ಎನ್.ಕೇಶವಮೂರ್ತಿ

small is beautiful ಎಂಬ ಇಂಗ್ಲಿಷ್ ನಾಣ್ಣುಡಿಯಂತೆ ಸಣ್ಣದು ಎಂಬುದು ಸುಂದರ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಏಕೆ ಈ ಮಾತು ನನಗೆ ನೆನಪಿಗೆ ಬಂತು ಎಂದರೆ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಅತ್ಯಂತ ಸಣ್ಣ ಹಿಡುವಳಿ ರೈತನನ್ನು ಭೇಟಿಯಾಗಿದ್ದೆ. ಅವರ ಬಳಿ ಇದ್ದದ್ದು ಕೇವಲ ನಲವತ್ತು ಸೆಂಟ್ಸ್ ಜಮೀನು. (ಎಕರೆಗೆ ನೂರು ಸೆಂಟ್ಸ್) ಅಂದರೆ, ಅರ್ಧ ಎಕರೆಗಿಂತ ಕಡಿಮೆ ಜಮೀನು. ಅದರಲ್ಲಿಯೇ ಅವರ ಪುಟ್ಟ ಮನೆಯೂ ಇತ್ತು. ಐದು ಜನರಿರುವ ಸುಂದರ ಕುಟುಂಬ. ಇದೆಲ್ಲವೂ ಆ ಪುಟ್ಟ ಜಮೀನಿನಲ್ಲಿಯೇ ನಡೆಯುತ್ತಿತ್ತು. ಆ ಕುಟುಂಬದವರು ಯಾರು? ಎಲ್ಲಿದ್ದಾರೆ? ಆ ವಿವರ ಈಗ ಬೇಡ. ಅವರು ಏನು ಮಾಡುತ್ತಿದ್ದಾರೆ ಎಂಬುದಷ್ಟೇ ಮುಖ್ಯ.

ಅವರ ಜಮೀನಿನಲ್ಲಿ ಹತ್ತು ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಅವು ಸುಮಾರು ೨೦ ವರ್ಷಗಳ ಮರಗಳು. ಎಲ್ಲವೂ ಆರೋಗ್ಯದಿಂದ ನಳನಳಿಸುತ್ತಿದ್ದವು. ಒಂದೊಂದು ಮರದ ಇಳುವರಿ ಮುನ್ನೂರು ತೆಂಗಿನಕಾಯಿ. ಇವರು ಎಳನೀರು ಮಾರುವುದಿಲ್ಲ, ಕೊಬ್ಬರಿಗೂ ಹಾಕುವುದಿಲ್ಲ. ನೇರವಾಗಿ ಗ್ರಾಹಕರಿಗೆ ತೆಂಗಿನಕಾಯಿ ಮಾರುತ್ತಾರೆ. ಪ್ರತಿ ಕಾಯಿಗೆ ಇಪ್ಪತ್ತು ರೂಪಾಯಿ. ಅಲ್ಲಿಗೆ ಹತ್ತು ತೆಂಗಿನಮರಗಳಿಂದ ಮೂರು ಸಾವಿರ ಕಾಯಿ, ಅದರ ಮಾರಾಟದಿಂದ ಏನಿಲ್ಲವೆಂದರೂ ೬೦ ಸಾವಿರ ರೂ. ಆದಾಯ ಬರುತ್ತಿದೆ.

ತೆಂಗಿನಮರಗಳಿಂದ ಪಡೆದದ್ದೆಲ್ಲ ಆದಾಯವೇ. ಏಕೆಂದರೆ ಅವರು ತೆಂಗಿನಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ನೀಡುವುದಿಲ್ಲ. ಯಾವುದೇ ಔಷಧಗಳನ್ನು ಸಿಂಪಡಣೆ ಮಾಡುವುದಿಲ್ಲ. ಸಂಪೂರ್ಣ ಸಾವಯವ ಗೊಬ್ಬರದಿಂದಲೇ ನಿರ್ವಹಣೆ ಮಾಡುತ್ತಿದ್ದಾರೆ. ಇವುಗಳೊಂದಿಗೆ ಅವರ ಜಮೀನಿನಲ್ಲಿ ಎರಡು ಕ್ರಾಸ್ ಬ್ರೀಡ್ ಹಸುಗಳಿವೆ. ಅವುಗಳಿಗೆ ಬೇಕಾದಷ್ಟು ಮೇವನ್ನು ಜಮೀನಿನಲ್ಲಿಯೇ ಬೆಳೆದಿದ್ದಾರೆ. ತಮ್ಮ ಮನೆಗೆ ಬೇಕಾದಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ೧೫ ಲೀ. ಹಾಲನ್ನು ಮಾರಾಟ ಮಾಡುತ್ತಾರೆ. ಅದೂ ಸಹ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಇದರೊಂದಿಗೆ ಇವರಪ್ರಮುಖ ಆರ್ಥಿಕ ಬೆಲೆ ಉಡುಪಿಯ ಶಂಕರಪುರ ಮಲ್ಲಿಗೆ. ಮನೆ ಮಂದಿಯೆಲ್ಲಾ ಸೇರಿ ಇದರ ಬೇಸಾಯ ಮಾಡುತ್ತಾರೆ. ಹೂ ಬಿಡಿಸಿ, ಕಟ್ಟಿ ಮಾರುವುದರಲ್ಲಿ ಇವರ ಕುಟುಂಬ ನಿಸ್ಸೀಮತೆ ಹೊಂದಿದೆ. ಇದಷ್ಟೇ ಅಲ್ಲದೇ ತಮ್ಮ ಬೇಕಾದ ತರಕಾರಿಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತಾರೆ. ಒಟ್ಟಾರೆ ಇವರದ್ದು ಸಂತೃಪ್ತಿಯ ಕೃಷಿ ಬದುಕು. ಇವರ ಬಗ್ಗೆ ಏಕಿಷ್ಟು ಹೇಳುತ್ತಿದ್ದೇನೆ ಎಂದುಕೊಳ್ಳುತ್ತಿದ್ದೀರಾ. ನನ್ನನ್ನು ತುಂಬ ಆಕರ್ಷಿಸಿದ ಕೃಷಿಕ ಇವರು. ಇವರ ಸರಳ ಜೀವನ ಹಾಗೂ ಹತ್ತು ತೆಂಗಿನಮರಗಳು ನನಗೆ ಇವರ ಮೇಲೆ ಕೂತೂಹಲ ಮೂಡಲು ಕಾರಣವಾಯಿತು. ನಮ್ಮ ಭಾಗಗಳಲ್ಲಿಯೂ ತೆಂಗಿನಮರಗಳನ್ನು ಬೆಳೆಯುತ್ತಾರೆ. ಎಷ್ಟೋ ರೈತರಿಗೆ ಎಕರೆಗೆ ೫ ಸಾವಿರ ತೆಂಗಿನಕಾಯಿಗಳನ್ನು ತೆಗೆಯುವುದೂ ಕಷ್ಟ.

ಹೀಗಿರುವಾಗ ಇವರು ಕೇವಲ ೧೦ ಗಿಡಗಳಿಂದ ಮೂರು ಸಾವಿರ ತೆಂಗಿನ ಕಾಯಿಗಳನ್ನು ಪಡೆಯುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾದರೂ ಇದು ಸತ್ಯ. ಹಿರಿಯರು ಹೇಳುವ ಹಾಗೆ ‘ಅಗಲವಾಗಿ ಬೇಸಾಯ ಮಾಡುವ ಬದಲು ಆಳವಾಗಿ ಬೇಸಾಯ ಮಾಡಬೇಕು’. ಇರುವ ಅಲ್ಪ ಜಮೀನಿನಲ್ಲಿಯೇ ಸ್ವಲ್ಪವೇ ಬೆಳೆ ಬೆಳೆದು ಅದಕ್ಕೆ ನಮ್ಮ ಎಲ್ಲ ಒಳಸುಳಿ ಬಳಸಿ, ಖರ್ಚನ್ನು ಮಿತಗೊಳಿಸಿ, ಕನಿಷ್ಠ ಅಗತ್ಯತೆಗಳೊಂದಿಗೆ ಬದುಕಿದರೆ ಬದುಕು ಸುಂದರವಾಗಲಿದೆ. ಆದರೆ ಹಾಗೆ ಬದುಕಲು ಬೇಸಾಯ ಮಾಡುವ ದೃಢ ಸಂಕಲ್ಪಬೇಕು. ಎಲ್ಲರಿಗೂ ಇದು ಸಾಧ್ಯವಾಗದಿರಬಹುದು. ಸಾಧ್ಯವಾಗಿಸಿದರೆಸಣ್ಣ ಕೃಷಿ ಬದುಕು ಸಹನೀಯವಾಗುತ್ತದೆ. ಸುಂದರವೂ ಆಗುತ್ತದೆ.

(ಲೇಖಕರು ಮೈಸೂರಿನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ)

ಆಂದೋಲನ ಡೆಸ್ಕ್

Recent Posts

ಹನೂರು| ಮೇಕೆ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರಬೆಟ್ಟ ಕಾಡಂಚಿನ ಇಂಡಿಗನತ್ತ–ನಾಗಮಲೆ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕ…

19 mins ago

ಮಲೆ ಮಹದೇಶ್ವರನ ಹುಂಡಿಯಲ್ಲಿ 2.16 ಕೋಟಿ ರೂ. ಸಂಗ್ರಹ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ…

24 mins ago

ನೀಟ್‌ ಪರೀಕ್ಷೆ ನಡೆಸುವ ಅಧಿಕಾರ ಆಯಾಯ ರಾಜ್ಯಗಳಿಗೆ ನೀಡಲಿ: ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ವೈದ್ಯಕೀಯ ಕಾಲೇಜುಗಳಿಗೆ ಪರೀಕ್ಷೆ ನಡೆಸುವ ಸಿಇಟಿ ವ್ಯವಸ್ಥೆಯನ್ನು ನಡೆಸಲು ರಾಜ್ಯಗಳಿಗೇ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.…

44 mins ago

ಎಬೋಲಾಗೆ 136 ಮಂದಿ ಬಲಿ: WHO ಕಳವಳ

ಕಾಂಗೋ: ಆಫ್ರಿಕಾದ ಕಾಂಗೋದಲ್ಲಿ ಎಬೋಲಾ ಮಾರಣಾಂತಿಕ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಈ ಬಗ್ಗೆ ವಿಶ್ವ ಆರೋಗ್ಯ…

2 hours ago

ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇ.25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ…

2 hours ago

ಶೃಂಗೇರಿ ಅಂಚೆ ಮತ ಮರು ಎಣಿಕೆ ಪ್ರಕರಣ: ಯಥಾಸ್ಥಿತಿ ಮುಂದುವರಿಸಲು ಸುಪ್ರೀಂ ಸೂಚನೆ

ನವದೆಹಲಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂಬಂಧ ಸುಪ್ರಿಂಕೋರ್ಟ್ ಮುಂದಿನ ಅರ್ಜಿ ವಿಚಾರಣೆಯನ್ನು…

2 hours ago