Andolana originals

‘ಫುಟ್‌ಪಾತ್ ಆಕ್ರಮಿಸಿದ ವಾಹನಗಳು; ತಪ್ಪದ ಗೋಳು’

ಪ್ರಶಾಂತ್ ಎಸ್.

ಮೈಸೂರು: ವಾಹನಗಳು ರಸ್ತೆಯ ಮೇಲೆ ಸಂಚರಿಸಿದರೆ, ಪಾದಚಾರಿಗಳು ಫುಟ್‌ಪಾತ್ ಮೇಲೆ ಸಂಚರಿಸಬೇಕೆನ್ನುವುದು ಸಾಮಾನ್ಯ ಸಂಗತಿ. ಆದರೆ,ನಗರದ ಹೃದಯ ಭಾಗ ಮತ್ತು ಜನನಿಬಿಡ ಪ್ರದೇಶ ಗಳಾದ ನಾರಾಯಣಶಾಸ್ತ್ರಿ ರಸ್ತೆ, ಅಶೋಕ ರಸ್ತೆ, ಸುಣ್ಣದಕೇರಿ, ಅಶೋಕ ವೃತ್ತ, ಆರ್‌ಟಿಒ ವೃತ್ತ, ಸರಸ್ವತಿಪುರಂ (ಹೊಂಡಾ ಷೋ ರೂಂ ಆಸು ಪಾಸು), ಸೇರಿದಂತೆ  ಫುಟ್ ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು ಸಾರ್ವಜನಿಕರು ರಸ್ತೆಯ ಮಧ್ಯೆಯೇ ಸಂಚರಿಸ ಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇದು ನಗರದ ಬಹಳ ಕಡೆ ಹಲವು ವರ್ಷಗಳಿಂದಲೂ ಇರುವ ಸಮಸ್ಯೆಯಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಅಂಗಡಿಗಳ ಮಾಲೀಕರಿಂದಲೇ ಸಮಸ್ಯೆ: ರಸ್ತೆಯ ಅಕ್ಕ ಪಕ್ಕದಲ್ಲಿರುವ ಅಂಗಡಿಗಳ ಮಾಲೀಕರು, ತಮ್ಮ ಅಂಗಡಿ ಮಳಿಗೆಗಳ ಮುಂದಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಲ್ಲಿ ಅವರ ಮಾರಾಟ ವಸ್ತುಗಳು, ಜಾಹೀರಾತು ಫಲಕಗಳನ್ನು ಇರಿಸಲೋ ಅಥವಾ ವಾಹನ ಗಳನ್ನು ನಿಲ್ಲಿಸಿಕೊಳ್ಳಲೋ ಬಳಕೆ ಮಾಡಿಕೊಳ್ಳುವುದು ಪರಿಪಾಠವಾಗಿದೆ. ಅಂಗಡಿ ಮಳಿಗೆ ಎದುರಿನ ಜಾಗ ತಮ್ಮದೆಂಬಂತೆ ಮಾಲೀಕರು ವರ್ತಿಸುತ್ತಿದ್ದಾರೆ ಎಂಬ ಆರೋಪ ಕೆಲವು ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರುತ್ತಿದೆ.

ಹೀಗಾಗಿ ಪಾದಚಾರಿ ಮಾರ್ಗದಲ್ಲಿ ಸಂಚರಿಸಬೇಕಾದ ಸಾರ್ವ ಜನಿಕರು ವಿಧಿಯಿಲ್ಲದೆ ರಸ್ತೆಗೆ ಇಳಿದು ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು ನಗರದ ಬಹುತೇಕ ಕಡೆ ಇಂತಹ ದೃಶ್ಯಗಳು ಕಾಣಸಿಗುತ್ತವೆ. ಫುಟ್ ಪಾತ್‌ನಂತೆ ರಸ್ತೆಯ ಬಳಕೆ: ಹೆಚ್ಚು ಜನಸಂದಣಿ ಇರುವ ಸಮಯವಾದ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ನಗರದ ಪ್ರಮುಖ ರಸ್ತೆಗಳು ಗಿಜಿಗುಡುತ್ತವೆ. ನಡೆದು ಹೋಗು ವಾಗ ಸಾರ್ವಜನಿಕರಿಗೆ ವಾಹನಗಳು ತಾಗುವುದು, ವಾಹನ ಸವಾರರು ಹಾಗೂ ಪಾದಚಾರಿಗಳ ನಡುವೆ ಜಟಾಪಟಿ ನಿತ್ಯ ಸಾಮಾನ್ಯ ವಾಗಿದೆ.ಸಾರ್ವ ಜನಿಕರೂ ಕೂಡ ವ್ಯವಸ್ಥೆಗೆ ಹೊಂದಿಕೊಂಡು, ತಮಗೆ ಅರಿವಿಲ್ಲದಂತೆಯೇ ರಸ್ತೆಗಳನ್ನೇ ಫುಟ್‌ಪಾತ್‌ಗಳಂತೆ ಬಳಸುತ್ತಿದ್ದಾರೆ. ಆದರೆ ಅಪಾಯ ವನ್ನು ತಮ್ಮ ಮೈಮೇಲೆಳೆದು ಕೊಳ್ಳುತ್ತಿರುವುದರ ಅರಿವು ಹಲವರಿಗೆ ಇಲ್ಲದಾಗಿದೆ.

ಕಿತ್ತು ಹೋದ ರಸ್ತೆಗಳು: ಅಶೋಕ ವೃತ್ತ, ಶ್ರೀರಾಂಪುರ, ಕುವೆಂಪುನಗರ, ವಿಜಯ ಬ್ಯಾಂಕ್ ಸರ್ಕಲ್ ಸೇರಿದಂತೆ ಕೆಲವು ಕಡೆಪಾದಚಾರಿ ಮಾರ್ಗಕ್ಕೆ ಹಾಕಲಾಗಿರುವ ಕಲ್ಲುಗಳು ಅಥವಾ ಸಿಮೆಂಟ್ ಬ್ಲಾಕ್‌ಗಳು ಕಿತ್ತು ಹೋಗಿವೆ. ಇಲ್ಲಿ ಸಂಚರಿಸುವಾಗ ಪಾದಚಾರಿಗಳು ಲಾಂಗ್ ಜಪ್ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕಾಲು ಚರಂಡಿಯೊಳಗೆ ಹೋಗಿಬಿಟ್ಟಿರುತ್ತದೆ. ಅಥವಾ ಎಡವಿ  ಬೀಳಬೇಕಾಗುತ್ತದೆ. ಅಂಗಡಿಯ ಜಾಹೀರಾತು ಫಲಕಗಳನ್ನು ಪಾದಚಾರಿ ಮಾರ್ಗ ಗಳಿಗೆ ಅಡ್ಡಲಾಗಿ ಇಡುವುದರಿಂದ ಪಾದಚಾರಿಗಳುಕಿರಿಕಿರಿ ಅನುಭವಿಸುವಂತಾಗಿದೆ. ಈ ರಸ್ತೆಗಳಲ್ಲಿರುವ ಸಣ್ಣಪುಟ್ಟ ಹೋಟೆಟ್‌ಗಳವರು ಪಾದಚಾರಿ ಮಾರ್ಗವನ್ನು ಟೇಬಲ್ ಇಡಲು ಬಳಸಿಕೊಳ್ಳುತ್ತಿದ್ದಾರೆ. ರಾಜಾರೋಷವಾಗಿ ಫುಟ್ ಪಾತ್ ಗಳ ಅತಿಕ್ರಮಣ ನಡೆಯುತ್ತಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಅಸಹಾಯಕ ರಾಗಿ ಕುಳಿತಿರುವುದಕ್ಕೆ ನಾಗರಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

” ಹೆಚ್ಚು ಜನದಟ್ಟಣೆಇರುವ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೆಚ್ಚು ಜನದಟ್ಟಣೆ ಉಂಟಾಗುವುದರಿಂದ ವೃದ್ಧರು, ಮಹಿಳೆಯರು, ಮಕ್ಕಳು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಓಡಾಡುವುದೇ ದುಸ್ತರವಾಗುತ್ತದೆ. ಫುಟ್ ಪಾತ್‌ಗಳ ಮೇಲೆ ನಿಲ್ಲಿಸಲಾಗುವ ವಾಹನಗಳನ್ನು ತೆರವುಗೊಳಿಸಿದರೆ ಸುಗಮವಾಗಿ ನಡೆದು ಹೋಗಬಹುದು. ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ನಿರ್ವಹಣೆ ಸರಿಯಾಗಿಲ್ಲ”

-ಮಂಜುಪ್ರಕಾಶ್, ಆಲನಹಳ್ಳಿ

” ನಗರಪಾಲಿಕೆ ವತಿಯಿಂದ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಭೆ ನಡೆಸಿ ಅಂಗಡಿ ಬೋರ್ಡ್ಗಳನ್ನು ಸ್ವಲ್ಪ ಹಿಂದಕ್ಕೆ ಹಾಕಿಕೊಳ್ಳಲು ಸೂಚಿಸುವುದರ ಜೊತೆಗೆ ವಾಹನ ಗಳನ್ನುಫುಟ್ ಪಾತ್ ಮೇಲೆ ನಿಲ್ಲಿಸದಂತೆ ಸೂಚನೆ ನೀಡಿ, ಪಾದಚಾರಿಗಳ ಸುಗಮ ಓಡಾಡಕ್ಕೆ ಅನುವು ಮಾಡಿಕೊಡಲಾಗುತ್ತದೆ.”

-ಶೇಖ್ ತನ್ವೀರ್ ಆಸಿಫ್‌, ಆಯುಕ್ತರು, ನಗರ ಪಾಲಿಕೆ

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

17 mins ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

21 mins ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

24 mins ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

28 mins ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

33 mins ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

37 mins ago