ಜಗತ್ತಿನ ಜೀವರಾಶಿಯ ಹುಟ್ಟು ಮತ್ತು ಬೆಳವಣಿಗೆ ನಿಂತಿರುವುದು ಜೀವ ಸರಪಳಿಯಿಂದ. ಒಂದು ಜೀವಿ ಇನ್ನೊಂದು ಜೀವಿಯ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಜೀವ ಸರಪಳಿಯ ಒಂದು ಕೊಂಡಿ ಕಳಚಿದರೂ ಇಡೀ ಜೀವ ಸಮೂಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಜಗತ್ತಿನ ವಿನಾಶಕ್ಕೆ ಯುದ್ಧ, ಸೋಟಕಗಳೇ ಬೇಕೆಂದಿಲ್ಲ. ಭೂಮಿಯ ಮೇಲಿನ ಈ ಎರಡು ಸಣ್ಣ ಜೀವಿಗಳು ಸಂಪೂರ್ಣವಾಗಿ ನಾಶವಾದರೆ, ಇಡೀ ಜೀವ ಜಗತ್ತು ಅನ್ನ-ಆಹಾರವಿಲ್ಲದೆ ನಾಶವಾಗುತ್ತದೆ. ಆ ಎರಡು ಹುಳುಗಳೇ ಒಂದು ಜೇನುಹುಳು, ಮತ್ತೊಂದು ಗೆದ್ದಲು ಹುಳು. ಈ ಲೇಖನದಲ್ಲಿ ಜೇನುಹುಳುಗಳ ಬಗ್ಗೆ ತಿಳಿದುಕೊಳ್ಳೋಣ. ಜೇನುಹುಳುಗಳ ಕಾರ್ಯ ಸಿಹಿಯಾದ ಜೇನು ತುಪ್ಪ ನೀಡುವ ಜತೆಗೆ ಮತ್ತೊಂದು ಮಹತ್ವದ ಕಾರ್ಯವೆಂದರೆ ಪರಾಗಸ್ಪರ್ಶ ಕ್ರಿಯೆಯ ಮೂಲಕ ಎಲ್ಲ ಆಹಾರ ಪದಾರ್ಥಗಳ ಇಳುವರಿಗೆ ನೆರವಾಗುವುದು.
ಜೇನು ಹುಳುಗಳ ನಾಶದಿಂದಾಗುವ ದುಷ್ಪರಿಣಾಮಗಳು: ಜೇನು ಹುಳುಗಳು ನಾಶವಾಗಿ ಪರಾಗ ಸ್ಪರ್ಶ ಕ್ರಿಯೆ ನಿಂತರೆ ಮನುಷ್ಯರ ಹಾಗೂ ಇತರೆ ಜೀವಿಗಳ ಆವಾಸ ಸ್ಥಾನ ನಾಶವಾಗಿ ಜೀವ ಸಂಕುಲವೇ ನಾಶವಾಗುತ್ತದೆ. ಅಲ್ಲದೇ ಸಸ್ಯ ಸಂವಹನ ಮತ್ತು ಸಸ್ಯ ಪ್ರಭೇದಗಳ ನಾಶದಿಂದ ಹವಾಮಾನದಲ್ಲಿ ಬದಲಾವಣೆಯಾಗಿ, ಆಹಾರ ಅಭಾವ ಹೆಚ್ಚಾಗುತ್ತದೆ. ಜೊತೆಗೆ ಜಗತ್ತಿನ ವಿನಾಶವು ಪ್ರಾರಂಭವಾಗುತ್ತದೆ.
ಇಂತಹ ಜೇನು ಹುಳುಗಳ ಉಳಿಕೆ, ಅವುಗಳ ಪರಾಗಸ್ಪರ್ಶ ಕ್ರಿಯೆಯನ್ನು ಹೆಚ್ಚಿಸಲು ಕೆಲವೊಂದು ಸೂಕ್ತ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಜೇನುಹುಳುಗಳ ಪರಾಗ ಸ್ಪರ್ಶ ಸ್ನೇಹಿಯಾದ ಹೂಗಳು, ಹೂ ಬಿಡುವ ಮರಗಳು, ಹಣ್ಣು, ತರಕಾರಿ ಜಾತಿಯ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಅಲ್ಲದೆ ಕೃಷಿ ಭೂಮಿಗಳಿಗೆ ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸುವುದನ್ನು ಕೈಬಿಟ್ಟು ಸಾವಯವ ಕೀಟನಾಶಕ ಹಾಗೂ ಕಷಾಯಗಳನ್ನು ಸಿಂಪಡಿಸಬೇಕು. ಆ ಮೂಲಕ ಜೇನುನೊಣಗಳ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸಬೇಕು. ಜೇನು ಗೂಡಿಗೆ ಬೆಂಕಿ ಇಡುವುದನ್ನು ಅಪರಾಧವೆಂದು ಪರಿಗಣಿಸಬೇಕು. ಜತೆಗೆ ಸುಸ್ಥಿರ, ಸಾವಯವ ಕೃಷಿಯನ್ನು ಅತ್ಯಂತ ಜರೂರು ಎಂದು ಪರಿಭಾವಿಸಿ ಆಚರಿಸಬೇಕು. ಪರಾಗಸ್ಪರ್ಶವಾಗಿರುವ ಕೀಟಗಳು ಜೇನುಹುಳು ಚಿಟ್ಟೆಯಂತಹ ಮಿತ್ರ ಕೀಟಗಳ ಸಂರಕ್ಷಣೆಯನ್ನು ಎಲ್ಲರೂ ಉತ್ತೇಜಿಸಬೇಕು.
ಜೇನುಕುರುಬರ ಡೋಬಿ, ಮಾವುತ ಮತ್ತು ಗಾಯಕ ದುಬಾರೆ ಆನೆ ಶಿಬಿರ ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಉಗಾದಿ ಸುಖ…
ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.…
ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ…
ಬೆಂಗಳೂರು : ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…
ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…