malthej trip
ಮಹಾರಾಷ್ಟ್ರದ ಮಾಲ್ಶೇಜ್
ಸಿನಿಮಾದಲ್ಲಿ ತೋರಿಸುವ ಫ್ಯಾಂಟಸಿ ಲೋಕ ಕಣ್ಣೆದುರು ನಿಂತುಬಿಟ್ಟರೆ ಹೇಗೆನಿಸಬಹುದು? ನಿಸರ್ಗ ಸೃಷ್ಟಿಸಿದ ಬೆರಗನ್ನು ಕಣ್ಣ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ, ಹನಿ ಮಳೆಯನ್ನು ಕಾಣುವುದಕ್ಕಾಗಿ ಮಹಾರಾಷ್ಟ್ರದ ಮಾಲ್ಶೇಜ್ಗೆ ಪಯಣ ಹೊರಟೆವು.
ಮಧ್ಯಾಹ್ನದ ಎರಡರ ಹೊತ್ತಾಗಿದೆಯೆಂದು ಗಡಿಯಾರವಷ್ಟೇ ಹೇಳುತ್ತಿತ್ತು. ಮಾಲ್ಶೇಜ್ ಘಟ್ಟ ಮಾತ್ರ ಮುಂಜಾವಿನಲ್ಲೇ ಮುಳುಗಿತ್ತು. ಬೀಸಿದ ಗಾಳಿ ನೀರು ಚಿಮುಕಿಸುತ್ತಿತ್ತು. ನೋಡನೋಡುತ್ತಲೇ ಮಳೆ ಶುರುವಾಗೇಬಿಟ್ಟಿತು! ಕೋವಿಯಂತೆ ಉದ್ದವಿದ್ದ ಕೋಲಿಗಿಂತ ತುಸು ದಪ್ಪವಿದ್ದ ‘ಕಾಸ್ಟ್ಲಿ’ ಕೊಡೆಯನ್ನು ಬಿಡಿಸಿ, ಕಂಬವನ್ನು ಆಶ್ರಯಿಸಿದಂತೆ ಅಪ್ಪಿಹಿಡಿದು ಹೆಜ್ಜೆ ಹಾಕಿದೆವು. ಜಿಟಿ ಜಿಟಿ ಮಳೆಯಲ್ಲಿ ಆ ಘಟ್ಟದಲ್ಲಿ ಕೊಡೆ ಹಿಡಿದು ನಡೆವ ನಡಿಗೆ ಇದೆಯಲ್ಲಾ, ಆಹಾ! ಮನಸ್ಸಿಗೂ ಮಂಜಿಗೂ ಪ್ರೀತಿಯ ಸಮರ. ಸುತ್ತಣ ಹಸಿರನ್ನೊಮ್ಮೆ ನೋಡಬೇಕೆಂಬ ಮನಸ್ಸನ್ನು ಮಂಜು ಅದೆಷ್ಟು ಸತಾಯಿಸುತ್ತದೆ! ಅತ್ತ ಮಳೆ ನಿಲ್ಲುವುದಿಲ್ಲ, ಇತ್ತ ಕವಿದ ಮಂಜು ಕರಗುವುದಿಲ್ಲ.
ತಂಪು ಹವೆ, ಮೈಗಂಟುವ ಚಳಿಯ ನಡುವೆ ಮಳೆಯ ರಭಸಕ್ಕೆ ಹಿಡಿದ ಕೊಡೆಯೇ ನೃತ್ಯ ಮಾಡುವ ಪ್ರಸಂಗವಂತೂ ಅಲ್ಲಿ ಸಾಮಾನ್ಯ. ಹಾಗೇ ಅಲ್ಲಲ್ಲಿ ಪುಟ್ಟ ಪುಟ್ಟ ಝರಿಗಳು ಕಾಣುತ್ತವೆ. ಕತ್ತು ಮೇಲೆತ್ತಿದರೆ ಬಂಡೆಯ ನಡುವೆ’ ಇದು ನನ್ನ ದಾರಿ’ ಎನ್ನುತ್ತಾ ಬೆಡಗು ಬಿನ್ನಾಣದಿಂದ ಹರಿವ ಝರಿಗಳವು. ಬಂಡೆಯ ಕೆಲ ಕಡೆಗಳಲ್ಲಿ ಹಸಿರು ಹಬ್ಬಿತ್ತು. ಒಂದಷ್ಟು ದೂರ ನಡೆದ ಮೇಲೆ ಮಳೆಯೊಂದಿಗೆ ನಡೆಯೋಣ ಅನಿಸಿತು. ಅಷ್ಟು ಹೊತ್ತಿಗಾಗಲೇ ತೊಟ್ಟ ಬಟ್ಟೆಗಳೆಲ್ಲ ಮುಕ್ಕಾಲು ಭಾಗ ಒದ್ದೆಯಾಗಿತ್ತು. ಮಳೆಯಲ್ಲಿ ನೆನೆಯಬೇಕು, ಆದರೆ ಬಟ್ಟೆ ಒದ್ದೆಯಾಗಬಾರದು ಎಂಬ ವಿಚಿತ್ರ ಲಾಜಿಕ್ ನಮ್ಮದು. ಹಾಗಾಗಿ ಮಳೆಯ ಸಲುವಾಗಿಯೇ ಬ್ಯಾಗಿನಲ್ಲಿದ್ದ ರೈನ್ಕೋಟ್ ತೊಟ್ಟು, ಕೊಡೆ ಮಡಚಿಟ್ಟು ನಡೆದೆವು.
ಮಾಲ್ಶೇಜ್ ಘಟ್ಟದ ಪಕ್ಕವಿರುವ ಬಂಡೆಯ ತುದಿ ತಾಕಿ ಬರುವ ಮಳೆಯ ದಪ್ಪ ಹನಿಗಳು ಬಿದ್ದೊಡನೆ ಕಲ್ಲೇ ಬಿದ್ದಂತ ಅನುಭವ. ನಮ್ಮಂತೆ ಅದೆಷ್ಟೋ ಮಂದಿ ಮಳೆಯಲ್ಲಿ ನೆನೆಯುತ್ತಾ ಸಂಭ್ರಮಿಸುತ್ತಿದ್ದರು. ಕಂಡರೆ ಕಾಣದಂತಿರುವ ಹಸಿರು, ಎಲ್ಲಿಂದಲೋ ಧುತ್ತೆಂದು ಬಂದು ನಿಂತ ಮಂಜು, ಬೆನ್ನಿಗೆ ಬಡಿಯುತ್ತಿರುವ ಕಲ್ಲು ಮಳೆ? ಸೃಷ್ಟಿಯ ಸೌಂದರ್ಯ ಸಹಜ ಸುಂದರ.
ಕೀರ್ತಿ ಬೈಂದೂರು ( keerthisba2018@gmail.com )
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…