ಎಂ.ಕೆಂಡಗಣ್ಣಸ್ವಾಮಿ
ಅಕ್ಷಯ ಆಹಾರ ಫೌಂಡೇಶನ್ ರಾಜೇಂದ್ರ ಮಾದರಿ ಸೇವಾ ಕಾರ್ಯ
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಶೇಖರಿಸಿದ ಪದಾರ್ಥಗಳ ಹಂಚಿಕೆ
ಅವಶ್ಯಕತೆ ಇದ್ದವರಿಗೆ ಒದಗಿಸುವ ಪರಿಕಲ್ಪನೆ
ಮೈಸೂರು: ಕಸವನ್ನು ರಸವಾಗಿ ಪರಿವರ್ತಿಸಿ ಸಮಾಜದ ಅಭಿವೃದ್ಧಿಗೆ ಬಳಸುವ ಅಗತ್ಯ ಇಂದಿನ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಇದೇ ನೆಲೆಯಲ್ಲಿ ಸೇವಾ ಸಂಸ್ಥೆಯೊಂದು ವ್ಯರ್ಥವೆಂದು ಮನೆಯಲ್ಲಿ ಮೂಲೆಗೆ ಸೇರಿಸಿರುವ ಅಥವಾ ಎಸೆಯುವ ಆಲೋಚನೆಯಲ್ಲಿರುವ ಹಳೆಯ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಅಗತ್ಯ ಇರುವವರಿಗೆ ಒದಗಿಸುವ ಅಪರೂಪದ ಕಾರ್ಯದಲ್ಲಿ ನಿರತವಾಗಿದೆ.
ಇಂತಹ ಮಾನವೀಯ ಕೆಲಸಕ್ಕೆ ಮುಂದಾಗಿರುವುದು ನಗರದ ಅಕ್ಷಯ ಆಹಾರ ಫೌಂಡೇಶನ್. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮೈಸೂರು ನಗರದಲ್ಲಿ ಅಕ್ಷಯ ಆಹಾರ ಜೋಳಿಗೆ ಮೂಲಕ ಮದುವೆ, ಗೃಹ ಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ವ್ಯರ್ಥವಾಗಿ ಉಳಿದ ಆಹಾರವನ್ನು ಸಂಗ್ರಹಿಸಿ ‘ತಿನ್ನುವ ಹಕ್ಕಿದೆ ಎಸೆಯುವ ಹಕ್ಕಿಲ್ಲ’ ಎಂಬ ಧ್ಯೇಯವಾಕ್ಯ ದೊಂದಿಗೆ ನಿತ್ಯ ಹಸಿದವರಿಗೆ ನೀಡುತ್ತಾ ಬಂದಿರುವ ಅಕ್ಷಯ ಆಹಾರ ಫೌಂಡೇಶನ್ನ ಡಾ.ಎಚ್. ಆರ್. ರಾಜೇಂದ್ರ ಮತ್ತು ಅವರ ಪತ್ನಿ ಎಂ.ಕೆ. ಶ್ವೇತಾ ಅವರೇ, ಈಗ ‘ವೇಸ್ಟ್ ಟು ಹೆಲ್ತ್ ಬ್ಯಾಂಕ್’ ಎಂಬ ಹೆಸರಿನೊಂದಿಗೆ ಮತ್ತೊಂದು ವಿಶಿಷ್ಟ ಸೇವಾ ಕಾರ್ಯವನ್ನು ನಡೆಸುತ್ತಿರುವವರು.
ಸಾರ್ವಜನಿಕರು ಮನೆಗಳಲ್ಲಿ, ಖಾಸಗಿ ಸಂಸ್ಥೆಗಳು ಅಥವಾ ಸರ್ಕಾರಿ ಇಲಾಖೆಗಳಲ್ಲಿ ಅನುಪಯುಕ್ತವಾಗಿರುವ ಪುಸ್ತಕ, ಬಟ್ಟೆ, ಚಾಪೆ, ಪಾತ್ರೆಗಳು ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳನ್ನು ನೀಡಿದರೆ ಅದನ್ನು ಅಗತ್ಯ ಇರುವವರಿಗೆ ತಲುಪಿಸುತ್ತೇವೆ ಎಂದು ಅವುಗಳೆಲ್ಲವನ್ನೂ ಸಂಗ್ರಹಿಸುವ ಮೂಲಕ ಸಾವಿರಾರು ಅಶಕ್ತರಿಗೆ ಈ ವಸ್ತುಗಳು ಮರು ಸದ್ಬಳಕೆಯಾಗುವಂತೆ ಮಾಡಿದ್ದಾರೆ.
ವಿತರಣೆ ಹೇಗೆ?: ರಾಜೇಂದ್ರ ಅವರು ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಿ ಅವುಗಳನ್ನು ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕಡಿಮೆ ಆದಾಯದ ಕುಟುಂಬಗಳು ಸೇರಿದಂತೆ ಗುರುತಿಸಲಾದ ಫಲಾನುಭವಿಗಳಿಗೆ ವಿತರಿಸುತ್ತಿದ್ದಾರೆ.
ವೇಸ್ಟ್ ಟು ವೆಲ್ತ್ ಬ್ಯಾಂಕ್ನ ಪ್ರಯೋಜನಗಳು:
* ತ್ಯಾಜ್ಯಗಳ ವಿಲೇವಾರಿ, ಸಂಪನ್ಮೂಲ ಸಂರಕ್ಷಣೆ ಮತ್ತು ಸುಸ್ಥಿರತೆಗೆ ಅನುಕೂಲ
* ಹಿಂದುಳಿದ ಸಮುದಾಯಗಳಿಗೆ ಬೆಂಬಲ, ಸಾಮಾಜಿಕ ಕಲ್ಯಾಣಕ್ಕೆ ಉತ್ತೇಜನ ಮತ್ತು ಸಮುದಾಯದ ಪ್ರಜ್ಞೆ ಬೆಳವಣಿಗೆಗೆ ಪ್ರೋತ್ಸಾಹ
* ಹೆಚ್ಚುವರಿ ಸರಕುಗಳು, ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ದಾನ ಮಾಡಬಹುದು.
* ಸಂಗ್ರಹಿಸಿದ ಪದಾರ್ಥಗಳನ್ನು ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕಡಿಮೆ ಆದಾಯದ ಕುಟುಂಬಗಳು ಸೇರಿದಂತೆ ಹಿಂದುಳಿದ ಸಮುದಾಯಗಳ ಜನರಿಗೆ ಹಂಚಿಕೆ ಮಾಡಲಾಗುವುದು
ಬ್ಯಾಂಕ್ ಆರಂಭಿಸಲು ಪ್ರೇರಣೆ: ಡಾ.ಎಚ್.ಆರ್.ರಾಜೇಂದ್ರ ಅವರು ಆಗಾಗ್ಗೆ ತಮ್ಮ ಊರಿನಲ್ಲಿರುವ ಪೋಷಕರನ್ನು ನೋಡಲು ಹೋಗುತ್ತಿರುತ್ತಾರೆ. ಈ ವೇಳೆ ರಾಜೇಂದ್ರ ಅವರ ತಂದೆಯವರು, ಮನೆಯಲ್ಲಿರುವ ಬಳಕೆಯಾಗದ ಬಟ್ಟೆ ಬರೆ, ಪುಸ್ತಕ ಸೇರಿದಂತೆ ಯಾವುದಾದರೂ ವಸ್ತುಗಳನ್ನು ಕೊಡು. ಇವುಗಳನ್ನು ಅಗತ್ಯವಿರುವ ಜನರಿಗೆ ಕೊಟ್ಟರೆ ಉಪಯೋಗವಾಗುತ್ತದೆ ಎಂದು ಹೇಳಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ರಾಜೇಂದ್ರ ಅವರು, ತಾವು ಮಾಡುತ್ತಿದ್ದ ಆಹಾರ ಸಂಗ್ರಹದ ಜೊತೆಗೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ.
” ಸಾರ್ವಜನಿಕರು ತಮ್ಮಲ್ಲಿರುವ ಬೇಡವಾದ ವಸ್ತುಗಳನ್ನು ನಮಗೆ ತಲುಪಿಸಿದರೆ ಸಾಕು. ನಾವು ಅವುಗಳನ್ನು ಸಂಗ್ರಹಿಸಿ ಸಾಧ್ಯವಾದಷ್ಟು ಅಗತ್ಯ ಇರುವವರಿಗೆ ನೀಡುತ್ತೇವೆ. ಈ ಮೂಲಕ ವಸ್ತುಗಳೆಲ್ಲಾ ಸದುಪಯೋಗವಾಗಲಿದ್ದು, ಪರಿಸರಕ್ಕೂ ಯಾವುದೇ ಹಾನಿಯಾಗದಂತೆ ತಡೆಯುತ್ತದೆ.”
ಕೆ.-ಡಾ.ಎಚ್.ಆರ್.ರಾಜೇಂದ್ರ, ಅಕ್ಷಯ ಆಹಾರ ಫೌಂಡೇಶನ್
ಹಳೆಯ ಪದಾರ್ಥಗಳ ಸಂಗ್ರಹಣೆ ಕೇಂದ್ರಗಳು: ಅಕ್ಷಯ ಆಹಾರ ಫೌಂಡೇಶನ್ನಿಂದ ಆಹಾರ ಸಂಗ್ರಹಿಸಲು ಮೈಸೂರಿನ ಕೆ.ಆರ್.ಆಸ್ಪತ್ರೆ, ಕುವೆಂಪುನಗರ ಹಾಗೂ ಶ್ರೀರಾಂಪುರದ ಬಳಿ ಕೇಂದ್ರಗಳಿವೆ. ಈ ಕೇಂದ್ರ ಗಳಲ್ಲಿಯೇ ಸಾರ್ವಜನಿಕರು ತಮಗೆ ಬೇಡವಾದ ವಸ್ತುಗಳನ್ನು ನೀಡಬಹುದಾಗಿದೆ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್ಪೆಕ್ಟರ್ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…