malthej trip
ಮಹಾರಾಷ್ಟ್ರದ ಮಾಲ್ಶೇಜ್
ಸಿನಿಮಾದಲ್ಲಿ ತೋರಿಸುವ ಫ್ಯಾಂಟಸಿ ಲೋಕ ಕಣ್ಣೆದುರು ನಿಂತುಬಿಟ್ಟರೆ ಹೇಗೆನಿಸಬಹುದು? ನಿಸರ್ಗ ಸೃಷ್ಟಿಸಿದ ಬೆರಗನ್ನು ಕಣ್ಣ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ, ಹನಿ ಮಳೆಯನ್ನು ಕಾಣುವುದಕ್ಕಾಗಿ ಮಹಾರಾಷ್ಟ್ರದ ಮಾಲ್ಶೇಜ್ಗೆ ಪಯಣ ಹೊರಟೆವು.
ಮಧ್ಯಾಹ್ನದ ಎರಡರ ಹೊತ್ತಾಗಿದೆಯೆಂದು ಗಡಿಯಾರವಷ್ಟೇ ಹೇಳುತ್ತಿತ್ತು. ಮಾಲ್ಶೇಜ್ ಘಟ್ಟ ಮಾತ್ರ ಮುಂಜಾವಿನಲ್ಲೇ ಮುಳುಗಿತ್ತು. ಬೀಸಿದ ಗಾಳಿ ನೀರು ಚಿಮುಕಿಸುತ್ತಿತ್ತು. ನೋಡನೋಡುತ್ತಲೇ ಮಳೆ ಶುರುವಾಗೇಬಿಟ್ಟಿತು! ಕೋವಿಯಂತೆ ಉದ್ದವಿದ್ದ ಕೋಲಿಗಿಂತ ತುಸು ದಪ್ಪವಿದ್ದ ‘ಕಾಸ್ಟ್ಲಿ’ ಕೊಡೆಯನ್ನು ಬಿಡಿಸಿ, ಕಂಬವನ್ನು ಆಶ್ರಯಿಸಿದಂತೆ ಅಪ್ಪಿಹಿಡಿದು ಹೆಜ್ಜೆ ಹಾಕಿದೆವು. ಜಿಟಿ ಜಿಟಿ ಮಳೆಯಲ್ಲಿ ಆ ಘಟ್ಟದಲ್ಲಿ ಕೊಡೆ ಹಿಡಿದು ನಡೆವ ನಡಿಗೆ ಇದೆಯಲ್ಲಾ, ಆಹಾ! ಮನಸ್ಸಿಗೂ ಮಂಜಿಗೂ ಪ್ರೀತಿಯ ಸಮರ. ಸುತ್ತಣ ಹಸಿರನ್ನೊಮ್ಮೆ ನೋಡಬೇಕೆಂಬ ಮನಸ್ಸನ್ನು ಮಂಜು ಅದೆಷ್ಟು ಸತಾಯಿಸುತ್ತದೆ! ಅತ್ತ ಮಳೆ ನಿಲ್ಲುವುದಿಲ್ಲ, ಇತ್ತ ಕವಿದ ಮಂಜು ಕರಗುವುದಿಲ್ಲ.
ತಂಪು ಹವೆ, ಮೈಗಂಟುವ ಚಳಿಯ ನಡುವೆ ಮಳೆಯ ರಭಸಕ್ಕೆ ಹಿಡಿದ ಕೊಡೆಯೇ ನೃತ್ಯ ಮಾಡುವ ಪ್ರಸಂಗವಂತೂ ಅಲ್ಲಿ ಸಾಮಾನ್ಯ. ಹಾಗೇ ಅಲ್ಲಲ್ಲಿ ಪುಟ್ಟ ಪುಟ್ಟ ಝರಿಗಳು ಕಾಣುತ್ತವೆ. ಕತ್ತು ಮೇಲೆತ್ತಿದರೆ ಬಂಡೆಯ ನಡುವೆ’ ಇದು ನನ್ನ ದಾರಿ’ ಎನ್ನುತ್ತಾ ಬೆಡಗು ಬಿನ್ನಾಣದಿಂದ ಹರಿವ ಝರಿಗಳವು. ಬಂಡೆಯ ಕೆಲ ಕಡೆಗಳಲ್ಲಿ ಹಸಿರು ಹಬ್ಬಿತ್ತು. ಒಂದಷ್ಟು ದೂರ ನಡೆದ ಮೇಲೆ ಮಳೆಯೊಂದಿಗೆ ನಡೆಯೋಣ ಅನಿಸಿತು. ಅಷ್ಟು ಹೊತ್ತಿಗಾಗಲೇ ತೊಟ್ಟ ಬಟ್ಟೆಗಳೆಲ್ಲ ಮುಕ್ಕಾಲು ಭಾಗ ಒದ್ದೆಯಾಗಿತ್ತು. ಮಳೆಯಲ್ಲಿ ನೆನೆಯಬೇಕು, ಆದರೆ ಬಟ್ಟೆ ಒದ್ದೆಯಾಗಬಾರದು ಎಂಬ ವಿಚಿತ್ರ ಲಾಜಿಕ್ ನಮ್ಮದು. ಹಾಗಾಗಿ ಮಳೆಯ ಸಲುವಾಗಿಯೇ ಬ್ಯಾಗಿನಲ್ಲಿದ್ದ ರೈನ್ಕೋಟ್ ತೊಟ್ಟು, ಕೊಡೆ ಮಡಚಿಟ್ಟು ನಡೆದೆವು.
ಮಾಲ್ಶೇಜ್ ಘಟ್ಟದ ಪಕ್ಕವಿರುವ ಬಂಡೆಯ ತುದಿ ತಾಕಿ ಬರುವ ಮಳೆಯ ದಪ್ಪ ಹನಿಗಳು ಬಿದ್ದೊಡನೆ ಕಲ್ಲೇ ಬಿದ್ದಂತ ಅನುಭವ. ನಮ್ಮಂತೆ ಅದೆಷ್ಟೋ ಮಂದಿ ಮಳೆಯಲ್ಲಿ ನೆನೆಯುತ್ತಾ ಸಂಭ್ರಮಿಸುತ್ತಿದ್ದರು. ಕಂಡರೆ ಕಾಣದಂತಿರುವ ಹಸಿರು, ಎಲ್ಲಿಂದಲೋ ಧುತ್ತೆಂದು ಬಂದು ನಿಂತ ಮಂಜು, ಬೆನ್ನಿಗೆ ಬಡಿಯುತ್ತಿರುವ ಕಲ್ಲು ಮಳೆ? ಸೃಷ್ಟಿಯ ಸೌಂದರ್ಯ ಸಹಜ ಸುಂದರ.
ಕೀರ್ತಿ ಬೈಂದೂರು ( keerthisba2018@gmail.com )
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ…