ಹಾಡು ಪಾಡು

ಸರೋದ್‌ ಮಾಂತ್ರಿಕನ ಪುಣ್ಯಸ್ಮರಣೆ

ರವೀಂದ್ರ ಗುರುರಾಜ ಕಾಟೋಟಿ

ನಾನು ಪಂ. ರಾಜೀವ್ ತಾರಾನಾಥ್ ಅವರನ್ನು ಮೊದಲು ನೋಡಿದ್ದು ಬೆಳಗಾವಿಯಲ್ಲಿ. ೧೯೮೦ರ ದಶಕದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಮ್ಮೇಳನದಲ್ಲಿ ಅವರ ಸರೋದ್ ವಾದನ ಆಯೋಜನೆ ಆಗಿತ್ತು. ಆಗಿನ ನನ್ನ ಸಂಗೀತದ ತಿಳಿವಳಿಕೆ ಗ್ರಹಿಕೆಗಳು ಅಷ್ಟಾಗಿ ಇರದೇ ಇದ್ದರೂ ಒಂದು ವಿಶಿಷ್ಟ ಛಾಪು ಮನದಲ್ಲಿ ಮೂಡಿತು. ಆನಂತರ ಕೆಲವು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಅವರ ವಾದನ ಕೇಳಿದ್ದು ಬಿಟ್ಟರೆ, ‘ಆಗಂತುಕ’ ಸಿನೆಮಾದಲ್ಲಿ ಅವರ ಸಂಗೀತ ಸಂಯೋಜನೆ – ಇವಿಷ್ಟು ನನಗೆ ಲಭಿಸಿದ್ದು.

೨೦೦೦ ಇಸವಿಯಲ್ಲಿ ನಾನು ಬೆಂಗಳೂರಿಗೆ ಬಂದಾದ ಮೇಲೆ ನನ್ನ ಮಿತ್ರ ಡಾ. ಉದಯರಾಜ್ ಕರ್ಪೂರ ಅವರ ಜೊತೆ ಪಂ. ತಾರಾನಾಥರ ಮನೆಗೆ ಹೋಗುವ ಅವಕಾಶ ಲಭಿಸಿತು. ಮೊದಲ ಭೇಟಿಯಲ್ಲೇ ಅವರ ವ್ಯಕ್ತಿತ್ವ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿತು. ತುಂಬಾ ಪ್ರೀತಿ, ಆದರಗಳಿಂದ ಮಾತನಾಡಿ ನನ್ನ ಸಂಗೀತಾಭ್ಯಾಸ, ತಯಾರಿಯ ಪೂರ್ವಾಪರಗಳನ್ನು ವಿಚಾರಿಸಿದರು. ಅನೇಕ ಬಾರಿ ಅವರ ಖಾಸಗಿ ರಿಯಾಜ್‌ಗೆ ಸಾಕ್ಷಿಯಾಗಲು ಅವಕಶ ಸಿಕ್ಕಿತು. ಪ್ರತೀ ಭೇಟಿಯಲ್ಲೂ ಮಾತು, ಸಂಗೀತ, ರಿಯಾಜ್, ಊಟ- ತಿನಿಸು, ಮೌನ, ಹರಟೆ, ನಗು, ವಿಷಾದ, ಹಳೆಯ ನೆನಪುಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದರು.

ವಿಶೇಷವಾಗಿ ತಮ್ಮ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರ ಕುರಿತಾಗಿ ಅಸಂಖ್ಯಾ ಸಂಗತಿಗಳನ್ನು, ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮ ಗುರುಭಕ್ತಿ, ವಾದ್ಯ- ವಾದನದೊಂದಿಗಿನ ತಾದಾತ್ಮ್ಯ. ನಿತ್ಯ ಶೋಧನೆ – ಅನ್ವೇಷಣೆಯ ತವಕ, ಸಂಗೀತದ ಕುರಿತಾದ ಬದ್ಧತೆ – ಸೌಂದರ್ಯ ದೃಷ್ಟಿಗಳಿಂದ ಅವರ ವ್ಯಕ್ತಿತ್ವ ನಿರುಪಮವಾಗಿ ಕಂಡಿತು.

ಸಂಗೀತವನ್ನು ಗ್ರಹಿಸುವುದು ಮತ್ತು ಅದನ್ನು ನೋಡುವುದು, ಅಷ್ಟೇ ಅಲ್ಲ; ಜೀವನಾನುಭವಗಳನ್ನು ಸಂಗೀತಕ್ಕೆ ಸಮನ್ವಯಿಸುವುದು ಮುಂತಾದವುಗಳಲ್ಲಿ ಅವರ ವಿಚಾರಗಳು ವಿಶಿಷ್ಟವೆನಿಸಿತು. ವಾದನದಲ್ಲಿಯಂತೂ ನಾದ, ಸ್ವರ ಪುಂಜ, ರಾಗವಿಸ್ತಾರ, ಲಯಕಾರಿ ತಂತ್ರಗಾರಿಕೆ, ಅಭಿವ್ಯಕ್ತಿ – ಪ್ರತಿಯೊಂದರಲ್ಲೂ ತಮ್ಮ ಗುರುಗಳ ಹೆಜ್ಜೆ ಗುರುತುಗಳನ್ನು ತೋರ್ಪಡಿಸುತ್ತಾ, ತಮ್ಮ ಸ್ವಂತಿಕೆಯನ್ನೂ ಮೆರೆಯುತ್ತಿದ್ದರು. ಅನೇಕ ಸಾರಿ ಸರೋದವೇ ಮೂರ್ತಿವೆತ್ತಂತೆ ಕಾಣುತ್ತಿದ್ದರು. ಅವರ ನಿಧನದ ಸುದ್ದಿ ಕೇಳಿದ ಮನಸು ಕೆಳಕಂಡ ಸಾಲುಗಳನ್ನು ಹೇಳಿಕೊಂಡಿತು: ರೋದಿಸುವ ಸರೋದದ ಸ್ವಗತ- ಇನ್ನೆಲ್ಲಿ ಹುಡುಕಲಿ ಮೀಟುವ ಆಪ್ಯಾಯತೆ, ತಂತಿಯ ತೀಡುವ ನಿಖರತೆ, ಭೋರ್ಗರೆವ ನಾದವೊಮ್ಮೆ, ಮಂಜುಳ ನಿನಾದವೊಮ್ಮೆ , ಶಬ್ದ-ನಿಃಶಬ್ದಗಳ ಆಟದಲಿ ಮೂಡುವ ನಾದ ಸಾಕಾರ, ಭಾವ ನಿರಾಕಾರ

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

2 hours ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

3 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

3 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

5 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

5 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

9 hours ago