ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ ಹೇಳುವ ಬಗೆ ಹೇಗೆ. ಇಂಥಹ ಸ್ಥಿತಿ ಕಾಣಿಸಿಕೊಂಡಿರುವದು ತಾಲ್ಲೂಕಿನ ಹುರ ಪಂಚಾಯಿತಿಯಲ್ಲಿ. ಇಲ್ಲಿನ ಅಭಿವೃದ್ದಿ ಅಧಿಕಾರಿಯೇ ಗ್ರಾಮಪಂಚಾಯಿತಿಯ ಆವರಣದಲ್ಲೆ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಾಗಾದರೆ ಸ್ವಚ್ಛತೆ ಎನ್ನುವದು ಇವರ ಪಾಲಿಗೆ ಬಾಯಲ್ಲಿ ಹೇಳಲು ಮಾತ್ರ ತಮಗೆ ಅದು ಅನುಸರಿಸಲು ಅಲ್ಲವಾ ಎಂದು ಗ್ರಾಮಸ್ಥರು ಬಹಿರಂಗವಾಗಿ ಆಡಿಕೊಳ್ಳುವಂತೆ ಈ ಮೂತ್ರ ವಿಸರ್ಜನೆಯ ಪ್ರಕರಣ ಬೆಳದಿದೆ. ಇಲ್ಲಿನ ಪಂಚಾಯಿತಿ ಆಭಿವೃದ್ದಿ ಅಧಿಕಾರಿ ಪಂಚಾಯಿತಿ ಆವರಣದೊಳಗೆ ನಿಂತು ಮೂತ್ರ ವಿಸರ್ಜಿಸುತ್ತಿರುವ ಚಿತ್ರ ಈಗ ಜಾಲ ತಾಣಗಳಲ್ಲಿ ಹರಿದಾಡುತ್ತಲೆ ತಾಲೂಕಿನ ಅಧಿಕಾರಿಗಳ ಪಾಲಿಗೆ ಇತ್ತ ನುಂಗಲೂ ಆಗದ ಉಗಳಲೂ ಆಗದ ತುತ್ತಾಗಿ ಪರಿಗಣಿಸಿದೆ.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿರುವ ಈ ಮಹಾಶಯರು ಹಾಡಾ ಹಗಲು ಅದೂ ಬಸ್ ನಿಲ್ದಾಣದ ಏದುರಿನಲ್ಲೇ ಜನರು ನೋಡುತ್ತಿರುವಾಗಲೇ ಗ್ರಾಮ ಪಂಚಾಯಿತಿ ಆವರಣದಲ್ಲೇ ಮೂತ್ರ ವಿಸರ್ಜಮಾಡಿದ್ದು ಎಲ್ಲರ ಅಪಹಾಸ್ಯದ ಟೀಕಿಗೆ ಗುರಿಯಾಗಿದೆ. ಮನೆ ಮನಗೆ ಶೌಚಾಲಯ ನಿರ್ಮಿಸಿ ಎನ್ನುವ ಸರ್ಕಾರದ ಸುತ್ತೋಲೆಗೆ ಪಂಚಾಯಿತಿ ಅಧಿಕಾರಿ ತಾನೇ ಬಹಿರಂಗವಾಗಿ ಅದೂ ಪಂಚಾಯಿತಿ ಆವರಣದಲ್ಲೇ ಮೂತ್ರ ವಿಸರ್ಜಿಸಿ ನೀಡುತ್ತಿರುವ ಗೌರವವೆ ಇದು ಕೇಳಿಸಿಕೊಳ್ಳುವಂತಾಗಿದೆ ಹುರಾ ಗ್ರಾಮ ಪಂಚಾಯಿತಿ ಅಧಿಕಾರಿಯ ಸ್ಥಿತಿ.
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…
ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…
ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…