ಎನ್.ಕೇಶವಮೂರ್ತಿ

ನಂಜನಗೂಡಿನ ಸಮೀಪದಲ್ಲಿ ಕೃಷಿ ಮಾಡುತ್ತಿರುವ ರೈತರೊಬ್ಬರನ್ನು ಮಾತನಾಡಿಸುತ್ತಿದ್ದೆ. ಅವರು ತಾವು ಹತ್ತು ಗುಂಟೆ ಜಾಗದಲ್ಲಿ ನೈಸರ್ಗಿಕವಾಗಿ ಕಬ್ಬು ಬೆಳೆದ ಬಗ್ಗೆ ಮಾತನಾಡ್ತಿದ್ರು, ಅವರು ಐದು ಎಕರೇಲಿ ಕಬ್ಬು ಬೆಳೀತಾರೆ, ಆದರೆ, ಹೊಸ ರೀತಿಯಲ್ಲಿ ಕಬ್ಬು ಬೆಳೆಯೋಣ ಅಂದುಕೊಂಡು ಕೇವಲ ಹತ್ತು ಗುಂಟೆಯಲ್ಲಿ ನೈಸರ್ಗಿಕ ಕೃಷಿ ಪ್ರಯೋಗ ಮಾಡಿದ್ದಾರೆ. ಬಳಸಿದ್ದು ಮಾಮೂಲಿ ನಯನ ತಳಿ ಕೆಂಪು ಕಬ್ಬು, ಮೊದಲಿಗೆ ಐದು ಅಡಿ ಅಂತರದಲ್ಲಿ ಸಾಲು ಮಾಡಿ, ಒಂದು ಕಣ್ಣಿನ ಕಬ್ಬಿನ ತುಂಡನ್ನು ನಾಟಿ ಮಾಡಿದ್ದಾರೆ.

ಜಮೀನಿನ ಸಿದ್ಧತೆ ಮಾಡುವಾಗಲೇ ದಂಡಿಯಾಗಿ ಹಟ್ಟಿ ಗೊಬ್ಬರ ಹಾಕಿದ್ದಾರೆ. ಕಬ್ಬಿನ ಬಿತ್ತನೆ ತುಂಡುಗಳನ್ನು ಬೀಜಾಮೃತದಲ್ಲಿ ಉಪಚರಿಸಿ ಬಿತ್ತಿದ್ದಾರೆ. ಕಬ್ಬಿನ ಸಾಲಿನ ನಡುವೆ ಬದನೆ ಕಾಯಿ, ಮೆಣಸಿನ ಕಾಯಿ, ಟೊಮೆಟೋ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಬ್ಬಿನ ಸಾಲಿನಲ್ಲಿ ಈರುಳ್ಳಿ, ಬೆಂಡೆ ಹಾಗೂ ಸಂಬಾರ ಸೊಪ್ಪು ಬೆಳೆದಿದ್ದಾರೆ. ಸಾಲು ಬಿಟ್ಟು ಸಾಲಿನಲ್ಲಿ ಹೆಸರು, ಉದ್ದು, ಅಲಸಂದೆ ಹಾಕಿದ್ದಾರೆ.

‘ಸಾರ್, ಹಿಂದೆ ನಾವು ಮೂಡು ಅಡಿಗೆ ಕಬ್ಬು ಹಾಕಿದ್ರೆ ಮಧ್ಯದಲ್ಲಿ ಏನೂ ಬೆಳೀತಿರಲಿಲ್ಲ. ಮೂರು ತಿಂಗಳಾದ ಮೇಲೆ ಕಬ್ಬಿನ ಸಾಲಿನ ನಡುವೆ ಓಡಾಡೋಕೂ ಆಗ್ತಿರಲಿಲ್ಲ. ಐದು ಅಡೀಲಿ ಕಬ್ಬು ನಾಟಿ ಮಾಡಿ ಇಷ್ಟೆಲ್ಲಾ ಬೆಳೆ ಹಾಕಿದ ಮೇಲೆ, ನನಗೆ ನಾವು ಕಬ್ಬು ಬೆಳೀತಿದ್ದೀವೋ ಅಥವಾ ತರಕಾರಿ ಬೆಳೀತಿದ್ದೀವೋ ಅನ್ನಿಸೋಕೆ ಶುರುವಾಯ್ತು. ರಾಸಾಯನಿಕ ಗೊಬ್ಬರ ಹಾಕಲಿಲ್ಲ. ಹದಿನೈದು ದಿನಕ್ಕೆ ಒಂದು ಸಲ ಜೀವಾಮೃತ ಕೊಟ್ಟೆ, ಮೊದಲು ಕಬ್ಬು ನರಳುತ್ತಲೇ ಬೆಳೀತು.

ಪಕ್ಕದ ರಾಸಾಯನಿಕ ವಿಧಾನದ ಕಬ್ಬು ಹುಲುಸಾಗಿ ಬೆಳೀತಿತ್ತು. ಓ ಈ ವಿಧಾನ ಸರಿ ಇಲ್ಲವೇನೋ ಅನ್ನಿಸೋಕೆ ಶುರುವಾಯಿತು’ ಅಂತಾ ಹೇಳುವಾಗ ನನ್ನ ಕುತೂಹಲ ಜಾಸ್ತಿಯಾಯ್ತು. ಅವರು ಮುಂದುವರಿದು ಹೇಳಿದು, “ಆದರೆ ನೋಡಿ ಸಾರ್ ಐದು ತಿಂಗಳ ಬಳಿಕ ಈ ವಾರದಕಬ್ಬು ಹಿಂದಿನದನ್ನು ಮರೆತಂತೆ ಬೆಳೆಯತೊಡಗಿತು. ಅರವತ್ತು ಹಾಗೂ ತೊಂಬತ್ತು ದಿನಗಳ ಮಧ್ಯದಲ್ಲಿ ಬೆಳೆದ ಬೆಳೆ ಕೈ ಸೇರಿತು.

ಮಾರೋವಷ್ಟು ಇರದಿದ್ರೂ, ನಮ್ಮ ಮನೆ, ನೆಂಟರಿಷ್ಟರು ಎಲ್ಲಾರಿಗೂ ಸೊಪ್ಪು, ತರಕಾರಿ ಹಂಚಿದ್ದಿ, ಸುಮಾರು ಇಪ್ಪತ್ತು ಕಿಲೋಗ್ರಾಂನಷ್ಟು ಪ್ರತೀ ಕಾಳು ಸಿಕ್ಕು. ಜೊತೆಗೆ ಒಂದಷ್ಟು ಹಸೀ ಕಾಯಿ ಸಹಾ ಬಳಸಿದ್ದಿ. ಯಾವತ್ತೂ, ನಾವು ಐದು ಎಕರೇಕಬ್ಬಲ್ಲೂ ಇಷ್ಟು ಬೆಳೆದಿರಲಿಲ್ಲ. ಮನೆಯವರಿಗೆ ತುಂಬಾ ಖುಷಿಯಾಯ್ತು, ನಾವು ಇಷ್ಟೆಲ್ಲಾ ಬೆಳೆ ಬೆಳೆದಿದ್ದರಿಂದ ಮತ್ತೊಂದು ಉಪಯೋಗ ಆಯ್ತು. ಕಬ್ಬಿನಲ್ಲಿ ಕಳೆ ಬೆಳೀಲಿಲ್ಲ. ರಾಸಾಯನಿಕ ವಿಧಾನದಲ್ಲಿ ಕಳೆನಾಶಕ ಬಳಸಬೇಕಾಯ್ತು. ಏನೇ ಆದರೂ ಕಬ್ಬಿನ ಇಳುವರಿ ಮುಖ್ಯ ಅಲ್ವಾ? ಕಾದು ನೋಡೋಣ ಅಂತಾ ಸುಮ್ಮನಾದೆ’ ಅಂದ್ರು, ಕಬ್ಬು ಕಟಾವು ಮಾಡಿದಾಗ ಇವರಿಗೆ ಹತ್ತು ಗುಂಟೆಯಲ್ಲಿ ಹತ್ತು ಟನ್ ಇಳುವರಿ ಬಂದಿದೆ. ಕಬ್ಬು ಮಾರಿಲ್ಲ. ಬೆಲ್ಲ ಮಾಡಿದ್ದಾರೆ. ಒಂದು ಟನ್ ಗೆ 125 ಕೇಜಿ ಬೆಲ್ಲ ಬಂದಿದೆ. ಹತ್ತು ಗುಂಟೇಲಿ ಸಿಕ್ಕ ಒಂದೂ ಕಾಲು ಟನ್ ಬೆಲ್ಲವನ್ನು ನೇರವಾಗಿ ಗ್ರಾಹಕರಿಗೆ ಮಾರಿದ್ದಾರೆ. ಅದೂ ಕೆಜಿಗೆ 40 ರೂಪಾಯಿ ದರದಲ್ಲಿ. ಅಲ್ಲದೆ ಹತ್ತು ಗುಂಟೇಲಿ ಬಂದ ಆದಾಯ 50 ಸಾವಿರ ರೂ., ಆಗಿದ್ದ ಖರ್ಚು ಕೇವಲ 10 ಸಾವಿರ ರೂ., ಉಳಿದದ್ದು 40 ಸಾವಿರ ರೂ.ಆದಾಯ. ಎಕರೆಗೆ ಲೆಕ್ಕಾಚಾರ ಮಾಡಿದ್ರೆ ಒಂದು ಲಕ್ಷದ ಅರವತ್ತು ಸಾವಿರ ಆದಾಯ. ಈಗ ನೀವೇ ಹೇಳಿ ಏಕೆ ಈ ತರಹ ಕಬ್ಬು ಬೆಳೀಬಾರದು?

(ಲೇಖಕರು ಮೈಸೂರಿನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

2.20ಕೋಟಿ ರೂ.ಮೌಲ್ಯದ ಚಿನ್ನಾಭರಣ ವಶ ; 26 ಮಂದಿ ಬಂಧನ.

ಮಂಡ್ಯ : ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. 28 ಮಂದಿ ಆರೋಪಿಗಳನ್ನು…

9 hours ago

ತಳಸಮುದಾಯಕ್ಕೆ ಆರ್ಥಿಕ ಸಾಮಾಜಿಕ ಶಕ್ತಿ ಅಗತ್ಯ : ಸಿಎಂ

ಬಾಗಲಕೋಟೆ : ಕಾಂಗ್ರೆಸ್ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ…

10 hours ago

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರದ ಜತೆ ನಿಲ್ಲುತ್ತೇನೆ : ಕೇಂದ್ರ ಸಚಿವ ಎಚ್‌ಡಿಕೆ

ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ…

10 hours ago

IPL 2026 | ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

ನವದೆಹಲಿ : ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್ ಜತೆಗೆ ಸಂಘಟಿತ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್…

10 hours ago

ಇರಾನ್ ಮೇಲೆ ಕ್ಷಿಪಣಿ ದಾಳಿ ; ಬುಶೆಹರ್ ಅಣುಸ್ಥಾವರದ ಬಳಿ ಹಾನಿ

ಟೆಹ್ರಾನ್ : ಅಮೆರಿಕದ ಮಿತ್ರರಾಷ್ಟ್ರಗಳಲ್ಲಿನ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರಿದಿರುವಂತೆಯೇ ಇತ್ತ ಇರಾನ್ ಮೇಲೆ ಮುಗಿಬಿದ್ದಿರುವ…

10 hours ago

ಇಂಧನ ವ್ಯತ್ಯಯ ಆತಂಕ ; ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಏರಿಕೆ

ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ…

11 hours ago