ಧರ್ಮೇಂದ್ರ ಕುಮಾರ್ ಮೈಸೂರು
ಮೈಸೂರು ಸಂಸ್ಥಾನಕ್ಕೂ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮಕ್ಕೂ ಅವಿನಾಭಾವ ಸಂಬಂಧ ಇದೆ. ಆ ಸಂಬಂಧದ ಮೂಲವನ್ನು ಹುಡುಕುತ್ತಾ ಹೋದರೆ ಟಿಪ್ಪು ಸುಲ್ತಾನ್ ಆಡಳಿತದ ಕಾಲಕ್ಕೆ ಕರೆದೊಯ್ಯುತ್ತದೆ.
ಸೈನಿಕನಾಗಿದ್ದು, ದಿವಾನ ಹುದ್ದೆಗೇರಿದವರೊಬ್ಬರ ಹೆಸರು ಮುಂಚೂಣಿಗೆ ಬರುತ್ತದೆ. ಮೈಸೂರು ಸಂಸ್ಥಾನ ಅನೇಕ ಶ್ರೇಷ್ಠ ದಿವಾನರುಗಳನ್ನು ಕಂಡಿದೆ. ಅದರಲ್ಲಿ ಕೆಲವರು ಅಗ್ರಗಣ್ಯ ಸ್ಥಾನ ಪಡೆದರೆ, ಇನ್ನೂ ಕೆಲವರು ಶ್ರೇಷ್ಠ ಆಡಳಿತ ನೀಡಿದ್ದರು. ಅಂತಹವರ ಪೈಕಿ ಬಾಬು ರಾವ್ ಕೂಡ ಒಬ್ಬರು. ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಬಾಬುರಾವ್, ಶ್ರೀರಂಗಪಟ್ಟಣ ಚರಿತ್ರೆಯಲ್ಲಿ ಅಜರಾಮರ ಆಗಿದ್ದಾರೆ.
ಮೈಸೂರು-ಬೆಂಗಳೂರು ಹಳೇ ರಸ್ತೆಯಲ್ಲಿ ಬಾಬುರಾಯನ ಕೊಪ್ಪಲು ಎಂಬ ಗ್ರಾಮವಿದೆ. ಗ್ರಾಮಕ್ಕೆ ಶತಮಾನಗಳ ಇತಿಹಾಸವಿದ್ದು, ಬಾಬು ರಾವ್ ಅವರ ನೆನಪಿನಾರ್ಥ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಟಿಪ್ಪು ಖಾಸಾ ಪಡೆಯ ಸೈನಿಕ ಈ ಬಾಬುರಾವ್: ಬಾಬು ರಾವ್ ಅವರು ಟಿಪ್ಪು ಸುಲ್ತಾನ್ ಅವರ ಖಾಸಾ ಪಡೆಯಲ್ಲಿದ್ದ ೧೦ ಸಾವಿರ ಮಂದಿ ಪೈಕಿ ಪ್ರಮುಖರಲ್ಲಿ ಒಬ್ಬರಾಗಿದ್ದರು. ಬಾಬು ರಾವ್ ದೃಢಕಾಯ ಹಾಗೂ ಅತ್ಯಂತ ಶಕ್ತಿಶಾಲಿ ಸೈನಿಕ ಆಗಿದ್ದರು. ಆಂಗ್ಲೋ-ಮೈಸೂರು ಯುದ್ಧ ನಡೆದಾಗ ಕರ್ನಲ್ ಬೈಲಿ ಡಂಜಿಯನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಬಂಧಿಸಿ ಕರೆತಂದ ಸೈನಿಕ ತುಕಡಿಯಲ್ಲಿ ಬಾಬು ರಾವ್ ಕೂಡ ಒಬ್ಬರಾಗಿದ್ದರು. ಬಾಬು ರಾವ್ ಅವರು ಸೇನೆಯಷ್ಟೆ ಅಲ್ಲದೆ, ಆಡಳಿತಾತ್ಮಕ ವಿಚಾರದಲ್ಲೂ ಪರಿಣತರಾಗಿದ್ದರು. ಹಾಗಾಗಿ ಅವರನ್ನು ಮೈಸೂರು ಸಂಸ್ಥಾನದ ರಾಜರಾಗಿದ್ದ ಹೈದರ್ ಅಲಿ ಅವರು ದಿವಾನ್ಸ್ ಕಚೇರಿಗೆ ನೇಮಕ ಮಾಡಿದ್ದರು. ಆಗಿನಿಂದ ಬಾಬು ರಾವ್ ಮೈಸೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಗಮನಾರ್ಹ ಪಾತ್ರವಹಿಸಿದ್ದರು.
ನಾಲ್ಕು ಬಾರಿ ದಿವಾನರಾಗಿದ್ದ ಬಾಬುರಾವ್: ಆಡಳಿತದ ಚಾತುರ್ಯವನ್ನು ಅರಗಿಸಿಕೊಂಡಿದ್ದ ಬಾಬುರಾವ್, ೧೭೯೯ ರಿಂದ ೧೮೧೧ ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ದಿವಾನ್ ಪೂರ್ಣಯ್ಯರನ್ನು ಸದಾ ವಿರೋಽಸುತ್ತಿದ್ದರು. ದಿವಾನ್ ಪೂರ್ಣಯ್ಯ ಅವರ ಆಡಳಿತ ವಿಚಾರ ಹಾಗೂ ನಿರ್ಧಾರಗಳನ್ನೇ ಪ್ರಶ್ನಿಸುತ್ತಿದ್ದರು. ಮೈಸೂರು ಸಂಸ್ಥಾನದ ದಿವಾನ ಆಗಬೇಕು ಎಂದು ಬಾಬು ರಾವ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪೂರ್ಣಯ್ಯ ಅವರು ಇರುವವರೆಗೆ ಅದು ಸಾಧ್ಯವಾಗಲಿಲ್ಲ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್ಪೆಕ್ಟರ್ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…