ಹಾಡು ಪಾಡು

ಬರೆದವವನಿಗೆ ಬಹುಮಾನದ ಹಂಗು ಬೇಕೆ?

ನಾನು ಸಣ್ಣವನಿದ್ದಾಗ ನಮ್ಮ ಅಪ್ಪನೂ ಹಲವಾರು ಕತೆಗಳನ್ನು ಹೇಳುತ್ತಿದ್ದ. ಅವೆಲ್ಲವೂ ಒಂದೊಂದು ಬೇರೆ ಬೇರೆ ರೀತಿಯ ಕತೆಗಳು. ನನ್ನ ಅಪ್ಪನಿಗೆ ಪ್ರಶಸ್ತಿ ಬಿಡಿ, ನನ್ನಪ್ಪ ಕತೆ ಹೇಳ್ತಾನೆ ಅಂತಾನೂ ನಮ್ಮ ಬೀದಿಯ ಅಕ್ಕಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲ. ಅವನ ವಾರಗೆಯವರಿಗೆ ಗೊತ್ತಿರಬಹುದು. ಆದರೆ ನನ್ನಪ್ಪ ಮನಸಾದಾಗೆಲ್ಲ ಕತೆ ಹೇಳುತ್ತಲೇ ಇರುತ್ತಿದ್ದ. ಅದೇನೋ ನಾನೀಗ ಕತೆಯನ್ನು ಬರೆಯುತ್ತೇನೆ. ಕತೆಯ ಅಂದ ಚೆಂದದ ಬಗೆಗೆ ಅಷ್ಟೇನೂ ಗೊತ್ತಿಲ್ಲ.

ಅನಿಸಿದ್ದೋ, ನೋಡಿದ್ದೋ, ಅನುಭವಕ್ಕೆ ದಕ್ಕಿದ್ದನ್ನೋ ಕುರಿತು ಬರಿತೀನಿ. ಒಂದೆರಡು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಆದರೆ ಪ್ರಶಸ್ತಿ ಪಡೆದ ಕತೆ ಅಂತ ಹಣೆಪಟ್ಟಿ ಹೊತ್ತಿರುವ ಕತೆಯನ್ನು ಓದುತ್ತೇನೆ. ಖಂಡಿತವಾಗಿಯೂ ನನಗೆ ಅವು ಏನೂ ಅನ್ನಿಸದೆ ನಾನೂ ಹಿಂಗೆ ಬರಿತೀನಿ. ವಸ್ತು ವಿಷಯ ಬೇರೆ ಇರಬಹುದು ಅನ್ನಿಸುತ್ತದೆ. ಯಾವ ಮಾನದಂಡದ ಆಧಾರದಲ್ಲಿ ಪ್ರಶಸ್ತಿ ಘೋಷಿಸಿರಬಹುದು ಗೊತ್ತಿಲ್ಲ. ಪ್ರಶಸ್ತಿಯ ಹಿಂದಿರುವ ಕಾರಣಗಳೇನಿರಬಹುದೆಂಬ ಕುತೂಹಲವಷ್ಟೇ. ಅದು ನನ್ನ ಮಿತಿಯೂ ಇರಬಹುದೇನೋ ಅದು ನನಗೆ ತಿಳಿದಿಲ್ಲ. ನಾನು ನನ್ನ ಒಂದು ಕತೆಯನ್ನು ಪ್ರಕಟಿಸಬಹುದೆಂದು ಮಾಸಪತ್ರಿಕೆಯೊಂದಕ್ಕೆ ಕಳಿಸಿದ್ದೆ. ಒಂದೂವರೆ ತಿಂಗಳ ನಂತರ ನಾನು ‘ನನ್ನ ಕತೆ ಪ್ರಕಟವಾಗುತ್ತದೋ , ಇಲ್ಲವೋ ಈ ಬಗ್ಗೆ ನೀವು ಏನೂ ಹೇಳಿಲ್ಲ’ ಎಂದು ಕೇಳಿದ ಮೂರು ದಿನಗಳ ನಂತರ ‘ನಿಮ್ಮ ಕತೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಕತೆ ಚೆನ್ನಾಗಿಲ್ಲದಿರಬಹುದು ಬಿಡಿ. ಆದರೆ ಪ್ರಶಸ್ತಿ ಪಡೆದ ಕತೆಗಳು ಎಂದು ಲೇಬಲ್ ಹೊತ್ತ ಕತೆಗಳು ನನಗೆ ಅರ್ಥವೂ ಆಗದೆ ಏನನ್ನೂ ‘ಉಕ್ಕಿಸಿಲ್ಲ’. ಇದಕ್ಕೆ ಬಹುಮಾನ ಕೊಡುವು ದಕ್ಕಿಂತ ಮೆಚ್ಚುಗೆ ಗಳಿಸಿದ ಕತೆಯೇ ಚೆನ್ನಾಗಿದೆ ಎಂದೆನಿಸಿದ್ದೂ ಇದೆ. ಕೆಲವು ಸಲ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕತೆಯೇ ನನ್ನನ್ನು ಆವರಿಸಿ, ಅಲುಗಾಡಿಸಿ, ಇದಕ್ಕೆ ಬಹುಮಾನ ಬರಲೇಬೇಕಿತ್ತು ಅನ್ನಿಸಿದ್ದಿದೆ. ಇವೆಲ್ಲವೂ ನನ್ನ ಲೆಕ್ಕಾಚಾರದ ಮಾತುಗಳು. ಆದರೆ ಪ್ರಶಸ್ತಿ ಪಡೆದ ಕತೆ, ಕವಿತೆ, ಲೇಖನ ಅಂತ ಹಣೆ ಪಟ್ಟಿ ಇರುವ ಕತೆಯೊಂದನ್ನು ಓದಿದ ಗ್ರಾಮೀಣ ಪ್ರದೇಶದ ಅಥವಾ ನಗರದ ಪ್ರದೇಶದ ಬರಹಗಾರರು ಪ್ರಶಸ್ತಿ ಬರಲಿಲ್ಲ ಎಂದು ತಮಗೆ ಬರೆಯು ವುದೇ ಗೊತ್ತಿಲ್ಲವೇನೋ ಎಂದು, ತಿಳಿದು ಬರೆಯದೇ ಉಳಿದುಬಿಟ್ಟರೇ ಏನು ಗತಿ? ಹಾಗೆಂದು ಪ್ರಶಸ್ತಿ ಪಡೆದವರ, ನೀಡುವವರ ವಿರೋಽ ನಾನಲ್ಲ. ಅದು ಹೇಗೆ ಒಬ್ಬನೇ ಕತೆಗಾರನ ಕತೆ, ಕವಿತೆಗೆ ಪದೇ ಪದೇ ಪ್ರಶಸ್ತಿಗಳು ಸಿಗುತ್ತವೆ ಎಂಬ ಸಂದೇಹ ಇಂದಿನ ದಿನಮಾನದಲ್ಲಿ ಎಲ್ಲರನ್ನೂ ಕಾಡುತ್ತಿದೆ. ಯಾವ ಮಾನದಂಡದ ಮೇಲೆ ಪ್ರಶಸ್ತಿ ನೀಡಲಾಗುತ್ತದೆ ಎಂದು ನನಗೆ ವಿವರಣೆ ಬೇಕಿದೆ. ಅದರ ಹೊರತು, ನನಗಂತೂ ಪ್ರಶಸ್ತಿ ಬೇಕಾಗಿಲ್ಲ. ಆ ಆಸೆಯೂ ಇಲ್ಲ. ನೂರಾರು ಕತೆ ಹೇಳಿದ ನನ್ನ ತಾತ ಪಳ್ಳಿನಂಜಯ್ಯ, ನನ್ನ ಅಪ್ಪ ಮಹದೇವಯ್ಯ ಇವರಿಗೇ ಪ್ರಶಸ್ತಿ ಸಿಕ್ಕಿಲ್ಲದ ಮೇಲೆ ನಾಲ್ಕು ಕತೆ ಬರೆದ ನಾನು ಎಷ್ಟರವನು?

– ಮಧುಕರ ಮಳವಳ್ಳಿ

madhukaramalavalli@gmail.com

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಯಾವುದೇ ಡ್ರಗ್ ಪತ್ತೆಯಾಗಿಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಮೈಸೂರು: ಮೈಸೂರು ಪೊಲೀಸರು ನನಗೆ ಸರಿಯಾದ ಮಾಹಿತಿ ಕೊಟ್ಟಿದ್ದು, ಯಾವುದೇ ಡ್ರಗ್ಸ್‌ ಪತ್ತೆಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ…

26 mins ago

ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಹೈಕಮಾಂಡ್ ಎಲ್ಲೂ ಮಾತನಾಡಿಲ್ಲ: ಗೃಹ ಸಚಿವ ಪರಮೇಶ್ವರ್‌

ಮೈಸೂರು: ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುವ ಬಗ್ಗೆ ಹೈಕಮಾಂಡ್‌ ಎಲ್ಲೂ ಕೂಡ ಮಾತನಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌…

37 mins ago

ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿ: ಬಸ್‌ ಹರಿದು ಯುವತಿ ಸಾವು

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಬೆಂಗಳೂರಿನ ಟಿನ್‌ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದ್ದು, ಮೃತರನ್ನು…

1 hour ago

ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿದ ಚಳಿಯ ಅಬ್ಬರ: ತಾಪಮಾನ ಎಷ್ಟಿದೆ ಗೊತ್ತಾ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮತ್ತೆ ಚಳಿಯ ಅಬ್ಬರ ಜೋರಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೆಲ…

2 hours ago

ಮೆಟ್ರೋ ದರ ಹೆಚ್ಚಳ ವಿಚಾರ: ಚೇರ್ಮನ್‌ ಜೊತೆ ಮಾತುಕತೆ ನಡೆಸುತ್ತೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

ಮಂಗಳೂರು: ಮೆಟ್ರೋ ದರ ಶೇಕಡಾ.5ರಷ್ಟು ಹೆಚ್ಚಳ ಸಂಬಂಧ ಇಂದು ಅಥವಾ ನಾಳೆ ಮೆಟ್ರೋ ಚೇರ್ಮನ್‌ ಜೊತೆ ಮಾತನಾಡುವೆ ಎಂದು ಡಿಸಿಎಂ…

2 hours ago

ಮೈಸೂರು: 140 ಕೋಟಿ ಮೌಲ್ಯದ ಜಾಗ ಅತಿಕ್ರಮಣ ತೆರವು ಕಾರ್ಯಾಚರಣೆ

ಮೈಸೂರು: ವಿಜಯನಗರ 3ನೇ ಹಂತದಲ್ಲಿನ ಸುಮಾರು 7 ಎಕರೆ ಜಾಗದ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ಮುಂಜಾನೆ ನಡೆಯಿತು.…

2 hours ago