ಚಿತ್ರ ಮಂಜರಿ

ಮದುವೆಯಾದ ಮೂರೇ ದಿನಕ್ಕೆ ಶೂಟಿಂಗ್‌ ಗೆ ಹಾಜರಾದ ಪ್ರಥಮ್

ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ ಮೊನ್ನೆಯಷ್ಟೇ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಸಪ್ತಪದಿ ತುಳಿದ ಮೂರೆ ದಿನಕ್ಕೆ ಒಳ್ಳೆ ಹುಡುಗ ಸಿನಿಮಾ ಶೂಟಿಂಗ್‌ ಗೆ ಹಾಜರಾಗಿದ್ದಾರೆ.

ಮದುವೆಯ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಪ್ರಥಮ್‌ ನೆನ್ನೆ ಮದುವೆಯಾಯ್ತು. ಸರಳವಾದ ಮದುವೆ 150 ಜನ ಕೂರಬಹುದಾದ ಪುಟ್ಟ ಚೌಟ್ರಿ, 300 – 400 ಜನ ಹರಸಿರಬಹುದೇನೋ, ಆಡಂಬರವಿಲ್ಲದೇ, ಯಾರ ಕಣ್ಣು ಕುಕ್ಕದಂತೆ ಆಯ್ತು. ನನ್ನ ಕಡೆಯಿಂದ ಅಶ್ವಿನಿ ಮೇಡಂ, ಧೃವ ಸರ್ಜಾ ಸರ್‌ ಸಹಿತ ಕೆಲ ಹೃದಯ ಶ್ರೀಮಂತರ ಆಶಿರ್ವಾದ ಪಡೆದ್ವಿ.

ನೆನ್ನೆಯಿಂದ ಕನಿಷ್ಟ 5000 ಕ್ಕೂ ಹೆಚ್ಚು ಜನ ಕಾಲ್‌, ಮೆಸೆಜ್‌ ಮಾಡ್ತಾನೇ ಇದಾರೆ. ಪ್ರಥಮ್‌ ನೀವು ಮಾಡಿದ್ದು ಮೋಸ, ನಿಮ್ಗೆ ಏನೋ ಗಿಫ್ಟ್‌ ಕೊಡಬೇಕು ಅಂತಿದ್ವಿ ಅಂತಾ. ನಾನು ಸಮಾಧಾನ ಹೇಳಿ ಸಾಕಾಗಿದೆ. ಇಲ್ಲಿಯವರೆಗೆ ಮದುವೆಗೆ ಬಂದಿರೋದು ಸಂಬಂಧದಿಂದ ಎರಡು ಉಂಗುರ, ಒಂದು ಚೈನ್‌ ಅಷ್ಟೇ. ನಿಮ್ಗೆ ಏನಾದ್ರೂ ಕೊಡಲೇಬೇಕೆಂದವರು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರಿಗೆ ಎರಡು ಹೊತ್ತು ಊಟ ಮಾಡಿಸಿ. ಪ್ರಥಮ್‌ ಗೆ ಕೊಟ್ಟೆ ಎಂದುಕೊಂಡು ಖುಷಿ ಪಡಿ. ಅದೇ ಆಶಿರ್ವಾದ.

ಕಾರ್ತಿಕ ಮಾಸ ಇರುವುದರಿಂದ ಸಧ್ಯಕ್ಕೆ ಯಾವುದೇ ಬೀಗೆ ಊಟ (ನಾನ್‌ ವೆಜ್‌) ಇರುವುದಿಲ್ಲ. ಬೆಂಗಳೂರಿನ ನನ್ನ ಆಪ್ತರಿಗೆ ವಿಶೇಷ ರಿಸೆಪ್ಷನ್‌ ಇರಲ್ಲ. ಯಾರಿಗೂ ನಾನು ಊಟ ಹಾಕ್ತಾ ಇಲ್ಲ. ನನ್ನ ಬಳಿ ದುಡ್ಡಿಲ್ಲ. ನನಗೆ ಆಸಕ್ತಿಯೂ ಇಲ್ಲ. ನಿಮ್ಮವ್ವ, ಅಪ್ಪ ಹೆಂಡ್ತಿಗೆ ಹೇಳ್ಬಿಟ್ಟು ಸ್ವೀಟ್‌ ಮಾಡಿಸಿಕೊಂಡು ತಿನ್ನಿ. ವಿಶ್‌ ಮಾಡಬೇಕನ್ಸಿದ್ರೆ ಮಾಡಿ, ಇಲ್ಲ ಅಂದ್ರೆ ಮಾಮೂಲಿ ಗೊತ್ತಲ್ಲಾ ಯುಟೂಬ್‌, ಸೋಶಿಯಲ್‌ ಮಿಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್‌ ಹಾಕೊಂಡು ಚೆನ್ನಾಗಿರಿ. ಸಧ್ಯಕ್ಕೆ ಕರ್ನಾಟಕದ ಅಳಿಯ, ಫಸ್ಟ್‌ ನೈಟ್‌ ವಿಥ್‌ ದೆವ್ವ ಸಿನಿಮಾ ಮುಗಿಸೋದು ನನ್ನ ಗುರಿ. ನಾಳಿದ್ದಿಂದ ಶೂಟಿಂಗ್‌ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

lokesh

Recent Posts

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

46 mins ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

2 hours ago

ಸಾಲಬಾಧೆ; ರೈತ ಆತ್ಮಹತ್ಯೆ

ರಾವಂದೂರು: ರೈತರೊಬ್ಬರು ತಾವು ಬೆಳೆದ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.…

3 hours ago

ಹರಿಹರದಲ್ಲಿ ಶಂಕಿತ ಉಗ್ರನ ಬಂಧನ: ಪೊಲೀಸರಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಸುಹೈಲ್ ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರವನ್ನು ಸ್ಫೋಟಿಸಲು ಸಂಚು ನಡೆಸಿದ್ದ…

3 hours ago

ಮುಂಗಾರು ಮಳೆ ಹಿನ್ನಡೆ ; ರಾಜ್ಯದ ಹಲವೆಡೆ ಕೃಷಿ ಕುಂಠಿತ

ಬೆಂಗಳೂರು : ಮುಂಗಾರು ಮಳೆ ಹಿನ್ನಡೆಯಿಂದ ರಾಜ್ಯದ ಹಲವು ಕಡೆ ಕೃಷಿ ಚಟುವಟಿಕೆಗಳು ಕುಂಟುತ್ತಾ ಸಾಗುತ್ತಿದ್ದು, ದಾವಣಗೆರೆ, ಕಲಬುರಗಿ, ಬೆಳಗಾವಿ, ಹಾವೇರಿ,…

4 hours ago

ಮುಂಬೈನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.…

4 hours ago