ಬಿಡುಗಡೆಗೆ ಸಜ್ಜಾಗಿರುವ ತಮ್ಮ ‘ಶಾಕುಂತಲಂ’ ಚಿತ್ರದ ಕುರಿತು ನಟಿ ಸಮಂತಾ ರುತು ಪ್ರಭು ಅವರು ಟ್ವೀಟರ್ನಲ್ಲಿ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದಾರೆ. ಈ ವೇಳೆ, ತಮ್ಮ ಬದುಕಿನ ಸವಾಲುಗಳನ್ನು ಎದುರಿಸಿ ಯಶಸ್ಸು ಕಾಣುತ್ತಿರುವ ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರ ನೀಡಿದ ಸಮಂತಾ, ‘ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಪೌರಾಣಿಕ ಕಥೆಯ ಪಾತ್ರಧಾರಿ ಶಾಕುಂತಲಾ ಹಾಗೆ ಜೀವನ ಮುಗಿಯಬಾರದು ಎಂದು ಉತ್ತರಿಸಿದ್ದಾರೆ.
ಭಾನುವಾರ ತಮ್ಮ ಟ್ವೀಟರ್ ಹ್ಯಾಂಡಲ್ನಲ್ಲಿ ‘ಆಸ್ಕ್ ಸ್ಯಾಮ್’ ಎಂದು ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಕೆಲಹೊತ್ತಿನಲ್ಲೇ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗರೆದರು. ಈ ನಡುವೆಯೇ ಒಬ್ಬರು, ‘ಹಲವಾರು ಸಂಕಷ್ಟಗಳನ್ನು ಎದುರಿಸಿಯೂ ನೀವು ಹೇಗೆ ಸಮರ್ಥವಾಗಿ ಮುಂದೆ ಸಾಗುತ್ತಿದ್ದೀರಿ? ಇಷ್ಟು ಶಕ್ತಿ ಸಾಮರ್ಥ್ಯ ಎಲ್ಲಿಂದ ದಕ್ಕಿತು?’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, ‘ಏಕೆಂದರೆ ನನ್ನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ. #ಶಾಕುಂತಲಾ’ ಎಂದು ಬರೆದುಕೊಂಡಿದ್ದಾರೆ.
‘ಸೀತಾ ರಾಮನ್’ ಖ್ಯಾತಿಯ ಮೃಣಾಲ್ ಠಾಕೂರ್ ಕೂಡ ಸಮಂತಾಗೆ ಪ್ರಶ್ನೆ ಕೇಳಿದ್ದು ವಿಶೇಷವಾಗಿತ್ತು. ‘ನಾವಿಬ್ಬರು ಯಾವಾಗ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತೇವೆ’ ಎಂದು ಪ್ರಶ್ನಿಸಿದ್ದಾರೆ. ಮೃಣಾಲ್ ಮುಂದಿನ ಸಿನಿಮಾ ಗುಮ್ರಾಹ್ ಗೆ ಶುಭ ಕೋರಿ ಪ್ರತಿಕ್ರಿಯಿಸಿದ ಸಮಂತಾ, ‘ಈ ಯೋಚನೆ ಇಷ್ಟವಾಯಿತು. ಜೊತೆಗೆ ಕೆಲಸ ಮಾಡೋಣ’ ಎಂದಿದ್ದಾರೆ.
ಸಮಂತಾ ಹಾಗೂ ದೇವ್ ಮೋಹನ್ ನಟನೆಯ ಶಾಕುಂತಲಾ ಏ.14ರಂದು ಬಿಡುಗಡೆಯಾಗಲಿದೆ.
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…
ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ನ ಐವರು ಮತ್ತು ಬಿಜೆಪಿಯ ಎರಡು…
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…
ಹೊಸದಿಲ್ಲಿ : 2025-26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.25ರಷ್ಟಿ ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ…
ಚಾಮರಾಜನಗರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…