ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ ಅವರಿಗೆ ಬೇಕಾಗಿೆುೀಂ ಈ ವಿಶೇಷ ವೀಣೆಯನ್ನು ತಯಾರಿಸಿಕೊಟ್ಟಿದ್ದರು. ದೇಶದಲ್ಲಿೆುೀಂ ಈಗಲೂ ೧೬ ಇಂಚಿನ ದೊಡ್ಡ ಕೊಡ ಇರುವ ಇಂತಹದೊಂದು ವೀಣೆ ಇಲ್ಲವಂತೆ. ಈ ವಯಸ್ಸಿನಲ್ಲಿಯೂ ಇಷ್ಟೊಂದು ಸುಲಲಿತವಾಗಿ ವೀಣೆ ನುಡಿಸಬಲ್ಲ ಇನ್ನೊಬ್ಬ ವೈಣಿಕನಿಲ್ಲ.
ಕಡೂರು ಬೀರೂರು ಕಡೆಯಿಂದ ಆ ಕಾಲದಲ್ಲಿ ಮೈಸೂರಿಗೆ ಬಂದ ಬಿ.ರಾಮಯ್ಯನವರು ವಿಶ್ವೇಶ್ವರನ್ ಅವರ ತಂದೆ. ಅವರು ಮಹಾರಾಜ ನಾಲ್ವಡಿಯವರ ಅರಮನೆಯ ಖಾಸ್ ಬಿಡದಿಯ ಲೆಕ್ಕಿಗರಾಗಿದ್ದರು. ಮೈಸೂರು ಸಿಂಹಾಸನದ ಹೂವಿನ ಅಲಂಕಾರವನ್ನು ಇವರಿಂದಲೇ ಮಾಡಿಸಬೇಕೆಂದು ಮಹಾರಾಜರ ಆಜ್ಞೆಯಾಗಿತ್ತು. ವಿಶ್ವೇಶ್ವರನ್ ಅವರ ತಾಯಿ ವರಲಕ್ಷ್ಮಮ್ಮ ಮೈಸೂರಿನ ಅಭಿನವ ತ್ಯಾಗರಾಜ ಎಂದೇ ಹೆಸರಾಗಿದ್ದ ಸುಂದರಶಾಸ್ತ್ರಿಗಳ ಶಿಷ್ಯೆಯಾಗಿದ್ದರು. ಇವರ ನಾಲ್ಕು ಮಕ್ಕಳಲ್ಲಿ ವಿಶ್ವೇಶ್ವರನ್ ಅವರು ಕೊನೆಯವರು. ಈ ನಾಲ್ಕೂ ಮಕ್ಕಳು ಮೈಸೂರು ಸಹೋದರರೆಂದೇ ಹೆಸರಾಗಿದ್ದವರು.

‘ವೀಣೆ ನುಡಿಸುವುದು ಗಾಯನದ ಹಾಗಿರಬೇಕು’ ಎನ್ನುವುದು ವಿಶ್ವೇಶ್ವರನ್ ಅವರು ಇದುವರೆಗೆ ನಂಬಿಕೊಂಡು ನುಡಿಸಿಕೊಂಡು ಪ್ರತಿಪಾದಿಸುತ್ತಿರುವ ಸಿದ್ಧಾಂತ. ‘ಆಧ್ಯಾತ್ಮದ ಸ್ಪರ್ಶವಿಲ್ಲದ ಸಂಗೀತ ಬರಿಯ ಒಂದು ಕೈಚಳಕ’ ಎನ್ನುವುದು ಇವರ ಮಾತು. ‘ಸಂಗೀತದ ಗುರಿ ಮನರಂಜನೆಯಲ್ಲ ಅದು ದೇವರನ್ನು ಮುಟ್ಟುವ ದಾರಿ’ ಎಂಬುದು ಇವರ ವೇದಾಂತ. ‘ಸಂಗೀತವನ್ನು ಕೊಟ್ಟ ಶಾರದೆಗೂ ಮತ್ತು ಆಕೆಯನ್ನು ಆರಾಧಿಸುವ ನನಗೂ ಒಂದು ಅದ್ವೈತದಂತಹ ಸಂಬಂಧವಿದೆ’ ಎನ್ನುವುದು ಇವರ ನಂಬಿಕೆ.

ನಿಮ್ಮ ಈ ಯೌವನದ ಗುಟ್ಟೇನು ಅಂತ ಕೇಳಿದರೆ, ‘ಈ ಎಪ್ಪತ್ತು ವರ್ಷದ ವೀಣೆೆುೀಂ ನನ್ನನ್ನು ಇನ್ನೂ ತರುಣನನ್ನಾಗಿ ಇಟ್ಟಿರುವುದು’ ಎನ್ನುತ್ತಾರೆ ತೊಂಬತ್ತೆರಡು ವರ್ಷದ ಈ ಸುಂದರ ವೈಣಿಕ!

andolana

Recent Posts

ಮತ್ತೆರಡು ಸಮಾವೇಶ ಮಾಡಲು ಸಜ್ಜಾದ ಜೆಡಿಎಸ್‌: ಚುನಾವಣೆ ಗೆಲ್ಲಲು ರಣತಂತ್ರ

ಬೆಂಗಳೂರು: ಹಾಸನದಲ್ಲಿ ಇತ್ತೀಚೆಗೆ ನಡೆಸಿದ ಜೆಡಿಎಸ್ ಬೆಳ್ಳಿ ಮಹೋತ್ಸವದ ಮಾದರಿಯಲ್ಲಿ ರಾಜ್ಯದಲ್ಲಿ ಮತ್ತೆರಡು ಸಮಾವೇಶಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಕಲ್ಯಾಣ…

1 min ago

ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ: ರಾಜ್ಯದ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ

ಬೆಂಗಳೂರು: ಬೇಸಿಗೆಗೂ ಮುನ್ನವೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದ್ದು, ರಾಜ್ಯದ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ…

7 mins ago

ಕನಕಪುರದ ಕಾಡಂಚಿನ ಗ್ರಾಮದಲ್ಲಿ 40 ಕಾಡಾನೆಗಳ ಹಿಂಡು ಪ್ರತ್ಯಕ್ಷ

ರಾಮನಗರ: ಕನಕಪುರದಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಕಾಡಂಚಿನ ಗ್ರಾಮದ ಬಳಿ ಸುಮಾರು 40 ಕಾಡಾನೆಗಳು ಕನಕಪುರ ತಾಲ್ಲೂಕಿನ ಕಾಡುಶಿವನಹಳ್ಳಿ ಬಳಿ…

1 hour ago

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಹೇಳಿಕೆಗೆ ಕಿಚ್ಚ ಸುದೀಪ್‌ ಕೆಂಡಾಮಂಡಲ

ಬೆಂಗಳೂರು:ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಕನ್ನಡ ಚಿತ್ರರಂಗದ ಹಲವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಅಶ್ಲೀಲವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ…

2 hours ago

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾಕಷ್ಟು ಅಭ್ಯರ್ಥಿಗಳಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ…

2 hours ago

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು: ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಬಜೆಟ್‌ ಬಗ್ಗೆ ಟೀಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ…

2 hours ago