ಆಂದೋಲನ ಪುರವಣಿ

ಯೋಗ ಕ್ಷೇಮ : ಪೈಮೋಸಿಸ್ ಬಗ್ಗೆ ಅರಿಯಿರಿ

ಪೆನ್ನಿಸ್ ಅಥವಾ ಶಿಶ್ನದ ಮೂತ್ರ ದ್ವಾರದ ಸುತ್ತಲಿನ ಗುಂಡನೆಯ ನುಣುಪಾದ ಭಾಗವನ್ನು ಗ್ಲ್ಯಾನ್ಸ್ ಪೆನ್ನಿಸ್ ಎನ್ನುತ್ತೇವೆ. ಗ್ಲ್ಯಾನ್ಸ್ ಪೆನ್ನಿಸ್ ಅನ್ನು ಸುತ್ತುವರಿದಿರುವ ಶಿಶ್ನದ ಮುಂಭಾಗದ ಚರ್ಮವನ್ನು ಪ್ರೆಪ್ಯೂಸ್ ಅಥವಾ ಪೋರ್ ಸ್ಕಿನ್ ಅರ್ಥಾತ್ ಮುಂತೊಗಲು ಎನ್ನುತ್ತೇವೆ. ಪ್ರೆಪ್ಯೂಸ್ ಮೃದುವಾಗಿ ಚಲನಶೀಲವಾಗಿದ್ದು, ಗ್ಲ್ಯಾನ್ಸ್ ಪೆನ್ನಿಸ್‌ಗೆ ಭದ್ರತೆಯನ್ನೊದಗಿಸಿ ಯಾವಾಗಲೂ ಮುಚ್ಚಿರುತ್ತದೆ. ಸ್ನಾನ ಮಾಡುವಾಗ ಶಿಶ್ನದ ಮುಂಭಾಗದ ಚರ್ಮವನ್ನು ಮೇಲೆಳೆದು ಶುಭ್ರವಾದ ನೀರಿನಲ್ಲಿ ತೊಳೆದು ಒಳಭಾಗದ ನೈರ್ಮಲ್ಯವನ್ನು ಕಾಪಾಡಬೇಕು.

ಪ್ರೆಪ್ಯೂಸ್ ಅಥವಾ ಶಿಶ್ನದ ಮುಂತೊಗಲು ಕಿರಿದಾಗಿ ಮತ್ತು ಬಿಗಿಯಾಗಿ ಗ್ಲ್ಯಾನ್ಸ್ ಪೆನ್ನಿಸ್‌ಗೆ ಅಂಟಿಕೊಂಡಂತೆ ಇದ್ದು, ಮೂತ್ರ ದ್ವಾರದಿಂದ ಹಿಂದೆ ಸರಿಸಲು ಅಥವಾ ಎಳೆಯಲು ಸಾಧ್ಯವಾಗುವುದಿಲ್ಲ. ಶಿಶ್ನದ ಬಿಗಿಯಾದ ಮತ್ತು ಕಿರಿದಾದ ಮುಂತೊಗಲು ಅಥವಾ ಟೈಟ್ ಸ್ಕಿನ್ ಅನ್ನು ಪೈಮೋಸಿಸ್ ಎನ್ನುತ್ತೇವೆ.

ಮಕ್ಕಳಲ್ಲಿ ಅಲ್ಪ ಪ್ರಮಾಣದಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಪ್ರೆಪ್ಯೂಸ್ ಹಿಂದೆ ಸರಿದು ಗ್ಲ್ಯಾನ್ಸ್ ಪೂರ್ಣ ಕಾಣುತ್ತದೆ. ಆದರೆ ಹಲವರಲ್ಲಿ ಮಧ್ಯಮ ಅಥವಾ ತೀವ್ರತರದಲ್ಲಿ ಪೈಮೋಸಿಸ್ ಇದ್ದಾಗ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಬೇಕಾಗುತ್ತದೆ.

ಪೈಮೋಸಿಸ್ ಅಲ್ಪ ಪ್ರಮಾಣದಲ್ಲಿ ಇದ್ದರೆ ಮೂತ್ರ ದ್ವಾರ ಮತ್ತು ಸೊಲ್ವ ಗ್ಲ್ಯಾನ್ಸ್ ಕಾಣಿಸುತ್ತದೆ. ಪೂರ್ಣ ಪ್ರಮಾಣದ ಪೈಮೋಸಿಸ್ ಇರುವವರಲ್ಲಿ ಶಿಶ್ನದ ಮುಂಭಾಗ ಚರ್ಮದಿಂದ ಮುಚ್ಚಿಕೊಂಡಿರುತ್ತದೆ. ಮೂತ್ರ ದ್ವಾರದ ರಂಧ್ರ ಮಾತ್ರ ಕಾಣಿಸುತ್ತದೆ. ಚರ್ಮವನ್ನು ಹಿಂದೆ ಎಳೆಯಲು ಸಾಧ್ಯವಾಗುವುದಿಲ್ಲ. ಪೈಮೋಸಿಸ್ ಇರುವ ವ್ಯಕ್ತಿಗಳ ಮೂತ್ರ ದ್ವಾರದ ಸುತ್ತ ಇರುವ ಚರ್ಮವು ಉಂಗುರ ಅಥವಾ ರಬ್ಬರ್ ಬ್ಯಾಂಡ್‌ನಂತೆ ಕಾಣುತ್ತದೆ. ಮೂತ್ರ ವಿಸರ್ಜಿಸುವಾಗ ಮುಂಭಾಗ ಬೆಲೂನ್‌ನಂತೆ ಸಲ್ಪ ಊದಿಕೊಳ್ಳಬಹುದು. ಪ್ರಾಯದವರಲ್ಲಿ ಶಿಶ್ನ ನಿಮಿರಿದಾಗ ನೋವು ಕಾಣಿಸಿಕೊಳ್ಳಬಹುದು. ತೀವ್ರ ತರದ ಪೈಮೋಸಿಸ್ ಇದ್ದ ಹಲವರಲ್ಲಿ ಮೂತ್ರ ನಾಳದ ಪ್ಯಾರಪೈಮೋಸಿಸ್, ಬೆಲನೈಟಿಸ್ ಮುಂತದ ಸೋಂಕು ಬರಬಹುದು. ಶಿಶ್ನದ ಚರ್ಮದ ಒಳಭಾಗವನ್ನು ಎಳೆದು ತೊಳೆಯಲು ಸಾಧ್ಯವಾಗದೇ ಇರುವುದರಿಂದ ದುರ್ವಾಸನೆ ಬರಬಹುದು.

ದೊಡ್ಡವರಲ್ಲಿ ಸಕ್ಕರೆ ಕಾಯಿಲೆ, ಲೈಕೆಸ್‌ಸ್ಲೀರೋಸಿಸ್, ಇನ್ಫೆಕ್ಷನ್, ಗ್ಸಿರೋಸಿಸ್ ಬೆಲನೋಟಿಕ್ ಮುಂತಾದ ಕಾಯಿಲೆಗಳು ಇರುವವರಲ್ಲಿ ಪೈಮೋಸಿಸ್ ಕಾಣಿಸಿಕೊಳ್ಳಬಹುದು.

ಪೈಮೋಸಿಸ್‌ಗೆ ಕಾರಣವಾಗುವ ಅಂಶಗಳನ್ನು ನಿವಾರಿಸುವುದು, ಪೈಮೋಸಿಸ್ ಮುಂದುವರಿದು ತೊಂದರೆಯಾಗುತ್ತಿದ್ದರೆ ಪೈಮೋಸಿಸ್ ಚರ್ಮದ ಒಳಭಾಗದ ಸ್ಕೃಪಿಂಗ್ ಅಥವಾ ಸರ್‌ಕಮ್‌ಸಿಷನ್ (ಮುಂಜಿ) ಮಾಡಿಸುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.

andolanait

Recent Posts

ಮೂರು ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ ; ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾದ…

3 hours ago

ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ ; ತಮಿಳುನಾಡಿಗೆ 9,000 ಕ್ಯುಸೆಕ್‌ ನೀರು ಹರಿಸಲು ಆದೇಶ

ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಮುಂದಿನ 15 ದಿನಗಳ…

5 hours ago

ಮಳೆ ಕೊರತೆ ನೀಗಿಸಲು ಕೃತಕ ಮಳೆ ಅಸ್ತ್ರ : ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್

ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಜಲಾಶಯಗಳಲ್ಲಿ ನೀರು ಕುಸಿತ - ನಾಳೆಯೇ ಏಜೆನ್ಸಿ ಅಂತಿಮ ಬೆಂಗಳೂರು : ರಾಜ್ಯದ…

7 hours ago

ವರ್ಷಕ್ಕೆ ಮೂರು ಸಿಲಿಂಡರ್ ಉಚಿತ – ತಮಿಳುನಾಡು ಜನರಿಗೆ ವಿಜಯ್‌ ಸರ್ಕಾರದ ಬಂಪರ್‌ ಆಫರ್‌!

ಚೆನ್ನೈ: ತಮಿಳುನಾಡಿನ ಜನರಿಗೆ ವಿಜಯ್‌ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದ್ದು, ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ವಿಚಾರದಲ್ಲಿ ಮಹತ್ವದ…

12 hours ago

ತಮಿಳುನಾಡಿಗೆ ಕಾವೇರಿ ನೀರು: ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ…

12 hours ago

ಕಲಾಪಗಳೇ ನಡೆಯದ ಅಧಿವೇಶನ

ಸಂಸತ್ತಿನಲ್ಲಾಗಲಿ ಅಥವಾ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಾಗಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯದೆ ಗದ್ದಲ, ಧರಣಿ, ಪ್ರತಿ ಭಟನೆಗಳು…

13 hours ago