ಆಂದೋಲನ ಪುರವಣಿ

ಅನ್ನದಾತರ ಅಂಗಳ : ಅಳಿವಿನಂಚಿನಲ್ಲಿ ‘ಹಳ್ಳಿಕಾರ್’

ಇತರೇ ಹಸುವಿನ ತಳಿಗಳ ಹಾಲಿಗಿಂತ ಹಳ್ಳಿಕಾರ್ ತಳಿ ಹಸುವಿನ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳಾದ ಮೊಸಲು,ಮಜ್ಜಿಗೆ, ಬೆಣ್ಣೆ, ತುಪ್ಪ ಸತ್ವಯುತವಾದದ್ದು ಹಾಗೂ ಸರ್ವಶ್ರೇಷ್ಟ ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ. ಇದು ನಿಜವೂ ಕೂಡ. ಹಾಗಾಗಿಯೇ ಹಳ್ಳಿಕಾರ್ ತಳಿ ಹಸುವಿನ ಹಾಲಿನ ಉತ್ಪನ್ನಗಳಿಗೆ ಬೆಲೆ ಹೆಚ್ಚಿರುತ್ತದೆ. ಎತ್ತುಗಳಿಗೂ ದುಬಾರಿ ಬೆಲೆ, ಜಾತ್ರೆ ಸಂದರ್ಭಗಳಲ್ಲಿ ಬರುವ ಜೋಡಿ ಲಕ್ಷಾಂತರ ರೂ.ಗಳಿಗೆ ಮಾರಾಟವಾಗುತ್ತವೆ. ದೇಸೀ ಜಾತ್ರೆಗಳಲ್ಲಿ ಹಳ್ಳಿಕಾರ್ ತಳಿಯ ದನಗಳು, ಎತ್ತುಗಳು ಇಲ್ಲದಿದ್ದರೆ ಅದಕ್ಕೆ ಕಳೆಯೇ ಇರುವುದಿಲ್ಲ.

– ಜಯಶಂಕರ್ ಬದನಗುಪ್ಪೆ

ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಕರ್ನಾಟಕದ ಜನಪ್ರಿಯ ಮತ್ತು ಹೆಮ್ಮೆಯ ಹಳ್ಳಿಕಾರ್ ಕೂಡ ಒಂದು.

ಈ ತಳಿಯ ಪೋಷಿಸಿ ಬೆಳೆಸಿಕೊಂಡು ಬಂದವರು ಯದುವಂಶ ಪಂಗಡಕ್ಕೆ ಸೇರಿದ ಯದುವಂಶಿ ಹಳ್ಳಿಕಾರ ಸಮುದಾಯ. ಈ ಸಮುದಾಯದ ಹೆಸರಿನಿಂದಲೇ ಈ ತಳಿ ಗುರುತಿಸಿಕೊಂಡಿದೆ. ಭಾರತದ ಗೋ ತಳಿಗಳಲ್ಲಿರುವ ಮೂರು ವಿಭಾಗಗಳಲ್ಲಿ ಹಳ್ಳಿಕಾರ್‌ಅನ್ನು ಅಪ್ಪಟ ಕೆಲಸಗಾರ ತಳಿಾಂಗಿ ಗುರುತಿಸಲಾಗುತ್ತದೆ. ಸತತ 24 ಗಂಟೆ 10-14 ಟನ್ ಭಾರ ಎಳೆಯಬಲ್ಲ ಅಸದೃಶ ಶಕ್ತಿ ಸಾಮರ್ಥ್ಯ, ಅದ್ಭುತ ವೇಗ ಹೊಂದಿರುವ ಅಪರೂಪದ ತಳಿ ಇದು. ದಿನಕ್ಕೆ 40-50 ಮೈಲಿ ದೂರವನ್ನು ಯಾವ ವಿಶ್ರಾಂತಿಯ ಅಗತ್ಯವಿಲ್ಲದೆ ಕ್ರಮಿಸಬಲ್ಲ ಹಳ್ಳಿಕಾರ್ ಕರ್ನಾಟಕದ, ಅಷ್ಟೇಕೆ ಇಡೀ ಭಾರತದ ಹೆಮ್ಮೆಯ ತಳಿ. ‘boss inidicus’ ವರ್ಗಕ್ಕೆ ಸೇರುವ ಹಳ್ಳಿಕಾರ್ ಹೆಚ್ಚಾಗಿ ಕಂಡುಬರುವುದು ಹಳ್ಳಿಕಾರ ಸಮುದಾಯ ವಾಸಿಸುವ ಹಳ್ಳಿಕಾರ್ ಬೆಲ್ಟ್ ಎಂದೇ ಗುರುತಿಸಲ್ಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಹಾಸನ, ಬೆಂಗಳೂರು , ಚಿಕ್ಕಮಗಳೂರು ಚಿತ್ರದುರ್ಗ ಪ್ರದೇಶಗಳಲ್ಲಿ ಈ ಸಮುದಾಯದ ಜನ ಹೆಚ್ಚಾಗಿ ವಾಸಿಸುತ್ತಾ ಈ ಹಳ್ಳಿಕಾರ ತಳಿ ದನಗಳನ್ನು ಅಭಿವೃದ್ಧಿಪಡಿಸಿದರು.

ಮಹಾಭಾರತ ಯುದ್ಧ ಕಾಲದಿಂದ ಹಿಡಿದು ಹಲವಾರು ರಾಜ ಮಹಾರಾಜರುಗಳ ಯುದ್ಧಗಳು ಸೇರಿದಂತೆ ಇತ್ತೀಚಿನ ಬ್ರಿಟೀಷರ ವಿರುದ್ಧ ಗೆಲ್ಲಲು ಹಳ್ಳಿಕಾರ್ ದನಗಳ ಕೊಡುಗೆ ಅಪಾರ ಎನ್ನುವ ಜಾನಪದ ಕತೆಗಳು ಇಂದಿಗೂ ಗ್ರಾಮೀಣ ಭಾಗದಲ್ಲಿ ಜನ ಜನಿತ ವಾಗಿವೆ. ಹಳ್ಳಿಕಾರ್ ದನಗಳನ್ನು ಹೊಂದಿರುವ ರೈತರು ದನಗಳಿಗೆ ಹೆಸರು ನಾಮಕರಣ ಮಾಡಿ ಮನೆಯ ಮಗನಂತೆ ಹೆಮ್ಮೆಯಿಂದ ನೋಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಇವುಗಳು 170-190 ಸೆಂ.ಮೀ. ಎತ್ತರ ಹಾಗೂ ಅಂದಾಜು 450 ಕೆ.ಜಿ. ತೂಕ ಇರುತ್ತವೆ. ಹಸುವಿನ ಕರಾವಿನ ಅವಧಿ 250ರಿಂದ 310 ದಿನಗಳು. ಅತ್ಯಂತ ಕಡಿಮೆ ಆಹಾರ ಸೇವನೆ ಇವುಗಳ ಇನ್ನೊಂದು ವೈಶಿಷ್ಟ್ಯ. ಹಿಂದಿನಿಂದಲೂ ಬೀಜದ ಹೋರಿಗಳನ್ನು ಆರಿಸಲು ಕೇವಲ ದೈಹಿಕ ಆಕಾರವೊಂದನ್ನೆ ಮಾನದಂಡವಾಗಿ ಪರಿಗಣಿಸಿದ್ದರಿಂದ ಈಗಿನ ತಳಿಗಳು ದಿನಕ್ಕೆ 2-4 ಲೀಟರ್ ಹಾಲು ಕೊಡುತ್ತವೆ. ಹೆಚ್ಚೆಂದರೆ ದಿನಕ್ಕೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯ ಸೇರಿ ಐದು ಲೀಟರ್ ಹಾಲು ಕೊಡಬಹುದಷ್ಟೆ.

ಸಣ್ಣ- ಮಳ್ಳಿಗೆ, ಗುಜುಮಾವು ಎಂಬ ಎರಡು ಉಪತಳಿಗಳು ಇದ್ದವು ಎನ್ನುತ್ತಾರಾದರೂ ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಭಾರತೀಯ ಅಂಚೆ ಇಲಾಖೆ ಹಳ್ಳಿಕಾರ್ ಚಿತ್ರಪಟವಿರುವ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ಈ ತಳಿಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಸೇರಿದಂತೆ ಕೆಲ ಸಂಘ ಸಂಸ್ಥೆಗಳು ಕ್ರಮ ಕೈಗೊಂಡಿವೆಯಾದರೂ ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಸಾಗಿದೆ. ಇರುವ ಗೋವುಗಳು ಕೂಡ ಕೇವಲ ಶೇ. 60-70 ತಳಿಶುದ್ಧತೆ ಹೊಂದಿವೆ ಎಂದು ಹೇಳಲಾಗುತ್ತದೆ.

ಭಾರತೀಯ ಗೋತಳಿಗಳು ಅವುಗಳ ಬಳಕೆ ಮತ್ತು ಗುಣಲಕ್ಷಣಗಳಿಗನುಸಾರವಾಗಿ ಹಾಲಿನ ತಳಿ, ಕೆಲಸಗಾರ ತಳಿ ಹಾಗೂ ಉಭಯೋದ್ದೇಶದ ತಳಿಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ.

ಕೆಲಸಗಾರ ತಳಿಗಳು: ಈ ತಳಿಗಳಲ್ಲಿ ಗಂಡು ಒಳ್ಳೆಯ ಕೆಲಸಗಾರ,ಹಸುಗಳ ಹಾಲಿನ ಉತ್ಪಾದನೆ ಕಡಿಮೆ. ಪ್ರತಿ ಹಾಲು ಕೊಡುವ ಚಕ್ರಕ್ಕೆ ಸರಾಸರಿ 600 ಕೆ.ಜಿ.ಯಷ್ಟು ಮಾತ್ರ ಇರುತ್ತದೆ. ಸಾಮಾನ್ಯವಾಗಿ ಇವು ಬಿಳಿ, ರೂಪಾಯಿ ಬಣ್ಣ ಅಥವಾ ಬೂದು ಬಣ್ಣದ್ದಾಗಿರುತ್ತವೆ. ಒಂದು ಜೊತೆ ಎತ್ತುಗಳು 1 ಸಾವಿರ ಕೆ.ಜಿ.ಯಷ್ಟು ಭಾರ ಎಳೆಯಬಲ್ಲವು. ಸಾಧಾರಣ ರಸ್ತೆಯಲ್ಲಿ ಗಾಡಿ ಎಳೆದುಕೊಂಡು ಗಂಟೆಗೆ 6 ರಿಂದ 8 ಕಿ.ಮೀ. ನಡೆದು ದಿನಕ್ಕೆ 40 ರಿಂದ 50 ಕಿ.ಮೀ. ದೂರ ಕ್ರಮಿಸಬಲ್ಲವು. ಕರ್ನಾಟಕದ ಹಳ್ಳಿಕಾರ್,ಅಮೃತಮಹಲ್, ತಮಿಳುನಾಡಿನ ಕಂಗಾಯಂ, ಅಂಬ್ಲಾಚೆರಿ ತಳಿಗಳು ಈ ವಿಭಾಗದಲ್ಲಿ ಗುರುತಿಸಲ್ಪಟ್ಟಿವೆ.

ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜಿನೆಟಿಕ್ ರಿಸೋರ್ಸಸ್‌ನಲ್ಲಿ ಒಟ್ಟು 39 ದೇಸೀ ತಳಿಗಳ ಹೆಸರುಗಳು ದಾಖಲಾಗಿವೆ. ಭಾರತೀಯ ಗೋತಳಿಗಳಲ್ಲಿ ಬಹಳಷ್ಟು ತಳಿಗಳು ಅವುಗಳು ಅಭಿವೃದ್ಧಿಗೊಂಡ ಪ್ರದೇಶಗಳ ಹೆಸರಿನಿಂದಲೇ ಗುರುತಿಸಲ್ಪಡುತ್ತವೆ. ಉದಾಹರಣೆಗೆ ಮಲೆನಾಡು ಗಿಡ್ಡ, ಹಳ್ಳಿಕಾರ್, ಅಮೃತಮಹಲ್…


ನಮ್ಮ ಮನೆಯಲ್ಲಿ ಸುಮಾರು 60 ವರ್ಷದಿಂದಲೂ ಹಳ್ಳಿಕಾರ್ (ನಾಡತಳಿ) ಹಸುಗಳು ಮತ್ತು ಎತ್ತುಗಳನ್ನು ಸಾಕುತ್ತಿದ್ದೇವೆ. ಈ ತಳಿಯ ಹಸುಗಳ ಹಾಲನ್ನೇ ನಾವು ಮನೆಗೆ ಬಳಸುತ್ತೇವೆ. ಮುಡಕುತೊರೆ ಜಾತ್ರೆಯ ದನಗಳ ಪರಿಷೆಗೆ ನಮ್ಮ ಎತ್ತುಗಳು ಹೋಗುತ್ತಿದ್ದವು. ಹಿಂದೆ ನಮ್ಮ ತಂದೆ ಹಳ್ಳಿಕಾರ್ ತಳಿಯನ್ನು ಸಾಕುತ್ತಿದ್ದರು. ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.

-ಬಿ.ಎಸ್.ಶಿವಕುಮಾರ್, ಕೃಷಿಕರು.


ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪಶು ವೈದ್ಯ ಆಸ್ಪತ್ರೆಗಳಲ್ಲಿ ಹಳ್ಳಿಕಾರ್ ತಳಿಯ ಕೃತಕ ಗರ್ಭಧಾರಣೆ ಇಂಜೆಕ್ಷನ್ ಲಭ್ಯವಿದೆ. ಸರ್ಕಾರವು ಪಶು ವೈದ್ಯ ಇಲಾಖೆಗೆ ಹಳ್ಳಿಕಾರ್ ತಳಿಯ ಲಭ್ಯತೆಗಾಗಿ ಸಹಕಾರ ನೀಡುತ್ತಿದೆ. ಈ ಭಾಗದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಡಾ.ಷಡಕ್ಷರಸ್ವಾಮಿ. ಉಪನಿರ್ದೇಶಕರು. ಪಶಯವೈದ್ಯ ಇಲಾಖೆ. ಮೈಸೂರು.

andolanait

Recent Posts

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

3 mins ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

2 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

4 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

4 hours ago

ಸಿಎಂ ಡಿಕೆಶಿ ಹಾಗೂ ಸಚಿವ ಲಕ್ಷ್ಮಣ್ ಸವದಿ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಸಹಕಾರ ಮಹಾಮಂಡಲದ ಅಧ್ಯಕ್ಷ ಸ್ಥಾನಕ್ಕೆ ಜಿ.ಟಿ. ದೇವೇಗೌಡ ಆಯ್ಕೆಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

4 hours ago

ಓದುಗರ ಪತ್ರ: ನೀತಿ ಪಾಠಗಳು ಶಿಕ್ಷಣ ಭಾಗವಾಗಬೇಕೆಂಬ ಸಲಹೆ ಸ್ವಾಗತಾರ್ಹ

ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…

10 hours ago