Andolana originals

ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖ

ಬಿಸಿಲ ಝಳದಿಂದ ಕುಸಿಯುತ್ತಿರುವ ಅಂತರ್ಜಲ ಮಟ್ಟ ; ಮೇ ತಿಂಗಳಲ್ಲಿ ನೀರಿನ ಕೊರತೆ ಸಾಧ್ಯತೆ

• ಕೆ.ಬಿ.ಶಂಶುದ್ದೀನ್
ಕುಶಾಲನಗರ : ಈ ಬಾರಿಯ ಬಿರು ಬೇಸಿಗೆ ಜನರ ನೆತ್ತಿ ಸುಡುತ್ತಿದೆ. ಬಿಸಿಲು ಮತ್ತು ಸೆಕೆಯಿಂದಾಗಿ ಜನಸಾಮಾನ್ಯರು ಬಸವಳಿದಿದ್ದಾರೆ. ಬಿಸಿಲ ಝಳದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದೆ. ಸದ್ಯದ ಮಟ್ಟಿಗೆ ನೀರಿನ ಸಮಸ್ಯೆ ಇಲ್ಲವಾದರೂ, ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಬಿಸಿಲ ಧಗೆಗೆ ಕಾವೇರಿ ನದಿಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದೆ. ನದಿ ತಟದಲ್ಲಿರುವ ಕುಶಾಲನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿನ ಸರಬರಾಜು ಮೂಲಕ್ಕೆ ಬಹುತೇಕ ಕಾವೇರಿ ನದಿಯನ್ನೇ ಅವಲಂಬಿಸಿವೆ. ಇದರೊಂದಿಗೆ ಕೊಳವೆಬಾವಿ ವ್ಯವಸ್ಥೆಯ ಮೂಲಕವೂ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದರೂ ನೀರಿನ ಅಭಾವ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯ ಮುಳ್ಳು ಸೋಗೆ ಗ್ರಾಮ ಭಾಗಶಃ ಒಳಗೊಂಡಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಮೂರು ದಿನಗಳಿಗೊಮ್ಮೆ 28 ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿದೆ. ಬೈಚನಹಳ್ಳಿ ಬಳಿ ಜಲಾಗಾರದ ಮೂಲಕ ನದಿಯಿಂದ ನೀರು ಪಂಪ್ ಮಾಡಿ ಶುದ್ದೀಕರಿಸಿ ವಿತರಿಸುವ ವ್ಯವಸ್ಥೆಯಿದೆ.

ಮಾರ್ಚ್ ತಿಂಗಳಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದ್ದಂತೆ ಮುನ್ನೆಚ್ಚರಿಕೆಯಾಗಿ ಪಂಪ್ ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಹಾಕಿ ನೀರು ಶೇಖರಣೆಗೆ ಕ್ರಮವಹಿಸಲಾಗಿತ್ತು. ತದನಂತರ ಮಳೆಯಾದ ಹಿನ್ನೆಲೆಯಲ್ಲಿ ಆತಂಕ ದೂರವಾಗಿದೆ. ಆದರೂ ಬಿರು ಬಿಸಿಲಿನ ವಾತಾವರಣ ಹೀಗೇ ಮುಂದು ವರಿದರೆ ಸಮಸ್ಯೆ ಎದುರಾಗಲಿದೆ.

ಕಾವೇರಿ ಮತ್ತು ಹಾರಂಗಿ ನದಿ ಸಂಗಮವಾಗುವ ಕೂಡಿಗೆ ವ್ಯಾಪ್ತಿಯಿಂದ ಕುಶಾಲನಗರಕ್ಕೆ 24*7 ಕುಡಿಯುವ ನೀರು ಪೂರೈಸುವ 40 ಕೋಟಿ ರೂ. ವೆಚ್ಚದ ಅಮೃತ್ 2.0 ಯೋಜನೆ ಕಾಮಗಾರಿ ಶೇ.70 ಮಾತ್ರ ಪೂರ್ಣಗೊಂಡಿದೆ. ಮೇ 2024ರಲ್ಲಿ ಆರಂಭವಾದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬೇಕಾಗುವುದರಿಂದ ಈ ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ದೊರೆ ಯುವುದಿಲ್ಲ.

ಕೂಡಿಗೆ ಗ್ರಾಮದ ಬಳಿ ಕಾವೇರಿ ನದಿ ಹಾಗೂ ಹಾರಂಗಿ ನದಿ ಕೂಡುವ ಜಾಗದಲ್ಲಿ ಕುಶಾಲನಗರ ಪಟ್ಟಣ ಹಾಗೂ ಪಿರಿಯಾಪಟ್ಟಣದ ನೀರಿನ ಬೇಡಿಕೆಗೆ ಅನುಗುಣವಾಗಿ ಕಾಮೆನ್ ಜಾಕ್ವೆಲ್ ಕಂ ಪಂಪ್ ಹೌಸ್ ನಿರ್ಮಾಣದ ಮೂಲಕ ಪಟ್ಟಣದ ಮುಂದಿನ 30 ವರ್ಷಗಳ ಸುಮಾರು 65,500 ಜನಸಂಖ್ಯೆಗೆ ಅವಶ್ಯವಿರುವ 11.60 ಎಂ.ಎಲ್.ಡಿ ನೀರಿನ ಬೇಡಿಕೆಗೆ ಅನು ಗುಣವಾಗಿ ಯೋಜನೆಯನ್ನು ವಿನ್ಯಾಸ
ಮಾಡಲಾಗಿದೆ.

ಕಾಮಗಾರಿಯಡಿ ದಿಂಡಗಾಡು ಗ್ರಾಮದ ಬಳಿ ನೂತನ ಮೂಲ ಸ್ಥಾವರ ನಿರ್ಮಿಸಿ ಜಾಕ್ವೆಲ್ ಕಂ ಪಂಪ್ ಹೌಸ್‌ನಲ್ಲಿ 2 150 ಎಚ್.ಪಿ. ಸಾಮರ್ಥ್ಯದ ಪಂಪಿಂಗ್ ಮೆಷಿನರಿ ಅಳವಡಿಕೆ, ಜಾಕ್ವೆಲ್ ಕಂ ಪಂಪ್ ಹೌಸ್‌ನಿಂದ ನೀರು ಶುದ್ದೀಕರಣ ಘಟಕದವರೆಗೆ ಸುಮಾರು 7.0 ಕಿ.ಮೀ ಉದ್ದಕ್ಕೆ 406 ಮಿ.ಮೀ ವ್ಯಾಸದ ಎಂ. ಎಸ್ ಕೊಳವೆ ಸಾಲು ಅಳವಡಿಕೆ, 5.5 ಎಂ. ಎಲ್.ಡಿ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ ನಿರ್ಮಾಣ, 10.0 ಲಕ್ಷ ಲೀಟ‌ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ, ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 20.0 ಕಿ.ಮೀ ಉದ್ದದ ಎಚ್‌ಡಿಪಿಇ ವಿತರಣಾ ಕೊಳವೆ ಮಾರ್ಗವನ್ನು ಅಳವಡಿಸಿ 2,102 ಸಂಖ್ಯೆಯ ಮನೆಗಳಿಗೆ ನಳ ಸಂಪರ್ಕವನ್ನು ಒದಗಿಸುವ ಯೋಜನೆ ಇದಾಗಿದೆ. ಹೆಚ್ಚುವರಿ ಪ್ರಸ್ತಾವನೆಗೆ ಅನುನೋದನೆ ದೊರೆತ ಬಳಿಕ ಮತ್ತಷ್ಟು ವಿಸ್ತಾರಗೊಳಿಸುವ ಯೋಜನೆ ಒಳಗೊಂಡಿದೆ.

 

ಆಂದೋಲನ ಡೆಸ್ಕ್

Recent Posts

ಚಾ.ನಗರ | ಚಿನ್ನಾಭರಣಕ್ಕಾಗಿ ಮದುವೆ ಮನೆಯಲ್ಲಿ ಮಾರಮಾರಿ ; ಚಾಕು ಇರಿತ

ಚಾಮರಾಜನಗರ : ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು…

17 mins ago

ಅನಾಥ ಶವಗಳಿಗೆ ಗೌರವದ ವಿದಾಯ ಹೇಳುವ ಶರೀಫ್‌ ಚಾಚಾ

1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಉರುಳಿಸಲ್ಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಕೋಮು ಗಲಭೆಗಳಲ್ಲಿ 2,000ಕ್ಕೂ ಜನ ಸಾವಿಗೀಡಾದರು. ಅಯೋಧ್ಯೆಯಿಂದ 65ಕಿ.…

3 hours ago

ಪೊಲಿಟಿಕಲ್‌ ಪ್ರೊಫೆಸರ್‌ ಇಲ್ಲದ 2 ವರ್ಷ

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಂಡೇಳುವುದು ವಿ.ಶ್ರೀನಿವಾಸ ಪ್ರಸಾದ್‌ ಅವರ ಜಾಯಮಾನ ಸಿ.ಹರಕುಮಾರ್ ಸ್ವಾಭಿಮಾನದ ರಾಜಕಾರಣಕ್ಕೆ ಪರ್ಯಾಯವೆಂಬಂತಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ನಮ್ಮನ್ನಗಲಿ…

7 hours ago

ಆಂದೋಲನ ವಿಶೇಷ | ವಿಪಕ್ಷ ಮುಕ್ತ ಭಾರತ ; ಬಿಜೆಪಿ ಕನಸು?

ಐಟಿ, ಇಡಿ ಬಳಸಿಕೊಂಡು ಬೆದರಿಸುವ ತಂತ್ರ. ಬಿಜೆಪಿ ಸೇರ್ಪಡೆಯಾದ ನಂತರ ಎಲ್ಲ ಆರೋಪಿಗಳಿಂದ ಮುಕ್ತಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ…

7 hours ago

ಪ.ಬಂಗಾಳ ವಿಧಾನಸಭೆ ಚುನಾವಣೆ : 142 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಆರಂಭ

ಕೋಲ್ಕತ್ತ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಬುಧವಾರ(ಏ.29) ಬೆಳಿಗ್ಗೆ 7 ಗಂಟೆಗೆ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 29 ಬುಧವಾರ

8 hours ago