ಅನ್ನದಾತರ ಅಂಗಳ

ಸಖತ್‌ ಸಂತೋಷದಲ್ಲಿ ಕಾಫಿ ಬೆಳೆಗಾರರು

ಕಾಫಿ ಬೆಲೆಯು ಏರಿಕೆ ಕಂಡಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ಪರಿಣಾಮ ಕಾಫಿ ಬೆಳೆಗಾರರು ಬೆಲೆ ಏರಿಕೆಯ ಲಾಭ ಪಡೆದುಕೊಂಡು ಕಾಫಿ ಕೊಯ್ಲು ಆರಂಭಿಸಿದ್ದಾರೆ. ೫೦ ಕೆಜಿ ಚೀಲ ತೂಕದ ರೊಬಸ್ಟಾ ಚೆರ್ರಿ ಕಾಫಿ ಬೆಲೆಯು ೧೧,೫೦೦ ರೂ. ತಲುಪಿದೆ. ರೊಬಸ್ಟಾ ಕಾಫಿ ಕೆಜಿಗೆ ೪೦೫ ರೂ. ಗಳಿಂದ ೪೧೦ ರೂ. ಆಸುಪಾಸಿನಲ್ಲಿದೆ. ಈ ಬಾರಿ ಬಹುತೇಕ ತೋಟ ಗಳಲ್ಲಿ ಒಂದು ಮೂಟೆ ರೊಬಸ್ಟಾ ಚೆರ್ರಿಯಲ್ಲಿ ೨೭ರಿಂದ ೨೮ ಕೆಜಿ ಇಳುವರಿ ಸಿಗುತ್ತಿದೆ. ಮೊದಲ ಕೊಯ್ಲಿನಲ್ಲಿ ಒಂದು ಚೀಲ ಕಾಫಿಗೆ ೨೯ ಕೆಜಿ ಇಳುವರಿ ಸಿಕ್ಕಿದೆ. ಇದರಿಂದ ಚೀಲವೊಂದಕ್ಕೆ ೧೧,೫೦೦ ರೂ. ಬೆಲೆ ಏರಿಕೆಯಾಗಿದೆ ಎಂದು ಕಾಫಿ ಬೆಳೆಗಾರರು ತಿಳಿಸಿದ್ದಾರೆ.

ಪ್ರತಿವರ್ಷ ಒಂದೇ ಬಾರಿಗೆ ಕಾಫಿ ಕೊಯ್ಲು ಮಾಡಲಾಗುತ್ತಿತ್ತು. ಈ ಬಾರಿ ಹಣ್ಣು ಮಾತ್ರ ಕೊಯ್ಯುವ ಕ್ರಮ ಹೆಚ್ಚಾಗಿದೆ. ಇದರಿಂದ ೨ನೇ ಕೊಯ್ಲಿನಲ್ಲಿ ಹೆಚ್ಚು ಹಣ್ಣು ಸಿಗಲಿದ್ದು, ಫಸಲಿನ ಗುಣಮಟ್ಟ ಮತ್ತು ತೂಕ ಹೆಚ್ಚಾಗುತ್ತದೆ ಎಂಬುದು ಬೆಳೆಗಾರರ ಅಂಬೋಣ. ಅಲ್ಲದೆ ಕಾಫಿ ಕೊಯ್ಯುವ ಕಾರ್ಮಿಕರಿಗೂ ಹೆಚ್ಚಿನ ಕೂಲಿ ಸಿಗುತ್ತಿದೆ. ರೊಬಸ್ಟಾ ಕಾಫಿಯಲ್ಲಿ ಶೇ. ೧೩ ರವರೆಗೆ ತೇವಾಂಶ ಇರಬಹುದು. ಅತಿ ಹೆಚ್ಚು ಒಣಗಿಸಿದರೆ ತೇವಾಂಶ ೧೦ಕ್ಕಿಂತ ಕಡಿಮೆಯಾ ಗುತ್ತದೆ. ಚೀಲವೊಂದಕ್ಕೆ ೨ ಕೆಜಿ ತೂಕ ಇಳಿಕೆ ಯಾಗುತ್ತದೆ ಎಂಬುದು ಬೆಳೆಗಾರರ ಲೆಕ್ಕಾಚಾರವಾಗಿದೆ.

 

ಆಂದೋಲನ ಡೆಸ್ಕ್

Recent Posts

ಚಾ.ನಗರ | ಗುಣಮಟ್ಟದ ಕೊರತೆ : ಹೋಟೆಲ್, ರೆಸ್ಟೋರೆಂಟ್ ಬಂದ್

ಚಾ.ನಗರ ಜಿಲ್ಲಾಧಿಕಾರಿ,ಆಹಾರ ಸುರಕ್ಷತಾ ಅಧಿಕಾರಿ ದಿಡೀರ್ ಭೇಟಿ, ಪರಿಶೀಲನೆ ಚಾಮರಾಜನಗರ : ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ, ಗುಣಮಟ್ಟದ…

26 mins ago

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ; ಪುಷ್ಪವೃಷ್ಟಿಗೈದು ಶಿಕ್ಷಕರನ್ನು ಸ್ವಾಗತಿಸಿ, ಸನ್ಮಾನಿಸಿದ ವಿದ್ಯಾರ್ಥಿ ಬಳಗ

ಗುಂಡ್ಲುಪೇಟೆ : ಕಾಲದ ಚಕ್ರ ಉರುಳಿ 20 ವರ್ಷಗಳು ಕಳೆದರೂ, ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ ಮತ್ತು ಆತ್ಮೀಯತೆ ಮಾತ್ರ…

1 hour ago

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ ಆರ್.‌ಅಶೋಕ್‌

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗಿರುವ ಶೂಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರದ…

7 hours ago

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸರ್ಕಾರ

ಬೆಂಗಳೂರು: ಹಬ್ಬಗಳ ಸೀಸನ್ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಪಿಒಪಿ ಗಣೇಶ ಮೂರ್ತಿಗಳ…

7 hours ago

ರಾಜ್ಯದಲ್ಲಿ ಕೈಕೊಟ್ಟ ಮುಂಗಾರು: ಸಂಕಷ್ಟದತ್ತ ಕೃಷಿ ವಲಯ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕೃಷಿ ವಲಯ ಮತ್ತೊಂದು ಗಂಭೀರ ಸಂಕಷ್ಟದತ್ತ ಸಾಗುತ್ತಿದೆ. ಸತತ ಮೂರು ವಾರಗಳಿಂದ…

7 hours ago

ಮಳೆ ಕೈಕೊಟ್ಟಿದ್ದಕ್ಕೆ ರಾಜ್ಯದಲ್ಲಿ ತಾಪಮಾನ ಏರಿಕೆ – ಮಳೆಗಾಲದಲ್ಲೇ ಬೇಸಿಗೆಯಂತಹ ಬಿಸಿಲು

ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಬೆನ್ನಲ್ಲೇ ತಾಪಮಾನ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲೂ ಬೇಸಿಗೆಯಂತಹ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಸಾಮಾನ್ಯವಾಗಿ…

7 hours ago