ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ ಅವರಿಗೆ ಬೇಕಾಗಿೆುೀಂ ಈ ವಿಶೇಷ ವೀಣೆಯನ್ನು ತಯಾರಿಸಿಕೊಟ್ಟಿದ್ದರು. ದೇಶದಲ್ಲಿೆುೀಂ ಈಗಲೂ ೧೬ ಇಂಚಿನ ದೊಡ್ಡ ಕೊಡ ಇರುವ ಇಂತಹದೊಂದು ವೀಣೆ ಇಲ್ಲವಂತೆ. ಈ ವಯಸ್ಸಿನಲ್ಲಿಯೂ ಇಷ್ಟೊಂದು ಸುಲಲಿತವಾಗಿ ವೀಣೆ ನುಡಿಸಬಲ್ಲ ಇನ್ನೊಬ್ಬ ವೈಣಿಕನಿಲ್ಲ.
ಕಡೂರು ಬೀರೂರು ಕಡೆಯಿಂದ ಆ ಕಾಲದಲ್ಲಿ ಮೈಸೂರಿಗೆ ಬಂದ ಬಿ.ರಾಮಯ್ಯನವರು ವಿಶ್ವೇಶ್ವರನ್ ಅವರ ತಂದೆ. ಅವರು ಮಹಾರಾಜ ನಾಲ್ವಡಿಯವರ ಅರಮನೆಯ ಖಾಸ್ ಬಿಡದಿಯ ಲೆಕ್ಕಿಗರಾಗಿದ್ದರು. ಮೈಸೂರು ಸಿಂಹಾಸನದ ಹೂವಿನ ಅಲಂಕಾರವನ್ನು ಇವರಿಂದಲೇ ಮಾಡಿಸಬೇಕೆಂದು ಮಹಾರಾಜರ ಆಜ್ಞೆಯಾಗಿತ್ತು. ವಿಶ್ವೇಶ್ವರನ್ ಅವರ ತಾಯಿ ವರಲಕ್ಷ್ಮಮ್ಮ ಮೈಸೂರಿನ ಅಭಿನವ ತ್ಯಾಗರಾಜ ಎಂದೇ ಹೆಸರಾಗಿದ್ದ ಸುಂದರಶಾಸ್ತ್ರಿಗಳ ಶಿಷ್ಯೆಯಾಗಿದ್ದರು. ಇವರ ನಾಲ್ಕು ಮಕ್ಕಳಲ್ಲಿ ವಿಶ್ವೇಶ್ವರನ್ ಅವರು ಕೊನೆಯವರು. ಈ ನಾಲ್ಕೂ ಮಕ್ಕಳು ಮೈಸೂರು ಸಹೋದರರೆಂದೇ ಹೆಸರಾಗಿದ್ದವರು.

‘ವೀಣೆ ನುಡಿಸುವುದು ಗಾಯನದ ಹಾಗಿರಬೇಕು’ ಎನ್ನುವುದು ವಿಶ್ವೇಶ್ವರನ್ ಅವರು ಇದುವರೆಗೆ ನಂಬಿಕೊಂಡು ನುಡಿಸಿಕೊಂಡು ಪ್ರತಿಪಾದಿಸುತ್ತಿರುವ ಸಿದ್ಧಾಂತ. ‘ಆಧ್ಯಾತ್ಮದ ಸ್ಪರ್ಶವಿಲ್ಲದ ಸಂಗೀತ ಬರಿಯ ಒಂದು ಕೈಚಳಕ’ ಎನ್ನುವುದು ಇವರ ಮಾತು. ‘ಸಂಗೀತದ ಗುರಿ ಮನರಂಜನೆಯಲ್ಲ ಅದು ದೇವರನ್ನು ಮುಟ್ಟುವ ದಾರಿ’ ಎಂಬುದು ಇವರ ವೇದಾಂತ. ‘ಸಂಗೀತವನ್ನು ಕೊಟ್ಟ ಶಾರದೆಗೂ ಮತ್ತು ಆಕೆಯನ್ನು ಆರಾಧಿಸುವ ನನಗೂ ಒಂದು ಅದ್ವೈತದಂತಹ ಸಂಬಂಧವಿದೆ’ ಎನ್ನುವುದು ಇವರ ನಂಬಿಕೆ.

ನಿಮ್ಮ ಈ ಯೌವನದ ಗುಟ್ಟೇನು ಅಂತ ಕೇಳಿದರೆ, ‘ಈ ಎಪ್ಪತ್ತು ವರ್ಷದ ವೀಣೆೆುೀಂ ನನ್ನನ್ನು ಇನ್ನೂ ತರುಣನನ್ನಾಗಿ ಇಟ್ಟಿರುವುದು’ ಎನ್ನುತ್ತಾರೆ ತೊಂಬತ್ತೆರಡು ವರ್ಷದ ಈ ಸುಂದರ ವೈಣಿಕ!

andolana

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

1 hour ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

2 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

3 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

4 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

4 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

8 hours ago