ಕರ್ನಾಟಕ 320 ಕಿಮೀ ಉದ್ದದ ಕರಾವಳಿ ತೀರ ಹೊಂದಿದೆ. ಆ ಮೂಲಕ ಸಮುದ್ರದ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಅದರಂತೆ 5.65 ಲಕ್ಷ ಹೆಕ್ಟೇರಿನಷ್ಟು ವಿವಿಧ ಒಳನಾಡು ಜಲಸಂಪನ್ಮೂಲಗಳೂ ಇದ್ದು ಒಳನಾಡು ಮೀನುಗಾರಿಕೆ ಹೆಚ್ಚಿನ ಅವಕಾಶವೂ ಇದೆ.
ಮೊನ್ನೆ ಮೊನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಳನಾಡು ಮೀನುಗಾರರ ಸಮಾವೇಶ ನಡೆದಿದೆ. ಅದಕ್ಕೆ ಪೂರಕವಾಗಿ ಉತ್ತಮ ಮಳೆಯಿಂದ ನಾಡಿನಾದ್ಯಂತ ಇರುವ ಬಹುತೇಕ ಕರೆ-ಕಟ್ಟೆಗಳು ತುಂಬಿವೆ. ಇದರಿಂದಾಗಿ ಒಳನಾಡು ಮೀನುಗಾರಿಕೆಗೆ ಮಹತ್ವ ಬಂದಿದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿಯೂ ಮೀನುಗಾರರಿಗೆ ಹಲವಾರು ಸೌಲಭ್ಯಗಳು ದೊರೆಯುತ್ತಿವೆ.
ರಾಜ್ಯದಲ್ಲಿ ಇರುವ ತರಬೇತಿ ಕೇಂದ್ರಗಳು
ಕೆಆರ್ಎಸ್, ಮಂಡ್ಯ (9535373793)
ಬೇತಮಂಗಲ (ಕೋಲಾರ)
ಬಿ.ಆರ್. ಪ್ರಾಜೆಕ್ಟ್ ಭದ್ರಾವತಿ
ಕಬಿನಿ, ಎಚ್.ಡಿ. ಕೋಟೆ (9986755434)
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8277200300
ಇಲಾಖೆಯಿಂದ ಸಿಗುವ ಸೌಲಭ್ಯಗಳು
* ಮೀನು ಸಾಕಾಣೆ ಮಾಡುವವರೊಂದಿಗೆ ಸಮನ್ವುಂತೆ, ಮೇಲ್ವಿಚಾರಣೆ
* ಒಳನಾಡು ಮೀನುಗಾರಿಕೆ ವಲುಂದ ಅಭಿವೃದ್ಧಿಗಾಗಿ ಸಂಪನ್ಮೂಲಗಳ ಗರಿಷ್ಟ ಬಳಕೆಗೆ ಪೂರಕವಾಗಿ ಕಾರ್ಯ
* ಮೀನುಗಾರರ ಸಾವಾಜಿಕ ಹಾಗೂ ಆರ್ಥಿಕ ಸ್ಥಿತಿುಂನ್ನು ಸುಧಾರಿಸುವುದು
* ಮೀನು ವಾರುಕಟ್ಟೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಸೃಜಿಸುವುದು
* ಜಲಕೃಷಿಗೆ ಬೇಕಾದ ಉತ್ತಮ ಗುಣಮಟ್ಟದ ಮೀನುಮರಿಗಳ ಉತ್ಪಾದನೆ ಮತ್ತು ಸರಬರಾಜು
* ಮೀನು ಕೃಷಿಕರಿಗೆ ತಾಂತ್ರಿಕ ಸಹಾುಂ, ಸಿಬ್ಬಂದಿಗೆ ತರಬೇತಿ ನೀಡುವುದು
* ನಿಗದಿತ ಶುಲ್ಕ ಪಾವತಿಸಿ ಜಲಸಂಪನ್ಮೂಲಗಳಾದ ಜಲಾಶುಂಗಳು, ನದಿ ಭಾಗಗಳ ಮೀನು ಹಿಡಿುಂಲು ಪರವಾನಿಗೆ ನೀಡುವುದು.
* ಜೌಗು ಭೂಮಿ ಮತ್ತು ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೈಗೊಳ್ಳಲು ಮೀನು ಕೊಳ ನಿರ್ವಾಣಕ್ಕಾಗಿ ಸಹಾುಂ
* ಮೀನು ಮರಿ ಖರೀದಿಗೆ ಸಹಾುಂಧನ, ಅಲಂಕಾರಿಕ ಮೀನುಗಾರಿಕೆುಂನ್ನು ಪ್ರೋತ್ಸಾಹಿಸಲು ಅಕ್ವಾಪಾರ್ಕ್ ಸ್ಥಾಪನೆಗೆ ಸಹಾಯ.
* ಮೀನು ಮರಿ ಕೇಂದ್ರಗಳ ನವೀಕರಣ, ಜಲಾಶುಂದಲ್ಲಿ ಮೀನು ಮರಿ ಬಿತ್ತನೆ.
* ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಣೆ
* ಮೀನುಗಾರಿಕೆಗೆ ಪೂರಕವಾಗಿ ಮಣ್ಣು ಮತ್ತು ನೀರಿನ ಗುಣಮಟ್ಟ ಉಚಿತ ಪರೀಕ್ಷೆ ಸೌಲಭ್ಯ (ಜಿಲ್ಲಾ ಮಟ್ಟದ ಕಚೇರಿಗಳಲ್ಲಿ)
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಜಿಲ್ಲಾವಾರು ಮೀನುಗಾರರ ಸಂಘಗಳನ್ನು ರಚನೆ ಮಾಡಲಾಗುತ್ತಿದೆ. ಆ ಮೂಲಕ ಮೀನುಗಾರರಿಗೆ ಸೂಕ್ತ ಸಹಾಯಧನ, ಮೀನು ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮ ಮೀನುಗಾರಿಕೆ ಮಹಾಮಂಡಲದಿಂದ ಮೀನು ಮರಿ ನೀಡುವುದು, ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದೇವೆ. ಅನುದಾನ ಹಂಚಿಕೆ ಆಧಾರದ ಮೇಲೆ ನಾವು ತರಬೇತಿ ಸೇರಿ ಇತರ ಸೌಲಭ್ಯಗಳನ್ನು ಒದಗಿಸುತ್ತೇವೆ. – ಎಂ.ಎನ್. ಸಿದ್ದಲಿಂಗರಾಜು, ಅಧ್ಯಕ್ಷರು, ಕರ್ನಾಟಕ ರಾಜ್ಯ ಮೀನುಗಾರಿಕೆ ಮಹಾಮಂಡಲ
ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.…
ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…
ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್ಗಳಷ್ಟು…
ಮಂಡ್ಯ: ಲ್ಯಾಬ್ ಟು ಲ್ಯಾಂಡ್ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…
ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…