ಹಾಡು ಪಾಡು

ರೀಲ್ ಹುಚ್ಚಿಗೆ ಬಲಿಯಾದ ಒಂದು ಅಮಾಯಕ ಜೀವ

ಸೂರ್ಯ ಪುತ್ರ

ಆತನ ಹೆಸರು ದೀಪಕ್. ಮಲ್ಟಿ ನ್ಯಾಷನಲ್ ಕಂಪೆನಿ ಉದ್ಯೋಗಿ. ಕೇರಳದ ಕಣ್ಣೂರಿನ ರೈಲ್ವೇ ಸ್ಟೇಷನ್ ಪಕ್ಕದಿಂದ ಜನ ತುಂಬಿಕೊಂಡಿದ್ದ ಬಸ್ಸೊಂದನ್ನು ಹತ್ತುತ್ತಾನೆ. ಸರಿಯಾಗಿ ನಿಂತುಕೊಳ್ಳಲೂ ಜಾಗವಿಲ್ಲದ ಬಸ್ಸಿನಲ್ಲಿ ಹೇಗೋ ಅಡ್ಜಸ್ಟ್ ಮಾಡ್ಕೊಂಡು ನಿಂತಿದ್ದವನಿಗೆ ತನ್ನ ಬೆನ್ನ ಹಿಂದೆ ನಡೆಯುವ ಯಾವ ವಿಷಯವೂ ತಿಳಿದಿರಲಿಲ್ಲ. ಆತನಿಗೆ ತಾನು ಹೀಗೊಂದು ಅಪವಾದದಲ್ಲಿ ಸಿಲುಕಿದ್ದು ತಿಳಿದದ್ದೇ ವೈರಲ್ ಪೋಸ್ಟ್ ನೋಡಿದ ನಂತರ!

ದೀಪಕ್‌ನ ಹಿಂದೆ ನಿಂತಿದ್ದ ಶಿಂಜಿಯಾ ಮುಸ್ತಫ ಎನ್ನುವಾಕೆ ಆತನಿಗೆ ಅಂಟಿಕೊಂಡಂತೆ ನಿಂತು ೯೦ ಸೆಕೆಂಡಿನೊಳಗಿನ ವಿಡಿಯೋ ಒಂದನ್ನು ಮಾಡಿ ನಂತರ ಅದಕ್ಕೆ ‘ಲೈಂಗಿಕ ಕಿರುಕುಳದ ಕುರಿತು ಜಾಗೃತರಾಗಿ’ ಎಂದು ವಾಯ್ಸ್ ಓವರ್ ಕೊಟ್ಟು ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ. ಅದು ಯಾವ ಪರಿಯಾಗಿ ವೈರಲ್ ಆಗುತ್ತದೆಯೆಂದರೆ ದೀಪಕ್‌ನ ಚಾರಿತ್ರ್ಯಹರಣ ಮಾಡುವಂತಹ ಕಮೆಂಟ್‌ಗಳು ಬರತೊಡಗುತ್ತವೆ. ಬಹಳಷ್ಟು ಜನರ ಜಾಲತಾಣದ ಖಾತೆಗಳಲ್ಲಿ ಹಂಚಿಕೆಯಾಗುತ್ತದೆ. ಈ ಅವಮಾನ ಸಹಿಸಿಕೊಳ್ಳಲಾಗದೆ ದೀಪಕ್ ನೇಣಿಗೆ ಶರಣಾಗುತ್ತಾನೆ.

ಕಾರಣ ತಿಳಿದಾಗ ಕೇರಳವನ್ನೂ ಸೇರಿಸಿಕೊಂಡಂತೆ ಇಡೀ ದೇಶದ ಜನತೆ ಶಿಂಜಿಯಾ ವಿರುದ್ಧ ತಿರುಗಿ ಬೀಳುತ್ತದೆ. ಆಕೆಯನ್ನು ಬಂಧಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಾರೆ. ಆಕೆಯನ್ನು ಬಂಽಸಿದ್ದೂ ಆಯಿತು. ಆದರೆ ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಮಾತಿನಂತೆ ಶಿಂಜಿಯಾಳ ಕ್ರೀಪ್ ವಿಡಿಯೋ ದಾಹಕ್ಕೆ ಬಲಿಯಾಗಿದ್ದು ಮಾತ್ರ ದೀಪಕ್ ಎಂಬ ಮುಗ್ಧ ಜೀವ. ಕೇವಲ ಒಂದು ಕ್ರೀಪ್ ವಿಡಿಯೋದಿಂದ ಇಷ್ಟೆಲ್ಲ ಆಯಿತೇ ಎಂದು ಕೇಳಿದರೆ ಖಂಡಿತಾ ಹೌದು.

ಯಾಕೆಂದರೆ ಕ್ರೀಪ್ ವಿಡಿಯೋ ಹುಟ್ಟಿಸುವ ಮಾನಸಿಕ ಒತ್ತಡ, ಭಯದ ಪರಿಣಾಮ ಸಣ್ಣದೇನಲ್ಲ. ‘ಕ್ರೀಪ್’ ಎಂಬುದಕ್ಕೆ ಹರಡುವುದು ಎಂದರ್ಥವಿದ್ದು, ವೈರಲ್ ಮಾಡುವುದಕ್ಕಾಗಿಯೇ ಸೃಷ್ಟಿಸುವ ವಿಡಿಯೋಗಳೂ ಕ್ರೀಪ್ ವಿಡಿಯೋ ಸಾಲಿಗೆ ಸೇರುತ್ತದೆ. ಇಲ್ಲಿ ಹೇಳುವ ವಿಷಯದಲ್ಲಿ ಸತ್ಯ ಇರಲೇಬೇಕೆಂಬ ಕಟ್ಟುಪಾಡಿಲ್ಲ. ವಿಡಿಯೋವನ್ನು ಅತೀ ಹೆಚ್ಚು ಜನರು ವೀಕ್ಷಿಸುವುದಷ್ಟೇ ಉದ್ದೇಶವಾಗಿರುತ್ತದೆ. ಒಮ್ಮೆ ಇಂತಹ ವಿಡಿಯೋ ಪೋಸ್ಟ್ ಮಾಡಿಬಿಟ್ಟರೆ ಅಲ್ಲಿಗೆ ಕೆಲಸ ಮುಗಿಯಿತು. ನಂತರ ಜಾಲತಾಣಗಳಲ್ಲಿ ವಿಡಿಯೋ ವೀಕ್ಷಿಸುವವರು ಲೈಕ್ಸ್, ಕಮೆಂಟ್ಸ್, ಶೇರ್ ಮಾಡಿದಷ್ಟು ಜನಪ್ರಿಯತೆ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿ ಜನಪ್ರಿಯತೆಯೇ ಮಾನದಂಡ!

ಇಂತಹ ಕ್ರೀಪ್ ವಿಡಿಯೋಗಳಿಂದ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಅನಾಹುತಗಳ ಪಟ್ಟಿ ಸಣ್ಣದೇನಲ್ಲ. ಶಿಂಜಿಯಾ ಮುಸ್ತಫ ಪ್ರಕರಣವನ್ನೇ ನೋಡುವುದಾದರೆ, ಸ್ತ್ರೀಪರ ಕಾನೂನುಗಳನ್ನು ದಾಳವನ್ನಾಗಿಸಿ ಜಾಗೃತಿ ಮೂಡಿಸುವ ನೆಪದಲ್ಲಿ ಗಂಡಿನ ಮಾನ ಹರಾಜಾಗಿದೆ. ಹೆಣ್ಣು ಗಂಡು ಸಮಾನರು ಎಂಬ ಕಾಲಘಟ್ಟದಲ್ಲಿ ನಾವಿರುವಾಗ ಮಾನಕ್ಕೂ ಸಮಬೆಲೆಯಿದೆ ಎಂಬುದನ್ನು ಮರೆಯುವಂತಿಲ್ಲ. ಹೆಣ್ಣಾಗಲಿ, ಗಂಡಾಗಲಿ ತಪ್ಪು ಯಾರೇ ಮಾಡಿದ್ದರೂ ಒಪ್ಪಿಕೊಳ್ಳುವುದು ಮನುಷ್ಯ ಧರ್ಮವಾಗುತ್ತದೆ

” ರೀಲ್ ಹುಚ್ಚಾಟಕ್ಕೆ ಗಂಭೀರ ವಿಚಾರವೊಂದರ ಎಳೆಯನ್ನು ಉಪಯೋಗಿಸಿಕೊಂಡರೆ ಏನಾಗಬಹುದು ಎಂಬುದಕ್ಕೆ ಒಂದು ನಿದರ್ಶನ ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ನಡೆದ ಪ್ರಕರಣ.”

 

 

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

1 hour ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

2 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

2 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

3 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

8 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

8 hours ago