rajeev tharanath
ರವೀಂದ್ರ ಗುರುರಾಜ ಕಾಟೋಟಿ
ನಾನು ಪಂ. ರಾಜೀವ್ ತಾರಾನಾಥ್ ಅವರನ್ನು ಮೊದಲು ನೋಡಿದ್ದು ಬೆಳಗಾವಿಯಲ್ಲಿ. ೧೯೮೦ರ ದಶಕದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಮ್ಮೇಳನದಲ್ಲಿ ಅವರ ಸರೋದ್ ವಾದನ ಆಯೋಜನೆ ಆಗಿತ್ತು. ಆಗಿನ ನನ್ನ ಸಂಗೀತದ ತಿಳಿವಳಿಕೆ ಗ್ರಹಿಕೆಗಳು ಅಷ್ಟಾಗಿ ಇರದೇ ಇದ್ದರೂ ಒಂದು ವಿಶಿಷ್ಟ ಛಾಪು ಮನದಲ್ಲಿ ಮೂಡಿತು. ಆನಂತರ ಕೆಲವು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಅವರ ವಾದನ ಕೇಳಿದ್ದು ಬಿಟ್ಟರೆ, ‘ಆಗಂತುಕ’ ಸಿನೆಮಾದಲ್ಲಿ ಅವರ ಸಂಗೀತ ಸಂಯೋಜನೆ – ಇವಿಷ್ಟು ನನಗೆ ಲಭಿಸಿದ್ದು.
೨೦೦೦ ಇಸವಿಯಲ್ಲಿ ನಾನು ಬೆಂಗಳೂರಿಗೆ ಬಂದಾದ ಮೇಲೆ ನನ್ನ ಮಿತ್ರ ಡಾ. ಉದಯರಾಜ್ ಕರ್ಪೂರ ಅವರ ಜೊತೆ ಪಂ. ತಾರಾನಾಥರ ಮನೆಗೆ ಹೋಗುವ ಅವಕಾಶ ಲಭಿಸಿತು. ಮೊದಲ ಭೇಟಿಯಲ್ಲೇ ಅವರ ವ್ಯಕ್ತಿತ್ವ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿತು. ತುಂಬಾ ಪ್ರೀತಿ, ಆದರಗಳಿಂದ ಮಾತನಾಡಿ ನನ್ನ ಸಂಗೀತಾಭ್ಯಾಸ, ತಯಾರಿಯ ಪೂರ್ವಾಪರಗಳನ್ನು ವಿಚಾರಿಸಿದರು. ಅನೇಕ ಬಾರಿ ಅವರ ಖಾಸಗಿ ರಿಯಾಜ್ಗೆ ಸಾಕ್ಷಿಯಾಗಲು ಅವಕಶ ಸಿಕ್ಕಿತು. ಪ್ರತೀ ಭೇಟಿಯಲ್ಲೂ ಮಾತು, ಸಂಗೀತ, ರಿಯಾಜ್, ಊಟ- ತಿನಿಸು, ಮೌನ, ಹರಟೆ, ನಗು, ವಿಷಾದ, ಹಳೆಯ ನೆನಪುಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದರು.
ವಿಶೇಷವಾಗಿ ತಮ್ಮ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರ ಕುರಿತಾಗಿ ಅಸಂಖ್ಯಾ ಸಂಗತಿಗಳನ್ನು, ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮ ಗುರುಭಕ್ತಿ, ವಾದ್ಯ- ವಾದನದೊಂದಿಗಿನ ತಾದಾತ್ಮ್ಯ. ನಿತ್ಯ ಶೋಧನೆ – ಅನ್ವೇಷಣೆಯ ತವಕ, ಸಂಗೀತದ ಕುರಿತಾದ ಬದ್ಧತೆ – ಸೌಂದರ್ಯ ದೃಷ್ಟಿಗಳಿಂದ ಅವರ ವ್ಯಕ್ತಿತ್ವ ನಿರುಪಮವಾಗಿ ಕಂಡಿತು.
ಸಂಗೀತವನ್ನು ಗ್ರಹಿಸುವುದು ಮತ್ತು ಅದನ್ನು ನೋಡುವುದು, ಅಷ್ಟೇ ಅಲ್ಲ; ಜೀವನಾನುಭವಗಳನ್ನು ಸಂಗೀತಕ್ಕೆ ಸಮನ್ವಯಿಸುವುದು ಮುಂತಾದವುಗಳಲ್ಲಿ ಅವರ ವಿಚಾರಗಳು ವಿಶಿಷ್ಟವೆನಿಸಿತು. ವಾದನದಲ್ಲಿಯಂತೂ ನಾದ, ಸ್ವರ ಪುಂಜ, ರಾಗವಿಸ್ತಾರ, ಲಯಕಾರಿ ತಂತ್ರಗಾರಿಕೆ, ಅಭಿವ್ಯಕ್ತಿ – ಪ್ರತಿಯೊಂದರಲ್ಲೂ ತಮ್ಮ ಗುರುಗಳ ಹೆಜ್ಜೆ ಗುರುತುಗಳನ್ನು ತೋರ್ಪಡಿಸುತ್ತಾ, ತಮ್ಮ ಸ್ವಂತಿಕೆಯನ್ನೂ ಮೆರೆಯುತ್ತಿದ್ದರು. ಅನೇಕ ಸಾರಿ ಸರೋದವೇ ಮೂರ್ತಿವೆತ್ತಂತೆ ಕಾಣುತ್ತಿದ್ದರು. ಅವರ ನಿಧನದ ಸುದ್ದಿ ಕೇಳಿದ ಮನಸು ಕೆಳಕಂಡ ಸಾಲುಗಳನ್ನು ಹೇಳಿಕೊಂಡಿತು: ರೋದಿಸುವ ಸರೋದದ ಸ್ವಗತ- ಇನ್ನೆಲ್ಲಿ ಹುಡುಕಲಿ ಮೀಟುವ ಆಪ್ಯಾಯತೆ, ತಂತಿಯ ತೀಡುವ ನಿಖರತೆ, ಭೋರ್ಗರೆವ ನಾದವೊಮ್ಮೆ, ಮಂಜುಳ ನಿನಾದವೊಮ್ಮೆ , ಶಬ್ದ-ನಿಃಶಬ್ದಗಳ ಆಟದಲಿ ಮೂಡುವ ನಾದ ಸಾಕಾರ, ಭಾವ ನಿರಾಕಾರ
ಅಮರಾವತಿ: ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಇತ್ತೀಚಿನ ವಾರಗಳಲ್ಲಿ 8 ಸಕ್ರಿಯ ಕೋವಿಡ್…
ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನೆರವೇರಿತು. ಜಾನಕಿ ಅವರ ಪುತ್ರ…
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಸ್ಥಳೀಯ…
ಟೆಹರಾನ್: ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಐಆರ್ಜಿಸಿ ಘೋಷಣೆ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೇರಿಕಾ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರೆಗೆ ಜಲಮಾರ್ಗವನ್ನು…
ಬೆಂಗಳೂರು: ನೈಋತ್ಯ ಮುಂಗಾರು ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದ್ದು, ಮಳೆ ಕೊರತೆಯಿಂದಾಗಿ ಬರದ ಛಾಯೆ ತೀವ್ರವಾಗತೊಡಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ…
ಮೈಸೂರು: ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಬೋಗಾದಿ ಬಳಿಯ ಕಣಿಯನಹುಂಡಿ ತೋಟದ ಮನೆಯಲ್ಲಿ ಸಕಲ…