ಚಿತ್ರ ಮಂಜರಿ

ಹಾಲಿವುಡ್‌ ನಟಿ ರಾಕ್ವೆಲ್​ ಇನ್ನಿಲ್ಲ

ವಾಷಿಂಗ್ಟನ್​: 1960ರ ದಶಕದಲ್ಲಿ ಮಾದಕ ತಾರೆ ಎಂದೇ ಹೆಸರು ಗಳಿಸಿದ್ದ ರಾಕ್ವೆಲ್​ ವೆಲ್ಚ್​​ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಇಹಲೋಕ ತ್ಯಜಿಸಿದ್ದಾರೆ. ಬುಧವಾರ (ಫೆ. 15)ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಅಮೆರಿಕ ಟ್ಯಾಬ್ಲೋಯ್ಡ್​ ನ್ಯೂಸ್​ ಅರ್ಗನೈಸೆಷನ್​ ಟಿಎಂಜೆಡ್​ ವರದಿ ಮಾಡಿದೆ.ಹಾಲಿವುಡ್​ನ ಉನ್ಮಾದದ ಬೆಡಗಿ: 1966 ಫ್ಯಾಂಟಸ್ಟಿಕ್​ ವೊಯೇಜ್​ ಮತ್ತು ಒನ್​ ಮಿಲಿಯನ್​ ಇಯರ್​ B. C ಚಿತ್ರದ ಮೂಲಕ ರಾಕ್ವೆಲ್​ ಹೆಸರು ಗಳಿಸಿದ್ದರು. B. C ಚಿತ್ರದಲ್ಲಿ ಒಂದೆರಡು ನಿಮಿಷದ ಪಾತ್ರದಲ್ಲಿ ಮಿಂಚಿದ್ದರೂ ತಮ್ಮ ಉಡುಪಿನಿಂದಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಕೊಂಚ ಹೆಚ್ಚು ಎನ್ನುವ ಮಾದಕತೆ ಜೊತೆ ಬಿಕಿನಿಯಲ್ಲಿ ಮಿಂಚಿದ್ದ ಅವರು, ಉದ್ಯಮದಲ್ಲಿ ಸೆಕ್ಸ್​​ ಸಿಂಬಲ್​ ಆಗಿ ರೂಪುಗೊಂಡರು. ಇದಾದ ಬಳಿಕ ವೆಲ್ವ್ ಸ್ಟಾರ್​ಡಮ್​ ಕೂಡ ಹೆಚ್ಚಿತ್ತು. 1960 ಮತ್ತು 1970ರ ದಶಕದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಅವರು ರೂಪುಗೊಂಡರು. ​
ಇನ್ನು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಬಾಚಿಕೊಂಡಿದ್ದಾರೆ. 1974ರಲ್ಲಿ ನಟಿಸಿದ್ದ ಮ್ಯೂಸಿಯಲ್​ ಕಾಮಿಡಿ ಚಿತ್ರ ದಿ ತ್ರಿ ಮುಸ್ಕಿಟೀರ್ಸ್​ ಸಿನಿಮಾಗಾಗಿ ಗೋಲ್ಡನ್​ ಗ್ಲೋಬ್​ನಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಇನ್ನು ನಟಿಯ ಸಾವಿನ ಕುರಿತು ತಿಳಿಸಿರುವ ​ಅಮೆರಿಕ ಮೂಲದ ಸುದ್ದಿ ಸಂಸ್ಥೆ ಫಾಕ್ಸ್​ ನ್ಯೂಸ್​, ವೆಲ್ಚ್​ ಸಿನಿ ಉದ್ಯಮದಲ್ಲಿ ಉನ್ಮಾದ ನಟಿಯಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಟಿವಿ ಮತ್ತು ನಾಟಕ ಮಾಧ್ಯಮಗಳಲ್ಲೂ ಗುರುತಿಸಿಕೊಂಡಿದ್ದರು.

andolanait

Recent Posts

ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು

ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…

6 hours ago

ಅರವತ್ತು ದಿನಗಳು ಕಳೆಯಿತು…ಫಲದ ನಿರೀಕ್ಷೆಯಲ್ಲಿ!

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…

6 hours ago

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…

6 hours ago

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…

6 hours ago

ಗ್ರಾಪಂಗಳ ಅತ್ಯುತ್ತಮ ಕೆಲಸಕ್ಕೆ ಉತ್ತಮ ಪ್ರಶಸ್ತಿ

ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…

6 hours ago

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

1 day ago