ಆಂದೋಲನ ಪುರವಣಿ

ಅನ್ನದಾತನ ಅಂಗಳ : ಕುರಿಗಾಹಿಗಳ ನಿಲ್ಲದ ಪಯಣ…

ರೈತರ ಜಮೀನುಗಳೇ ಇವರ ನಿಲ್ದಾಣ
– ಸೌಮ್ಯ ಹೆಗ್ಗಡಹಳ್ಳಿ

ರೈತಾಪಿ ವರ್ಗವು ಬೆಳೆಗಳನ್ನು ಬೆಳೆದು ಕಟಾವು ಮುಗಿಸಿದ ನಂತರ ಮುಂದಿನ ಬೆಳೆಗಾಗಿ ಮಣ್ಣಿನ ಫಲವತ್ತತೆಗೆ ಬೇಕಾದ ಗೊಬ್ಬರ ಹಾಕುವ ಉದ್ದೇಶದಿಂದ ಕುರಿಮಂದೆಗಳನ್ನು ತಮ್ಮ ಜಮೀನುಗಳಿಗೆ ಬರಮಾಡಿಕೊಂಡು ವಾರಗಟ್ಟಲೇ ಅಲ್ಲೇ ತಂಗಿಸಿಕೊಂಡು ಗೊಬ್ಬರ ಪಡೆದುಕೊಳ್ಳುವುದು ರೂಢಿಯಲ್ಲಿರುವ ಪರಿಪಾಠ.

ಕುರಿಮಂದೆಯ ಮಾಲೀಕರ ಮೂಲ: ಮಂದೆ ಕುರಿಗಳನ್ನು ಸಾಕಿ ನಿರ್ವಹಿಸುವವರು ಮೂಲತಃ ಚಿತ್ರದುರ್ಗ, ಹುಲಿಯೂರು, ಮಂಡ್ಯ, ಕೆ.ಆರ್. ನಗರ,ಹಾವೇರಿ ಮುಂತಾದ ಸ್ಥಳಗಳಿಗೆ ಸೇರಿದವರು. ಇವರು ಶಾಶ್ವತವಾಗಿ ಒಂದೆಡೆ ನೆಲೆ ನಿಲ್ಲುವುದಿಲ್ಲ, ಅಲೆಮಾರಿ ಬದುಕಿಗೆ ಹೊಂದಿಕೊಂಡಿರುವ ಇವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಂದೆ ಕುರಿಗಳೊಡನೆ ಸ್ಥಳಾಂತರವಾಗುತ್ತಿರುತ್ತಾರೆ. ಅಂದಾಜು ಒಂದು ಜಿಲ್ಲೆಯಲ್ಲಿ ತಿಂಗಳುಗಟ್ಟಲೆ ನೆಲೆನಿಲ್ಲುತ್ತಾರೆ. ಕುರಿಗಳ ಮಂದೆಯನ್ನು ತಂಗಿಸುವ ರೈತರ ಜಮೀನುಗಳಲ್ಲೇ ಇವರ ವಾಸ.

ಯಾವ ಸಮಯ : ಬಹುಪಾಲು ಬೇಸಿಗೆ ಸಮಯದಲ್ಲಿ, ಸಾಮಾನ್ಯವಾಗಿ ಭತ್ತ ಕಟಾವಾದ ಸಂದರ್ಭದಲ್ಲಿ ಇವರ ಆಗಮನವಾಗುತ್ತದೆ. ಬೆಳೆ ಕೊಯ್ಲಾದ ನಂತರ ಜಮೀನಿನ ಮಾಲಿಕರು ಇವರ ಜತೆ ಅಗತ್ಯವಿರುವಷ್ಟು ದಿನ ಒಪ್ಪಂದ ಮಾಡಿಕೊಂಡು ಕುರಿಮಂದೆಯನ್ನು ತಂಗುವಂತೆ ಮಾಡುತ್ತಾರೆ. ಕುರಿಮಂದೆ ಅಲ್ಲಿರುವಷ್ಟು ದಿನ ಹಾಕುವ ಹಿಕ್ಕೆ ಗೊಬ್ಬರ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಮುಂದಿನ ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ. ಕುರಿಮಂದೆಯ ಮಾಲೀಕರು ಎಕರೆಗಿಷ್ಟು ಎಂಬ ಲೆಕ್ಕದಲ್ಲಿ ಜಮೀನು ಮಾಲೀಕರಿಂದ ಹಣ ಪಡೆಯುತ್ತಾರೆ. ಇರುವಷ್ಟು ದಿನ ಜಮೀನಿನ ಮಾಲೀಕರಿಂದ ಊಟೋಪಚಾರ ಪಡೆಯುವುದುಂಟು.
ಈ ರೀತಿಯ ಕುರಿಮಂದೆ ಸಾಕುವ ವೃತ್ತಿಯಲ್ಲಿರುವವರು ಏನಿಲ್ಲೆಂದರೂ ಒಬ್ಬರು ೫೦೦ ರಿಂದ ೧೦೦೦ ಕುರಿಗಳಿಗೆ ಮಾಲೀಕರಾಗಿರುತ್ತಾರೆ.

ಉತ್ಕೃಷ್ಟ ಗೊಬ್ಬರ: ಮಂದೆ ಕುರಿಗಳ ಪಿಕ್ಕೆ ಹಾಗೂ ಮೂತ್ರದಲ್ಲಿರುವ ಅಂಶವು ತುಂಬಾ ಉತ್ಕೃಷ್ಟವಾದ ಅಂಶವನ್ನು ಹೊಂದಿರುವುದರಿಂದ ರೈತರಿಗೆ ಇದೊಂದು ವರದಾನ.ರಾಸಾಯನಿಕ ಮುಕ್ತ ಸಾವಯವ ಗೊಬ್ಬರ ಜಮೀನಿಗೆ ಲಭ್ಯವಾಗುತ್ತದೆ. ಮಣ್ಣೂ ಸಹ ಆರೋಗ್ಯವಾಗಿರಲು ಸಹಕಾರಿ.

ಸರ್ಕಾರದ ಸೌಲಭ್ಯಗಳು: ಮಂದೆ ಕುರಿಗಳನ್ನು ನಿರ್ವಹಿಸುವ ರೈತ ಕುಟುಂಬಗಳಿಗೆ ಸರ್ಕಾರದಿಂದ ಟಾರ್ಚ್‌ಗಳು, ಸ್ವೆಟರ್, ರೇನ್ ಕೋಟ್, ಕುರಿಗಳಿಗೆ ಜಂತುಹುಳು ಬಾಧೆ ಉಂಟಾದಾಗ ಬಳಸಲು ಔಷಧಿಗಳನ್ನು ನೀಡಲಾಗುತ್ತದೆ. ಕುರಿಗಳು ಅನಾರೋಗ್ಯಕ್ಕೀಡಾದಾಗ ಚಿಕಿತ್ಸೆ ಕೊಡಿಸಲು ಆಯಾ ತಾಲ್ಲೂಕುಗಳಲ್ಲಿ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಕುರಿಗಳ ಉಣ್ಣೆಯಿಂದ ಆರೋಗ್ಯಯುತ ಮ್ಯಾಟ್‌ಗಳು, ಕಂಬಳಿಗಳನ್ನು ತಯಾರಿಸಲಾಗುತ್ತದೆ. ಈ ವೃತ್ತಿ ಕೌಶಲಕ್ಕೆ ನೆರವಾಗಲು ಕುರಿಹುಣ್ಣೆ ನಿಗಮದಿಂದಲೇ ತರಬೇತಿ ನೀಡಿ, ಕುರಿ ಉಣ್ಣೆ ಕಟಾವು ಮಾಡುವ ಯಂತ್ರಗಳನ್ನೂ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು ೧೬ ಕುರಿ ಮತ್ತು ಉಣ್ಣೆ ಸಹಕಾರ ಸಂಘಗಳಿವೆ. ಈ ಸಹಕಾರ ಸಂಘಗಳ ಮೂಲಕ ಯೋಜನೆಗಳನ್ನು ತಲುಪಿಸಲಾಗುತ್ತಿದೆ.ಮಂದೆ ಕುರಿಗಳನ್ನು ಮೇಯಿಸಿಕೊಂಡು ಗುಳೆ ಹೋದ ಸಂದರ್ಭದಲ್ಲಿ ಯಾವುದಾದರೂ ಕುರಿ ಆಕಸ್ಮಿಕವಾಗಿ ಸತ್ತರೆ ನಿಗಮದಿಂದ ಒಂದು ಕುರಿಗೆ ೬ ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಪ್ರಕೃತಿ ವಿಕೋಪದಿಂದ ಮರಣ ಹೊಂದಿದರೆ ಕಂದಾಯ ಇಲಾಖೆಯಿಂದ, ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಂಡರೆ ಅರಣ್ಯ ಇಲಾಖೆಯಿಂದ, ವಿದ್ಯುತ್ ಅಪಘಾತದಿಂದ ಸತ್ತುಹೋದರೆ ಕೆಇಬಿ ಯಿಂದ ಪರಿಹಾರ ನೀಡಲಾಗುತ್ತದೆ. ಸರ್ಕಾರದ ವತಿಯಿಂದ ಮಂದೆಕುರಿಗಳಿಗೆ ಉಚಿತ ವಿಮೆ ಮಾಡಿಕೊಡಲಾಗಿದೆ.ಆದರೆ ಕುರಿಮಂದೆ ನಿರ್ವಹಿಸುವ ಅನೇಕರಿಗೆ ಸರ್ಕಾರದ ಈ ಸೌಲಭ್ಯದ ಅರಿವಿಲ್ಲ.



ಮಂದೆ ಕುರಿಗಳನ್ನು ಮೇಯಿಸುವ ಕುರಿಗಾಹಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು,ಜೊತೆಗೆ ವ್ಯಾಪಾರ ಮಾಡಲು ಘೆಉಔ (್ಞಠಿಜಿಟ್ಞಚ್ಝ ಛಿ ಞಚ್ಟಛಿಠಿಜ್ಞಿಜ ್ಝಜಿಞಜಿಠಿಛಿ) ಎಂಬ ಡಿಜಿಟಲ್ ಇ- ಮಾರ್ಕೆಟಿಂಗ್ ಆಪ್ ಅನ್ನು ಸದುಪಯೋಗ ಮಾಡಿಕೊಳ್ಳಬಹುದು. ಮೈಸೂರು ತಾಲ್ಲೂಕಿನಲ್ಲಿ ಈ ವರೆಗೆ ೮ ಸಂಘಗಳಲ್ಲಿರುವವರು ಘೆಉಔ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಡಾ.ಡಿ.ಎನ್. ನಾಗರಾಜು, ಸಹಾಯಕ ನಿರ್ದೇಶಕರು ,ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಮೈಸೂರು.


ನಮ್ಮ ಕುಟುಂಬದವರು ೨೫ ವರ್ಷಗಳಿಂದ ಕುರಿಗಳನ್ನು ಮೇಯಿಸಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ಕುಲ ಕಸುಬೇ ಇದಾಗಿರುವುದರಿಂದ ಊರೂರು ಸುತ್ತಿ ಕುರಿಗಳನ್ನು ಮೇಯಿಸುತ್ತೇವೆ. ಇದರಿಂದ ಆದಾಯ ಬರದಿದ್ದರೂ, ಕುರಿಗಳ ಪಾಲನೆ ದೃಷ್ಟಿಯಿಂದಾದರೂ ಈ ಕಸುಬು ಮಾಡುತ್ತಿದ್ದೇವೆ.

– ಚೆೆಂಗಪ್ಪ, ಮಂದೆಕುರಿಗಾಹಿ,ಸಿರಾ, ತುಮಕೂರು ಜಿಲ್ಲೆ.



ಜಮೀನಿನಲ್ಲಿ ಕುರಿಗಳೊಟ್ಟಿಗೆ ವಾಸ್ತವ್ಯ ಹೂಡುತ್ತೇವೆ. ಗಂಡಸರು ಕುರಿಗಳನ್ನು ಮೇಯಿಸಲು ಹೊರಹೋಗುತ್ತಾರೆ, ನಾವು ಅವರಿಗೆ ಊಟೋಪಚಾರ ಮಾಡಿಕೊಂಡು ಸಂಜೆವರೆಗೆ ಇಲ್ಲಿರುವ ಸಣ್ಣ ಕುರಿಗಳ ಪಾಲನೆ ಮಾಡುತ್ತೇವೆ. ತಿಂಗಳಿಗೋ ಅಥವಾ ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತೇವೆ.

-ಕೆಂಚಮ್ಮ ಮಂದೆ ಕುರಿಗಾಹಿ, ಚೆಂಗಪ್ಪನ ಪತ್ನಿ, ತುಮಕೂರು.

—————

andolanait

Recent Posts

‘ಪ್ರಾದೇಶಿಕ ಪಕ್ಷಗಳಿಂದಷ್ಟೇ ರಾಜ್ಯಗಳ ಅಭಿವೃದ್ಧಿ ಸಾಧ್ಯ’

‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…

1 min ago

ಡಿಕೆಶಿ ಬರಿಗೈಲಿ ವಾಪಸ್

ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…

11 mins ago

ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ಮನವಿ : ಸ್ಪೀಕರ್‌ಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…

12 hours ago

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ : ವರದಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ

ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…

13 hours ago

ಹವಾಮಾನ ವೈಪರೀತ್ಯ : ವಿಮಾನದಲ್ಲೇ ಸಿಲುಕಿದ್ದ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು

ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…

14 hours ago