏನೂ ಅನ್ನಿಸದೆ ನಾನೂ ಹಿಂಗೆ ಬರಿತೀನಿ. ವಸ್ತು ವಿಷಯ ಬೇರೆ ಇರಬಹುದು ಅನ್ನಿಸುತ್ತದೆ. ಯಾವ ಮಾನದಂಡದ ಆಧಾರದಲ್ಲಿ ಪ್ರಶಸ್ತಿ ಘೋಷಿಸಿರಬಹುದು ಗೊತ್ತಿಲ್ಲ. ಪ್ರಶಸ್ತಿಯ ಹಿಂದಿರುವ ಕಾರಣಗಳೇನಿರಬಹುದೆಂಬ ಕುತೂಹಲವಷ್ಟೇ. ಅದು ನನ್ನ ಮಿತಿಯೂ ಇರಬಹುದೇನೋ ಅದು ನನಗೆ ತಿಳಿದಿಲ್ಲ. ನಾನು ನನ್ನ ಒಂದು ಕತೆಯನ್ನು ಪ್ರಕಟಿಸಬಹುದೆಂದು ಮಾಸಪತ್ರಿಕೆಯೊಂದಕ್ಕೆ ಕಳಿಸಿದ್ದೆ. ಒಂದೂವರೆ ತಿಂಗಳ ನಂತರ ನಾನು ‘ನನ್ನ ಕತೆ ಪ್ರಕಟವಾಗುತ್ತದೋ , ಇಲ್ಲವೋ ಈ ಬಗ್ಗೆ ನೀವು ಏನೂ ಹೇಳಿಲ್ಲ’ ಎಂದು ಕೇಳಿದ ಮೂರು ದಿನಗಳ ನಂತರ ‘ನಿಮ್ಮ ಕತೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.
ಕತೆ ಚೆನ್ನಾಗಿಲ್ಲದಿರಬಹುದು ಬಿಡಿ. ಆದರೆ ಪ್ರಶಸ್ತಿ ಪಡೆದ ಕತೆಗಳು ಎಂದು ಲೇಬಲ್ ಹೊತ್ತ ಕತೆಗಳು ನನಗೆ ಅರ್ಥವೂ ಆಗದೆ ಏನನ್ನೂ ‘ಉಕ್ಕಿಸಿಲ್ಲ’. ಇದಕ್ಕೆ ಬಹುಮಾನ ಕೊಡುವು ದಕ್ಕಿಂತ ಮೆಚ್ಚುಗೆ ಗಳಿಸಿದ ಕತೆಯೇ ಚೆನ್ನಾಗಿದೆ ಎಂದೆನಿಸಿದ್ದೂ ಇದೆ. ಕೆಲವು ಸಲ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕತೆಯೇ ನನ್ನನ್ನು ಆವರಿಸಿ, ಅಲುಗಾಡಿಸಿ, ಇದಕ್ಕೆ ಬಹುಮಾನ ಬರಲೇಬೇಕಿತ್ತು ಅನ್ನಿಸಿದ್ದಿದೆ. ಇವೆಲ್ಲವೂ ನನ್ನ ಲೆಕ್ಕಾಚಾರದ ಮಾತುಗಳು. ಆದರೆ ಪ್ರಶಸ್ತಿ ಪಡೆದ ಕತೆ, ಕವಿತೆ, ಲೇಖನ ಅಂತ ಹಣೆ ಪಟ್ಟಿ ಇರುವ ಕತೆಯೊಂದನ್ನು ಓದಿದ ಗ್ರಾಮೀಣ ಪ್ರದೇಶದ ಅಥವಾ ನಗರದ ಪ್ರದೇಶದ ಬರಹಗಾರರು ಪ್ರಶಸ್ತಿ ಬರಲಿಲ್ಲ ಎಂದು ತಮಗೆ ಬರೆಯು ವುದೇ ಗೊತ್ತಿಲ್ಲವೇನೋ ಎಂದು, ತಿಳಿದು ಬರೆಯದೇ ಉಳಿದುಬಿಟ್ಟರೇ ಏನು ಗತಿ? ಹಾಗೆಂದು ಪ್ರಶಸ್ತಿ ಪಡೆದವರ, ನೀಡುವವರ ವಿರೋಽ ನಾನಲ್ಲ. ಅದು ಹೇಗೆ ಒಬ್ಬನೇ ಕತೆಗಾರನ ಕತೆ, ಕವಿತೆಗೆ ಪದೇ ಪದೇ ಪ್ರಶಸ್ತಿಗಳು ಸಿಗುತ್ತವೆ ಎಂಬ ಸಂದೇಹ ಇಂದಿನ ದಿನಮಾನದಲ್ಲಿ ಎಲ್ಲರನ್ನೂ ಕಾಡುತ್ತಿದೆ. ಯಾವ ಮಾನದಂಡದ ಮೇಲೆ ಪ್ರಶಸ್ತಿ ನೀಡಲಾಗುತ್ತದೆ ಎಂದು ನನಗೆ ವಿವರಣೆ ಬೇಕಿದೆ. ಅದರ ಹೊರತು, ನನಗಂತೂ ಪ್ರಶಸ್ತಿ ಬೇಕಾಗಿಲ್ಲ. ಆ ಆಸೆಯೂ ಇಲ್ಲ. ನೂರಾರು ಕತೆ ಹೇಳಿದ ನನ್ನ ತಾತ ಪಳ್ಳಿನಂಜಯ್ಯ, ನನ್ನ ಅಪ್ಪ ಮಹದೇವಯ್ಯ ಇವರಿಗೇ ಪ್ರಶಸ್ತಿ ಸಿಕ್ಕಿಲ್ಲದ ಮೇಲೆ ನಾಲ್ಕು ಕತೆ ಬರೆದ ನಾನು ಎಷ್ಟರವನು?
– ಮಧುಕರ ಮಳವಳ್ಳಿ
madhukaramalavalli@gmail.com
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…
ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…
ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…
ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್ಗಳು ಸಂಪೂರ್ಣವಾಗಿ ಸುಟ್ಟು…
ಬೆಂಗಳೂರು : ಆಸ್ಪ್ರೇಲಿಯಾದ ಬೀಚ್ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…