ಹಾಡು ಪಾಡು

ಹಸಿರ ನಡುವಿನ ಮಳೆಯ ಫ್ಯಾಂಟಸಿ

ಮಹಾರಾಷ್ಟ್ರದ ಮಾಲ್ಶೇಜ್

ಸಿನಿಮಾದಲ್ಲಿ ತೋರಿಸುವ ಫ್ಯಾಂಟಸಿ ಲೋಕ ಕಣ್ಣೆದುರು ನಿಂತುಬಿಟ್ಟರೆ ಹೇಗೆನಿಸಬಹುದು? ನಿಸರ್ಗ ಸೃಷ್ಟಿಸಿದ ಬೆರಗನ್ನು ಕಣ್ಣ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ, ಹನಿ ಮಳೆಯನ್ನು ಕಾಣುವುದಕ್ಕಾಗಿ ಮಹಾರಾಷ್ಟ್ರದ ಮಾಲ್ಶೇಜ್‌ಗೆ ಪಯಣ ಹೊರಟೆವು.

ಮಧ್ಯಾಹ್ನದ ಎರಡರ ಹೊತ್ತಾಗಿದೆಯೆಂದು ಗಡಿಯಾರವಷ್ಟೇ ಹೇಳುತ್ತಿತ್ತು. ಮಾಲ್ಶೇಜ್ ಘಟ್ಟ ಮಾತ್ರ ಮುಂಜಾವಿನಲ್ಲೇ ಮುಳುಗಿತ್ತು. ಬೀಸಿದ ಗಾಳಿ ನೀರು ಚಿಮುಕಿಸುತ್ತಿತ್ತು. ನೋಡನೋಡುತ್ತಲೇ ಮಳೆ ಶುರುವಾಗೇಬಿಟ್ಟಿತು! ಕೋವಿಯಂತೆ ಉದ್ದವಿದ್ದ ಕೋಲಿಗಿಂತ ತುಸು ದಪ್ಪವಿದ್ದ ‘ಕಾಸ್ಟ್ಲಿ’ ಕೊಡೆಯನ್ನು ಬಿಡಿಸಿ, ಕಂಬವನ್ನು ಆಶ್ರಯಿಸಿದಂತೆ ಅಪ್ಪಿಹಿಡಿದು ಹೆಜ್ಜೆ ಹಾಕಿದೆವು. ಜಿಟಿ ಜಿಟಿ ಮಳೆಯಲ್ಲಿ ಆ ಘಟ್ಟದಲ್ಲಿ ಕೊಡೆ ಹಿಡಿದು ನಡೆವ ನಡಿಗೆ ಇದೆಯಲ್ಲಾ, ಆಹಾ! ಮನಸ್ಸಿಗೂ ಮಂಜಿಗೂ ಪ್ರೀತಿಯ ಸಮರ. ಸುತ್ತಣ ಹಸಿರನ್ನೊಮ್ಮೆ ನೋಡಬೇಕೆಂಬ ಮನಸ್ಸನ್ನು ಮಂಜು ಅದೆಷ್ಟು ಸತಾಯಿಸುತ್ತದೆ! ಅತ್ತ ಮಳೆ ನಿಲ್ಲುವುದಿಲ್ಲ, ಇತ್ತ ಕವಿದ ಮಂಜು ಕರಗುವುದಿಲ್ಲ.

ತಂಪು ಹವೆ, ಮೈಗಂಟುವ ಚಳಿಯ ನಡುವೆ ಮಳೆಯ ರಭಸಕ್ಕೆ ಹಿಡಿದ ಕೊಡೆಯೇ ನೃತ್ಯ ಮಾಡುವ ಪ್ರಸಂಗವಂತೂ ಅಲ್ಲಿ ಸಾಮಾನ್ಯ. ಹಾಗೇ ಅಲ್ಲಲ್ಲಿ ಪುಟ್ಟ ಪುಟ್ಟ ಝರಿಗಳು ಕಾಣುತ್ತವೆ. ಕತ್ತು ಮೇಲೆತ್ತಿದರೆ ಬಂಡೆಯ ನಡುವೆ’ ಇದು ನನ್ನ ದಾರಿ’ ಎನ್ನುತ್ತಾ ಬೆಡಗು ಬಿನ್ನಾಣದಿಂದ ಹರಿವ ಝರಿಗಳವು. ಬಂಡೆಯ ಕೆಲ ಕಡೆಗಳಲ್ಲಿ ಹಸಿರು ಹಬ್ಬಿತ್ತು. ಒಂದಷ್ಟು ದೂರ ನಡೆದ ಮೇಲೆ ಮಳೆಯೊಂದಿಗೆ ನಡೆಯೋಣ ಅನಿಸಿತು. ಅಷ್ಟು ಹೊತ್ತಿಗಾಗಲೇ ತೊಟ್ಟ ಬಟ್ಟೆಗಳೆಲ್ಲ ಮುಕ್ಕಾಲು ಭಾಗ ಒದ್ದೆಯಾಗಿತ್ತು. ಮಳೆಯಲ್ಲಿ ನೆನೆಯಬೇಕು, ಆದರೆ ಬಟ್ಟೆ ಒದ್ದೆಯಾಗಬಾರದು ಎಂಬ ವಿಚಿತ್ರ ಲಾಜಿಕ್ ನಮ್ಮದು. ಹಾಗಾಗಿ ಮಳೆಯ ಸಲುವಾಗಿಯೇ ಬ್ಯಾಗಿನಲ್ಲಿದ್ದ ರೈನ್‌ಕೋಟ್ ತೊಟ್ಟು, ಕೊಡೆ ಮಡಚಿಟ್ಟು ನಡೆದೆವು.

ಮಾಲ್ಶೇಜ್ ಘಟ್ಟದ ಪಕ್ಕವಿರುವ ಬಂಡೆಯ ತುದಿ ತಾಕಿ ಬರುವ ಮಳೆಯ ದಪ್ಪ ಹನಿಗಳು ಬಿದ್ದೊಡನೆ ಕಲ್ಲೇ ಬಿದ್ದಂತ ಅನುಭವ. ನಮ್ಮಂತೆ ಅದೆಷ್ಟೋ ಮಂದಿ ಮಳೆಯಲ್ಲಿ ನೆನೆಯುತ್ತಾ ಸಂಭ್ರಮಿಸುತ್ತಿದ್ದರು. ಕಂಡರೆ ಕಾಣದಂತಿರುವ ಹಸಿರು, ಎಲ್ಲಿಂದಲೋ ಧುತ್ತೆಂದು ಬಂದು ನಿಂತ ಮಂಜು, ಬೆನ್ನಿಗೆ ಬಡಿಯುತ್ತಿರುವ ಕಲ್ಲು ಮಳೆ? ಸೃಷ್ಟಿಯ ಸೌಂದರ್ಯ ಸಹಜ ಸುಂದರ.

ಕೀರ್ತಿ ಬೈಂದೂರು  ( keerthisba2018@gmail.com )

ಆಂದೋಲನ ಡೆಸ್ಕ್

Recent Posts

ಮಹಾರಾಷ್ಟ್ರದಲ್ಲಿ ಖಾಸಗಿ ವಿಮಾನ ಪತನ: ಡಿಸಿಎಂ ಅಜಿತ್‌ ಪವಾರ್‌ ಸೇರಿ 5 ಮಂದಿ ದುರ್ಮರಣ

ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…

18 mins ago

ಓದುಗರ ಪತ್ರ: ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…

4 hours ago

ಓದುಗರ ಪತ್ರ: ಡಿಕೆಶಿಯವರ ನಿಲುವು ಸ್ವಾಗತಾರ್ಹ

ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…

4 hours ago

ಓದುಗರ ಪತ್ರ: ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡನೀಯ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…

4 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಆಟೋಗಳಿಗೆ ಮೀಟರ್ ದರ ಜಾರಿಯಾಗಲಿ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…

4 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…

4 hours ago