ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ ಅವರಿಗೆ ಬೇಕಾಗಿೆುೀಂ ಈ ವಿಶೇಷ ವೀಣೆಯನ್ನು ತಯಾರಿಸಿಕೊಟ್ಟಿದ್ದರು. ದೇಶದಲ್ಲಿೆುೀಂ ಈಗಲೂ ೧೬ ಇಂಚಿನ ದೊಡ್ಡ ಕೊಡ ಇರುವ ಇಂತಹದೊಂದು ವೀಣೆ ಇಲ್ಲವಂತೆ. ಈ ವಯಸ್ಸಿನಲ್ಲಿಯೂ ಇಷ್ಟೊಂದು ಸುಲಲಿತವಾಗಿ ವೀಣೆ ನುಡಿಸಬಲ್ಲ ಇನ್ನೊಬ್ಬ ವೈಣಿಕನಿಲ್ಲ.
ಕಡೂರು ಬೀರೂರು ಕಡೆಯಿಂದ ಆ ಕಾಲದಲ್ಲಿ ಮೈಸೂರಿಗೆ ಬಂದ ಬಿ.ರಾಮಯ್ಯನವರು ವಿಶ್ವೇಶ್ವರನ್ ಅವರ ತಂದೆ. ಅವರು ಮಹಾರಾಜ ನಾಲ್ವಡಿಯವರ ಅರಮನೆಯ ಖಾಸ್ ಬಿಡದಿಯ ಲೆಕ್ಕಿಗರಾಗಿದ್ದರು. ಮೈಸೂರು ಸಿಂಹಾಸನದ ಹೂವಿನ ಅಲಂಕಾರವನ್ನು ಇವರಿಂದಲೇ ಮಾಡಿಸಬೇಕೆಂದು ಮಹಾರಾಜರ ಆಜ್ಞೆಯಾಗಿತ್ತು. ವಿಶ್ವೇಶ್ವರನ್ ಅವರ ತಾಯಿ ವರಲಕ್ಷ್ಮಮ್ಮ ಮೈಸೂರಿನ ಅಭಿನವ ತ್ಯಾಗರಾಜ ಎಂದೇ ಹೆಸರಾಗಿದ್ದ ಸುಂದರಶಾಸ್ತ್ರಿಗಳ ಶಿಷ್ಯೆಯಾಗಿದ್ದರು. ಇವರ ನಾಲ್ಕು ಮಕ್ಕಳಲ್ಲಿ ವಿಶ್ವೇಶ್ವರನ್ ಅವರು ಕೊನೆಯವರು. ಈ ನಾಲ್ಕೂ ಮಕ್ಕಳು ಮೈಸೂರು ಸಹೋದರರೆಂದೇ ಹೆಸರಾಗಿದ್ದವರು.

‘ವೀಣೆ ನುಡಿಸುವುದು ಗಾಯನದ ಹಾಗಿರಬೇಕು’ ಎನ್ನುವುದು ವಿಶ್ವೇಶ್ವರನ್ ಅವರು ಇದುವರೆಗೆ ನಂಬಿಕೊಂಡು ನುಡಿಸಿಕೊಂಡು ಪ್ರತಿಪಾದಿಸುತ್ತಿರುವ ಸಿದ್ಧಾಂತ. ‘ಆಧ್ಯಾತ್ಮದ ಸ್ಪರ್ಶವಿಲ್ಲದ ಸಂಗೀತ ಬರಿಯ ಒಂದು ಕೈಚಳಕ’ ಎನ್ನುವುದು ಇವರ ಮಾತು. ‘ಸಂಗೀತದ ಗುರಿ ಮನರಂಜನೆಯಲ್ಲ ಅದು ದೇವರನ್ನು ಮುಟ್ಟುವ ದಾರಿ’ ಎಂಬುದು ಇವರ ವೇದಾಂತ. ‘ಸಂಗೀತವನ್ನು ಕೊಟ್ಟ ಶಾರದೆಗೂ ಮತ್ತು ಆಕೆಯನ್ನು ಆರಾಧಿಸುವ ನನಗೂ ಒಂದು ಅದ್ವೈತದಂತಹ ಸಂಬಂಧವಿದೆ’ ಎನ್ನುವುದು ಇವರ ನಂಬಿಕೆ.

ನಿಮ್ಮ ಈ ಯೌವನದ ಗುಟ್ಟೇನು ಅಂತ ಕೇಳಿದರೆ, ‘ಈ ಎಪ್ಪತ್ತು ವರ್ಷದ ವೀಣೆೆುೀಂ ನನ್ನನ್ನು ಇನ್ನೂ ತರುಣನನ್ನಾಗಿ ಇಟ್ಟಿರುವುದು’ ಎನ್ನುತ್ತಾರೆ ತೊಂಬತ್ತೆರಡು ವರ್ಷದ ಈ ಸುಂದರ ವೈಣಿಕ!

andolana

Recent Posts

ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಬಸ್‌ ಸೌಲಭ್ಯ ಕಲ್ಪಿಸಲು ಡಿಪೋ ನಿರ್ಮಾಣ: ಶಾಸಕ ಎಂ.ಆರ್.‌ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…

4 hours ago

ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವು

‌ಶ್ರೀರಂಗಪಟ್ಟಣ: ವಿದ್ಯುತ್‌ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್‌ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…

4 hours ago

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…

4 hours ago

ಹನೂರು: 153 ದಿನಗಳಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…

4 hours ago

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್‌ ಸಿಗ್ನಲ್‌ ಆರೋಪ: ಸಚಿವ ಮಹದೇವಪ್ಪ ಪ್ರತಿಕ್ರಿಯೆ

ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…

4 hours ago

ದೀದಿ ಸರ್ಕಾರದ ವಿರುದ್ಧ ಅಮಿತ್‌ ಶಾ ಚಾರ್ಜ್‌ಶೀಟ್‌ ರಿಲೀಸ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…

5 hours ago