ರಮೇಶ್.ಪಿ ರಂಗಸಮುದ್ರ

ಮುಂಗಾರು ಎಂದರೆ ಅದು ಸಕಲ ಜೀವರಾಶಿಗಳಿಗೂ ಮರು ಹುಟ್ಟಿನ ಕಾಲ. ರೈತರು ಭೂಮಿಯನ್ನು ಉತ್ತಿ ಬಿತ್ತುವುದು ತನಗಾಗಿ ಮಾತ್ರವಲ್ಲ ಭೂಮಿಯ ಮೇಲಿನ ಸಕಲ ಜೀವರಾಶಿಗಳ ಬದುಕಿಗಾಗಿ, ಆದರೆ ಪ್ರಸ್ತುತ ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಮನುಕುಲದ ಆರೋಗ್ಯ ತೀವ್ರವಾಗಿ ಕುಸಿತಕ್ಕೆ ಒಳಗಾಗಿದೆ.

ಆಹಾರವೇ ಔಷಧವಾಗಿದ್ದ ಜಾಗದಲ್ಲಿ ಈಗ ಔಷಧವೇ ಆಹಾರವಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಇಂತಹ ಸಂದರ್ಭದಲ್ಲಿ ಕಿರುಧಾನ್ಯಗಳು ರೋಗಮುಕ್ತ ಸಮಾಜಕ್ಕೆ ಅವಶ್ಯವಾದ ಆಹಾರವಾಗಿದೆ. ಹತ್ತು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿರುವ ಈ ಕಿರುಧಾನ್ಯಗಳನ್ನು ದೇಶದ ಉದ್ದಗಲಕ್ಕೂ ಬೆಳೆಯುತ್ತಿದ್ದರೂ ಭತ್ತ ಮತ್ತು ಗೋಧಿ ಪ್ರಭಾವದಿಂದಾಗಿ ಹಾಗೂ ಬದಲಾದ ಆಹಾರ ಪದ್ದತಿಗಳಿಂದ ರೈತರ ಹೊಲ ಮನೆಗಳಿಂದ ಈ ಸಿರಿಧಾನ್ಯಗಳು ದೂರ ಸರಿಯತೊಡಗಿದವು. ಮಧುಮೇಹ, ರಕ್ತದೊತ್ತಡ, ಹೃದಯ ರೋಗ, ಕೊಲೆಸ್ಟ್ರಾಲ್, ಕ್ಯಾನ್ಸರ್ ರೋಗಗಳು ಸಾರ್ವತ್ರಿಕವಾಗಿ ಜನರನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡಿದಾಗ ಜನರಿಗೆ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಅನುಭವಕ್ಕೆ ಬಂದಿತು. ಪೋಷಕಾಂಶಗಳ ಆಗರವಾಗಿರುವ ಕಿರುಧಾನ್ಯಗಳು ಅಪಾರ ರೋಗನಿರೋಧಕ ಗುಣಗಳಿಂದಾಗಿ ಸಿರಿಧಾನ್ಯಗಳೆಂದು ಕರೆಯಲ್ಪಟ್ಟಿವೆ. ಸಿರಿ ಧಾನ್ಯಗಳಲ್ಲಿ ನವಣೆ, ಸಾಮೆ, ಹಾರಕ ಬರಗೂ ಊದಲು, ಕೊರಲೆ ಮುಖ್ಯವಾದವು. ಜೋಳ, ಸಜ್ಜೆ, ರಾಗಿ ಕೂಡ ಸಿರಿಧಾನ್ಯಗಳ ಕುಟುಂಬಕ್ಕೆ ಸೇರಿದ ಪ್ರಸಿದ್ದ ಧಾನ್ಯಗಳಾಗಿವೆ.

ಸಿರಿಧಾನ್ಯಗಳ ಸರಳ ಬೇಸಾಯ ಕ್ರಮಗಳು: ನವಣೆ, ಸಾಮೆ, ಊದಲು, ಹಾರಕ, ಕೊರಲೆ ಮೊದಲಾದ ಸಿರಿಧಾನ್ಯಗಳನ್ನು ಪೂರ್ವ ಮುಂಗಾರು ಕಾಲದಿಂದ ಡಿಸೆಂಬರ್ ತಿಂಗಳವರೆಗೂ ಬೆಳೆಯಬಹುದಾಗಿದೆ. ಅತಿ ಕಡಿಮೆ ನೀರಿನಲ್ಲಿಯೂ, ಶುಷ್ಕ ಭೂಮಿಯಲ್ಲಿ ಬೆಳೆಯಬಹುದಾದ ಧಾನ್ಯಗಳಾಗಿವೆ.

ಒಂದು ಎಕರೆಗೆ 8 ರಿಂದ 12 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ಅಲ್ಲದೆ ಬಿತ್ತನೆಗೆ ಮುಂಚಿತವಾಗಿ ನಾಲ್ಕರಿಂದ ಐದು ಟನ್ ಗೊಬ್ಬರವನ್ನು ಒಂದು ಎಕರೆಗೆ ಮಣ್ಣಿನಲ್ಲಿ ಸೇರಿಸಬೇಕು. 3.5 ರಿಂದ 4ಸೆ. ಮೀ.ಗಿಂತ ಹೆಚ್ಚು ಆಳವಿಲ್ಲದಂತೆ ಬಿತ್ತಬೇಕು. ಪೈರಿನಿಂದ ಪೈರಿಗೆ 7.5 ರಿಂದ 10ಸೆ.ಮೀ. ಅಂತರವಿರಬೇಕು, 85ರಿಂದ 90 ದಿನಗಳ ಅವಧಿಗೆ ಕಟಾವಿಗೆ ಬರುವ ಸಿರಿಧಾನ್ಯಗಳು ಒಂದು ವಾರದ ಎಕರೆಗೆ 8ರಿಂದ 10 ಕ್ವಿಂಟಾಲ್ ಇಳುವರಿ ಕೃಷಿ ಅಂಕಣಯನ್ನು ಕೊಡುತ್ತವೆ. ಅಂತರ ಬೆಳೆಯಾಗಿ ಹುರುಳಿ ಮತ್ತು ಹಸಿರು ಕಾಳುಗಳನ್ನು ಬಿತ್ತಬಹುದು. ಸಿರಿಧಾನ್ಯಗಳ ಜೊತೆ ಅಂತರ ಬೆಳೆಯಾಗಿ ತೊಗರಿ, ಅವರೆ, ಹಸಿರು ಕಾಳು, ಹುಚ್ಚಳ್ಳು, ಶೇಂಗಗಳನ್ನೂ ಬೆಳೆದುಕೊಳ್ಳಬಹುದು.

ಸಿರಿಧಾನ್ಯಗಳು ಪಕ್ಷಿ ಸಂಕುಲಕ್ಕೆ ಬಲು ಇಷ್ಟವಾದ ಆಹಾರವಾದ್ದರಿಂದ ಒಂದು ಅಥವಾ ಎರಡು ಎಕರೆಯಲ್ಲಿ ಬೆಳೆದರೆ ಬೆಳೆ ಹಕ್ಕಿಗಳ ಪಾಲಾಗುತ್ತದೆ. ಆದ್ದರಿಂದ ಸಾಮೂಹಿಕವಾಗಿ ರೈತರು ಬೆಳೆಯಬೇಕು. ಸಿರಿಧಾನ್ಯಗಳ ಒಕ್ಕಣೆ ನಂತರದ ಹುಲ್ಲು ಹಸು, ಕುರಿ, ಮೇಕೆಗಳಿಗೆ ಪ್ರಿಯವಾದ ಮೇವಾಗುತ್ತದೆ.

ಸಿರಿಧಾನ್ಯ ಬೇಸಾಯದಿಂದಾಗುವ ಪ್ರಯೋಜನಗಳು
• ಕಡಿಮೆ ಖರ್ಚಿನಲ್ಲಿ, ಕಡಿಮೆ ಮಳೆ ಆಶ್ರತ ಪ್ರದೇಶಗಳಲ್ಲಿಯೂ ಬೆಳೆಯಬಹುದು.
• ಸರಳ ಬೇಸಾಯ ಕ್ರಮಗಳಿಂದ ವರ್ಷದಲ್ಲಿ 3 ಬೆಳೆಗಳನ್ನು ಪಡೆದುಕೊಳ್ಳಬಹುದು. ಮೇ-ಜುಲೈ ಒಂದು ಹಂಗಾಮು. ಆಗಸ್ಟ್ -ಅಕ್ಟೋಬರ್ ಒಂದು ಹಂಗಾಮು, ನವೆಂಬರ್
-ಜನವರಿ ಒಂದು ಹಂಗಾಮ
• ಪೂರ್ವ ಮುಂಗಾರಿನಿಂದ ಹಿಂಗಾರು ಹಾಗೂ ಇಬ್ಬನಿ ಅವಧಿಯಲ್ಲಿಯೂ ಬೆಳೆಯಬಹುದು.
• ಕಿರು ಧಾನ್ಯಗಳು ವಾತಾವರಣದಲ್ಲಿರುವ ಸಾರಜನಕ ಹಾಗೂ ತೇವಾಂಶವನ್ನು ಸ್ವೀಕರಿಸುವ ಕೆಲಸ ಮಾಡುತ್ತವೆ.
ಎಲ್ಲ ಜಾತಿಯ ಪಕ್ಷಿ ಸಂಕುಲಗಳನ್ನು ಆಕರ್ಷಿಸುವುದರಿಂದ ಮಣ್ಣಿನಲ್ಲಿ ಕೀಟ ಹುಳಭಾದೆಯನ್ನು ತಡೆಯುತ್ತವೆ.
• ಸಿರಿ ಧಾನ್ಯ ಕಟಾವಾದ ನಂತರ ಒಣ ಹುಲ್ಲನ್ನು ಮಣ್ಣಿಗೆ ಸೇರಿ ಸುವುದರಿಂದ ನೈಸರ್ಗಿಕ ಪೊಟ್ಯಾಷ್‌ ಮಣ್ಣಿಗೆ ದೊರೆಯುತ್ತದೆ. ಮಿಶ್ರ ಬೇಸಾಯ ಹಾಗೂ ಅಂತರ್ ಬೆಳೆಯಾಗಿ ಧಾನ್ಯದ ಜೊತೆ ದ್ವಿದಳ ಧಾನ್ಯಗಳು ಮತ್ತು ಉಚ್ಚಳ್ಳು ಶೇಂಗಾಗಳನ್ನೂ ಬೆಳೆಯಬಹುದು. ಹೆಚ್ಚು ನೀರನ್ನು ಕೇಳುವ ಭತ್ತ, ಗೋಧಿ ಉತ್ಪಾದನೆಯ ಒತ್ತಡವನ್ನು ನಿಯಂತ್ರಿಸಬಹುದು.

andolana

Recent Posts

ಗಣೇಶೋತ್ಸವದ ವೇಳೆ ಪ್ರಸಾದಕ್ಕೆ ಪರವಾನಗಿ ಕಡ್ಡಾಯ ಆದೇಶಕ್ಕೆ ಪ್ರಹ್ಲಾದ್‌ ಜೋಶಿ ಆಕ್ರೋಶ

ಹುಬ್ಬಳ್ಳಿ: ಗಣೇಶೋತ್ಸವ ಆಚರಣೆ ವೇಳೆ ಪೆಂಡಾಲ್‌ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಗಿ ಪಡೆಯಬೇಕು ಎಂಬ ರಾಜ್ಯ ಸರ್ಕಾರದ…

5 mins ago

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

20 mins ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

38 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

50 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago