ಬೆಂಗಳೂರು: ಕನ್ನಡದ ಅತ್ಯುತ್ತಮ ಚಿತ್ರಗಳನ್ನು ಹಾಗೂ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗಳನ್ನು ಸೈಮಾ, ಐಫಾ, ಫಿಲ್ಮ್ಫೇರ್ ಹೆಸರಿನಡಿಯಲ್ಲಿ ನೀಡಲಾಗುತ್ತಿತ್ತು. ಆದರೆ ಕನ್ನಡದವರಿಗೆಂದೇ ಪ್ರತ್ಯೇಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲ ಎಂಬ ಕೂಗು, ಕೊರಗು ಈ ಹಿಂದಿನಿಂದಲೂ ಸಹ ಕೇಳಿಬಂದಿತ್ತು.
ಈ ಕೊರಗಿಗೆ ಇದೀಗ ಫುಲ್ಸ್ಟಾಪ್ ಬಿದ್ದಿದ್ದು ನಂದಿ ಅವಾರ್ಡ್ಸ್ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಿ ಕಲಾವಿದರನ್ನು ಪ್ರಶಂಸಿಸಲಾಗುತ್ತಿದೆ. ಮೊದಲ ನಂದಿ ಅವಾರ್ಡ್ಸ್ ಕಾರ್ಯಕ್ರಮ ಡಿಸೆಂಬರ್ 6ರಂದು ನಗರದ ಒರಾಯನ್ ಮಾಲ್ನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಹಾಗೂ ಚಿತ್ರಗಳಿಗೆ ಯಾವ ಕೆಟಗರಿ ಅಡಿಯಲ್ಲಿ ಪ್ರಶಸ್ತಿ ಲಭಿಸಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಅತ್ಯುತ್ತಮ ಬಯೋಪಿಕ್: ವಿಜಯಾನಂದ
2. ಲೆಜೆಂಡರಿ ನಾಯಕಿ : ಲೀಲಾವತಿ
3. ಜೀವಮಾನ ಸಾಧನೆ ಪ್ರಶಸ್ತಿ : ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್
4. ಅತ್ಯುತ್ತಮ ಡಾಕ್ಯುಮೆಂಟರಿ: ಗಂಧದಗುಡಿ
5. ಅತ್ಯುತ್ತಮ ಉದಯೋನ್ಮುಖ ನಟ: ವಿಕ್ರಮ್ ರವಿಚಂದ್ರನ್
6. ಅತ್ಯುತ್ತಮ ಉದಯೋನ್ಮುಖ ನಟಿ: ರೀಷ್ಮ ನಾಣಯ್ಯ
7. ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು
8. ಅತ್ಯುತ್ತಮ ಹಾಸ್ಯನಟಿ: ಹೇಮಾದತ್
9. ಅತ್ಯುತ್ತಮ ಪೋಷಕನಟಿ – ವೀಣಾ ಸುಂದರ್
10. ಅತ್ಯುತ್ತಮ ನಟ ( ಕ್ರಿಟಿಕ್ಸ್ ) : ಸಂಚಾರಿ ವಿಜಯ್
11. ಅತ್ಯುತ್ತಮ ಸಂಭಾಷಣಾಕಾರ: ಮಾಸ್ತಿ
12. ಅತ್ಯುತ್ತಮ ಚಿತ್ರ: ಚಾರ್ಲಿ 777
13. ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ
14. ಅತ್ಯುತ್ತಮ ನಟ: ರಿಷಬ್ ಶೆಟ್ಟಿ
15. ಅತ್ಯುತ್ತಮ ನಟಿ: ಸಪ್ತಮಿ ಗೌಡ
16. ಅತ್ಯುತ್ತಮ ಖಳನಟ: ಡಾಲಿ ಧನಂಜಯ್
17. ಅತ್ಯುತ್ತಮ ಪೋಷಕನಟ: ಲೂಸ್ ಮಾದ ಯೋಗಿ
18. ಅತ್ಯುತ್ತಮ ನಟಿ ( ಕ್ರಿಟಿಕ್ಸ್ ) : ಹರಿಪ್ರಿಯಾ, ಅನು ಪ್ರಭಾಕರ್
19. ಬೆಸ್ಟ್ ಪ್ರೆಸ್ ಫೋಟೊಗ್ರಫರ್ : ಕೆಎನ್ ನಾಗೇಶ್ ಕುಮಾರ್
20. ಬೆಸ್ಟ್ ಪಿಆರ್ : ನಾಗೇಂದ್ರ
ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…
ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…
ಮೋಹಿತ್ ಎಸ್ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…
ರೇಣುಕಾ ನಿಡಗುಂದಿ ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…
ವಸುಧೇಂದ್ರ ಹುಡುಗನೊಬ್ಬನಿಗೆ ಮತ್ತೊಬ್ಬ ಹುಡುಗನ ಮೇಲೆ ಅದು ಹೇಗೆ ಆಕರ್ಷಣೆ ಮೂಡುತ್ತದೆ? ಅದು ಅವನ ಆಯ್ಕೆಯೆ? ಕಲಿತ ದುಶ್ಚಟವೆ? ವಿಷಮ…
ಹನೂರು : ಶ್ರೀ ಕ್ಷೇತ್ರ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ…