ಆಂದೋಲನ ಪುರವಣಿ

ಸಿನಿಮಾಲ್‌ : ಅಪ್ಪು ಇಲ್ಲದ 2ನೇ ಹುಟ್ಟುಹಬ್ಬದ ದಿನ ಬಾನದಾರಿಯಲ್ಲಿ’, ? ಕಬ್ಜ’ ಎರಡು ಚಿತ್ರಗಳ ಬಿಡುಗಡೆ

ಪುನೀತ್ ರಾಜಕುಮಾರ್ ಅವರ ನಿಧನಾನಂತರ ಅವರನ್ನು ನೆನಪಿಸಿಕೊಳ್ಳದ ಕಾರ್ಯಕ್ರಮಗಳಿಲ್ಲ. ಚಲನಚಿತ್ರಗಳಿಲ್ಲ. ಫಿಲಂ ಫೇರ್ ಪ್ರಶಸ್ತಿ (ದಕ್ಷಿಣ) ಅವರಿಗೆ ಅರ್ಪಿಸಲಾಯಿತು. ಈ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕರ್ನಾಟಕ ಚಲನಚಿತ್ರ ಕಪ್‌ನ ಕ್ರಿಕೆಟ್ ಪಂದ್ಯಾಟದಲ್ಲಿ ಅವರ ವಿಜೃಂಭಣೆ ಇರುತ್ತದೆ.
ಮಾರ್ಚ್ 17, ಅಪ್ಪು ಅವರ ಜನ್ಮದಿನ. ಅಂದು ಎರಡು ಚಲನಚಿತ್ರಗಳು ತೆರೆಗೆ ಬರುವುದಾಗಿ ಪ್ರಕಟಿಸಿವೆ. ಅವುಗಳೆಂದರೆ ಗಣೇಶ್ ಮುಖ್ಯಭೂಮಿಕೆಯ ?ಭಾನದಾರಿಯಲ್ಲಿ’ ಮತ್ತು ಚಂದ್ರು ನಿರ್ಮಾಣ, ನಿರ್ದೇಶನದ ?ಕಬ್ಜ’.
ಗಣೇಶ್ ಅಭಿನಯದ ಚಿತ್ರದ ಹೆಸರು ಪುನೀತ್ ?ಭಾಗ್ಯವಂತ’ ಚಿತ್ರಕ್ಕಾಗಿ ಹಾಡಿದ ?ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ’ ಹಾಡಿನ ಮೊದಲ ಶಬ್ದ. ಮಾರ್ಚ್ ವೇಳೆಗೆ ಚಿತ್ರ ಸಿದ್ಧವಾಗುವ ಕಾರಣ ನಿರ್ಮಾಪಕರು ಪುನೀತ್ ಜನ್ಮದಿನದಂದು ಅದನ್ನು ತೆರೆಗೆ ತರಲು ನಿರ್ಧರಿಸಿ ಆ ಕುರಿತು ಪ್ರಕಟಿಸಿಯೂ ಇದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಅವರದು ಕ್ರಿಕೆಟ್ ಆಟಗಾರನ ಪಾತ್ರವಾದರೆ, ಅವರ ಜೋಡಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಅವರದು ಮತ್ತೊಬ್ಬ ಕ್ರೀಡಾಪಟುವಿನ ಪಾತ್ರ. ಈ ಚಿತ್ರಕ್ಕೆ ಆಫ್ರಿಕದಲ್ಲಿ ಚಿತ್ರೀಕರಣವಾಗಿರುವುದು ವಿಶೇಷ.
?ಕಬ್ಜ’ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ?ಕೆಜಿಎಫ್ ಚಾಪ್ಟರ್ 2’ರ ನಂತರ ಕನ್ನಡ ಚಿತ್ರರಂಗದತ್ತ ಭಾರತದ ಎಲ್ಲ ಭಾಷೆಗಳ ಚಿತ್ರೋದ್ಯಮಗಳೂ ಗಮನ ಹರಿಸಿದ್ದು, ?ಕಬ್ಜ’ ಚಿತ್ರದ ಕುರಿತಂತೆ, ಮುಂದಿನ ಅತೀ ಹೆಚ್ಚು ನಿರೀಕ್ಷೆಯ ಚಿತ್ರ ಎನ್ನಲಾಗಿದೆ. ಅದೇ ಹಾದಿಯ ಕಥಾನಕ ಇದು ಎನ್ನಲಾಗುತ್ತಿದ್ದು, ಉಪೇಂದ್ರ ಮತ್ತು ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳಾಗಿರುವುದು ಈ ನಿರೀಕ್ಷೆಗೆ ಇನ್ನಷ್ಟು ಇಂಬು ಕೊಟ್ಟಂತಿದೆ.
ಪುನೀತ್ ರಾಜಕುಮಾರ್ ಮತ್ತು ತಮ್ಮ ನಡುವಿನ ಸ್ನೇಹ, ಪ್ರೀತಿ, ಅವರ ಸಲಹೆ, ಸೂಚನೆಗಳು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಿದ್ದು, ಅವರ ಹುಟ್ಟುಹಬ್ಬದಂದು ಈ ಚಿತ್ರವನ್ನು ತೆರೆಗೆ ತರುವುದಾಗಿ ಚಂದ್ರು ಹೇಳಿದ್ದಾರೆ. ಕನ್ನಡದ ಈ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರಲಿದ್ದು, ಏಳು ಭಾಷೆಗಳಲ್ಲಿ ಈ ಚಿತ್ರವನ್ನು ನೋಡಬಹುದು ಎಂದಿದ್ದಾರೆ. ನಿರ್ಮಾಪಕ, ನಿರ್ದೇಶಕ ಚಂದ್ರು. ಎಲ್ಲ ಭಾಷೆಗಳಲ್ಲೂ ಚಿತ್ರಕ್ಕೆ ಬೇಡಿಕೆ ಇದ್ದು, ಅಲ್ಲಿನ ಪ್ರತಿಷ್ಠಿತ ಉದ್ಯಮಿಗಳು ಚಿತ್ರವನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರಂತೆ.

andolanait

Recent Posts

ಹೆಚ್ಚುತ್ತಿರುವ ಯುವತಿಯರ ಆತ್ಮಹತ್ಯೆ ; ಯುವತಿಯರಿಗೆ ಕಂಗನಾ ರಣಾವತ್ ಕಿವಿಮಾತು

ದೆಹಲಿ : ಮದುವೆಯಾದ ಯುವತಿಯರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಯುವತಿಯರಿಗೆ…

3 hours ago

ಆ.31ರೊಳಗೆ ಜಿಬಿಎ ಚುನಾವಣೆ ನಡೆಸಿ ; ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಂತಿಮ ಗಡುವು

ಹೊಸದಿಲ್ಲಿ : ಆಗಸ್ಟ್ ೩೧ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ…

6 hours ago

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಕ್ಕೆ ಅವಕಾಶವಿಲ್ಲ : ಈಶ್ವರ ಖಂಡ್ರೆ

ಸಫಾರಿ ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಅಳವಡಿಸಲು ಖಂಡ್ರೆ ಸೂಚನೆ ಬೆಂಗಳೂರು :  ರಾಜ್ಯದ ಐದು ಹುಲಿ…

7 hours ago

ಮ.ಬೆಟ್ಟ | ಮರದ ಕೊಂಬೆ ಬಿದ್ದು ಮೂವರಿಗೆ ಗಾಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರ ಮೇಲೆ ಮರದ ಕೊಂಬೆ ಬಿದ್ದು ಮೂವರು ಗಾಯಗೊಂಡಿರುವ…

9 hours ago

ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ…

12 hours ago

ಯಳಂದೂರು: ಬೋನಿಗೆ ಬಿದ್ದ ಚಿರತೆ

ಯಳಂದೂರು: ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ…

12 hours ago