ಅನ್ನದಾತರ ಅಂಗಳ

ಸಾವಯವ ಇಂಗಾಲ ವೃದ್ಧಿಸಲು ಸುಲಭ ಉಪಾಯಗಳು

• ರಮೇಶ ಪಿ.ರಂಗಸಮುದ್ರ
ಭಾರತ ಕೃಷಿ ಪ್ರಧಾನ ದೇಶ. ಹರಪ್ಪ ಮೊಹೆಂಜೊದಾರೋ ನಾಗರಿಕತೆಯ ಉಗಮದಿಂದ 1950ರ ತನಕ ನಮ್ಮಲ್ಲಿ ಮಣ್ಣು ಫಲವತ್ತಾಗಿತ್ತು. ಬೇಸಾಯ ಹಾಗೂ ಪಶುಪಾಲನೆಯ ಮುಖ್ಯ ಮುಖ್ಯ ಕಸುಬನಾಗಿ ಕಸುಬನ್ನಾಗಿ ಮಾಡಿಕೊಂಡಿದ್ದು ಇತಿಹಾಸ.
ನಮ್ಮ ಕೃಷಿ ಉತ್ಪನ್ನಗಳು, ಸಾಂಬಾರ ಪದಾರ್ಥಗಳು ಹಾಗೂ ಹತ್ತಿಯಿಂದ ತಯಾರಿಸಿದ ಉತ್ಕೃಷ್ಟವಾದ ಮಸ್ಲಿನ್ ಬಟ್ಟೆಗಳಿಂದ, ವಿಶ್ವದ ಆಹಾರ ಪ್ರಿಯರು ಹಾಗೂ ಸಿರಿವಂತರು ಉಡುಗೆ ತೊಡುಗೆಗಳಿಗಾಗಿ ಭಾರತವನ್ನೇ ಅವಲಂಬಿಸಿದ್ದಾರೆ. ವಿಶ್ವಕ್ಕೆ ಸಮೃದ್ಧ ಕೃಷಿಯನ್ನು ಪರಿಚಯಿಸಿದ, ಗುಣಮಟ್ಟದ ಆಹಾರವನ್ನು ಪೂರೈಸಿದ ಕೀರ್ತಿ ಭಾರತಕ್ಕಿದೆ.
1960ರ ತನಕ ನಮ್ಮ ದೇಶದ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಶೇ.3ಕ್ಕಿಂತಲೂ ಹೆಚ್ಚಾಗಿತ್ತು. ನಾವೆಲ್ಲರೂ ರಸ್ತೆ ಬದಿ ಆಟವಾಡುವಾಗ ಬಿದ್ದು ಗಾಯಗೊಂಡರೆ ಗಾಯದ ಮೇಲೆ ಮಣ್ಣನ್ನೇ ಔಷಧಿಯಂತೆ ಬಳಸುತ್ತಿದ್ದೆವು. ಅಂತಹ ಗುಣಮಟ್ಟದ ಮಣ್ಣನ್ನು ನಾವು 60 ವರ್ಷಗಳಲ್ಲಿ ವರ್ಷಗಳಲ್ಲಿ ಆಧುನಿಕ ಕೃಷಿಯ ಹೆಸರಿನಲ್ಲಿ ಮಣ್ಣಿಗೆ ರಾಸಾಯನಿಕಗಳನ್ನು ಸೇರಿಸಿ ವಿಷವನ್ನಾಗಿಸಿ. ದೇಶದ ಬಹುಭಾಗದಲ್ಲಿ ಮಣ್ಣು ಈಗ ಕಲುಷಿತಗೊಂಡು ಕೃಷಿಗೆ ಯೋಗ್ಯವಲ್ಲದಂತಾಗಿದೆ. ನಮ್ಮ ಮಣ್ಣಿನಲ್ಲಿ ಶೇ.3ರಿಂದ ಶೇ.4ರಷ್ಟಿದ್ದ ಮಣ್ಣಿನ ಸಾವಯವ ಇಂಗಾಲದ ಅಂಶ ಈಗ ಶೇ.0.5ಗಿಂತಲೂ ಕುಸಿದಿದೆ.
ಸಾವಯವ ಇಂಗಾಲ ಎಂದರೇನು?
ಇಂದಿಗೂ ಕೃಷಿಕರಲ್ಲಿ ಸಾವಯವ ಇಂಗಾಲ (ಆರ್ಗಾನಿಕ್ ಕಾರ್ಬನ್) ಎಂದರೇನು? ತುಂಬಾ ಖರ್ಚು ಮಾಡಬೇಕಾ? ಎಂಬೆಲ್ಲ ಪ್ರಶ್ನೆಗಳಿವೆ.
ಮಣ್ಣಿನಲ್ಲಿ ಲಕ್ಷಾಂತರ ಸೂಕ್ಷ್ಮಾಣು ಜೀವಾಣುಗಳನ್ನು ಪೋಷಿಸಿ, ಮಣ್ಣನ್ನು ಮೆದುವಾಗಿಸಿ ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ಮಣ್ಣಿನಲ್ಲಿ ಹದಗೊಳಿಸಿ, ಗಿಡಗಳ ಬೇರುಗಳಿಗೆ ಒದಗಿಸುವ ಮೂಲಕ ಉತ್ತಮವಾದ ಫಸಲನ್ನು ಪಡೆಯಲು ನೆರವಾಗುವ ಪ್ರಕ್ರಿಯೆಯ ಅಂಶವೇ ಸಾವಯವ ಇಂಗಾಲ (ಆರ್ಗ್ಯಾನಿಕ್ ಕಾರ್ಬನ್).
ಸಾಮಾನ್ಯವಾಗಿ ಶೇ.1ರಿಂದ 2 ಅಥವಾ 3ರಷ್ಟು ಅಂಶವನ್ನು ಒಳಗೊಂಡಿದ್ದರೆ ಆ ಮಣ್ಣು ಉತ್ಕೃಷ್ಟವಾದ, ಫಲವತ್ತಾದ ಮಣ್ಣಾಗಿದ್ದು, ಅಂತಹ ಮಣ್ಣಿನಲ್ಲಿ ಎಲ್ಲ ರೀತಿಯ ಬೇಸಾಯವನ್ನು ಮಾಡಬಹುದು ಸುಲಭ ಉಪಾಯಗಳು
ಒಂದು ಈರುಳ್ಳಿ ಚೀಲದಲ್ಲಿ ಜಮೀನಿನ ಸುತ್ತಮುತ್ತ ಸಿಗುವ ಮುಳ್ಳಿಲ್ಲದ ಹತ್ತು ಜಾತಿಯ ಎಲೆಗಳನ್ನು ಜಜ್ಜಿ ತುಂಬಿಸಬೇಕು. ಆ ಎಲೆಗಳನ್ನು ತುಂಬಿದ ಚೀಲಕ್ಕೆ 2 ಕೆಜಿ ಬೆಲ್ಲ, 5-6 ಕೆಜಿ ಸಗಣಿ, ಒಂದು ಲೀಟರ್ ಹುಳಿಮಜ್ಜಿಗೆ ಸೇರಿಸಿ ಪಾತಿಗೆ ನೀರು ಬಿಡುವ ಪ್ರಕಾರದಲ್ಲಿ ಒಂದು ಅಥವಾ ಒಂದೂವರೆ ಅಡಿ ಆಳವನ್ನು ತೆಗೆದು ಈ ಚೀಲವನ್ನು ಇಟ್ಟು ಅದರ ಮೂಲಕ ನೀರು
ತುಂಬಿ ಹರಿಯುವಂತೆ ಮಾಡಬೇಕು. ಈ ರೀತಿಯಾಗಿ ಎಲ್ಲ ಪಾತಿಗಳ ಪ್ರಾರಂಭದಲ್ಲಿ ಮಾಡಿದರೆ, ಈ ಚೀಲದ ಮೂಲಕ ಹರಿದು ಬರುವ ಮಿಶ್ರಣದ ನೀರು ಸುಮಾರು 4-6 ತಿಂಗಳುಗಳ ಕಾಲ ಮಣ್ಣಿನ ಮೇಲ್ಪದರದಲ್ಲಿ ಹರಡಿಕೊಂಡು, ಸೂರ್ಯನ ಶಾಖದೊಂದಿಗೆ ತನ್ನ ಜೈವಿಕ ಕ್ರಿಯೆಯನ್ನು ಪ್ರಾರಂಭಿಸಿ ಆಳದಲ್ಲಿರುವ ಎರೆಹುಳುಗಳು ಮೇಲೆ ಬಂದು ಮಣ್ಣು ಹಗುರವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ.
ಬೆಳೆಗಳ ಬೇರುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಪದ್ಧತಿ ಭತ್ತದ ಗದ್ದೆಗಳು, ಕಬ್ಬಿನ ಬೆಳೆಯಲ್ಲಿ ಉತ್ತಮ ಪರಿಣಾಮವನ್ನು ಬೀರುತ್ತದೆ. ನೀರು ಹಾಯಿಸುವ ಪದ್ಧತಿಗೆ ಹೆಚ್ಚು ಸೂಕ್ತ.
ಹನಿ ನೀರಾವರಿಯಲ್ಲಿ ಎಲೆಗಳನ್ನು ಹಾಗೂ ಬೆಲ್ಲ, ಮಜ್ಜಿಗೆ ಸೇರಿಸಿದ ಈ ಹತ್ತು ಚೀಲಗಳನ್ನು ಒಂದು ಡ್ರಮ್ಮಿನಲ್ಲಿ ಇಟ್ಟು ಅದರ ಸಾರವನ್ನು ಸುಲಭವಾಗಿ ಹನಿ ನೀರಾವರಿ ವೆಂಚರ್ ಮೂಲಕ ಡ್ರಿಪ್ ಪೈಪ್ ಗಳಿಗೆ ಸೇರಿಸಿದರೆ ಹಣ್ಣು-ತರಕಾರಿಗಳು ಹೆಚ್ಚು ಇಳುವರಿಯನ್ನು ನೀಡುತ್ತವೆ.
ರಸ್ತೆಯ ಇಕ್ಕೆಲಗಳಲ್ಲಿ ಬೆಳೆಯುವ ಎಕ್ಕದ ಗಿಡ, ಹೊಂಗೆಸೊಪ್ಪು, ಗಂಡು ತುಳಸಿ, ಉಗನಿ ಅಂಬು, ಪಾರ್ಥೇನಿಯಂ ಸೊಪ್ಪು, ಬೇವಿನ ಸೊಪ್ಪು, ಕಳೆ ಗಿಡಗಳನ್ನು ನೀರು ಹಾಯಿಸುವ ಪ್ರಾರಂಭದ ಪಾತಿಗೆ ಕೆಸರು ಗದ್ದೆಯಲ್ಲಿ ತುಳಿದು ನಾಟಿ ಮಾಡಿದರೆ ಕಟಾವಿಗೆ ಬರುವ ಸಮಯಕ್ಕೆ ಪೂರ್ತಿ ನಿರಂತರವಾಗಿ ಮಣ್ಣಿನಲ್ಲಿ ಜೀವಾಣುಗಳು ವೃದ್ಧಿಸಿ ಸಾವಯವ ಇಂಗಾಲ ವೃದ್ಧಿಯಾಗಲು ನೆರವಾಗುತ್ತದೆ.
ಫಸಲು ಕಟಾವಾದ ನಂತರ ಭೂಮಿಯನ್ನು ಖಾಲಿ ಬಿಡದೆ ಚಂಬೆ (ಡಯಾಂಚ್), ಗೊಡಮಂಜಿ ಮಿಶ್ರಧಾನ್ಯಗಳನ್ನು ಬಿತ್ತಿ ಒಂದೂವರೆ ಅಡಿ ಎತ್ತರಕ್ಕೆ ಬಂದ ಹಸಿರು ಎಲೆಗಳನ್ನು ಭೂಮಿಗೆ ರೂಟವೇಟರ್ ಮಾಡಿ ಸೇರಿಸಬೇಕು
ಕೃಷಿ ಬೆಳೆಯ ಉಳಿಕೆಗಳನ್ನು ಮಣ್ಣಿಗೆ ಸೇರಿಸಬೇಕು. ಉದಾಹರಣೆಗೆ ಬಾಳೆದಿಂಡು, ಕಬ್ಬಿನ ತೆರಗು, ಕಳೆಗಳನ್ನು ಮಣ್ಣಿಗೆ ಸೇರಿಸುವುದರಿಂದ ನೈಸರ್ಗಿಕವಾಗಿ ಮಣ್ಣಿನಲ್ಲಿ ಪೊಟ್ಯಾಶಿಯಂ ವೃದ್ಧಿ ಆಗುತ್ತದೆ.
ಆಹಾರವನ್ನು ಕರಿದು ಉಳಿದ ಎಣ್ಣೆಯ ಜೊತೆ ಬೆಲ್ಲದ ಪಾಕ, ಉಳಿದ ಮಜ್ಜಿಗೆಯನ್ನು ಹಾಗೂ ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಿದ ನೀರು ಭೂಮಿಗೆ ಸೇರಿಸಿದರೆ. ಸಾವಯವ ಇಂಗಾಲ ಬಹಳ ಬೇಗ ವೃದ್ಧಿಯಾಗಿ ಗಿಡ ಸದೃಢವಾಗಿ ನಿಲ್ಲುವ ಶಕ್ತಿ ಲಭಿಸಿ ದೀರ್ಘ ಫಸಲನ್ನು ಪಡೆದುಕೊಳ್ಳಲು ನೆರವಾಗುತ್ತದೆ.
ಸಾಧ್ಯವಾದಷ್ಟು ಎಲ್ಲ ಬೆಳೆಗಳಲ್ಲೂ ಖಾಲಿ ಇರುವ ಮಣ್ಣಿನ ಜಾಗಕ್ಕೆ ಎಲೆಗಳಿಂದ ಹೊದಿಕೆಯನ್ನು ಮಾಡಿದರೆ ಮಣ್ಣಿನ ತೇವಾಂಶ ಕಡಿಮೆಯಾಗದಂತೆ ಕಾಪಾಡಿ ಜೈವಿಕ ಕ್ರಿಯೆ ಮಣ್ಣಿನಲ್ಲಿ ನಿರಂತರವಾಗಿ ನಡೆದು ಸಾವಯವ ಇಂಗಾಲ ಮಣ್ಣಿನಲ್ಲಿ ಸದಾ ಜಾಗೃತವಾಗಿರಲಿದೆ.
lokesh

Recent Posts

ಮೈಸೂರು ಮುಡಾ ಹಗರಣ: ಹೊಸ ಬಾಂಬ್‌ ಸಿಡಿಸಿದ ಸ್ನೇಹಮಯಿ ಕೃಷ್ಣ

ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ರಾಜ್ಯ ಮುಖ್ಯ…

8 mins ago

ಗುಂಡಾಲ್‌ ಜಲಾಶಯದಲ್ಲಿ ಹುಲಿ ಶವ ಪತ್ತೆ ಪ್ರಕರಣ: ಸ್ಕೂಟರ್‌ ಕ್ಲಚ್‌ ವೈರ್‌ ಉರುಳಿಗೆ ವ್ಯಾಘ್ರ ಬಲಿ?

ಹನೂರು: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ ಹುಲಿಯೊಂದು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ…

19 mins ago

ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್‌ಗೆ ಭೇಟಿ: ನೆತನ್ಯಾಹು ಘೋಷಣೆ

ಟೆಲ್‌ ಅವಿವ್:‌ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ.25 ರಿಂದ 26ರವರೆಗೆ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ ಎಂದು…

33 mins ago

ಹಲವು ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ ದಿಢೀರ್‌ ರದ್ದು?

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ. ಸದ್ಯ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಯ ವಿಚಾರ. ಶಾಸಕರು ಸರ್ಕಾರಿ ಖರ್ಚಿನಲ್ಲಿ…

36 mins ago

ಮಹದೇಶ್ವರ ಬೆಟ್ಟ: ಪೌರಕಾರ್ಮಿಕರ ಜೊತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಎ.ಈ.ರಘು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ…

1 hour ago

ಓದುಗರ ಪತ್ರ: ನಕಲಿ ರಹದಾರಿ: ಕಠಿಣ ಶಿಕ್ಷೆ ವಿಧಿಸಿ

ರಾಜ್ಯದಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಂತಹ ದೂರದ ರಾಜ್ಯಗಳ ದಾಖಲೆಗಳನ್ನು ಬಳಸಿ ಬಸ್‌ಗಳ ನಕಲಿ ರಹ ದಾರಿ(ಪರ್ಮಿಟ್) ಪಡೆದು ಸರ್ಕಾರಕ್ಕೆ…

5 hours ago