ಚಿತ್ರ ಮಂಜರಿ

UI ವರ್ಸಸ್‌ ಮ್ಯಾಕ್ಸ್‌ ಸುಳ್ಳು

ನಮ್ಮ ನಡುವೆ ಯಾವುದೇ ಕ್ಲ್ಯಾಶ್‌ ಇಲ್ಲ ಎಂದ ಉಪೇಂದ್ರ ಮತ್ತು ಸುದೀಪ್‌

ಮೊದಲು ವರ್ಷದ ಕೊನೆಗೆ ಯಾವ ಚಿತ್ರ ಬರುತ್ತದೆ ಎಂದೇ ಗೊತ್ತಿರಲಿಲ್ಲ. ಒಂದೆರಡು ತಿಂಗಳ ಹಿಂದೆ ಡಿಸೆಂಬರ್ ೨೦ರಂದು ಉಪೇಂದ್ರ ನಟನೆ, ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಯುಐ’, ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಸುದ್ದಿಯಾಯಿತು. ಇನ್ನು, ನವೆಂಬರ್ ಕೊನೆಯಲ್ಲಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಕ್ರಿಸ್‌ಮಸ್ ಅಂಗವಾಗಿ ಡಿ.೨೫ರಂದು ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾಯಿತು.

ಅಲ್ಲಿಂದ ನೂರೆಂಟು ಚರ್ಚೆಗಳು ಶುರುವಾದವು. ಪ್ರಮುಖವಾಗಿ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳು ಕಡಿಮೆಯಾಗುತ್ತಿವೆ, ಈ ವರ್ಷ ಸಾಕಷ್ಟು ಚಿತ್ರಗಳು ಸೋತಿವೆ. ಈ ಪರಿಸ್ಥಿತಿಯಲ್ಲಿ ಇಂತಹ ಪೈಪೋಟಿ ಮತ್ತು ಕ್ಲ್ಯಾಶ್ ಬೇಕಾ? ಎಂಬ ಪ್ರಶ್ನೆಗಳು ಚಿತ್ರರಂಗದ ವಲಯದಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಕೇಳಿಬಂತು. ಕೆಲವರು ಇಂಥದ್ದೊಂದು ಪೈಪೋಟಿ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಸದ್ಯ ಯಾವುದೇ ಸ್ಟಾರ್ ಸಿನಿಮಾಗಳಿಲ್ಲದ ಕಾರಣ, ಆ ಸಂದರ್ಭದಲ್ಲಿ ಒಂದು ಚಿತ್ರ ಬರಬಹುದಿತ್ತು ಮತ್ತು ಇಂಥದ್ದೊಂದು ಕ್ಲ್ಯಾಶ್ ತಪ್ಪಿಸಬಹುದಿತ್ತು ಎಂದು ಹಲವರು ಅಭಿಪ್ರಾಯಪಟ್ಟರು.

ಆದರೆ, ಇದರಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ ಎಂದು ಉಪೇಂದ್ರ ಮತ್ತು ಸುದೀಪ್ ಇಬ್ಬರೂ ಹೇಳಿಕೊಂಡಿದ್ದಾರೆ. ‘ಖಿಐ’ ಚಿತ್ರದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ‘ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುವುದು ಕನ್ನಡ ಚಿತ್ರರಂಗದಲ್ಲಿ ಹೊಸತೇನಲ್ಲ. ಹಾಗೆ ಎರಡು ಚಿತ್ರಗಳು ಬಿಡುಗಡೆಯಾದಾಗ, ಎರಡೂ ಚಿತ್ರಗಳು ಯಶಸ್ವಿಯಾದ ಉದಾಹರಣೆಗಳಿವೆ. ಅದು ರಜೆಯ ಸೀಸನ್ ಆಗಿರುವುದರಿಂದ, ಅವರೂ ಬರುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರಕ್ಕೂ ಒಳ್ಳೆಯದಾಗಲಿ.

ಜನ ಎರಡೂ ಚಿತ್ರಗಳನ್ನು ನೋಡುತ್ತಾರೆ ಎಂಬ ನಂಬಿಕೆ ಇದೆ. ನಾವೆಲ್ಲಾ ಕನ್ನಡ ಚಿತ್ರರಂಗದವರು. ಕನ್ನಡ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳು ಬೆಳೆಯುತ್ತಿವೆ. ಅದಕ್ಕೆ ನಾವು ಹೆಮ್ಮೆ ಪಡಬೇಕು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಬೇಕು. ಸುದೀಪ್ ಅವರು ನಮ್ಮ ಚಿತ್ರಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ನಾವೂ ಅವರ ಚಿತ್ರಕ್ಕೆ ಬೆಂಬಲ ಕೊಡುತ್ತೇವೆ’ ಎಂದರು.

ಇನ್ನು, ಭಾನುವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ನಮ್ಮ ಚಿತ್ರ ಬಿಡುಗಡೆ ಆಗುತ್ತಿರುವ ಬಗ್ಗೆ ಉಪೇಂದ್ರ ಅವರೇ ತಲೆಕೆಡಿಸಿಕೊಂಡಿಲ್ಲ. ನಾವ್ಯಾಕೆ ಡಿಸೆಂಬರ್ ೨೫ರಂದು ಬರುತ್ತಿದ್ದೇವೆ ಎಂದು ಅವರಿಗೂ ಗೊತ್ತಿದೆ. ಡಿ.೨೫ರಂದು ಚಿತ್ರ ಬಿಡುಗಡೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ರಜೆಯ ಸೀಸನ್. ಚಿತ್ರದಲ್ಲಿ ನಾನು ನಟಿಸಿದ್ದರೂ, ಹಣ ಹಾಕುತ್ತಿರುವವರು ಬೇರೆಯವರು. ಅವರ ಪ್ಲಾನ್ ಬೇರೆಯೇ ಇರುತ್ತದೆ. ಆಗಸ್ಟ್ ತಿಂಗಳಲ್ಲೇ ಚಿತ್ರ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದರಿಂದ ಉಪೇಂದ್ರ ಅವರ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಅದು ದೊಡ್ಡ ಸಿನಿಮಾ. ಆ ಚಿತ್ರದ ಬಗ್ಗೆ ನಾವು ಹೆದರಬೇಕು. ಉಪೇಂದ್ರ ನಮ್ಮ ಗುರುವಿದ್ದಂತೆ. ಅವರು ಮೊದಲು ಬರುತ್ತಿದ್ದಾರೆ. ಅವರ ಶಿಷ್ಯನಾಗಿ ನಾನು ಐದು ದಿನಗಳ ನಂತರ ಬರುತ್ತಿದ್ದೇನೆ. ಇಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ. ಒಂದಕ್ಕಿಂತ ಹೆಚ್ಚು ದೊಡ್ಡ ಚಿತ್ರಗಳು ಬಂದರೆ ಚಿತ್ರರಂಗಕ್ಕೆ ಸಮಸ್ಯೆ ಇಲ್ಲ. ಇದರಿಂದ ಅನುಕೂಲವೇ ಆಗುತ್ತದೆ’ ಎಂದರು.

ಅಲ್ಲಿಗೆ ಐದು ದಿನಗಳ ಅಂತರದಲ್ಲಿ ‘ಖಿಐ’ ಮತ್ತು ‘ಮ್ಯಾಕ್ಸ್’ ಎರಡೂ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಿ ಎರಡೂ ಗೆದ್ದ ಉದಾಹರಣೆಗಳಿವೆ ಎಂದು ಉಪೇಂದ್ರ ಹೇಳಿದ್ದಾರೆ. ಹಾಗಿರುವಾಗ, ಐದು ದಿನಗಳ ಅಂತರದಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಎರಡೂ ಚಿತ್ರಗಳನ್ನು ಪ್ರೇಕ್ಷಕರು ಕೈಹಿಡಿಯಲಿ ಎಂಬುದು ಚಿತ್ರರಂಗದ ಆಸೆ.

’ಯುಐ’ ವರ್ಸಸ್ ‘ಮ್ಯಾಕ್ಸ್ ’ ಸುಳ್ಳು ನಮ್ಮ ನಡುವೆ ಯಾವುದೇ ಕ್ಲ್ಯಾಶ್ ಇಲ್ಲ ಎಂದ ಉಪೇಂದ್ರ, ಸುದೀಪ್ ತಾಯಿ ಆಸೆ ಈಡೇರಲಿಲ್ಲ? ಸುದೀಪ್ ಅವರ ತಾಯಿ ಸರೋಜ ಸಂಜೀವ್ ಇತ್ತೀಚೆಗೆ ನಿಧನರಾಗಿದ್ದು ಗೊತ್ತೇ ಇದೆ. ಅವರ ನಿಧನಕ್ಕೂ ಮುನ್ನ ಅವರ ಆಸೆಯೊಂದನ್ನು ಈಡೇರಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಅವರ ಆಸೆ ಏನಾಗಿತ್ತು? ‘ಮ್ಯಾಕ್ಸ್’ ಚಿತ್ರವನ್ನು ನೋಡುವ ಆಸೆ ಅವರಿಗಿತ್ತಂತೆ. ಆದರೆ, ಅವರ ನಿಧನದಿಂದ ಆ ಆಸೆಯನ್ನು ಸುದೀಪ್ ಅವರಿಂದ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ. ‘ಈ ಚಿತ್ರವನ್ನು ನೋಡಬೇಕು ಎಂದು ನನ್ನ ತಾಯಿ ಆಸೆಪಟ್ಟಿದ್ದರು. ಆ ಆಸೆ ಈಡೇರಲಿಲ್ಲ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಅದು ಬಿಟ್ಟರೆ, ಅವರು ಪೂರ್ತಿಚಿತ್ರವನ್ನು ನೋಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ’ ಎಂದು ಹೇಳಿದರು.

ಪ್ರೇಕ್ಷಕರು ಯಾವತ್ತೂ ಮೇಲಿರುತ್ತಾರೆ: ’ಯುಐ’ ಚಿತ್ರದ ವಾರ್ನರ್ ಹೆಸರಿನ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿ ೨೦೪೦ರ ಕಾಲಘಟ್ಟವನ್ನು ಉಪೇಂದ್ರ ತೋರಿಸಿದ್ದಾರೆ. ಕೋವಿಡ್, ಗ್ಲೋಬಲ್ ವಾರ್ಮಿಂಗ್ ಮುಂತಾದ ಸಮಸ್ಯೆಗಳಿಂದ ೨೦೪೦ರಲ್ಲಿ ಏನಾಗಬಹುದು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲಾ ಪ್ರೇಕ್ಷಕರಿಗೆ ಅರ್ಥವಾಗುತ್ತದಾ? ಎಂಬ ಪ್ರಶ್ನೆಗೆ, ‘ಜನರಿಗೆ ಚಿತ್ರ ಅರ್ಥವಾಗುತ್ತದೆ, ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರು ಯಾವತ್ತೂ ನಮಗಿಂತ ಮೇಲಿರುತ್ತಾರೆ. ನಾವು ಏನೇ ಮಾಡಿದರೂ ಪ್ರೇಕ್ಷಕರಿಗಿಂತ ಮೇಲೆ ಹೋಗುವುದು ಕಷ್ಟ. ನಾನು ‘ಎ’ ಸಿನಿಮಾ ಮಾಡಿದಾಗ, ಚಿತ್ರ ನೋಡಿ ಗಾಂಧಿನಗರದ ಎಲ್ಲರೂ ಡಬ್ಬ ಸಿನಿಮಾ ಎಂದರು. ಸೆನ್ಸಾರ್ ಅಧಿಕಾರಿ, ಚಿತ್ರ ವೀಕ್ಷಣೆಗೆ ಯೋಗ್ಯವಿಲ್ಲ ಎಂದು ಪ್ರಮಾಣಪತ್ರವನ್ನೇ ಕೊಡುವುದಿಲ್ಲ ಎಂದರು. ಚಿತ್ರದ ಫೈನಾನ್ಶಿಯರ್ ಸಹ ಚಿತ್ರ ಚೆನ್ನಾಗಿಲ್ಲ, ದುಡ್ಡು ಕೊಡಲ್ಲ ಎಂದರು. ಜನ ಮಾತ್ರಅರ್ಥ ಮಾಡಿಕೊಂಡು ಗೆಲ್ಲಿಸಿದರು. ಹಾಗೆಯೇ ಈ ಚಿತ್ರವನ್ನೂ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ತಾಯಿ ಆಸೆ ಈಡೇರಲಿಲ್ಲ?:  ಸುದೀಪ್ ಅವರ ತಾಯಿ ಸರೋಜ ಸಂಜೀವ್ ಇತ್ತೀಚೆಗೆ ನಿಧನರಾಗಿದ್ದು ಗೊತ್ತೇ ಇದೆ. ಅವರ ನಿಧನಕ್ಕೂ ಮುನ್ನ ಅವರ ಆಸೆಯೊಂದನ್ನು ಈಡೇರಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರ ಆಸೆ ಏನಾಗಿತ್ತು? ‘ಮ್ಯಾಕ್ಸ್’ ಚಿತ್ರವನ್ನು ನೋಡುವ ಆಸೆ ಅವರಿಗಿತ್ತಂತೆ. ಆದರೆ, ಅವರ ನಿಧನದಿಂದ ಆ ಆಸೆಯನ್ನು ಸುದೀಪ್ ಅವರಿಂದ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ. ‘ಈ ಚಿತ್ರವನ್ನು ನೋಡಬೇಕು ಎಂದು ನನ್ನ ತಾಯಿ ಆಸೆಪಟ್ಟಿದ್ದರು. ಆ ಆಸೆ ಈಡೇರಲಿಲ್ಲ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಅದು ಬಿಟ್ಟರೆ, ಅವರು ಪೂರ್ತಿಚಿತ್ರವನ್ನು ನೋಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ’ ಎಂದು ಹೇಳಿದರು

ಆಂದೋಲನ ಡೆಸ್ಕ್

Recent Posts

ಉಡುತೊರೆ ಹಳ್ಳ ಜಲಾಶಯದ 490 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಪುಟಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಕಟ್ಟೆಗಳಿಗೆ ಕಾವೇರಿ…

4 hours ago

ಹನೂರು| ಕುಡಿಯುವ ನೀರಿನ ಸಮಸ್ಯೆ ಉದ್ಭವ: ಅಧಿಕಾರಿಗಳ ವಿರುದ್ಧವೇ ದೂರು ನೀಡಿದ ಗ್ರಾಮಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸುತ್ತಿಲ್ಲ.…

5 hours ago

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

6 hours ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

6 hours ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

6 hours ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

6 hours ago