Andolana originals

ಮೈಸೂರು ಸಂಸ್ಥಾನಕ್ಕೂ ಬಾಬುರಾಯನ ಕೊಪ್ಪಲಿಗೂ ಸಂಬಂಧವೇನು?

ಧರ್ಮೇಂದ್ರ ಕುಮಾರ್‌ ಮೈಸೂರು

ಮೈಸೂರು ಸಂಸ್ಥಾನಕ್ಕೂ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮಕ್ಕೂ ಅವಿನಾಭಾವ ಸಂಬಂಧ ಇದೆ. ಆ ಸಂಬಂಧದ ಮೂಲವನ್ನು ಹುಡುಕುತ್ತಾ ಹೋದರೆ ಟಿಪ್ಪು ಸುಲ್ತಾನ್ ಆಡಳಿತದ ಕಾಲಕ್ಕೆ ಕರೆದೊಯ್ಯುತ್ತದೆ.

ಸೈನಿಕನಾಗಿದ್ದು, ದಿವಾನ ಹುದ್ದೆಗೇರಿದವರೊಬ್ಬರ ಹೆಸರು ಮುಂಚೂಣಿಗೆ ಬರುತ್ತದೆ. ಮೈಸೂರು ಸಂಸ್ಥಾನ ಅನೇಕ ಶ್ರೇಷ್ಠ ದಿವಾನರುಗಳನ್ನು ಕಂಡಿದೆ. ಅದರಲ್ಲಿ ಕೆಲವರು ಅಗ್ರಗಣ್ಯ ಸ್ಥಾನ ಪಡೆದರೆ, ಇನ್ನೂ ಕೆಲವರು ಶ್ರೇಷ್ಠ ಆಡಳಿತ ನೀಡಿದ್ದರು. ಅಂತಹವರ ಪೈಕಿ ಬಾಬು ರಾವ್ ಕೂಡ ಒಬ್ಬರು. ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಬಾಬುರಾವ್, ಶ್ರೀರಂಗಪಟ್ಟಣ ಚರಿತ್ರೆಯಲ್ಲಿ ಅಜರಾಮರ ಆಗಿದ್ದಾರೆ.

ಮೈಸೂರು-ಬೆಂಗಳೂರು ಹಳೇ ರಸ್ತೆಯಲ್ಲಿ ಬಾಬುರಾಯನ ಕೊಪ್ಪಲು ಎಂಬ ಗ್ರಾಮವಿದೆ. ಗ್ರಾಮಕ್ಕೆ ಶತಮಾನಗಳ ಇತಿಹಾಸವಿದ್ದು, ಬಾಬು ರಾವ್ ಅವರ ನೆನಪಿನಾರ್ಥ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಟಿಪ್ಪು ಖಾಸಾ ಪಡೆಯ ಸೈನಿಕ ಈ ಬಾಬುರಾವ್: ಬಾಬು ರಾವ್ ಅವರು ಟಿಪ್ಪು ಸುಲ್ತಾನ್ ಅವರ ಖಾಸಾ ಪಡೆಯಲ್ಲಿದ್ದ ೧೦ ಸಾವಿರ ಮಂದಿ ಪೈಕಿ ಪ್ರಮುಖರಲ್ಲಿ ಒಬ್ಬರಾಗಿದ್ದರು. ಬಾಬು ರಾವ್ ದೃಢಕಾಯ ಹಾಗೂ ಅತ್ಯಂತ ಶಕ್ತಿಶಾಲಿ ಸೈನಿಕ ಆಗಿದ್ದರು. ಆಂಗ್ಲೋ-ಮೈಸೂರು ಯುದ್ಧ ನಡೆದಾಗ ಕರ್ನಲ್ ಬೈಲಿ ಡಂಜಿಯನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಬಂಧಿಸಿ ಕರೆತಂದ ಸೈನಿಕ ತುಕಡಿಯಲ್ಲಿ ಬಾಬು ರಾವ್ ಕೂಡ ಒಬ್ಬರಾಗಿದ್ದರು. ಬಾಬು ರಾವ್ ಅವರು ಸೇನೆಯಷ್ಟೆ ಅಲ್ಲದೆ, ಆಡಳಿತಾತ್ಮಕ ವಿಚಾರದಲ್ಲೂ ಪರಿಣತರಾಗಿದ್ದರು. ಹಾಗಾಗಿ ಅವರನ್ನು ಮೈಸೂರು ಸಂಸ್ಥಾನದ ರಾಜರಾಗಿದ್ದ ಹೈದರ್ ಅಲಿ ಅವರು ದಿವಾನ್ಸ್ ಕಚೇರಿಗೆ ನೇಮಕ ಮಾಡಿದ್ದರು. ಆಗಿನಿಂದ ಬಾಬು ರಾವ್ ಮೈಸೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಗಮನಾರ್ಹ ಪಾತ್ರವಹಿಸಿದ್ದರು.

ನಾಲ್ಕು ಬಾರಿ ದಿವಾನರಾಗಿದ್ದ ಬಾಬುರಾವ್: ಆಡಳಿತದ ಚಾತುರ್ಯವನ್ನು ಅರಗಿಸಿಕೊಂಡಿದ್ದ ಬಾಬುರಾವ್, ೧೭೯೯ ರಿಂದ ೧೮೧೧ ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ದಿವಾನ್ ಪೂರ್ಣಯ್ಯರನ್ನು ಸದಾ ವಿರೋಽಸುತ್ತಿದ್ದರು. ದಿವಾನ್ ಪೂರ್ಣಯ್ಯ ಅವರ ಆಡಳಿತ ವಿಚಾರ ಹಾಗೂ ನಿರ್ಧಾರಗಳನ್ನೇ ಪ್ರಶ್ನಿಸುತ್ತಿದ್ದರು. ಮೈಸೂರು ಸಂಸ್ಥಾನದ ದಿವಾನ ಆಗಬೇಕು ಎಂದು ಬಾಬು ರಾವ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪೂರ್ಣಯ್ಯ ಅವರು ಇರುವವರೆಗೆ ಅದು ಸಾಧ್ಯವಾಗಲಿಲ್ಲ.

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago