ಚಿತ್ರ ಮಂಜರಿ

ಬಿಡುಗಡೆಗೊಂಡ ಮೂರೇ ದಿನಕ್ಕೆ ಭರ್ಜರಿ ಗಳಿಕೆಯತ್ತ ʼಪಠಾಣ್ʼ ಸಿನಿಮಾ

ನವದೆಹಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿರುವ ಹಿಂದಿಯ ಪಠಾಣ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೂರೇ ದಿನಗಳಲ್ಲಿ ₹313 ಕೋಟಿ ಗಳಿಕೆ ಕಂಡಿದೆ. ಜನವರಿ 25ರಂದು ತೆರೆ ಕಂಡ ಚಿತ್ರ ಮೂರನೇ ದಿನ ಹಿಂದಿಯಲ್ಲಿ ₹38 ಕೋಟಿ ನಿವ್ವಳ ಗಳಿಕೆ ಕಂಡಿದೆ. ಇತರೆ ಭಾಷೆಗಳಲ್ಲಿ ₹1.25 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಯಶ್‌ ರಾಜ್ ಫಿಲ್ಮ್ಸ್ ತಿಳಿಸಿದೆ.

‘ಮೂರನೇ ದಿನ ಚಿತ್ರವು ಭಾರತದಲ್ಲಿ ₹39.25 ನಿವ್ವಳ ಗಳಿಕೆ (ಒಟ್ಟು ₹47ಕೋಟಿ) ಕಂಡಿದ್ದು, ವಿದೇಶದಲ್ಲಿ ಒಟ್ಟು ₹43 ಕೋಟಿ ಗಳಿಸಿದೆ. ಒಟ್ಟಾರೆ ವಿಶ್ವದಾದ್ಯಂತ ಮೂರನೇ ದಿನದ ಗಳಿಕೆ ₹90 ಕೋಟಿ ಆಗಿದೆ’ ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 4 ವರ್ಷಗಳ ದೀರ್ಘ ವಿರಾಮದ ಬಳಿಕ ತೆರೆ ಕಂಡಿರುವ ಶಾರುಖ್ ಖಾನ್ ಅವರ ಚಿತ್ರ ಮೊದಲ ದಿನವೇ ವಿಶ್ವದಾದ್ಯಂತ ₹106 ಕೋಟಿ ಗಳಿಸಿತ್ತು. ಎರಡನೇ ದಿನ ₹113.6 ಕೋಟಿ ಮತ್ತು ಮೂರನೇ ದಿನ ₹90 ಕೋಟಿ ಗಳಿಸಿದೆ.

ಮೂರು ದಿನಗಳ ಬಳಿಕ ಚಿತ್ರ ಭಾರತದಲ್ಲಿ ₹201 ಕೋಟಿ ಮತ್ತು ವಿದೇಶದಲ್ಲಿ ₹112 ಕೊಟಿ ಗಳಿಕೆ ಕಂಡಿದೆ. ಪಠಾಣ್ ಚಿತ್ರವು ಮೊದಲ ದಿನ ಭಾರತ ಮತ್ತು ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಪಠಾಣ್ ಚಿತ್ರವನ್ನು ವಿಶ್ವದಾದ್ಯಂತ ಇರುವ ಭಾರತೀಯರು ಆಶೀರ್ವದಿಸಿದ್ದಾರೆ. ಚಿತ್ರ ಮುನ್ನುಗ್ಗುತ್ತಿರುವ ಪರಿ ಅಭೂತಪೂರ್ವ ಮತ್ತು ಐತಿಹಾಸಿಕವಾದದ್ದು’ಎಂದು ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯೆ ವಿಧಾನಿ ಹೇಳಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಪಠಾಣ್ ಚಿತ್ರವು 21 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

andolanait

Recent Posts

ರೀಲ್ ಹುಚ್ಚಿಗೆ ಬಲಿಯಾದ ಒಂದು ಅಮಾಯಕ ಜೀವ

ಸೂರ್ಯ ಪುತ್ರ ಆತನ ಹೆಸರು ದೀಪಕ್. ಮಲ್ಟಿ ನ್ಯಾಷನಲ್ ಕಂಪೆನಿ ಉದ್ಯೋಗಿ. ಕೇರಳದ ಕಣ್ಣೂರಿನ ರೈಲ್ವೇ ಸ್ಟೇಷನ್ ಪಕ್ಕದಿಂದ ಜನ…

2 hours ago

ಕಣಗಾಲ್ ಪುಟ್ಟಣ್ಣನವರ ಕರುಣಾಜನಕ ಮನೆ

ಸಿರಿ ಮೈಸೂರು ಬೆಳ್ಳಿಮೋಡ, ಗೆಜ್ಜೆಪೂಜೆ, ಎಡಕಲ್ಲು ಗುಡ್ಡದ ಮೇಲೆ, ಬಿಳಿ ಹೆಂಡ್ತಿ, ನಾಗರ ಹಾವು, ರಂಗನಾಯಕಿ, ಮಸಣದ ಹೂವು, ಶರಪಂಜರ...…

3 hours ago

ಮುದ್ದಿನ ಬೆಕ್ಕುಗಳಿಗೆ ಬೆಚ್ಚಗಿನ ಸಂಗ್ರಹಾಲಯ

ಅಕ್ಷತಾ ನೀವು ಬೆಕ್ಕುಪ್ರಿಯರಾಗಿದ್ದರೆ ಮೈಸೂರು-ನಂಜನಗೂಡು ರಸ್ತೆಯ ಈ ಮಾರ್ಜಾಲ ಸಂಗ್ರಹಾಲಯಕ್ಕೆ ಭೇಟಿಕೊಡಿ. ಮುದ್ದಿನ ಸಾಕುಪ್ರಾಣಿಯಾಗಿ ಮನೆಯೊಳಗಿರುವ ಬೆಕ್ಕನ್ನು ಕೌತುಕದ ಕಣ್ಣಿನಿಂದ…

3 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಉತ್ತರದ ಕಾಲೇಜುಗಳ ‘ಚಹ ಕಪ್ಪಿನಲ್ಲಿ ಬಿರುಗಾಳಿ’

ತಾಯಿಯೇ ಮೊದಲ ಶಿಕ್ಷಕಿ; ಮನೆಯೇ ಮೊದಲ ಪಾಠ ಶಾಲೆ’ ಎನ್ನುವ ನಾಣ್ಣುಡಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ದಲಿತರಲ್ಲದ ಬಲಿಷ್ಠ ಜಾತಿಗಳ ಅಷ್ಟೇ…

3 hours ago

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

3 hours ago

ಓದುಗರ ಪತ್ರ: ಖಾದಿ ಉಡುಪು ಕಡ್ಡಾಯ ಶ್ಲಾಘನೀಯ

ಖಾದಿ ಉದ್ಯಮಕ್ಕೆ ಹೆಚ್ಚಿನ ಅವಕಾಶ ಹಾಗೂ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ, ಸರಕಾರಿ ನೌಕರರು ಇನ್ನು ಮುಂದೆ ಪ್ರತಿ…

3 hours ago