ಆಂದೋಲನ ಪುರವಣಿ

ಸಿನಿಮಾಲ್‌ : ಅಪ್ಪು ಇಲ್ಲದ 2ನೇ ಹುಟ್ಟುಹಬ್ಬದ ದಿನ ಬಾನದಾರಿಯಲ್ಲಿ’, ? ಕಬ್ಜ’ ಎರಡು ಚಿತ್ರಗಳ ಬಿಡುಗಡೆ

ಪುನೀತ್ ರಾಜಕುಮಾರ್ ಅವರ ನಿಧನಾನಂತರ ಅವರನ್ನು ನೆನಪಿಸಿಕೊಳ್ಳದ ಕಾರ್ಯಕ್ರಮಗಳಿಲ್ಲ. ಚಲನಚಿತ್ರಗಳಿಲ್ಲ. ಫಿಲಂ ಫೇರ್ ಪ್ರಶಸ್ತಿ (ದಕ್ಷಿಣ) ಅವರಿಗೆ ಅರ್ಪಿಸಲಾಯಿತು. ಈ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕರ್ನಾಟಕ ಚಲನಚಿತ್ರ ಕಪ್‌ನ ಕ್ರಿಕೆಟ್ ಪಂದ್ಯಾಟದಲ್ಲಿ ಅವರ ವಿಜೃಂಭಣೆ ಇರುತ್ತದೆ.
ಮಾರ್ಚ್ 17, ಅಪ್ಪು ಅವರ ಜನ್ಮದಿನ. ಅಂದು ಎರಡು ಚಲನಚಿತ್ರಗಳು ತೆರೆಗೆ ಬರುವುದಾಗಿ ಪ್ರಕಟಿಸಿವೆ. ಅವುಗಳೆಂದರೆ ಗಣೇಶ್ ಮುಖ್ಯಭೂಮಿಕೆಯ ?ಭಾನದಾರಿಯಲ್ಲಿ’ ಮತ್ತು ಚಂದ್ರು ನಿರ್ಮಾಣ, ನಿರ್ದೇಶನದ ?ಕಬ್ಜ’.
ಗಣೇಶ್ ಅಭಿನಯದ ಚಿತ್ರದ ಹೆಸರು ಪುನೀತ್ ?ಭಾಗ್ಯವಂತ’ ಚಿತ್ರಕ್ಕಾಗಿ ಹಾಡಿದ ?ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ’ ಹಾಡಿನ ಮೊದಲ ಶಬ್ದ. ಮಾರ್ಚ್ ವೇಳೆಗೆ ಚಿತ್ರ ಸಿದ್ಧವಾಗುವ ಕಾರಣ ನಿರ್ಮಾಪಕರು ಪುನೀತ್ ಜನ್ಮದಿನದಂದು ಅದನ್ನು ತೆರೆಗೆ ತರಲು ನಿರ್ಧರಿಸಿ ಆ ಕುರಿತು ಪ್ರಕಟಿಸಿಯೂ ಇದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಅವರದು ಕ್ರಿಕೆಟ್ ಆಟಗಾರನ ಪಾತ್ರವಾದರೆ, ಅವರ ಜೋಡಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಅವರದು ಮತ್ತೊಬ್ಬ ಕ್ರೀಡಾಪಟುವಿನ ಪಾತ್ರ. ಈ ಚಿತ್ರಕ್ಕೆ ಆಫ್ರಿಕದಲ್ಲಿ ಚಿತ್ರೀಕರಣವಾಗಿರುವುದು ವಿಶೇಷ.
?ಕಬ್ಜ’ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ?ಕೆಜಿಎಫ್ ಚಾಪ್ಟರ್ 2’ರ ನಂತರ ಕನ್ನಡ ಚಿತ್ರರಂಗದತ್ತ ಭಾರತದ ಎಲ್ಲ ಭಾಷೆಗಳ ಚಿತ್ರೋದ್ಯಮಗಳೂ ಗಮನ ಹರಿಸಿದ್ದು, ?ಕಬ್ಜ’ ಚಿತ್ರದ ಕುರಿತಂತೆ, ಮುಂದಿನ ಅತೀ ಹೆಚ್ಚು ನಿರೀಕ್ಷೆಯ ಚಿತ್ರ ಎನ್ನಲಾಗಿದೆ. ಅದೇ ಹಾದಿಯ ಕಥಾನಕ ಇದು ಎನ್ನಲಾಗುತ್ತಿದ್ದು, ಉಪೇಂದ್ರ ಮತ್ತು ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳಾಗಿರುವುದು ಈ ನಿರೀಕ್ಷೆಗೆ ಇನ್ನಷ್ಟು ಇಂಬು ಕೊಟ್ಟಂತಿದೆ.
ಪುನೀತ್ ರಾಜಕುಮಾರ್ ಮತ್ತು ತಮ್ಮ ನಡುವಿನ ಸ್ನೇಹ, ಪ್ರೀತಿ, ಅವರ ಸಲಹೆ, ಸೂಚನೆಗಳು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಿದ್ದು, ಅವರ ಹುಟ್ಟುಹಬ್ಬದಂದು ಈ ಚಿತ್ರವನ್ನು ತೆರೆಗೆ ತರುವುದಾಗಿ ಚಂದ್ರು ಹೇಳಿದ್ದಾರೆ. ಕನ್ನಡದ ಈ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರಲಿದ್ದು, ಏಳು ಭಾಷೆಗಳಲ್ಲಿ ಈ ಚಿತ್ರವನ್ನು ನೋಡಬಹುದು ಎಂದಿದ್ದಾರೆ. ನಿರ್ಮಾಪಕ, ನಿರ್ದೇಶಕ ಚಂದ್ರು. ಎಲ್ಲ ಭಾಷೆಗಳಲ್ಲೂ ಚಿತ್ರಕ್ಕೆ ಬೇಡಿಕೆ ಇದ್ದು, ಅಲ್ಲಿನ ಪ್ರತಿಷ್ಠಿತ ಉದ್ಯಮಿಗಳು ಚಿತ್ರವನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರಂತೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago