ಜಗತ್ತಿನ ಜೀವರಾಶಿಯ ಹುಟ್ಟು ಮತ್ತು ಬೆಳವಣಿಗೆ ನಿಂತಿರುವುದು ಜೀವ ಸರಪಳಿಯಿಂದ. ಒಂದು ಜೀವಿ ಇನ್ನೊಂದು ಜೀವಿಯ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಜೀವ ಸರಪಳಿಯ ಒಂದು ಕೊಂಡಿ ಕಳಚಿದರೂ ಇಡೀ ಜೀವ ಸಮೂಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಜಗತ್ತಿನ ವಿನಾಶಕ್ಕೆ ಯುದ್ಧ, ಸೋಟಕಗಳೇ ಬೇಕೆಂದಿಲ್ಲ. ಭೂಮಿಯ ಮೇಲಿನ ಈ ಎರಡು ಸಣ್ಣ ಜೀವಿಗಳು ಸಂಪೂರ್ಣವಾಗಿ ನಾಶವಾದರೆ, ಇಡೀ ಜೀವ ಜಗತ್ತು ಅನ್ನ-ಆಹಾರವಿಲ್ಲದೆ ನಾಶವಾಗುತ್ತದೆ. ಆ ಎರಡು ಹುಳುಗಳೇ ಒಂದು ಜೇನುಹುಳು, ಮತ್ತೊಂದು ಗೆದ್ದಲು ಹುಳು. ಈ ಲೇಖನದಲ್ಲಿ ಜೇನುಹುಳುಗಳ ಬಗ್ಗೆ ತಿಳಿದುಕೊಳ್ಳೋಣ. ಜೇನುಹುಳುಗಳ ಕಾರ್ಯ ಸಿಹಿಯಾದ ಜೇನು ತುಪ್ಪ ನೀಡುವ ಜತೆಗೆ ಮತ್ತೊಂದು ಮಹತ್ವದ ಕಾರ್ಯವೆಂದರೆ ಪರಾಗಸ್ಪರ್ಶ ಕ್ರಿಯೆಯ ಮೂಲಕ ಎಲ್ಲ ಆಹಾರ ಪದಾರ್ಥಗಳ ಇಳುವರಿಗೆ ನೆರವಾಗುವುದು.
ಜೇನು ಹುಳುಗಳ ನಾಶದಿಂದಾಗುವ ದುಷ್ಪರಿಣಾಮಗಳು: ಜೇನು ಹುಳುಗಳು ನಾಶವಾಗಿ ಪರಾಗ ಸ್ಪರ್ಶ ಕ್ರಿಯೆ ನಿಂತರೆ ಮನುಷ್ಯರ ಹಾಗೂ ಇತರೆ ಜೀವಿಗಳ ಆವಾಸ ಸ್ಥಾನ ನಾಶವಾಗಿ ಜೀವ ಸಂಕುಲವೇ ನಾಶವಾಗುತ್ತದೆ. ಅಲ್ಲದೇ ಸಸ್ಯ ಸಂವಹನ ಮತ್ತು ಸಸ್ಯ ಪ್ರಭೇದಗಳ ನಾಶದಿಂದ ಹವಾಮಾನದಲ್ಲಿ ಬದಲಾವಣೆಯಾಗಿ, ಆಹಾರ ಅಭಾವ ಹೆಚ್ಚಾಗುತ್ತದೆ. ಜೊತೆಗೆ ಜಗತ್ತಿನ ವಿನಾಶವು ಪ್ರಾರಂಭವಾಗುತ್ತದೆ.
ಇಂತಹ ಜೇನು ಹುಳುಗಳ ಉಳಿಕೆ, ಅವುಗಳ ಪರಾಗಸ್ಪರ್ಶ ಕ್ರಿಯೆಯನ್ನು ಹೆಚ್ಚಿಸಲು ಕೆಲವೊಂದು ಸೂಕ್ತ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಜೇನುಹುಳುಗಳ ಪರಾಗ ಸ್ಪರ್ಶ ಸ್ನೇಹಿಯಾದ ಹೂಗಳು, ಹೂ ಬಿಡುವ ಮರಗಳು, ಹಣ್ಣು, ತರಕಾರಿ ಜಾತಿಯ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಅಲ್ಲದೆ ಕೃಷಿ ಭೂಮಿಗಳಿಗೆ ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸುವುದನ್ನು ಕೈಬಿಟ್ಟು ಸಾವಯವ ಕೀಟನಾಶಕ ಹಾಗೂ ಕಷಾಯಗಳನ್ನು ಸಿಂಪಡಿಸಬೇಕು. ಆ ಮೂಲಕ ಜೇನುನೊಣಗಳ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸಬೇಕು. ಜೇನು ಗೂಡಿಗೆ ಬೆಂಕಿ ಇಡುವುದನ್ನು ಅಪರಾಧವೆಂದು ಪರಿಗಣಿಸಬೇಕು. ಜತೆಗೆ ಸುಸ್ಥಿರ, ಸಾವಯವ ಕೃಷಿಯನ್ನು ಅತ್ಯಂತ ಜರೂರು ಎಂದು ಪರಿಭಾವಿಸಿ ಆಚರಿಸಬೇಕು. ಪರಾಗಸ್ಪರ್ಶವಾಗಿರುವ ಕೀಟಗಳು ಜೇನುಹುಳು ಚಿಟ್ಟೆಯಂತಹ ಮಿತ್ರ ಕೀಟಗಳ ಸಂರಕ್ಷಣೆಯನ್ನು ಎಲ್ಲರೂ ಉತ್ತೇಜಿಸಬೇಕು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…