ಆಂದೋಲನ ಪುರವಣಿ

ಸಿನಿಮಾಲ್‌ : ಅಪ್ಪು ಇಲ್ಲದ 2ನೇ ಹುಟ್ಟುಹಬ್ಬದ ದಿನ ಬಾನದಾರಿಯಲ್ಲಿ’, ? ಕಬ್ಜ’ ಎರಡು ಚಿತ್ರಗಳ ಬಿಡುಗಡೆ

ಪುನೀತ್ ರಾಜಕುಮಾರ್ ಅವರ ನಿಧನಾನಂತರ ಅವರನ್ನು ನೆನಪಿಸಿಕೊಳ್ಳದ ಕಾರ್ಯಕ್ರಮಗಳಿಲ್ಲ. ಚಲನಚಿತ್ರಗಳಿಲ್ಲ. ಫಿಲಂ ಫೇರ್ ಪ್ರಶಸ್ತಿ (ದಕ್ಷಿಣ) ಅವರಿಗೆ ಅರ್ಪಿಸಲಾಯಿತು. ಈ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕರ್ನಾಟಕ ಚಲನಚಿತ್ರ ಕಪ್‌ನ ಕ್ರಿಕೆಟ್ ಪಂದ್ಯಾಟದಲ್ಲಿ ಅವರ ವಿಜೃಂಭಣೆ ಇರುತ್ತದೆ.
ಮಾರ್ಚ್ 17, ಅಪ್ಪು ಅವರ ಜನ್ಮದಿನ. ಅಂದು ಎರಡು ಚಲನಚಿತ್ರಗಳು ತೆರೆಗೆ ಬರುವುದಾಗಿ ಪ್ರಕಟಿಸಿವೆ. ಅವುಗಳೆಂದರೆ ಗಣೇಶ್ ಮುಖ್ಯಭೂಮಿಕೆಯ ?ಭಾನದಾರಿಯಲ್ಲಿ’ ಮತ್ತು ಚಂದ್ರು ನಿರ್ಮಾಣ, ನಿರ್ದೇಶನದ ?ಕಬ್ಜ’.
ಗಣೇಶ್ ಅಭಿನಯದ ಚಿತ್ರದ ಹೆಸರು ಪುನೀತ್ ?ಭಾಗ್ಯವಂತ’ ಚಿತ್ರಕ್ಕಾಗಿ ಹಾಡಿದ ?ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ’ ಹಾಡಿನ ಮೊದಲ ಶಬ್ದ. ಮಾರ್ಚ್ ವೇಳೆಗೆ ಚಿತ್ರ ಸಿದ್ಧವಾಗುವ ಕಾರಣ ನಿರ್ಮಾಪಕರು ಪುನೀತ್ ಜನ್ಮದಿನದಂದು ಅದನ್ನು ತೆರೆಗೆ ತರಲು ನಿರ್ಧರಿಸಿ ಆ ಕುರಿತು ಪ್ರಕಟಿಸಿಯೂ ಇದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಅವರದು ಕ್ರಿಕೆಟ್ ಆಟಗಾರನ ಪಾತ್ರವಾದರೆ, ಅವರ ಜೋಡಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಅವರದು ಮತ್ತೊಬ್ಬ ಕ್ರೀಡಾಪಟುವಿನ ಪಾತ್ರ. ಈ ಚಿತ್ರಕ್ಕೆ ಆಫ್ರಿಕದಲ್ಲಿ ಚಿತ್ರೀಕರಣವಾಗಿರುವುದು ವಿಶೇಷ.
?ಕಬ್ಜ’ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ?ಕೆಜಿಎಫ್ ಚಾಪ್ಟರ್ 2’ರ ನಂತರ ಕನ್ನಡ ಚಿತ್ರರಂಗದತ್ತ ಭಾರತದ ಎಲ್ಲ ಭಾಷೆಗಳ ಚಿತ್ರೋದ್ಯಮಗಳೂ ಗಮನ ಹರಿಸಿದ್ದು, ?ಕಬ್ಜ’ ಚಿತ್ರದ ಕುರಿತಂತೆ, ಮುಂದಿನ ಅತೀ ಹೆಚ್ಚು ನಿರೀಕ್ಷೆಯ ಚಿತ್ರ ಎನ್ನಲಾಗಿದೆ. ಅದೇ ಹಾದಿಯ ಕಥಾನಕ ಇದು ಎನ್ನಲಾಗುತ್ತಿದ್ದು, ಉಪೇಂದ್ರ ಮತ್ತು ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳಾಗಿರುವುದು ಈ ನಿರೀಕ್ಷೆಗೆ ಇನ್ನಷ್ಟು ಇಂಬು ಕೊಟ್ಟಂತಿದೆ.
ಪುನೀತ್ ರಾಜಕುಮಾರ್ ಮತ್ತು ತಮ್ಮ ನಡುವಿನ ಸ್ನೇಹ, ಪ್ರೀತಿ, ಅವರ ಸಲಹೆ, ಸೂಚನೆಗಳು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಿದ್ದು, ಅವರ ಹುಟ್ಟುಹಬ್ಬದಂದು ಈ ಚಿತ್ರವನ್ನು ತೆರೆಗೆ ತರುವುದಾಗಿ ಚಂದ್ರು ಹೇಳಿದ್ದಾರೆ. ಕನ್ನಡದ ಈ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರಲಿದ್ದು, ಏಳು ಭಾಷೆಗಳಲ್ಲಿ ಈ ಚಿತ್ರವನ್ನು ನೋಡಬಹುದು ಎಂದಿದ್ದಾರೆ. ನಿರ್ಮಾಪಕ, ನಿರ್ದೇಶಕ ಚಂದ್ರು. ಎಲ್ಲ ಭಾಷೆಗಳಲ್ಲೂ ಚಿತ್ರಕ್ಕೆ ಬೇಡಿಕೆ ಇದ್ದು, ಅಲ್ಲಿನ ಪ್ರತಿಷ್ಠಿತ ಉದ್ಯಮಿಗಳು ಚಿತ್ರವನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರಂತೆ.

andolanait

Recent Posts

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

2 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

3 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

3 hours ago

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

ಎಚ್.ಹಾಲಪ್ಪ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ…

3 hours ago

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!

ಎಸ್.ಎಸ್.ಭಟ್ ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ ನಂಜನಗೂಡು: ಮಳೆ ಬಂದರೆ ನೀರಿನಿಂದ…

3 hours ago