Andolana originals

ಉತ್ತನಹಳ್ಳಿಯಲ್ಲೇ ಯುವ ದಸರಾ ಜೋಶ್

ಕೆ.ಬಿ.ರಮೇಶನಾಯಕ

ಸೆ.೨೩ರಿಂದ ೨೭ ರವರೆಗೆ ಐದು ದಿನಗಳ ಕಾಲ ಖ್ಯಾತನಾಮರ ಸಂಗೀತ ಕಾರ್ಯಕ್ರಮ 

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಲಕ್ಷಾಂತರ ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಮಾಡುವ ಯುವ ದಸರಾ ಕಾರ್ಯಕ್ರಮ ಈ ಬಾರಿಯೂ ರಿಂಗ್ ರಸ್ತೆಯಲ್ಲಿರುವ ಉತ್ತನಹಳ್ಳಿ ಸಮೀಪ ನಡೆಯಲಿದೆ. ಇದರಿಂದಾಗಿ ಹಲವು ದಿನ ಗಳಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆಯೇ ಅಥವಾ ಉತ್ತನಹಳ್ಳಿ ಗ್ರಾಮದ ಬಳಿ ನಡೆ ಯುವುದೇ ಎನ್ನುವ ಬಗ್ಗೆ ಉಂಟಾಗಿದ್ದ ಕುತೂಹಲ, ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

ಕಳೆದ ವರ್ಷ ಹೆಸರಾಂತ ಸಂಗೀತ ನಿರ್ದೇಶಕರಾದ ಇಳಯ ರಾಜ, ಎ.ಆರ್.ರೆಹಮಾನ್ಕಾರ್ಯಕ್ರಮ ನಡೆಸಿ ಕೊಟ್ಟಿದ್ದ ಜಾಗದಲ್ಲೇ ಈ ಬಾರಿ ಹಾಲಿವುಡ್, ಬಾಲಿವುಡ್ ಗಾಯಕರು ಮೋಡಿ ಮಾಡಲಿದ್ದು, ಕಲಾವಿದರ ದಿನಾಂಕ ನಿಗದಿಯಾಗಿದೆ. ಯುವ ದಸರಾ ಉಪ ಸಮಿತಿ ಪದಾಧಿಕಾರಿಗಳು ಈಗಾಗಲೇ ಕಲಾವಿದರ ಜೊತೆಗೆ ಮಾತುಕತೆ ನಡೆಸಿ ದಿನಾಂಕ ನಿಗದಿಪಡಿಸಿದ್ದು, ಶೀಘ್ರದಲ್ಲೇ ಅಂತಿಮ ಹಂತಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಐದು ದಿನಗಳ ಕಾಲ ಮೋಡಿ: ಸೆ.೨೩ರಿಂದ ೨೭ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಮೊದಲನೇ ದಿನವೇ ಅರ್ಜುನ್ ಜನ್ಯ ನೇತೃತ್ವದ ಸ್ಯಾಂಡಲ್‌ವುಡ್ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೆ.೨೪ರಂದು ಪ್ರೀತಂ ಚಕ್ರವರ್ತಿ, ಸೆ.೨೫ರಂದು ಜುಬಿನ್ ನೌಟಿಯಾ, ೨೬ರಂದು ದೇವಿಶ್ರೀ ಪ್ರಸಾದ್, ೨೭ರಂದು ಸುನಿಧಿ ಚೌಹಾಣ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಯಾಂಡಲ್‌ವೈಟ್ ನೈಟ್‌ನಲ್ಲಿ ಸಾಧುಕೋಕಿಲ ತಂಡ ಸೇರಿದಂತೆ ಅನೇಕ ತಂಡಗಳು ಕಾರ್ಯಕ್ರಮ ನಡೆಸಿದ್ದು, ಅರ್ಜುನ್ ಜನ್ಯ ಅವರಿಗೆ ಮೊದಲನೆಯದಾಗಿದೆ ಎಂದು ಹೇಳಲಾಗಿದೆ.

ಸಿದ್ಧತಾ ಕಾರ್ಯ ಶೀಘ್ರ ಆರಂಭ: ಉತ್ತನಹಳ್ಳಿ ಸಮೀಪದ ದೇವಲಾಪುರ ಗ್ರಾಮದ ಮಾರ್ಗದಲ್ಲಿ ನೂರು ಎಕರೆ ವಿಶಾಲ ಪ್ರದೇಶದಲ್ಲಿವೇದಿಕೆ ನಿರ್ಮಾಣ ಮಾಡುವ ಕಾರ್ಯ ಶೀಘ್ರ ಶುರುವಾಗಲಿದೆ. ಐದು ಸಾವಿರ ಮಂದಿ ಪ್ರಾಯೋಜಕತ್ವದವರು, ಐದು ಸಾವಿರ ಅಧಿಕಾರಿಗಳ ವರ್ಗ, ಜನಪ್ರತಿನಿಧಿಗಳು, ಪಾಸ್ ಹೊಂದಿರುವವರು, ೩೦ರಿಂದ ೫೦ ಸಾವಿರ ಮಂದಿ ಕುಳಿತು ವೀಕ್ಷಣೆ ಮಾಡುವ ರೀತಿಯಲ್ಲಿ ಶಾಮಿಯಾನ ಹಾಕಲಾಗುತ್ತದೆ ಎಂದು ಅಧಿಕಾರಿಗಳ ಮೂಲಗಳು ಖಚಿತಪಡಿಸಿವೆ. ಕಳೆದ ಬಾರಿ ಯುವ ದಸರೆಗೆ ಹದಿನೈದು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಈ ಬಾರಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

” ಈ ಬಾರಿಯೂ ಯುವ ದಸರೆಯು ಉತ್ತನಹಳ್ಳಿ ಗ್ರಾಮದ ಸಮೀಪದಲ್ಲೇ ನಡೆಯಲಿದೆ. ಐದು ದಿನಗಳ ಕಾಲ ಹೆಸರಾಂತ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶೀಘ್ರದಲ್ಲೇ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಕೆಲವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.”

ಕೆ.ಆರ್.ರಕ್ಷಿತ್, ಆಯುಕ್ತರು, ಎಂಡಿಎ

ಪ್ರಾಯೋಜಕತ್ವಕ್ಕೆ ಮೊರೆ: ನಾಡಹಬ್ಬಕ್ಕೆ ರಾಜ್ಯಸರ್ಕಾರ ಉದಾರವಾಗಿ ಅನುದಾನ ನೀಡಿದರೂ ಯುವ ದಸರಾ ಉಪ ಸಮಿತಿಯು ಪ್ರಾಯೋಜಕತ್ವದ ಮೂಲಕ ಒಂದಿಷ್ಟು ಹಣ ಸಂಗ್ರಹಿಸಲು ಪ್ಲಾನ್ ಮಾಡಿದೆ. ದೊಡ್ಡ ದೊಡ್ಡಕಂಪೆನಿಗಳು, ಕಾರ್ಖಾನೆಗಳು, ಬಿಲ್ಡರ‍್ಸ್ ಸಂಸ್ಥೆಗಳು ಸೇರಿದಂತೆ ಇನ್ನಿತರ ಅಂದರೆ ೫ ರಿಂದ ೨೫ ಲಕ್ಷ ರೂ. ತನಕ ಪ್ರಾಯೋಜಕತ್ವ ನೀಡುವಂತಹ ಸಂಸ್ಥೆಗಳ ಮೊರೆ  ಹೋಗಲಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

47 mins ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

49 mins ago

ಓದುಗರ ಪತ್ರ: ಅಪಾಯಕಾರಿ ಮರದ ಕೊಂಬೆ ತೆರವುಗೊಳಿಸಿ

ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…

51 mins ago

ಓದುಗರ ಪತ್ರ: ನವ ಭಾರತದ ನಿರ್ಮಾತೃ ಡಾ.ಅಂಬೇಡ್ಕರ್

ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…

53 mins ago

ಆಂತರಿಕ ಕ್ಲೋಭೆಯಿಂದ ಭಾರತ ರಕ್ಷಿಸಿದ ಅಂಬೇಡ್ಕರ್

ಸಿ.ಹರಕುಮಾರ್, ಬರಹಗಾರ ಬಾಬಾ ಸಾಹೇಬ್‌ರ ಧಾರ್ಮಿಕ ನಿಲುವು ಅರಿಯಲು ಬಹುತೇಕರು ವಿಫಲ ಭಾರತದ ಭಾಗ್ಯವಿಧಾತ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್…

55 mins ago

ಕೊಡಗು ಜಿಲ್ಲೆಯಲ್ಲೂ ಹೆಚ್ಚುತ್ತಿರುವ ತಾಪಮಾನ

ನವೀನ್ ಡಿಸೋಜ ಬಳಲಿಕೆಯೊಂದಿಗೆ ಆರೋಗ್ಯ ಹದಗೆಡುವ ಸಾಧ್ಯತೆ; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸಲಹೆ  ಮಡಿಕೇರಿ: ಅಚ್ಚ ಹಸಿರಿನ ಪರಿಸರದೊಂದಿಗೆ…

60 mins ago