ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ ಅವರಿಗೆ ಬೇಕಾಗಿೆುೀಂ ಈ ವಿಶೇಷ ವೀಣೆಯನ್ನು ತಯಾರಿಸಿಕೊಟ್ಟಿದ್ದರು. ದೇಶದಲ್ಲಿೆುೀಂ ಈಗಲೂ ೧೬ ಇಂಚಿನ ದೊಡ್ಡ ಕೊಡ ಇರುವ ಇಂತಹದೊಂದು ವೀಣೆ ಇಲ್ಲವಂತೆ. ಈ ವಯಸ್ಸಿನಲ್ಲಿಯೂ ಇಷ್ಟೊಂದು ಸುಲಲಿತವಾಗಿ ವೀಣೆ ನುಡಿಸಬಲ್ಲ ಇನ್ನೊಬ್ಬ ವೈಣಿಕನಿಲ್ಲ.
ಕಡೂರು ಬೀರೂರು ಕಡೆಯಿಂದ ಆ ಕಾಲದಲ್ಲಿ ಮೈಸೂರಿಗೆ ಬಂದ ಬಿ.ರಾಮಯ್ಯನವರು ವಿಶ್ವೇಶ್ವರನ್ ಅವರ ತಂದೆ. ಅವರು ಮಹಾರಾಜ ನಾಲ್ವಡಿಯವರ ಅರಮನೆಯ ಖಾಸ್ ಬಿಡದಿಯ ಲೆಕ್ಕಿಗರಾಗಿದ್ದರು. ಮೈಸೂರು ಸಿಂಹಾಸನದ ಹೂವಿನ ಅಲಂಕಾರವನ್ನು ಇವರಿಂದಲೇ ಮಾಡಿಸಬೇಕೆಂದು ಮಹಾರಾಜರ ಆಜ್ಞೆಯಾಗಿತ್ತು. ವಿಶ್ವೇಶ್ವರನ್ ಅವರ ತಾಯಿ ವರಲಕ್ಷ್ಮಮ್ಮ ಮೈಸೂರಿನ ಅಭಿನವ ತ್ಯಾಗರಾಜ ಎಂದೇ ಹೆಸರಾಗಿದ್ದ ಸುಂದರಶಾಸ್ತ್ರಿಗಳ ಶಿಷ್ಯೆಯಾಗಿದ್ದರು. ಇವರ ನಾಲ್ಕು ಮಕ್ಕಳಲ್ಲಿ ವಿಶ್ವೇಶ್ವರನ್ ಅವರು ಕೊನೆಯವರು. ಈ ನಾಲ್ಕೂ ಮಕ್ಕಳು ಮೈಸೂರು ಸಹೋದರರೆಂದೇ ಹೆಸರಾಗಿದ್ದವರು.

‘ವೀಣೆ ನುಡಿಸುವುದು ಗಾಯನದ ಹಾಗಿರಬೇಕು’ ಎನ್ನುವುದು ವಿಶ್ವೇಶ್ವರನ್ ಅವರು ಇದುವರೆಗೆ ನಂಬಿಕೊಂಡು ನುಡಿಸಿಕೊಂಡು ಪ್ರತಿಪಾದಿಸುತ್ತಿರುವ ಸಿದ್ಧಾಂತ. ‘ಆಧ್ಯಾತ್ಮದ ಸ್ಪರ್ಶವಿಲ್ಲದ ಸಂಗೀತ ಬರಿಯ ಒಂದು ಕೈಚಳಕ’ ಎನ್ನುವುದು ಇವರ ಮಾತು. ‘ಸಂಗೀತದ ಗುರಿ ಮನರಂಜನೆಯಲ್ಲ ಅದು ದೇವರನ್ನು ಮುಟ್ಟುವ ದಾರಿ’ ಎಂಬುದು ಇವರ ವೇದಾಂತ. ‘ಸಂಗೀತವನ್ನು ಕೊಟ್ಟ ಶಾರದೆಗೂ ಮತ್ತು ಆಕೆಯನ್ನು ಆರಾಧಿಸುವ ನನಗೂ ಒಂದು ಅದ್ವೈತದಂತಹ ಸಂಬಂಧವಿದೆ’ ಎನ್ನುವುದು ಇವರ ನಂಬಿಕೆ.

ನಿಮ್ಮ ಈ ಯೌವನದ ಗುಟ್ಟೇನು ಅಂತ ಕೇಳಿದರೆ, ‘ಈ ಎಪ್ಪತ್ತು ವರ್ಷದ ವೀಣೆೆುೀಂ ನನ್ನನ್ನು ಇನ್ನೂ ತರುಣನನ್ನಾಗಿ ಇಟ್ಟಿರುವುದು’ ಎನ್ನುತ್ತಾರೆ ತೊಂಬತ್ತೆರಡು ವರ್ಷದ ಈ ಸುಂದರ ವೈಣಿಕ!

andolana

Recent Posts

ಕೊಡಗಿನಲ್ಲಿ ರಶ್ಮಿಕಾ-ವಿಜಯ್‌ ಡಿನ್ನರ್‌ ಪಾರ್ಟಿ

ಮಡಿಕೇರಿ: ಮದುವೆ ಆದ ಬಳಿಕ ತವರಿಗೆ ಆಗಮಿಸಿದ ರಶ್ಮಿಕಾ ಮಂದಣ್ಣ ಕೊಡಗಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ…

1 hour ago

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ದೂರು

ಬೆಂಗಳೂರು: ಸಮುದಾಯವೊಂದರ ಮೀಸಲಾತಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ…

1 hour ago

ಏಪ್ರಿಲ್.‌9ರಂದು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ ಸಾಧ್ಯತೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ -1 ಫಲಿತಾಂಶದ ದಿನಾಂಕ ಪ್ರಕಟಣೆ ಗೊಂದಲಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಪರೀಕ್ಷಾ ಮಂಡಳಿಯು ಇದೇ…

2 hours ago

ರೈತರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ: ಜೆಸಿಬಿ ಕಾರ್ಯ ಸ್ಥಗಿತ

ಮೈಸೂರು: ವರುಣ ಕ್ಷೇತ್ರದ ಕೃಷಿ ಭೂಮಿಯಲ್ಲಿ ನಿಮ್ಹಾನ್ಸ್‌ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಂದ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗುಡುಮಾದನಹಳ್ಳಿಯಲ್ಲಿ…

3 hours ago

ಏಪ್ರಿಲ್‌ನಿಂದ ವೇತನ ಪರಿಷ್ಕರಣೆಗೆ ಒಪ್ಪಿದರೂ ತಿರಸ್ಕಾರ: ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರು

ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದು, ಮತ್ತೆ ಪ್ರತಿಭಟನೆ, ಹೋರಾಟಕ್ಕೆ ಮುಂದಾಗಿದ್ದಾರೆ. 38 ತಿಂಗಳ ವೇತನ…

3 hours ago

ಮೈಸೂರು: ಲೋಕೋಪಯೋಗಿ ಇಲಾಖೆ ಎಇಇ ರೇವನ್‌ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಮೈಸೂರು: ಪಿಡಬ್ಲ್ಯೂಡಿ ಅಧಿಕಾರಿ ಜಿ.ಕೆ.ರೇವನ್‌ ಕುಮಾರ್‌ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಂದರು ಮತ್ತು ಒಳನಾಡಿನ…

3 hours ago