ಚಿತ್ರ ಮಂಜರಿ

ಮದುವೆಯಾದ ಮೂರೇ ದಿನಕ್ಕೆ ಶೂಟಿಂಗ್‌ ಗೆ ಹಾಜರಾದ ಪ್ರಥಮ್

ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ ಮೊನ್ನೆಯಷ್ಟೇ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಸಪ್ತಪದಿ ತುಳಿದ ಮೂರೆ ದಿನಕ್ಕೆ ಒಳ್ಳೆ ಹುಡುಗ ಸಿನಿಮಾ ಶೂಟಿಂಗ್‌ ಗೆ ಹಾಜರಾಗಿದ್ದಾರೆ.

ಮದುವೆಯ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಪ್ರಥಮ್‌ ನೆನ್ನೆ ಮದುವೆಯಾಯ್ತು. ಸರಳವಾದ ಮದುವೆ 150 ಜನ ಕೂರಬಹುದಾದ ಪುಟ್ಟ ಚೌಟ್ರಿ, 300 – 400 ಜನ ಹರಸಿರಬಹುದೇನೋ, ಆಡಂಬರವಿಲ್ಲದೇ, ಯಾರ ಕಣ್ಣು ಕುಕ್ಕದಂತೆ ಆಯ್ತು. ನನ್ನ ಕಡೆಯಿಂದ ಅಶ್ವಿನಿ ಮೇಡಂ, ಧೃವ ಸರ್ಜಾ ಸರ್‌ ಸಹಿತ ಕೆಲ ಹೃದಯ ಶ್ರೀಮಂತರ ಆಶಿರ್ವಾದ ಪಡೆದ್ವಿ.

ನೆನ್ನೆಯಿಂದ ಕನಿಷ್ಟ 5000 ಕ್ಕೂ ಹೆಚ್ಚು ಜನ ಕಾಲ್‌, ಮೆಸೆಜ್‌ ಮಾಡ್ತಾನೇ ಇದಾರೆ. ಪ್ರಥಮ್‌ ನೀವು ಮಾಡಿದ್ದು ಮೋಸ, ನಿಮ್ಗೆ ಏನೋ ಗಿಫ್ಟ್‌ ಕೊಡಬೇಕು ಅಂತಿದ್ವಿ ಅಂತಾ. ನಾನು ಸಮಾಧಾನ ಹೇಳಿ ಸಾಕಾಗಿದೆ. ಇಲ್ಲಿಯವರೆಗೆ ಮದುವೆಗೆ ಬಂದಿರೋದು ಸಂಬಂಧದಿಂದ ಎರಡು ಉಂಗುರ, ಒಂದು ಚೈನ್‌ ಅಷ್ಟೇ. ನಿಮ್ಗೆ ಏನಾದ್ರೂ ಕೊಡಲೇಬೇಕೆಂದವರು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರಿಗೆ ಎರಡು ಹೊತ್ತು ಊಟ ಮಾಡಿಸಿ. ಪ್ರಥಮ್‌ ಗೆ ಕೊಟ್ಟೆ ಎಂದುಕೊಂಡು ಖುಷಿ ಪಡಿ. ಅದೇ ಆಶಿರ್ವಾದ.

ಕಾರ್ತಿಕ ಮಾಸ ಇರುವುದರಿಂದ ಸಧ್ಯಕ್ಕೆ ಯಾವುದೇ ಬೀಗೆ ಊಟ (ನಾನ್‌ ವೆಜ್‌) ಇರುವುದಿಲ್ಲ. ಬೆಂಗಳೂರಿನ ನನ್ನ ಆಪ್ತರಿಗೆ ವಿಶೇಷ ರಿಸೆಪ್ಷನ್‌ ಇರಲ್ಲ. ಯಾರಿಗೂ ನಾನು ಊಟ ಹಾಕ್ತಾ ಇಲ್ಲ. ನನ್ನ ಬಳಿ ದುಡ್ಡಿಲ್ಲ. ನನಗೆ ಆಸಕ್ತಿಯೂ ಇಲ್ಲ. ನಿಮ್ಮವ್ವ, ಅಪ್ಪ ಹೆಂಡ್ತಿಗೆ ಹೇಳ್ಬಿಟ್ಟು ಸ್ವೀಟ್‌ ಮಾಡಿಸಿಕೊಂಡು ತಿನ್ನಿ. ವಿಶ್‌ ಮಾಡಬೇಕನ್ಸಿದ್ರೆ ಮಾಡಿ, ಇಲ್ಲ ಅಂದ್ರೆ ಮಾಮೂಲಿ ಗೊತ್ತಲ್ಲಾ ಯುಟೂಬ್‌, ಸೋಶಿಯಲ್‌ ಮಿಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್‌ ಹಾಕೊಂಡು ಚೆನ್ನಾಗಿರಿ. ಸಧ್ಯಕ್ಕೆ ಕರ್ನಾಟಕದ ಅಳಿಯ, ಫಸ್ಟ್‌ ನೈಟ್‌ ವಿಥ್‌ ದೆವ್ವ ಸಿನಿಮಾ ಮುಗಿಸೋದು ನನ್ನ ಗುರಿ. ನಾಳಿದ್ದಿಂದ ಶೂಟಿಂಗ್‌ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

lokesh

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

23 mins ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

28 mins ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

33 mins ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

39 mins ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

11 hours ago