ಅನ್ನದಾತರ ಅಂಗಳ

ಕೃಷಿ ಪ್ರವಾಸೋದ್ಯಮದ ಹಲವು ಆಯಾಮಗಳು

ಡಿ.ಎನ್.ಹರ್ಷ 

ಆಹಾರಕ್ಕಾಗಿ ಅಲೆದಾಡುತ್ತಿದ್ದ ಮಾನವ ಈಗ ಹೊಸ ಪ್ರದೇಶಗಳ ಅನ್ವೇಷಣೆಯಲ್ಲಿ ತೊಡಗಿದ್ದಾನೆ. ಈ ಅಲೆದಾಟವೇ ಇಂದು ಪ್ರವಾಸ ಎಂದು ಕರೆಸಿಕೊಳ್ಳುತ್ತಿದೆ. ಇಂತಹ ಪ್ರವಾಸೋದ್ಯಮ ಈಗ ಆದಾಯ ತಂದುಕೊಡುವ ಒಂದು ಉದ್ಯಮವಾಗಿಯೂ ಬದಲಾಗಿದೆ. ಇಂತಹ ಪ್ರವಾಸೋದ್ಯಮವನ್ನು ಕೃಷಿಗೂ ಪರಿಚಯಿಸಿದರೆ ಹೇಗೆ? ಹವಾಮಾನ ವೈಪರೀತ್ಯ, ಮಧ್ಯವರ್ತಿಗಳ ಹಾವಳಿಯಿಂದಾಗಿ ಸಾಕಷ್ಟು ರೈತರು ನಷ್ಟ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ‘ಕೃಷಿ ಪ್ರವಾಸೋದ್ಯಮ‘ ರೈತರಿಗೆ ಪರ್ಯಾಯ ಆದಾಯದ ಮೂಲವಾಗುವ ಎಲ್ಲ ಲಕ್ಷಣಗಳಿವೆ.

ಆಗ್ರೋ ಟೂರಿಸಂ ಎನ್ನುವ ದೇಶಿ ಪದ್ದತಿಯ ಪ್ರವಾಸಕ್ಕೆ ಜನರು ಈಗ ಆಕರ್ಷಿತರಾಗುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಕೃಷಿ ಭೂಮಿಗಳ ಪ್ರವಾಸ ಮಾಡುತ್ತಾ ಹಿಂದಿನ ತಲೆಮಾರುಗಳ ಕೃಷಿ ಬದುಕಿನಿಂದ ಇಂದಿನ ಕೃಷಿ ಪದ್ಧತಿಯವರೆಗೂ ಕಲಿಯಬಹುದಾಗಿದ್ದು, ಮನುಷ್ಯನ ಮೊದಲ ಕಸುಬು ಕೃಷಿ ಎನ್ನುವ ತತ್ವವನ್ನು ಎಲ್ಲರಲ್ಲಿಯೂ ಮೂಡಿಸಲು ಕೃಷಿ ಪ್ರವಾಸೋದ್ಯಮ ಸಹಾಯಕವಾಗಿದೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿರುವ ಎನ್.ಕೇಶವಮೂರ್ತಿಯವರು ದಶಕಗಳ ಹಿಂದೆಯೇ ‘ಕೃಷಿ ಪ್ರವಾಸ’ ಎನ್ನುವ ಕಲ್ಪನೆಯನ್ನು ಹುಟ್ಟು ಹಾಕಿದ್ದರು. ಅದಕ್ಕಾಗಿಯೇ ಕಾರ್ಯಕ್ರಮ ವೊಂದನ್ನೂ ರೂಪಿಸಿ ಹೊಸ ಆಯಾಮ ನೀಡಿದರು. ಇಂದು ಆ ಕೃಷಿ ಪ್ರವಾಸೋದ್ಯಮ ಮತ್ತಷ್ಟು ಬೆಳೆದಿದೆ. ಜನರು ಪ್ರವಾಸ ಕೈಗೊಳ್ಳುವುದನ್ನು ರೂಢಿಸಿಕೊಳ್ಳುತ್ತಿದ್ದಂತೆಯೇ ಸರ್ಕಾರವೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಯಿತು. ಇದರಿಂದ ಪ್ರವಾಸೋದ್ಯಮ ಇಲಾಖೆಯೂ ಅಭಿವೃದ್ಧಿ ಹೊಂದಿತು. ಈಗ ಇಲಾಖೆಯ ಕೃಷಿ ಪ್ರವಾಸೋದ್ಯಮವನ್ನು ಪರಿಚಯಿಸಲು ಮುಂದಾಗಿದೆ.

ಹೋಂ-ಸ್ಟೇಗಳು ಈ ಕೃಷಿ ಪ್ರವಾಸೋದ್ಯಮದ ಒಂದು ಭಾಗ. ಕೃಷಿ ಪ್ರವಾಸೋದ್ಯಮದಲ್ಲಿ ರೈತ, ಆತನ ಕುಟುಂಬ ಹಾಗೂ ಆತನ ಕೃಷಿ ಜಮೀನು ಪ್ರಧಾನವಾಗಿರುತ್ತದೆ. ರೈತನ ಕುಟುಂಬ ಜಮೀನಿನಲ್ಲಿಯೇ ವಾಸವಿರಬೇಕು. ಬಂದಂತಹ ಅತಿಥಿಗಳಿಗೆ ರೈತನ ಮನೆಯಲ್ಲಿಯೇ ಆಹಾರ ತಯಾರಾಗಬೇಕು. ಅದೂ ಸ್ಥಳೀಯ ಸೊಗಡಿನ ಆಹಾರವೇ ಆಗಿರಬೇಕು. ಬಂದಂತಹ ಅತಿಥಿಗಳು ಉಳಿಯಲು, ಉತ್ತಮ ಸೌಲಭ್ಯ ಇರುವ ಕೊಠಡಿಗಳನ್ನು ನಿರ್ಮಿಸಬೇಕು. ಜಮೀನಿನಲ್ಲಿ ಸಮಗ್ರ ಕೃಷಿ ಇರಬೇಕು. ಬಂದಂತಹ ಅತಿಥಿಗಳು ಹಾಲು ಕರೆಯುವುದು, ಕೊಟ್ಟಿಗೆ ನಿರ್ವಹಣೆ, ಜಮೀನಿನ ಕಟ್ಟೆಯಲ್ಲಿ ರಾಸುಗಳ ಮೈ ತೊಳೆಯುವುದು, ಮರ ಹತ್ತುವುದು, ತೆಂಗಿನಕಾಯಿ ಕೆಡಹುವುದು, ಬೆಳೆಗೆಗೊಬ್ಬರ ಹಾಕುವುದು, ಸಸಿ ನಾಟಿ, ಔಷಧ ಸಿಂಪಡಣೆ ಹೀಗೆ ಹತ್ತು ಹಲವು ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳು ವಂತಿರಬೇಕು. ಇದರೊಂದಿಗೆ ಸಮೀಪದ ಪ್ರವಾಸಿ ತಾಣಗಳಿಗೆ ಅತಿಥಿಗಳನ್ನು ಕರೆದುಕೊಂಡು ಹೋಗಬಹುದು. ಹತ್ತಿರದ ಜಾಗಗಳಿಗೆ ಎತ್ತಿನ ಗಾಡಿಯಲ್ಲಿ ಸಂಚಾರ ಮಾಡಿಸಬಹುದು. ಗ್ರಾಮೀಣ ಆಟಗಳಾದ ಚಿನ್ನಿ ದಾಂಡು, ಲಗೋರಿ, ಕೊಕ್ಕೆ ಕೋಲು, ಉಯ್ಯಾಲೆ, ಮರಕೋತಿ ಆಟ ಆಡಿಸಬಹುದು. ಹೆಣ್ಣುಮಕ್ಕಳಿಗೆ ಚೌಕಾಬಾರ, ಚೆನ್ನೆಮಣೆ, ಹುಲಿಕಲ್ಲು, ಕುಂಟೇಬಿಲ್ಲೆ ಆಡಿಸಬಹುದು. ಸ್ಥಳೀಯ ಆಹಾರದ ಜತೆ ಸ್ಥಳೀಯ ಕಲೆಗಳನ್ನೂ ಪೋಷಿಸುವುದು ಕೃಷಿ ಪ್ರವಾಸೋದ್ಯಮದ ಮೂಲ ಉದ್ದೇಶವಾಗಿರಬೇಕು. ಇದರೊಟ್ಟಿಗೆ ಜನಪದ ಕಲೆಯ ಪ್ರದರ್ಶನಕ್ಕೂ ವೇದಿಕೆ ಇರಬೇಕು. ಸೋಬಾನೆ, ಜನಪದ ನೃತ್ಯ, ಕೋಲಾಟ ಹೀಗೆ ಸ್ಥಳೀಯ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಆ ಮೂಲಕ ಅತಿಥಿಗಳಿಗೆ ರೈತಾಪಿ ಜೀವನವನ್ನು ಅರ್ಥ ಮಾಡಿಸಬೇಕು.

ಕೃಷಿ ಪ್ರವಾಸೋದ್ಯಮದಿಂದ ರೈತನ ಸಂಪೂರ್ಣ ಕುಟುಂಬ ಜಮೀನಿನಲ್ಲಿಯೇ ನೆಲೆಸುವಂತಾಗುತ್ತದೆ. ಹಸು, ಕುರಿ, ಕೋಳಿ, ಗಿಡ ಮರಗಳಿಂದ ಜೀವ ಹಾಗೂ ಸಸ್ಯ ವೈವಿಧ್ಯ ಸೃಷ್ಟಿಯಾಗುತ್ತದೆ. ರೈತನ ಆದಾಯವೂ ಹೆಚ್ಚಾಗಲಿದ್ದು, ರೈತಾಪಿ ಕುಟುಂಬದ ಯುವಕರಿಂದ ಹಿಡಿದು ವೃದ್ಧರವರೆಗೂ ಕೆಲಸ ಸಿಗಲಿದೆ. ಇದರೊಂದಿಗೆ ಬರುವ ಪ್ರವಾಸಿಗಳಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ್ನು ನೇರವಾಗಿ ಮಾರಾಟ ಮಾಡಬಹುದು. ಇದರಿಂದ ಮಾರುಕಟ್ಟೆಯು ಸೃಷ್ಟಿಯಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಪ್ರತಿ ಕೃಷಿ ಕುಟುಂಬವೂ ಕೃಷಿ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡರೆ ಕೃಷಿ ಬದುಕು ಹೊಸ ಆಯಾಮದತ್ತ ಹೊರಳಲಿದೆ

ಆಂದೋಲನ ಡೆಸ್ಕ್

Recent Posts

ಪುರಾವೆ ಇಲ್ಲದೇ ಯಾರ ಮೇಲೂ ತನಿಖೆ ಮಾಡಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…

21 mins ago

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳ ಪರದಾಟ

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…

35 mins ago

ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…

47 mins ago

ಸರ್ಕಾರದ ವೈಫಲ್ಯದ ವಿರುದ್ಧ ಕೈ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದ್ರೂ ಅಚ್ಚರಿಯಿಲ್ಲ: ವಿಜಯೇಂದ್ರ

ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…

1 hour ago

ಹುಣಸೂರು| ಗುರುಪುರದ ಬಳಿ ಒಂದು ವರ್ಷದ ಹುಲಿ ಮರಿ ಸೆರೆ

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…

1 hour ago

ಇಡಿಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್‌ ನೀಡಿದೆ. ಆ ಮೂಲಕ ನಮಗೆ…

3 hours ago