ಹಾಡು ಪಾಡು

ಸಣ್ಣಪುಟ್ಟ ತಾಣ: ಹತ್ವಾಳು ಕಟ್ಟೆ ಕಂಡಿದ್ದೀರಾ?

ಮೈಸೂರಿನಿಂದ ನಂಜನಗೂಡಿನ ಹುಲ್ಲಹಳ್ಳಿ ಕಡೆ ನಲವತ್ತು ನಿಮಿಷ ದೂರ ಹೋದರೆ ಹುಲ್ಲಹಳ್ಳಿಗೂ ಮುನ್ನ ರಾಂಪುರ ಎಂಬ ಸಣ್ಣ ಊರು ಸಿಗುತ್ತದೆ. ಆ ಊರಿನಲ್ಲಿ ಕಪಿಲಾ ನದಿ ನೀರಿಗೆ ಕಟ್ಟಲಾಗಿರುವ ಐತಿಹಾಸಿಕ ಹತ್ವಾಳು ಕಟ್ಟೆಯನ್ನು ನಾವು ನೋಡಬಹುದು.

ಇದನ್ನು ಹುಲ್ಲಹಳ್ಳಿ ಡ್ಯಾಂ ಎಂದೂ ಕರೆಯುತ್ತಾರೆ. ಕಬಿನಿಯ ಬೀಚನಹಳ್ಳಿ ಡ್ಯಾಂನಿಂದ ಇಲ್ಲಿಗೆ ನೀರು ಬರುತ್ತದೆ. ಈ ಡ್ಯಾಂಗೆ ಎರಡು ಗೇಟ್‌ಗಳಿದ್ದು, ಇದನ್ನು ನೋಡಿಕೊಳ್ಳಲೆಂದೇ ಇಬ್ಬರು ಕಾವಲುಗಾರರಿದ್ದಾರೆ. ಹತ್ವಾಳು ಕಟ್ಟೆಯನ್ನು ೧೮೮೯ರಲ್ಲಿ ನಿರ್ಮಿಸಲಾಯಿತು ಎಂಬ ಫಲಕವನ್ನು ನಾವು ಇಲ್ಲಿ ಕಾಣಬಹುದು. ಅಂದರೆ ಇದು ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣವಾದ ಅಣೆಕಟ್ಟೆ. ಆಗಿನಿಂದ ಈಗಿನವರೆಗೂ ಈ ಅಣೆಕಟ್ಟೆಯನ್ನು ಹಾಗೇ ಕಾಪಾಡಿಕೊಂಡು ಬರಲಾಗುತ್ತಿದೆ.

ಮೈಸೂರಿನಲ್ಲಿ ಇರುವವರು ಅಥವಾ ಮೈಸೂರಿಗೆ ಪ್ರವಾಸಕ್ಕೆಂದು ಬಂದವರು ನಗರದಿಂದ ಕೇವಲ ಮುಕ್ಕಾಲು ಗಂಟೆ ಪ್ರಯಾಣ ಮಾಡಿದರೆ ಈ ಸ್ಥಳ ತಲುಪಬಹುದು. ಹುಲ್ಲಹಳ್ಳಿ ಡ್ಯಾಂ ಐತಿಹಾಸಿಕ ಪ್ರಾಮುಖ್ಯತೆ ಯನ್ನು ಪಡೆದುಕೊಂಡಿದೆ. ಬರೋಬ್ಬರಿ ೧೩೫ ವರ್ಷಗಳ ಹಿಂದೆಯೇ ನಮ್ಮನ್ನಾಳುವವರಿಗೆ ಇಂತಹ ಯೋಜನೆ ರೂಪಿಸುವ ಯೋಚನೆ ಬಂದಿದೆ ಎಂದರೆ ಅಚ್ಚರಿಯಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಜೀವನಶೈಲಿಯೆಲ್ಲವೂ ಬಹಳವೇ ಮುಂದುವರಿದಿರುವ ಈ ಕಾಲದಲ್ಲಿ ಏನನ್ನಾದರೂ ಸಾಽಸಬಹುದು. ಆದರೆ ಆಗ ಲಭ್ಯವಿದ್ದ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಕರಿಗೆ ಅನುಕೂಲವಾಗುವಂತೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿರುವುದು ಶ್ಲಾಘನೀಯ ಸಂಗತಿ.

ಕಳೆದ ಒಂದು ಶತಮಾನ ದಿಂದಲೂ ಈ ಕಟ್ಟೆ ಇಲ್ಲಿನ ಕೃಷಿಕರಿಗೆ ಜೀವನಾಡಿ ಯಾಗಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಹತ್ವಾಳು ಕಟ್ಟೆಯನ್ನು ನೋಡುವುದೇ ಒಂದು ಚೆಂದ. ಬೇಸಿಗೆ ಕಾಲದಲ್ಲಿ ನೀರು ಕಡಿಮೆ ಯಾಗಿ ಕೊಂಚ ಖಾಲಿಯಾಗಿ ಕಾಣಿಸಿದರೂ ಕಟ್ಟೆಯ ಅಂದಕ್ಕೇನೂ ಕೊರತೆಯಿಲ್ಲ. ಸುತ್ತಲೂ ಹಸಿರು, ಹಕ್ಕಿಗಳ ಚಿಲಿಪಿಲಿ ಸದ್ದು, ತಂಪಾದ ಗಾಳಿ, ನೀರವ ವಾತಾವರಣ. ಒಂದು ಸುಂದರ ದಿನವನ್ನು ಪ್ರಶಾಂತ ವಾಗಿ ಕಳೆಯಲು ಇದಕ್ಕಿಂತ ಮತ್ತೇನು ಬೇಕು ಹೇಳಿ?

ಮಳೆಗಾಲದಲ್ಲಿ ನೀರು ಹೆಚ್ಚಾಗುವ ಕಾರಣ ಇಲ್ಲಿ ಈಜುವುದು ಯೋಗ್ಯವಲ್ಲ. ಬೇಸಿಗೆ ಕಾಲದಲ್ಲಿ ಈಜಲು ಅಥವಾ ನದಿ ಬದಿಯ ಮರದ ಕೆಳಗೆ ಕುಳಿತು ಪ್ರಶಾಂತವಾಗಿ ಸಮಯ ಕಳೆಯಲು ಇದು ಬಹಳ ಸೂಕ್ತ ಜಾಗ. ಅದರಲ್ಲೂ ಈ ಕಟ್ಟೆ ಪಶ್ಚಿಮ ದಿಕ್ಕಿಗೆ ಇರುವ ಕಾರಣ ಇಲ್ಲಿ ಸೂರ್ಯಾಸ್ತ ಮನಮೋಹಕವಾಗಿ ಕಾಣುತ್ತದೆ. ಮನಸ್ಸಿನಲ್ಲಿರುವ ಒತ್ತಡ, ಬೇಸರ, ದಿನನಿತ್ಯದ ಜಂಜಾಟಗಳೆಲ್ಲವೂ ದೂರವಾಗಿ ನಿರಾಳ ಭಾವ ಮೂಡುತ್ತದೆ

 

andolana

Recent Posts

ಹೃದಯಾಘಾತದಿಂದ ಹಿರಿಯ ಪತ್ರಕರ್ತ ದೊಡ್ಡ ಬೊಮಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಹಿರಿಯ ಪತ್ರಕರ್ತ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮಯ್ಯ ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ…

43 mins ago

ನಾಲ್ವರ ಹತ್ಯೆಗೈದ ಅಪರಾಧಿಗೆ ಗಲ್ಲು ಶಿಕ್ಷೆ: ತನಿಖೆಯಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿಗೆ ಬೆಳ್ಳಿ ಪದಕದ ಗೌರವ

ಮಡಿಕೇರಿ: ಮಾರ್ಚ್‌ನಲ್ಲಿ ಪೊನ್ನಂಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲಲಿ ನಡೆದಿದ್ದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ…

48 mins ago

ಮಾಗಿ ಉತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ ಹಂತದ ಸಿದ್ಧತೆ

ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್.21ರಿಂದ 31ರವರೆಗೆ ಜರುಗಲಿರುವ ಪ್ರತಿಷ್ಠಿತ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ…

54 mins ago

ಖ್ಯಾತ ನಟ ಹಾಗೂ ನಿರ್ದೇಶಕ ಶ್ರೀನಿವಾಸ್‌ ನಿಧನ

ಕೊಚ್ಚಿ: ಖ್ಯಾತ ಮಲಯಾಳಂ ನಟ ಹಾಗೂ ನಿರ್ದೇಶಕ ಶ್ರೀನಿವಾಸ್‌ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಿವಿಧ…

57 mins ago

ಚಾಮರಾಜನಗರ| ಒಟ್ಟಿಗೆ ಕಾಣಿಸಿಕೊಂಡ ಐದು ಹುಲಿಗಳು: ಭಯಭೀತರಾದ ಗ್ರಾಮಸ್ಥರು

ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…

2 hours ago

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…

3 hours ago