ಎನ್. ಕೇಶವಮೂರ್ತಿ
ನಾನು ಖಾಸಗಿ ಹೈಬ್ರಿಡ್ ಬಿತ್ತನೆ ಬೀಜೋತ್ಪಾದನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ದಪ್ಪ ಮೆಣಸಿನಕಾಯಿ ಬೆಳೆಸುವಾಗ ನಲವತ್ತೈದು ದಿನಗಳ ಎಳೇ ಸಸಿಯ ಕುಡಿ ಚಿವುಟಿ ನಾಟಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಗಿಡ ಬೆಳೆದು ಮೊದಲು ಬಿಟ್ಟ ಎರಡು ಸಣ್ಣ ಹೀಚುಕಾಯನ್ನೂ ಚಿವುಟಿ ಹಾಕುತ್ತಿದ್ದರು. ಆಗೆಲ್ಲ ನನ್ನಲ್ಲಿ ಮೂಡಿದ್ದ ಪ್ರಶ್ನೆ ಹೀಚು ಕಾಯಿಯನ್ನು ಚಿವುಟದೆ ಬಿಟ್ಟಿದ್ದರೆ ದಪ್ಪ ಕಾಯಿಯಾಗುತ್ತಿತ್ತಲ್ಲ? ಎಂಬುದು. ಆಗ ಹಿರಿಯ ವಿಜ್ಞಾನಿಯೊಬ್ಬರು ನನಗೆ ಕುಡಿ ಚಿವುಟಿ ಗಿಡ ಬೆಳೆಸುವುದರ ಮಹತ್ವವನ್ನು ವಿವರಿಸಿದರು.

ಯಾವುದೇ ಗಿಡ ಮೊದಲು ತನ್ನ ಸಸ್ಯ ಬೆಳವಣಿಗೆ ಪೂರ್ಣವಾಗಿ ಮುಗಿಸಬೇಕು ಅಂದರೆ ಅದರ ಕಾಂಡ ದಪ್ಪವಾಗಬೇಕು, ರೆಂಬೆ ಕೊಂಬೆಗಳು ವಿಸ್ತಾರವಾಗಿಯೂ ಎತ್ತರವಾಗಿಯೂ ಹರಡಿಕೊಳ್ಳಬೇಕು. ಗಿಡಕ್ಕೆ ಫಸಲಿನ ಭಾರ ಹೊರುವ ತಾಕತ್ತು ಬರಬೇಕು. ಅಲ್ಲಿಯವರೆಗೆ ಬರಿಯ ಗಿಡ ಬೆಳೆಸಬೇಕೇ ಹೊರತು, ಹೂವು ಬಂದು ಹೀಚಾಗಲು ಬಿಡಬಾರದು. ಒಂದು ಸಾರಿ ಹೂವಿನ ಬೆಳವಣಿಗೆಗೆ ಅವಕಾಶ ನೀಡಿದರೆ, ಮುಂದೆ ಆ ಸಸ್ಯ ತನ್ನ ಸಂತಾನ ಅಭಿವೃದ್ಧಿ ಮಾಡುವ ಸಲುವಾಗಿ ಹೂ ಅರಳಿಸಿ, ಕಾಯಿಕಟ್ಟುವ ಕಾಯಕ ಆರಂಭಿಸುತ್ತದೆ. ಆಗ ಮತ್ತೆ ಆ ಗಿಡದ ಬೆಳವಣಿಗೆ ಆಗುವುದಿಲ್ಲ ಎಂದರು. ಇದನ್ನು ನೀವೂ ಗಮನಿಸಿರಬಹುದು. ಎಷ್ಟೋ ಬಾರಿ ಸಣ್ಣ ಗಿಡದಲ್ಲೇ ನೂರಾರು ಕಾಯಿ ತುಂಬಿ, ಗಿಡ ಬಾಗಿ, ರೆಂಬೆ ಬಿದ್ದು ಹೋಗಿರುತ್ತೆ. ಆದರೆ ಗಿಡ ಸದೃಢವಾಗಿ ಬೆಳೆದಿದ್ದೇ ಆದಲ್ಲಿ ಈ ಸಮಸ್ಯೆ ಬರುವುದಿಲ್ಲ. ಹಾಗಾಗಿ ಗಿಡದ ಕುಡಿ ಚಿವುಟುವುದು ಒಂದು ಉತ್ತಮ ಬೇಸಾಯ ವಿಧಾನ.

ತೊಗರಿ ಕಣಜ ಎಂದೇ ಹೆಸರಾಗಿರುವ ಕಲಬುರಗಿಗೆ ಹೋಗಿದ್ದಾಗ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೊಗರಿ ಬೆಳೆಗಾರರೊಬ್ಬರು ಅಭಿವೃದ್ಧಿಪಡಿಸಿರುವ ತೊಗರಿ ಕುಡಿ ಕತ್ತರಿಸುವ ಒಂದು ಸರಳ ಸಾಧನ ತೋರಿಸಿದರು. ತೊಗರಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕಾದರೆ ಅದರ ಬೆಳೆಯುವ ಕುಡಿಗಳನ್ನು ಕತ್ತರಿಸಬೇಕು. ಒಂದೆರಡು ಗಿಡ ಆದ್ರೆ ಕೈಲಿ ಚಿವುಟಬಹುದು. ಅದೇ ನೂರಾರು ಎಕರೆ ಆದರೆ ಏನು ಮಾಡುವುದು? ಆದರೆ ಈ ರೈತರು ಒಂದು ಉಪಾಯ ಕಂಡುಕೊಂಡಿದ್ದರು. ಈ ರೈತ ಒಂದು ಕೋಲಿನ ಮುಂಭಾಗಕ್ಕೆ ತಿರುಗುವ ದುಂಡನೆಯ ಕತ್ತರಿ ಜೋಡಿಸಿ, ಅದಕ್ಕೆ ಬ್ಯಾಟರಿ ಅಳವಡಿಸಿ ಗರ್ರನೆ ತಿರುಗುವಂತೆ ಮಾಡಿದ್ದರು. ಕೈಲಿ ಈ ಕೋಲು ಹಿಡಿದು, ಬಹಳ ಸುಲಭವಾಗಿ ಎಕರೆಗಟ್ಟಲೆ ತೊಗರಿ ಹೊಲದ ಕುಡಿ ಕತ್ತರಿಸಬಹುದಿತ್ತು. ಸರಿಯಾದ ಸಮಯದಲ್ಲಿ ಕುಡಿ ಕತ್ತರಿಸಿದ ತೋಗರಿ ಗಿಡಗಳಲ್ಲಿ ಫಸಲು ಜೊಂಪೆಜೊಂಪೆಯಾಗಿ ತೂಗುತ್ತಿತ್ತು.

ನುಗ್ಗೇನೂ ಮುರಿದು ಬೆಳೆಸು ಅಂತಾ ಹಳ್ಳಿ ನಾಣ್ಣುಡಿ ಇದೆ. ಸುಮ್ಮನೆ ಹಾಗೇ ಬೆಳೆಯಲು ಬಿಟ್ಟರೆ ನುಗ್ಗೆ ಫಸಲು ಬಿಡುವುದಿಲ್ಲ. ಅದನ್ನು ಕತ್ತರಿಸಬೇಕು. ಕರಿಬೇವು, ಮಾವು, ಸೀಬೆ, ದಾಳಿಂಬೆ ಹೀಗೆ ಅನೇಕ ತೋಟಗಾರಿಕಾ ಬೆಳೆಗಳನ್ನೂ ಕತ್ತರಿಸಿ ಬೆಳೆಸಬೇಕು. ಕುಡಿ ಚಿವುಟಿದಷ್ಟೂ ಗಿಡ ಸೊಂಪಾಗಿ ಬೆಳೆಯುತ್ತದೆ. ಗಿಡ ಬೆಳೆದಷ್ಟೂ, ಹೂವಿನ ಬೆಳವಣಿಗೆ ಜಾಸ್ತಿ. ಹೆಚ್ಚಾಗಿ ಹೂ ಅರಳಿದರೆ, ಮೊಗ್ಗು, ಹೀಚೂ ಜಾಸ್ತಿ, ಇದರಿಂದ ಇಳುವರಿಯೂ ಹೆಚ್ಚಾಗಲಿದೆ. ಮಲೆನಾಡಿನ ಜನರ ಒಂದು ಅಭ್ಯಾಸ ಗಮನಿಸಿ. ಅವರು ಬಗೆಬಗೆಯ ಸಸ್ಯಗಳ ಕುಡಿ ಬಳಸಿ ಪಲ್ಯ, ಚಟ್ನಿ ಮಾಡಿ ದಿನನಿತ್ಯದ ಆಹಾರವಾಗಿ ಬಳಸುತ್ತಾರೆ. ಗಿಡದ ಕುಡಿಗಳಲ್ಲಿ ಬೆಳವಣಿಗೆ ಚೋದಕಗಳ ಪ್ರಮಾಣ ಜಾಸ್ತಿ. ಅದು ಮಾನವನ ಆರೋಗ್ಯಕ್ಕೂ ಸಹಕಾರಿ. ಹಾಗೇ ಗಿಡಗಳ ಬೆಳವಣಿಗೆಗೂ ಸಹಕಾರಿ.

ಕುಡಿ ಚಿವುಟುವುದು ಒಳ್ಳೆಯದು ಅಂತಾ, ಗಿಡ ಪೂರ್ತಿ ಚಿವುಟಬಾರದು. ಇಳುವರಿ ಇರಲಿ ಆಗ ಗಿಡವೇ ಇರುವುದಿಲ್ಲ. ತಜ್ಞರ ಸಲಹೆ ಪಡೆದು ಯಾವ ಮಟ್ಟದಲ್ಲಿ ಕುಡಿ ಚಿವುಟುವ ಕೆಲಸ ಮಾಡಬೇಕು. keshavamurty.n@gmail.com

 

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

3 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

4 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

4 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

5 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

10 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

10 hours ago