ಹಾಡು ಪಾಡು

ಅಂಬೇಡ್ಕರ್ ಜೀವಜಲವನ್ನು ಹರಿಯುವಂತೆ ಮಾಡುವುದು ನಮ್ಮ ಕೆಲಸವಾಗಿದೆ

ಕೋಟಿಗಾನಹಳ್ಳಿ ರಾಮಯ್ಯ

ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ ವಾಕ್ಯದಲ್ಲಿ ಅಂಬೇಡ್ಕರ್ ಸುತ್ತ ಇರುವಂತಹ ಹಲವು ಮಗ್ಗಲುಗಳು, ಆಯಾಮಗಳು ಇರುವಂತಹ ನಾಟಕಗಳ ಪ್ರದರ್ಶನವಿದೆ. ಅದರಲ್ಲಿ ಒಂದು, ನಾನು ಆರು ವರ್ಷಗಳ ಹಿಂದೆ ರಂಗಪ್ರಯೋಗ ಮಾಡಿದಂತಹ ‘ಅಂಬೇಡ್ಕರ್ ಕೊಲಾಜ್’ ಅನ್ನು ಮತ್ತೆ ಇಲ್ಲಿ ರಂಗಾಯಣ ರೆಪರ್ಟರಿಯಲ್ಲಿ ಚಿದಂಬರ ಜಂಬೆಯವರು ಮಾಡ್ತಾರೆ ಅನ್ನೋ ಕಾರಣಕ್ಕಾಗಿ ನನ್ನ ಅರಿವನ್ನು ವಿಸ್ತರಿಸಿಕೊಳ್ಳಲು ಬಂದಿದ್ದೇನೆ.

ram ಯಾಕೆ ನಾನು ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕ ಬರೆದೆ ಎಂದು ನೋಡುವುದಾದರೆ, ಅಂಬೇಡ್ಕರರನ್ನು ವಿವಿಧ ಆಯಾಮಗಳಲ್ಲಿ ಹಲವು ರೂಪದಲ್ಲಿ ನೋಡಬಹುದು ಎಂದು ತೋರಿಸಿಕೊಡಲುಕೆಂದೇ ‘ಅಂಬೇಡ್ಕರ್ ಸುತ್ತ’ ನಾಟಕ ಕಟ್ಟಿಕೊಟ್ಟೆ. ಈ ಸಮಕಾಲೀನ ವರ್ತಮಾನದಲ್ಲಿ ಯಾಕೆ ಈ ನಾಟಕ ಆಯ್ಕೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ನಾನು ನಾಟಕ ಕಟ್ಟಿದ ರೀತಿ ಹೇಗಿತ್ತೆಂದರೆ, ಕಳಪೆ ಬೌದ್ಧಿಕತೆ ಇರುವ, ಅರೆಬರೆ ಬೌದ್ಧಿಕತೆ ಹೊಂದಿದ ಮತ್ತು ಈಗಾಗಲೇ ಹಲವು ಚಿಂತನಾಶಾಲೆಗಳಲ್ಲಿ ಬೆಂದು ಬಂದಂತಹ ಇಟ್ಟಿಗೆಗಳಂತಿರುವ ವಾಹಕವಾದ ನಟರಿಗೆ ಅಂಬೇಡ್ಕರರನ್ನು ಅರ್ಥ ಮಾಡಿಸಬೇಕಿತ್ತು. ಅದಕ್ಕಾಗಿ ಎಲ್ಲರೂ ಸೇರಿ ಅಂಬೇಡ್ಕರರನ್ನು ಓದುವುದು ಒಳ್ಳೆಯದೆನಿಸಿತು. ಎಲ್ಲರೂ ಓದಿ, ಕಟ್ಟಿ, ಸಫಲರಾದರು.

ನಾನು ನೋಡಿದಷ್ಟು ಆ ನಾಟಕ ಒಪ್ಪತಕ್ಕದಾಗಿತ್ತು. ಚೊಕ್ಕವಾಗಿತ್ತು. ಆದರೆ ಅಂದಿನ ಕಾಲಕ್ಕೆ ಯಾರ ಕಣ್ಣಿಗೂ ಬೀಳದೆ ಕಾಡ ಕುಸುಮದಂತೆ ಮಣ್ಣಿಗೆ ಬಿತ್ತು. ಅದನ್ನು ಮತ್ತೆ ಈ ಸಂದರ್ಭದಲ್ಲಿ ತರುವುದು ಸವಾಲು ಎನ್ನಿಸಿತು. ಎಪ್ಪತ್ತು ವರ್ಷಗಳ ಕಾಲ ಅಂಬೇಡ್ಕರ್ ಸುತ್ತ ಕಟ್ಟಿದ ಕಥನಗಳು, ಕಟ್ಟು ಕಥನಗಳು, ಕಾದಂಬರಿಗಳು ಮಿಥ್ಯ ಕತೆಗಳು, ಜನಪದ ರೂಪದ ಸಣ್ಣಸಣ್ಣ ಝರಿಗಳನ್ನು ಪಕ್ಕಕ್ಕಿಟ್ಟ ಹುಸಿಯಾಗಿ ಕಟ್ಟಿದ್ದಾರೆ. ಮಟ್ಟಸವಾಗಿ ಕಟ್ಟಿ ಜುಳುಜುಳು ಹರಿಯುವ ಜ್ಞಾನಗಂಗೆಯನ್ನು ಮುಟ್ಟದಂತೆ ಮಾಡಿದ್ದಾರೆ. ಆದುದರಿಂದ ಅವನ್ನೆಲ್ಲ ಒಡೆದು ಹಾಕಿ, ನಿಜವಾದ ಅಂಬೇಡ್ಕರ್ ಜೀವಜಲವನ್ನು ಹರಿಯುವಂತೆ ಮಾಡುವುದು ನಮ್ಮ ಕೆಲಸವಾಗಿದೆ. ನನ್ನನ್ನು ಕೆಲವರು ಅಂಬೇಡ್ಕರ್ ಭಂಜಕನೆಂದು ನೋಡುವ ಸಾಧ್ಯತೆಯಿದೆ. ಉಳಿದವರು ಒಪ್ಪಲಿ ಬಿಡಲಿ, ನನ್ನ ಅಂಬೇಡ್ಕರರನ್ನು ನಾನು ಕಂಡುಕೊಳ್ಳುತ್ತೇನೆ. ಅದಕ್ಕಾಗಿ ನಾನು ಪ್ರಯೋಗಶೀಲನಾಗಿದ್ದೇನೆ. ಹಾಗಾಗಿ ನನ್ನ ಎಲ್ಲ ಯೋಚನೆಗಳನ್ನು ಕಾರ್ಯಗತಗೊಳಿಸಿದ್ದೇನೆ.

ಕದಡಿದ ನೀರಿನಲ್ಲಿ ಮೀನಿನ ಬೇಟೆ, ಮನುಷ್ಯನ ಡಾರ್ಕ್ ಸೈಡನ್ನು ತೆರೆದಿಡುತ್ತದೆ. ಹರಿಯುವ ನೀರಿನಲ್ಲಿ ಮೀನಿನ ಚಲನೆಯನ್ನು ಕಂಡುಹಿಡಿಯುವುದು ಒಂಟಿಕಾಲಿನಲ್ಲಿ ನಿಲ್ಲುವ ಕೊಕ್ಕರೆ ಮಾತ್ರ. ಅಂಬೇಡ್ಕರ್ ಅವರು ನೂರಾರು ಬಗೆಯ ಮೀನಿನ ರಾಶಿಯಿರುವ ಸರೋವರ ಎಂದುಕೊಳ್ಳಬಹುದು. ಈ ಎಪ್ಪತ್ತು ವರ್ಷಗಳಲ್ಲಿ ಆ ಸರೋವರವನ್ನು ಜನರು ಅವರಿಗೆ ಬೇಕಾದಂತೆ ಕಲುಷಿತಗೊಳಿಸಿದ್ದಾರೆ. ಕೆಲವು ಸುಂದರವಾದ ಕೆಲಸಗಳೂ ನಡೆದಿವೆಯೆಂಬುದನ್ನು ತಳ್ಳಿ ಹಾಕುವಂತಿಲ್ಲ. ಅಂಬೇಡ್ಕರ್ ಈಗ ಕದಡಿದ ನೀರಾಗಿದ್ದಾರೆ. ಜನರು ತಮ್ಮ ತಮ್ಮ ಬಲೆಗಳನ್ನು ಹಾಕಿ ಬೇಟೆಯಾಡುತ್ತಿದ್ದಾರೆ. ದೇಶ ಇನ್ನೂ ಸರಿಯಾಗಿ ಅಂಬೇಡ್ಕರರನ್ನು ಅರ್ಥ ಮಾಡಿಕೊಂಡಿಲ್ಲ. ಚಾಣಾಕ್ಷ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ಅಂಬೇಡ್ಕರ್ ಕೊಲಾಜ್ಸೃ ಷ್ಟಿಯಾಗಿದ್ದೇ ಸಮೂಹ ಓದಿನ ಮೂಲಕ. ಇತಿಹಾಸದಲ್ಲಿ ಮುಚ್ಚಿಹೋದ ಅಧ್ಯಾಯವನ್ನು ಮತ್ತೆ ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇವೆ. ರೆಪರ್ಟರಿಯಲ್ಲಿರುವವರು ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳಲು ಸಿದ್ಧರಿದ್ದಾರೆ. ನನಗೆ ಹಾಡು ರಾಜಕೀಯ ತಿಳಿವಳಿಕೆಯನ್ನು ದಾಟಿಸುವ ಮಾಧ್ಯಮವಾಗಿದೆ. ಹಾಗಾಗಿ ಅಂತಹ ಹಾಡುಗಳನ್ನು ಇದರಲ್ಲಿ ಕಟ್ಟಿಕೊಟ್ಟಿದ್ದೇನೆ.

(ಕೋಟಿಗಾನಹಳ್ಳಿ ರಾಮಯ್ಯ ಬರೆದ ‘ಅಂಬೇಡ್ಕರ್ ಕೊಲಾಜ್’ ನಾಟಕ ಈ ಬಾರಿಯ ರಂಗಾಯಣ ಬಹುರೂಪಿಯ ಮುಖ್ಯ ಆಕರ್ಷಣೆ)

” ದೇಶ ಇನ್ನೂ ಸರಿಯಾಗಿ ಅಂಬೇಡ್ಕರರನ್ನು ಅರ್ಥ ಮಾಡಿಕೊಂಡಿಲ್ಲ. ಎಲ್ಲರೂ ಚಾಣಾಕ್ಷ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.”

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

40 mins ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

1 hour ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

1 hour ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

2 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

3 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

3 hours ago