ಅನ್ನದಾತರ ಅಂಗಳ

ಕೃಷಿ ಪ್ರವಾಸೋದ್ಯಮ ಬೇಸಾಯದ ಹೊಸ ಭರವಸೆ

ಡಿ.ಎನ್. ಹರ್ಷ

ಕಂಡು ಕೇಳರಿಯದ ಕೊರೋನಾ ಎಂಬ ಮಹಾಮಾರಿ ಬಂದು ಹೋದ ಮೇಲೆ, ಸಾಕಷ್ಟು ಜನರ ಚಿತ್ತ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎನ್ನುವ ಸಂಪತ್ತಿನ ಮೇಲೆ ಹರಿದಿದೆ. ಈ ಕಾರಣದಿಂದ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಬೇಕು ಎನ್ನುವ ಉದ್ದೇಶದಿಂದ ದಿನೇ ದಿನೇ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚುತ್ತಾ ಇದೆ.

ಪ್ರವಾಸೋದ್ಯಮವು ಜಾಗತಿಕವಾಗಿ ವಿವಿಧ ಆರ್ಥಿಕತೆಗಳ ಅವಿಭಾಜ್ಯ ಅಂಗವಾಗಿದೆ. ಇದು ಕೌಶಲರಹಿತ ಮತ್ತು ನುರಿತ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮುಂತಾದ ಹಲವಾರು ದೇಶಗಳಲ್ಲಿ ಕೃಷಿ ಪ್ರವಾಸೋದ್ಯಮವನ್ನು ಬೆಳೆಯುತ್ತಿರುವ ಉದ್ಯಮವೆಂದು ಪರಿಗಣಿಸಲಾಗಿದೆ.

ಭಾರತದ ಜಿಡಿಪಿಯ ಸರಿಸುಮಾರು ೨೬ ಪ್ರತಿಶತ ಕೃಷಿಯ ಮೂಲಕ ಬರುತ್ತಾ ಇದೆ. ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಉತ್ಪನ್ನಗಳನ್ನು ಬೆಳೆಯುತ್ತಾ ಇರುವ ಕಾರಣ, ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವುದಕ್ಕೆ ಇತ್ತೀಚಿನ ಮಾವು, ಈರುಳ್ಳಿ ಬೆಳೆ ನೋಡಿ ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಕೃಷಿ ಪ್ರವಾಸೋದ್ಯಮವು ಹಳ್ಳಿಗರಿಗೆ ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸುವ ವ್ಯವಸ್ಥೆ ಆಗಿದ್ದು, ಇದು ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವ ವ್ಯವಸ್ಥೆ ಆಗಿರುವುದು ಹೆಮ್ಮೆಯ ವಿಷಯ. ಕೃಷಿ-ಪ್ರವಾಸೋದ್ಯಮ ಸಂಸ್ಕೃತಿಯು ಭಾರತೀಯ ಆರ್ಥಿಕತೆಯ ಪರವಾಗಿದ್ದು, ಸರಿ ಸುಮಾರು ಶೇ.೮೫ ರಷ್ಟು ಜನಸಂಖ್ಯೆಯು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಮತ್ತು ಇತರ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುವ ಕಾರಣ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇರುವ ಉದ್ಯಮವಾಗಿ ಬೆಳೆಯುವ ಎಲ್ಲಾ ಅವಕಾಶ ಇದೆ.

ಒಂದು ಸರ್ವೇ ಪ್ರಕಾರ ನಗರಗಳಲ್ಲಿನ ಒಟ್ಟು ಜನಸಂಖ್ಯೆಯ ೧/೩ ಭಾಗವು ಹಳ್ಳಿಗಳಲ್ಲಿ ವಾಸಿಸುವ ಸಂಬಂಧಿಕರನ್ನು ಹೊಂದಿಲ್ಲ ಮತ್ತು ಅರ್ಧದಷ್ಟು ಒಟ್ಟು ಜನಸಂಖ್ಯೆಯು ಹಳ್ಳಿಗಳಿಗೆ ಹೋಗಿಲ್ಲ. ಇವರೆಲ್ಲರ ಮನಸ್ಸಿನಲ್ಲಿ ಸಹಜವಾಗಿ ಕೃಷಿ ಬಗ್ಗೆ, ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದೆ.

ಮೊಬೈಲ್, ಟಿವಿಗಳಲ್ಲಿನ ಕಾರ್ಟೂನ್‌ಗಳು, ಧಾರಾವಾಹಿ, ಆನ್ ಲೈನ್ ಗೇಮ್‌ಗಳ ಅಡಿಕ್ಷನ್ ಇಂದ ಹೊರ ಬಂದು ಮನಸ್ಸಿನ ಆರೋಗ್ಯ ಕಾಪಾಡಲು ದೇಶಿ ಆಟಗಳು, ಕೃಷಿ ಸಹಾಯ ಮಾಡುವಂತೆ, ದಿನೇ ದಿನೇ ದೇಹದ ಆರೋಗ್ಯ ಕಡಿಮೆ ಮಾಡುತ್ತಾ ಇರುವ ಹೊರಗಿನ ಜಂಕ್ ಫುಡ್, ಕಲಬೆರಕೆ ಆಹಾರ ಸೇವನೆಯಿಂದ ಹೊರ ಬರಲು ಹಳ್ಳಿ ಸೊಗಡಿನ ದೇಶಿ ಆಹಾರ ಪರ್ಯಾಯ ಮೂಲವಾಗಿದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ.

ಪ್ರಕೃತಿಯ ಜೊತೆ ಮಾಡುವ ಕೃಷಿಯಲ್ಲಿ, ಎಲ್ಲಾ ರೀತಿಯ ಜ್ಞಾನ ಪಡೆಯಬಹುದು ಎಂಬುದೇ ಗಾದೆಯ ಅರ್ಥ. ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ, ಕೃಷಿ ಪ್ರವಾಸೋದ್ಯಮ ಮಾರುಕಟ್ಟೆಯು ೨೦೧೯ರಲ್ಲಿ ೬೯.೨೪ ಶತಕೋಟಿ ಮೌಲ್ಯದ್ದಾಗಿದೆ. ೨೦೨೭ರ ವೇಳೆಗೆ ೧೧೭.೩೭ ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.

ಈ ಮೇಲಿನ ಎಲ್ಲ ಮಾಹಿತಿಗಳನ್ನೂ ಮತ್ತೊಮ್ಮೆ ಅವಲೋಕನ ಮಾಡಿದರೆ ಕೃಷಿ ಪ್ರವಾಸೋದ್ಯಮ ಎನ್ನುವುದು ಕೃಷಿಕರಿಗೆ ಪ್ಯಾಸಿವ್ ಇನ್‌ಕಮ್ ತಂದುಕೊಡುವ ಉದ್ಯಮವಾಗಿದ್ದು, ಆರೋಗ್ಯವೇ ಭಾಗ್ಯ ಎನ್ನುವ ಗಾದೆಗೆ ಹೆಚ್ಚಿನ ಅರ್ಥ ಕಲ್ಪಿಸುತ್ತೆ. ಮೂಲತಃ ಕೃಷಿಕರಾಗಿರುವ ನವೀನ್ ಆರ್.ಎಸ್.ರವರು ಕಳೆದ ಹತ್ತು ವರ್ಷಗಳಿಂದ ಕೃಷಿ ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಹೊಂದಿ, ದಕ್ಷಿಣ ಭಾರತದ ಎಲ್ಲ ಕಡೆ ತಿರುಗಿ ಅನುಭವದ ಜ್ಞಾನ ಪಡೆದು, ಸಮಾನ ಮನಸ್ಕರ ಜೊತೆ ಸೇರಿ, ಅಗ್ರಿಯಾನ ಟೂರಿಸಂ (Agriyana Tourism Pvt Ltd) ಎನ್ನುವ ಕಂಪೆನಿ ಸ್ಥಾಪನೆ ಮಾಡಿ ಕಾರ್ಯಪ್ರವೃತ್ತರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ನವೀನ್ ಆರ್.ಎಸ್. ಮೊ.೮೮೮೪೭ ೬೪೪೬೪ ಸಂಪರ್ಕಿಸಬಹುದು.

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎವ್ಗನ್ ಬಾವ್ಚಾರ್ ಎಂಬ ಕಣ್ಣಿಲ್ಲದ ಫೋಟೋಗ್ರಾಫರ್!

ಪಂಜು ಗಂಗೊಳ್ಳಿ  ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…

1 hour ago

ಓದುಗರ ಪತ್ರ: ಕಳ್ಳಸಾಗಣೆ ಕಪಿಮುಷ್ಟಿಯಲ್ಲಿ ದೇಶದ ಆರ್ಥಿಕತೆ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…

1 hour ago

ಓದುಗರ ಪತ್ರ: ದ್ವಿಚಕ್ರವಾಹನಗಳಿಗೆ ದರ್ಪಣ(ಕನ್ನಡಿ) ಕಡ್ಡಾಯವಾಗಲಿ

ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…

1 hour ago

ಓದುಗರ ಪತ್ರ: ವಾಹನ ನಿಲುಗಡೆ ನಿಷೇಧಿಸಿ

ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…

1 hour ago

ರಸ್ತೆಗಳು ಅಧ್ವಾನ; ಸವಾರರು ಹೈರಾಣ!

ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…

1 hour ago

ವೈಭವದ ಸುತ್ತೂರು ಜಾತ್ರಾ ಮಹೋತ್ಸವ ಸಂಪನ್ನ

ಕೆ.ಬಿ.ರಮೇಶನಾಯಕ ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ…

1 hour ago