ಅನ್ನದಾತರ ಅಂಗಳ

ರಾಮೇನಹಳ್ಳಿ ಮಹೇಶ್‌ ಮೀನು ಸಾಕಿದ ಕಥೆ

ಅನಿಲ್ ಅಂತರಸಂತೆ

ಕೃಷಿ, ಹೈನುಗಾರಿಕೆ, ಮೀನು ಸಾಕಾಣಿಕೆಗಳಿಂದ ನಷ್ಟವೇ ಹೆಚ್ಚು, ಇವುಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಯುವ ಸಮುದಾಯ ನಗರ ಭಾಗಗಳಲ್ಲಿ ಉದ್ಯೋಗವನ್ನು ಅರಸುತ್ತಾ ತಮ್ಮ ಕೃಷಿ ಭೂಮಿ, ಸ್ವಂತ ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವ ಕೃಷಿಕ ಹಳ್ಳಿಯಲ್ಲೇ ಹೈನುಗಾರಿಕೆ, ಮೀನುಗಾರಿಕೆಯಲ್ಲಿಯೂ ಲಾಭ ಗಳಿಸಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರೇ ಎಚ್. ಡಿ. ಕೋಟೆ ತಾಲ್ಲೂಕಿನ ರಾಮೇನಹಳ್ಳಿಯ ವಿದ್ಯಾವಂತ ಯುವ ರೈತ ವಿ. ಮಹೇಶ್.

ಎಚ್. ಡಿ. ಕೋಟೆ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ವೀರಭದ್ರ ಮತ್ತು ಪಾರ್ವತಮ್ಮ ದಂಪತಿಯ ಎರಡನೇ ಪುತ್ರನಾಗಿ ಜನಿಸಿದ ಮಹೇಶ್, ಬಿಇ ಪದವಿ ವ್ಯಾಸಂಗದ ವೇಳೆ ತಮ್ಮ ತಂದೆ ಮರಣ ಹೊಂದಿದ್ದರಿಂದ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಮುಖ ಮಾಡಿದರು. ವಿದ್ಯಾಭ್ಯಾಸ ಮುಗಿದ ಮೇಲೂ ಸ್ವಯಂ ಉದ್ಯೋಗವನ್ನು ಮಾಡಬೇಕು, ಅದರಲ್ಲಿಯೂ ಕೃಷಿಯನ್ನೇ ಮಾಡಬೇಕು ಅಂದುಕೊಂಡಿದ್ದ ಮಹೇಶ್, ತಮ್ಮ ತಂದೆಯ ಸಾವಿನ ನಂತರ ಕೃಷಿ ಕಾರ್ಯ ಕೈಗೊಂಡರು.

೨೦೦೬ರಲ್ಲಿ ಕೃಷಿ ಬದುಕು ಆರಂಭಿಸಿದ ಮಹೇಶ್, ರೇಷ್ಮೆ, ಅಡಕೆ, ತೆಂಗು ಜತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದು, ಉತ್ತಮ ಲಾಭ ಗಳಿಸುತ್ತಿದ್ದಾರೆ. ತಮಗೆ ಬಂದ ೯ ಎಕರೆ ಕೃಷಿ ಭೂಮಿಯ ಪೈಕಿ ೬ ಎಕರೆ ವಸ್ತಿ ನೆಲವಾದ್ದರಿಂದ ನೀರು ಜಿನುಗಿ ಕೃಷಿ ಮಾಡಲು ಕಷ್ಟವಾಗುತ್ತಿತ್ತು. ಆರಂಭದ ದಿನಗಳಲ್ಲಿ ನಷ್ಟವೇ ಹೆಚ್ಚಾಗಿತ್ತು. ಈ ವಸ್ತಿ ನೆಲದಲ್ಲಿ ಏನು ಮಾಡಬೇಕು ಎಂದುಕೊಳ್ಳುತ್ತಿರುವಾಗಲೇ ಅಲ್ಲಿ ಮೀನು ಸಾಕಾಣಿಕೆ ಸೂಕ್ತ ಎಂದು ೨೦೧೪-೧೫ರಲ್ಲಿ ಕಬಿನಿ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ತರಬೇತಿ ಪಡೆದು ‘ಹೊನ್ನೇರು ಮೀನುಮರಿ ಪಾಲನಾ ಕೇಂದ್ರ’ವನ್ನು ತಮ್ಮ ಜಮೀನಿನಲ್ಲಿ ಆರಂಭಿಸಿದರು. ಆರಂಭದಲ್ಲಿ ೧೦ ಗುಂಟೆಯಲ್ಲಿ ಸಣ್ಣ ಕೆರೆಯೊಂದನ್ನು ನಿರ್ಮಿಸಿ ಆರಂಭಿಸಿದ ಮೀನು ಪಾಲನಾ ಕೇಂದ್ರವನ್ನು ಈಗ ೬ ಎಕರೆಗೆ ವಿಸ್ತರಿಸಿಕೊಂಡಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದರೂ ಕಳೆದ ೨-೩ ವರ್ಷಗಳಿಂದ ಮೀನುಗಾರಿಕೆಯಲ್ಲಿ ಲಾಭ ಕಂಡುಕೊಂಡಿದ್ದಾರೆ. ‘೧ ಎಕರೆಯಲ್ಲಿ ೪ ಟನ್ ಮೀನು ಉತ್ಪಾದನೆಯಾಗುತ್ತಿದ್ದು, ಹಂತ ಹಂತವಾಗಿ ಪ್ರಗತಿ ಸಾಽಸುತ್ತಿದ್ದೇನೆ. ಸದ್ಯಕ್ಕೆ ಮೀನು ಸಾಕಾಣಿಕೆಯಿಂದ ೮ ಲಕ್ಷ ರೂ. ಗಳಷ್ಟು ವಾರ್ಷಿಕ ಆದಾಯ ಗಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ೧೨ ಲಕ್ಷ ರೂ. ಗಳಿಸಬೇಕು ಎಂಬ ಗುರಿ ಹೊಂದಿದ್ದೇನೆ’ ಎಂಬುದು ಮಹೇಶ್ ರವರ ಅಭಿಪ್ರಾಯ.

ಒಂದೆರಡು ವರ್ಷ ಮಳೆ ಹಾಗೂ ಮಳೆಯ ನೀರು ಹರಿದು ಬರುವ ಪ್ರಮಾಣವನ್ನು ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಕೆರೆಗಳನ್ನು ನಿರ್ಮಿಸಿ ಮೀನು ಸಾಕಾಣಿಕೆಯನ್ನು ಆರಂಭಿಸಿದ್ದು, ಇವರ ಕೇಂದ್ರದಲ್ಲಿ ಕಾಟ್ಲಾ, ರುಕು, ಕಾಮನ್ ಕ್ರಾಪ್, ಗ್ರಾಸ್ ಕ್ರಾಪ್ ಮೀನಿನ ತಳಿಗಳು ಸಿಗಲಿವೆ.

ಸಂಪೂರ್ಣ ಸಾವಯವ ಕೃಷಿ ಮಾಡುತ್ತಿರುವ ಮಹೇಶ್, ಮೀನು ಸಾಕಾಣಿಕೆಯ ಜತೆಗೆ ರೇಷ್ಮೆ ಉತ್ಪಾದನೆ ಹಾಗೂ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಆ ಮೂಲಕ ಸಮಗ್ರ ಕೃಷಿಯಲ್ಲಿ ಲಾಭ ಕಂಡಿದ್ದಾರೆ. ಸದ್ಯ ಕಳೆದ ೮ ವರ್ಷಗಳಿಂದ ಇತರ ಕೃಷಿಕರಿಗೆ ಮೀನು ಸಾಕಾಣಿಕೆಯ ತರಬೇತಿ ನೀಡುತ್ತಿದ್ದು, ವಿವೇಕಾನಂದ ಕೃಷಿ ಕೇಂದ್ರ ಸೇರಿದಂತೆ ವಿವಿಧ ಕೃಷಿ ಕೇಂದ್ರಗಳೂ ಇವರ ಕೃಷಿ ಭೂಮಿಯಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿವೆ.

ಸದ್ಯ ಜಿಲ್ಲೆಯಲ್ಲಿ ಇಷ್ಟು ವಿಸ್ತೀರ್ಣದಲ್ಲಿ ಹೆಚ್ಚು ಕಾಲ ಮೀನು ಸಾಕಾಣಿಕೆ ಮಾಡಿ, ಲಾಭ ಕಂಡುಕೊಳ್ಳುತ್ತಿರುವ ಕೆಲವೇ ಕೆಲವು ಕೃಷಿಕರಲ್ಲಿ ಮಹೇಶ್‌ರವರೂ ಒಬ್ಬರು. ಇವರ ಈ ಸಾಧನೆಗೆ ಎರಡು ಬಾರಿ ದಸರಾ ಮಹೋತ್ಸವವದಲ್ಲಿ ‘ಪ್ರಗತಿಪರ ಮೀನು ಕೃಷಿಕ’, ವಿವೇಕಾನಂದ ಸಂಸ್ಥೆಯಿಂದ ‘ಯುವ ಉತ್ಸಾಹಿ ಸಾವಯವ ಕೃಷಿಕ’ ಪ್ರಶಸ್ತಿ ಸೇರಿದಂತೆ ಅನೇಕ ಸಂಘಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ.

ಭೂಮಿ ಎಂಬುದು ಒಂದು ಯುದ್ಧ ಭೂಮಿ ಇದ್ದಂತೆ. ಇದರಲ್ಲಿ ಹೆಚ್ಚು ಕಾಲ ಉಳಿಯಲು ಹಣ ಇದ್ದರೆ ಸಾಲದು, ಸ್ಥಳೀಯ ಜ್ಞಾನದ ಜತೆಗೆ ತಲೆಮಾರಿನ ಕೃಷಿ ಜ್ಞಾನವೂ ಅಗತ್ಯ. ನಮ್ಮ ಪರಂಪರೆಯ ಕೃಷಿಯನ್ನು ನಮ್ಮ ಪೀಳಿಗೆಯವರು ಸ್ಪಲ್ಪ ಆಧುನಿಕತೆ ಅಳವಡಿಸಿಕೊಂಡು ಮುಂದುವರಿಸಬೇಕು. ಸಮಗ್ರ ಕೃಷಿ ಮಾಡಿದರೆ ಯಾವುದಾದರೂ ಒಂದು ರೈತರ ಕೈ ಹಿಡಿಯುತ್ತದೆ. ಕೃಷಿಯಲ್ಲಿ ಆದಾಯವೂ ಇದೆ, ಅಪಾಯವೂ ಇದೆ. ಅದರ ಬಗ್ಗೆ ಜ್ಞಾನವಿರಬೇಕು. -ವಿ. ಮಹೇಶ್, ಯುವ ಕೃಷಿಕ, ರಾಮೇನಹಳ್ಳಿ.

anil64936@gmail.com

 

ಆಂದೋಲನ ಡೆಸ್ಕ್

Recent Posts

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

56 mins ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

3 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

4 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

5 hours ago

ಸಿಎಂ ಡಿಕೆಶಿ ಹಾಗೂ ಸಚಿವ ಲಕ್ಷ್ಮಣ್ ಸವದಿ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಸಹಕಾರ ಮಹಾಮಂಡಲದ ಅಧ್ಯಕ್ಷ ಸ್ಥಾನಕ್ಕೆ ಜಿ.ಟಿ. ದೇವೇಗೌಡ ಆಯ್ಕೆಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

5 hours ago

ಓದುಗರ ಪತ್ರ: ನೀತಿ ಪಾಠಗಳು ಶಿಕ್ಷಣ ಭಾಗವಾಗಬೇಕೆಂಬ ಸಲಹೆ ಸ್ವಾಗತಾರ್ಹ

ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…

11 hours ago