ಅನ್ನದಾತರ ಅಂಗಳ

ಸಖತ್‌ ಸಂತೋಷದಲ್ಲಿ ಕಾಫಿ ಬೆಳೆಗಾರರು

ಕಾಫಿ ಬೆಲೆಯು ಏರಿಕೆ ಕಂಡಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ಪರಿಣಾಮ ಕಾಫಿ ಬೆಳೆಗಾರರು ಬೆಲೆ ಏರಿಕೆಯ ಲಾಭ ಪಡೆದುಕೊಂಡು ಕಾಫಿ ಕೊಯ್ಲು ಆರಂಭಿಸಿದ್ದಾರೆ. ೫೦ ಕೆಜಿ ಚೀಲ ತೂಕದ ರೊಬಸ್ಟಾ ಚೆರ್ರಿ ಕಾಫಿ ಬೆಲೆಯು ೧೧,೫೦೦ ರೂ. ತಲುಪಿದೆ. ರೊಬಸ್ಟಾ ಕಾಫಿ ಕೆಜಿಗೆ ೪೦೫ ರೂ. ಗಳಿಂದ ೪೧೦ ರೂ. ಆಸುಪಾಸಿನಲ್ಲಿದೆ. ಈ ಬಾರಿ ಬಹುತೇಕ ತೋಟ ಗಳಲ್ಲಿ ಒಂದು ಮೂಟೆ ರೊಬಸ್ಟಾ ಚೆರ್ರಿಯಲ್ಲಿ ೨೭ರಿಂದ ೨೮ ಕೆಜಿ ಇಳುವರಿ ಸಿಗುತ್ತಿದೆ. ಮೊದಲ ಕೊಯ್ಲಿನಲ್ಲಿ ಒಂದು ಚೀಲ ಕಾಫಿಗೆ ೨೯ ಕೆಜಿ ಇಳುವರಿ ಸಿಕ್ಕಿದೆ. ಇದರಿಂದ ಚೀಲವೊಂದಕ್ಕೆ ೧೧,೫೦೦ ರೂ. ಬೆಲೆ ಏರಿಕೆಯಾಗಿದೆ ಎಂದು ಕಾಫಿ ಬೆಳೆಗಾರರು ತಿಳಿಸಿದ್ದಾರೆ.

ಪ್ರತಿವರ್ಷ ಒಂದೇ ಬಾರಿಗೆ ಕಾಫಿ ಕೊಯ್ಲು ಮಾಡಲಾಗುತ್ತಿತ್ತು. ಈ ಬಾರಿ ಹಣ್ಣು ಮಾತ್ರ ಕೊಯ್ಯುವ ಕ್ರಮ ಹೆಚ್ಚಾಗಿದೆ. ಇದರಿಂದ ೨ನೇ ಕೊಯ್ಲಿನಲ್ಲಿ ಹೆಚ್ಚು ಹಣ್ಣು ಸಿಗಲಿದ್ದು, ಫಸಲಿನ ಗುಣಮಟ್ಟ ಮತ್ತು ತೂಕ ಹೆಚ್ಚಾಗುತ್ತದೆ ಎಂಬುದು ಬೆಳೆಗಾರರ ಅಂಬೋಣ. ಅಲ್ಲದೆ ಕಾಫಿ ಕೊಯ್ಯುವ ಕಾರ್ಮಿಕರಿಗೂ ಹೆಚ್ಚಿನ ಕೂಲಿ ಸಿಗುತ್ತಿದೆ. ರೊಬಸ್ಟಾ ಕಾಫಿಯಲ್ಲಿ ಶೇ. ೧೩ ರವರೆಗೆ ತೇವಾಂಶ ಇರಬಹುದು. ಅತಿ ಹೆಚ್ಚು ಒಣಗಿಸಿದರೆ ತೇವಾಂಶ ೧೦ಕ್ಕಿಂತ ಕಡಿಮೆಯಾ ಗುತ್ತದೆ. ಚೀಲವೊಂದಕ್ಕೆ ೨ ಕೆಜಿ ತೂಕ ಇಳಿಕೆ ಯಾಗುತ್ತದೆ ಎಂಬುದು ಬೆಳೆಗಾರರ ಲೆಕ್ಕಾಚಾರವಾಗಿದೆ.

 

ಆಂದೋಲನ ಡೆಸ್ಕ್

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

5 hours ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

5 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

6 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

7 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

7 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

10 hours ago