ಅನ್ನದಾತರ ಅಂಗಳ

ನಿವೃತ್ತ ಶಿಕ್ಷಕರ ಮಿಶ್ರ ಬೆಳೆ ಸಾಹಸ

ಕಡಿಮೆ ಖರ್ಚಿನಲ್ಲಿ ಮಿಶ್ರ ಬೇಸಾಯ ಪದ್ಧತಿಯ ಮೂಲಕ ಉತ್ತಮ ಲಾಭ ಗಳಿಸುತ್ತಿರುವ ಶ್ರೀರಾಂಪುರ ಶ್ರೀನಿವಾಸ್

ಭೇರ್ಯ ಮಹೇಶ್

ಎರಡು ಎಕರೆ ಹಿಡುವಳಿ ಜಮೀನಿದೆ. ಸಾಕಷ್ಟು ನೀರಿನ ವ್ಯವಸ್ಥೆಯೂ ಇದೆ. ಹೀಗಿದ್ದರೂ ಅವರು ಏಕ ಬೆಳೆ ಪದ್ಧತಿಗೆ ಮಾರು ಹೋಗಿಲ್ಲ. ಅತಿಯಾಗಿ ದುಡಿಯಬೇಕು ಎಂಬ ಆಸೆಗಾಗಿ ಸಿಕ್ಕ ಸಿಕ್ಕ ಬೆಳೆಗಳನ್ನೂ ಬೆಳೆದಿಲ್ಲ. ಇರುವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಂಡು, ಸಕಾಲಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು, ಮಿಶ್ರ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಚುಂಚ ನಕಟ್ಟೆ ಹೋಬಳಿಯ ಶ್ರೀರಾಂಪುರ ಗ್ರಾಮದ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್. ತಮ್ಮ ೭೩ರ ಇಳಿ ವಯಸ್ಸಿನಲ್ಲಿಯೂ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡು, ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಬೇಸಾಯನ್ನು ಮಾಡುತ್ತಿದ್ದಾರೆ.

ಮಾರುಕಟ್ಟೆ ಆಧಾರಿತ ಬೆಳೆಗಳು: ಎರಡು ಎಕರೆ ಜಮೀನಿನಲ್ಲಿ ಅಡಕೆ, ತೆಂಗು, ಮೆಣಸು, ಏಲಕ್ಕಿ, ಕಾಫಿ, ಚಕ್ಕೋತ, ಬಾಳೆ, ಅಪ್ರಧಾನ ಹಣ್ಣುಗಳಾದ ರಾಮಫಲ, ಸೀತಾಫಲ, ಲಕ್ಷ ಣ ಫಲ, ಹನುಮ ಫಲ, ಬಟರ್ ಫ್ರೂಟ್, ವಾಟರ್ ಆಪಲ್, ಆಸ್ಟ್ರೇಲಿಯಾ ಅಂಜೂರ, ಖರ್ಜುರ, ಸೇಬು, ದಾಳಿಂಬೆ, ವರ್ಷಪೂರ್ತಿ ಬಿಡುವ ಮಾವಿನ ಹಣ್ಣು, ಇಂಗು, ಮೋಸಂಬಿ, ಕಿತ್ತಳೆ, ಡ್ರ್ಯಾಗನ್, ಮೈಸೂರು ವೀಳ್ಯದೆಲೆ, ದ್ರಾಕ್ಷಿ, ಆಲ್ ಸ್ಪೆ ಸಿ, ನಿಂಬೆ, ಹೇರಳೆಕಾಯಿ, ಹನ್ನೆರಡು ತಳಿಯ ಬಾಳೆಹಣ್ಣು ಬೆಳೆದರೆ, ಇನ್ನು ಪಕ್ಷಿಗಳಿಗಾಗಿ ಸೀಬೆ ಬೆಳೆದಿದ್ದು ತೋಟದಲ್ಲಿ ಪಕ್ಷಿಗಳ ಕಲರವ ಇಂಪಾಗಿ ತುಂಬಿದಂತಿದೆ.

ಜಮೀನಿನ ಬದುವಿನಲ್ಲಿ ವಿವಿಧ ಮಾದರಿಯ ಹೂಗಿಡಗಳು, ತಹರೇವಾರಿ ಪಪ್ಪಾಯಿ ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಇದರಲ್ಲಿ ಹಲಸಿನ ಮರಗಳು ವರ್ಷಕ್ಕೆ ಎರಡು ಬಾರಿ ಹಲಸಿನ ಕಾಯಿ ಬಿಡುತ್ತವೆ. ತರಕಾರಿ, ಹಣ್ಣುಗಳು ಮಾರಾಟಕ್ಕೆ ಸ್ಥಳೀಯವಾಗಿಯೇ ಮಾರುಕಟ್ಟೆ ಹುಡುಕಿಕೊಂಡಿದ್ದಾರೆ. ದ್ವಿದಳ ಧಾನ್ಯ, ತರಕಾರಿ ಜತೆಗೆ, ಔಷಧಿಯ ಗಿಡ, ಸಂಬಾರ ಪದಾರ್ಥಗಳು ಸಂಗಾತಿ ಬೆಳೆಗಳಾಗಿ ಬೆಳೆದಿದ್ದಾರೆ.

ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧ ಬಳಸದೇ ಜೀವಾಮೃತ ತಯಾರಿಸಿಕೊಂಡು ಬಳಸುತ್ತಾರೆ. ಸಾವಯವ ಮಾದರಿಯಲ್ಲಿ ಇಪ್ಪತ್ತು ತರಹದ ಕಷಾಯದ ಜೊತೆಗೆ ಗೋಮೂತ್ರ ಬೆರೆಸಿ ಯಾವುದೇ ರೋಗ ಹರಡದಂತೆ ಬೆಳೆಗಳಿಗೆ ಸಿಂಪಡಿಸಲಾಗುತ್ತದೆ, ಗೊಬ್ಬರಕ್ಕಾಗಿ ತೋಟದಲ್ಲಿ ಉದುರಿದ ಹಲಸಿನ ಎಲೆಗಳು, ತೆಂಗಿನ ಮರದ ಗರಿಗಳು ಸೇರಿದಂತೆ ಅನೇಕ ರೀತಿಯ ಕಸಕಡ್ಡಿಗಳನ್ನು ಮರದ ಸುತ್ತ ಹಾಕಿ ಅದರ ಮೇಲೆ ಮಣ್ಣ ಮುಚ್ಚಿದ್ದಾರೆ, ಈ ರೀತಿಯಲ್ಲಿ ಮಾಡಿದರೆ ಭೂಮಿಯು ಫಲವತ್ತಾಗುತ್ತದೆ ಜೊತೆಗೆ ಉತ್ತಮ ಗೊಬ್ಬರ ತಯಾರುತ್ತದೆ ಎಂಬುದು ಅವರ ಉತ್ತರ.

ಕಷಾಯಕ್ಕೆ ಬೇವಿನಸೊಪ್ಪು, ಎಕ್ಕದ ಸೊಪ್ಪು, ಖಾಕಿಸೊಪ್ಪು, ಹೊಂಗೆ, ಲೆಕ್ಕ, ಬೇಲಿ ಮೇಲಿನ ಸೊಪ್ಪು, ಹಂಬುಗಳು ಸೇರಿದಂತೆ ಅನೇಕ ತರಹದ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಂದಾಜು ೫೦ ಕೆ.ಜಿ. ಬ್ಯಾಗ್ ೪೦ರಿಂದ ೫೦ ಮೂಟೆ ಕಾಫಿ ಬೀಜ ಸಿಗುತ್ತದೆ. ನಾಲ್ಕು ಕ್ವಿಂಟಾಲ್ ಮೆಣಸು, ನೂರು ಕ್ವಿಂಟಾಲ್ ಅಡಕೆ, ತೆಂಗಿನ ಫಸಲಿನಿಂದ ಎರಡು ಲಕ್ಷ ರೂ. ಆದಾಯ ಸೇರಿದಂತೆ ವಾರ್ಷಿಕ ೧೨ ಲಕ್ಷ ರೂ.ಗಳಷ್ಟು ಆದಾಯ ಬಂದರೆ ಅದರಲ್ಲಿ ನಾಲ್ಕು ಲಕ್ಷ ರೂ. ಕೂಲಿ ಕಾರ್ಮಿಕರಿಗಾಗಿ ಬಟವಾಡೆ ಮಾಡುತ್ತಾರೆ.

ಆ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾರೆ ನಿವೃತ್ತ ಶಿಕ್ಷಕ ಶ್ರೀರಾಂಪುರ ಶ್ರೀನಿವಾಸ್.

” ಇದುವರೆಗೂ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧವನ್ನು ಬಳಸಿಲ್ಲ, ಜೀವಾಮೃತ ತಯಾರಿಸಿ, ಸಾವಯವ ಪದ್ಧತಿಯನ್ನು ಅನುಸರಿಸಿ ಸಮಗ್ರ ಕೃಷಿಯನ್ನು ಮಾಡುತ್ತಿದ್ದೇನೆ. ನಮ್ಮ ತೋಟದಲ್ಲಿ ಏನೆಲ್ಲ ಬೆಳೆಯಲಾಗಿದೆ ಎಂಬುದನ್ನು ತಿಳಿಯಲು ನಿತ್ಯ ರೈತರು, ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಬಂದು ವೀಕ್ಷಿಸಿದ್ದಾರೆ. ದುಡಿಯುವ ಕೈಗೆ ಕೆಲಸ ಬೇಕಿದೆ. ಇಂದಿನ ಯುವ ಪೀಳಿಗೆ ಉದ್ಯೋಗ ಅರಸಿ ನಗರಕ್ಕೆ ಮುಖ ಮಾಡುವ ಬದಲು ಇರುವ ತಮ್ಮ ಜಮೀನಿನಲ್ಲಿಯೇ ಸಮಗ್ರ ಕೃಷಿ ಬೇಸಾಯ ಮಾಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು.”

-ಶ್ರೀನಿವಾಸ್,

ಪ್ರಗತಿಪರ ರೈತರು ಹಾಗೂ ನಿವೃತ್ತ ಶಿಕ್ಷಕರು

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಓವೆಲ್ ಮೈದಾನದಲ್ಲಿ ಆಸನಗಳನ್ನು ದುರಸ್ತಿ ಮಾಡಿ

ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…

58 mins ago

ಓದುಗರ ಪತ್ರ: ಒಳಮೀಸಲಾತಿ; ಸಮಾನ ಅವಕಾಶ ಕಲ್ಪಿಸಿ

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…

59 mins ago

ಓದುಗರ ಪತ್ರ: ನ್ಯಾಯಾಲಯದ ಬಳಿ ಸಿಗ್ನಲ್ ಲೈಟ್ ಅಳವಡಿಸಿ

ಮೈಸೂರಿನ ವಿವಿಧ ವೃತ್ತಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದಾರೆ. ಆದರೆ ಚಾಮರಾಜಪುರಂನ ನ್ಯಾಯಾಲಯದ ಬಳಿ ವಾಹನ ಸಂಚಾರ ಹೆಚ್ಚಾಗಿದ್ದು, ನ್ಯಾಯಾಲಯದ…

1 hour ago

ಓದುಗರ ಪತ್ರ: ನಂದಿ ಭವನ ಮುಂಭಾಗದ ಮೋರಿ ಶುಚಿಗೊಳಿಸಿ

ಚಾಮರಾಜನಗರ ಪಟ್ಟಣದಲ್ಲಿರುವ ನಂದಿ ಭವನದಲ್ಲಿ ಮದುವೆ ಮತ್ತು ಇತರ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮಗಳು ಮುಗಿದ ಮೇಲೆ ಉಳಿದ ಆಹಾರ ಪದಾರ್ಥಗಳನ್ನು…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ವಾಟ್ಸಾಪ್ ಹೇಳಿಕೆ, ಡೀಪ್ ಫೇಕ್ ಹಾವಳಿ, ಪಾಪರಾಜಿಗಳ ನಿಯಂತ್ರಣದತ್ತ

ನಕಲಿ ವಿಡಿಯೋಗಳ ಹಾವಳಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ತಡೆಯುವ…

1 hour ago

ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಚಿರತೆ ಹಾವಳಿ

ಮಹಾದೇಶ್ ಎಂ.ಗೌಡ ನಿರಂತರವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಭೀತಿ ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ…

1 hour ago