Andolana originals

ನಾಗರಹೊಳೆ ಸಫಾರಿ ತಾಣಗಳಲ್ಲಿ ಸಮಯ, ದರ ಪರಿಷ್ಕರಣೆ

ದಾ.ರಾ.ಮಹೇಶ್

ಸಫಾರಿ ವೀಕ್ಷಣೆ ೨ ಗಂಟೆಗೆ ಸೀಮಿತ; ಹೆಚ್ಚುವರಿ ಟ್ರಿಪ್ ಆಯೋಜನೆ 

ವೀರನಹೊಸಹಳ್ಳಿ: ನಾಗರಹೊಳೆ ಸಫಾರಿ ತಾಣಗಳಲ್ಲಿ ಸಫಾರಿ ಅವಧಿಯನ್ನು ಕಡಿತಗೊಳಿಸಲಾಗಿದ್ದು, ಪ್ರವೇಶ ದರ, ಕ್ಯಾಮೆರಾ ಶುಲ್ಕ ಹಾಗೂ ವಿಶ್ರಾಂತಿ ಗೃಹಗಳ ಬಾಡಿಗೆ ದರಗಳನ್ನು ಪರಿಷ್ಕರಿಸಿ ಜಾರಿಗೆ ತರಲಾಗಿದೆ.

ಸಫಾರಿ ವೀಕ್ಷಣೆಗೆ ಕೆಲವರು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಂಡರೆ, ಇನ್ನೂ ಕೆಲವರು ಸಫಾರಿ ಕೇಂದ್ರದ ಬಳಿ ಸರತಿಯಲ್ಲಿ ಕಾದು ನಿಂತು ಟಿಕೆಟ್ ಸಿಕ್ಕಲ್ಲಿ ಮಾತ್ರ ಸಫಾರಿಗೆ ಅವಕಾಶವಿದ್ದರಿಂದ ಟಿಕೆಟ್ ಸಿಗದವರು ರಸ್ತೆಯಲ್ಲಿ ಸಿಗುವ ಪ್ರಾಣಿಗಳನ್ನು ವೀಕ್ಷಿಸಿ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕಿತ್ತು.

ಮೂರು ಕಡೆ ಸಫಾರಿ ಕೇಂದ್ರ: ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗೇಟ್, ಕೊಡಗು ಭಾಗದ ನಾಣಚ್ಚಿ ಗೇಟ್ ಹಾಗೂ ಎಚ್.ಡಿ. ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ದಮ್ಮನಕಟ್ಟೆಗಳಲ್ಲಿ ಒಟ್ಟು ೩ ಸಫಾರಿ ಕೇಂದ್ರಗಳಿದ್ದು, ಪ್ರವಾಸಿಗರಿಗೆ ಅನುಕೂಲವಾಗುವಂತೆ ದರ, ಸಮಯ ಪರಿಷ್ಕರಿಸಲಾಗಿದೆ. ಮೂರೂ ಕೇಂದ್ರಗಳಲ್ಲೂ ದೊಡ್ಡವರಿಗೆ ೬೦೦ ರೂ., ಮಕ್ಕಳಿಗೆ ೩೦೦ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಹಿಂದೆ ಒಂದೊಂದು ಕೇಂದ್ರಗಳಲ್ಲಿ ಒಂದೊಂದು ಸಮಯ, ಬೇರೆ ಬೇರೆ ರೀತಿಯ ದರವಿತ್ತು.

ಜೀಪ್ ಸಫಾರಿಗೆ ತಲಾ ಸಾವಿರ ರೂ.: ಮೂರು ಸಫಾರಿ ಕೇಂದ್ರಗಳಲ್ಲೂ ಜೀಪ್ ಸಫಾರಿಗೆ ಒಂದೇ ರೀತಿಯ ಶುಲ್ಕ ನಿಗದಿಪಡಿಸಿದ್ದು, ದಮ್ಮನಕಟ್ಟೆಯಲ್ಲಿ ಒಬ್ಬರಿಗೆ ೮೫೫ ರೂ. ಗಳಿಂದ ೧,೦೦೦ ರೂ.ಗೆ ಹೆಚ್ಚಿಸಲಾಗಿದೆ. ಇದು ವೀರನಹೊಸಹಳ್ಳಿ ಗೇಟ್ ಹಾಗೂ ನಾಣಚ್ಚಿ ಗೇಟ್‌ನ ಸಫಾರಿಗೂ ಅನ್ವಯಿಸಲಿದೆ. ಆದರೆ ಸಫಾರಿ ಸಮಯವನ್ನು ೨ ಗಂಟೆಗೆ ಇಳಿಸಲಾಗಿದೆ.

ನಾಗರಹೊಳೆ ಉದ್ಯಾನದಲ್ಲಿ ಸಫಾರಿ ದರ, ಕ್ಯಾಮೆರಾ ಶುಲ್ಕ, ವಸತಿ ಗೃಹ ಬಾಡಿಗೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಷ್ಕರಿಸಿ ಆದೇಶಿಸಿದ್ದು ಎಂದಿನಂತೆ ಪ್ರವಾಸಿಗರು ಹಾಗೂ ವನಪ್ರಿಯರು ಇಲಾಖೆಯೊಂದಿಗೆ ಸಹಕರಿಸುವಂತೆ ನಾಗರ ಹೊಳೆ ಉದ್ಯಾನದ ಮುಖ್ಯಸ್ಥರಾದ ಪಿ.ಎ.ಸೀಮಾ ಮನವಿ ಮಾಡಿದ್ದಾರೆ.

ಡಿಎಲ್‌ಎಸ್‌ಆರ್ ೭೦ ಎಂ.ಎಂ.ಕ್ಯಾಮೆರಾಗಳಿಗೆ ಇದ್ದ ಶುಲ್ಕವನ್ನು ರದ್ದುಗೊಳಿಸಲಾಗಿದೆ. ಡಿಎಲ್‌ಎಸ್‌ಆರ್ ಕ್ಯಾಮೆರಾದ ೨೦೦ ಎಂ.ಎಂ.ನಿಂದ ೫೦೦ ಎಂ.ಎಂ. ವರೆಗೆ ೧೦೦೦ ರೂ. ಹಾಗೂ ಶೇ.೧೮ ಜಿಎಸ್ ಮತ್ತು ೫೦೦ ಎಂ.ಎಂ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಹಿಂದಿನಂತೆ ೧,೫೦೦ ರೂ. ಜೊತೆಗೆ , ೧,೮೦೦ ರೂ. ನಿಗದಿಪಡಿಸಲಾಗಿದೆ.

ಯಾವ್ಯಾವ ಸಮಯಕ್ಕೆ ಸಫಾರಿ?

ಕೊಡಗಿನ ಕುಟ್ಟ ಸಮೀಪದ ನಾಣಚ್ಚಿ ಗೇಟ್‌ನಿಂದ ಬೆಳಿಗ್ಗೆ ೬ರಿಂದ ೮, ೮.೧೫ರಿಂದ ೧೦.೧೫, ಮಧ್ಯಾಹ್ನ ೨.೧೫ರಿಂದ ೪.೧೫, ೪.೩೦ರಿಂದ ೬.೩೦ರವರೆಗೆ ನಾಲ್ಕು ಬಾರಿ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ. ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಬೆಳಿಗ್ಗೆ ೬ರಿಂದ ೮, ೮.೧೫ರಿಂದ ೧೦.೧೫, ಮಧ್ಯಾಹ್ನ ೨.೧೫ರಿಂದ ೪.೧೫, ೪.೩೦ರಿಂದ ೬.೩೦ರವರೆಗೆ ಪ್ರತಿದಿನ ೪ ಟ್ರಿಪ್ ಸಫಾರಿ ವ್ಯವಸ್ಥೆ ಇದೆ. ವೀರನಹೊಸಹಳ್ಳಿ ಗೇಟ್‌ನಿಂದ ಬೆಳಿಗ್ಗೆ ೬.೧೫, ಮಧ್ಯಾಹ್ನ ೩ರಿಂದ (ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಬಾರಿ) ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

2 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

7 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

11 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

11 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

11 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

14 hours ago